ಮೇಘ ಸ್ಫೋಟದ ಬಳಿಕ ಇಂದು ಅಮರನಾಥ ಯಾತ್ರೆ ಪುನರಾರಂಭ
ಮೇಘಸ್ಫೋಟದಿಂದಾಗಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಇಂದು (ಸೋಮವಾರ) ಪುನರಾರಂಭವಾಗಿದೆ. ಇಂದು ಶಿವಲಿಂಗದ ದರ್ಶನಕ್ಕೆ 4ಸಾವಿರ ಭಕ್ತರಿಗೆ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದು, ಯಾತ್ರಾರ್ಥಿಗಳು ಪಹಲ್ಗಾಮ್ನ ನುನ್ವಾನ್ ಬೇಸ್ ಕ್ಯಾಂಪ್ನಿಂದ ಹೊರಟಿದೆ. ಸೋಮವಾರ ಬೆಳಗ್ಗೆ ನಾಲ್ಕೂವರೆ ಗಂಟೆಗೆ 3,010 ಭಕ್ತರು ಪಹಲ್ಗಾಮ್ನಿಂದ ಮತ್ತು 1,016 ಭಕ್ತರು ಬಾಲ್ಟಾಲ್ ಬೇಸ್ ಕ್ಯಾಂಪ್ನಿಂದ ತಮ್ಮ ಯಾತ್ರೆಯನ್ನು ಪ್ರಾರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಯಾವುದೇ ಕಾರಣಕ್ಕೂ ದರ್ಶನ ಪಡೆಯದೆ ಹಿಂತಿರುಗುವ ಮಾತೇ ಇಲ್ಲೆ ಎಂದು ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ. […]
ಮೇಘ ಸ್ಫೋಟದ ಬಳಿಕ ಇಂದು ಅಮರನಾಥ ಯಾತ್ರೆ ಪುನರಾರಂಭ Read More »










