ದೇಶ-ವಿದೇಶ

ಬಿಹಾರ: ಬಿಜೆಪಿ- ಜೆಡಿಯು ಮೈತ್ರಿ ಅಂತ್ಯ| ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಸಮಗ್ರ ನ್ಯೂಸ್: ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಅಂತ್ಯಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿರುವ ನಿತೀಶ್ ಕುಮಾರ್ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿರುವ ಜೆಡಿಯು ಅಧ್ಯಕ್ಷ ಹಾಗೂ ಸಿಎಂ ನಿತೀಶ್ ಕುಮಾರ್ ತೇಜಸ್ವಿ ಯಾದವ್ ಅವರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ನಿತೀಶ್ ಕುಮಾರ್ ಅವರ ನಿರ್ಧಾರದಿಂದಾಗಿ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರ ಪತನವಾಗಿದೆ.

ಬಿಹಾರ: ಬಿಜೆಪಿ- ಜೆಡಿಯು ಮೈತ್ರಿ ಅಂತ್ಯ| ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ Read More »

ಭಾರತ‌ ತಂಡದ ಖೋಖೋ ಆಟಗಾರ; ಕರ್ನಾಟಕ ರತ್ನ ವಿನಯ್ ತೀರ್ಥಹಳ್ಳಿ ಇನ್ನಿಲ್ಲ

ಸಮಗ್ರ ನ್ಯೂಸ್: ಖೋ ಖೋ ಆಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ತೀರ್ಥಹಳ್ಳಿಯ ಕ್ರೀಡಾ ಸಾಧಕ ವಿನಯ್ (33) ಮೆದುಳು ಜ್ವರದಿಂದ ತಡರಾತ್ರಿ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಕೆಲದಿನಗಳಿಂದ ಮೆದುಳು ಜ್ವರದಿಂದ ಬಳಲುತ್ತಿದ್ದ ವಿನಯ್ ರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾರೆ. ವಿನಯ್, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿದ್ದರು. ವಿನಯ್ ಅವರ ಸಾಧನೆಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

ಭಾರತ‌ ತಂಡದ ಖೋಖೋ ಆಟಗಾರ; ಕರ್ನಾಟಕ ರತ್ನ ವಿನಯ್ ತೀರ್ಥಹಳ್ಳಿ ಇನ್ನಿಲ್ಲ Read More »

ವಿಶ್ವದ ಅತ್ಯಂತ ದುಬಾರಿ ದಿಂಬು ಇದು ! ಏಕೆ ಗೊತ್ತೆ

ದಿನವಿಡೀ ಕೆಲಸ, ಒಂದೊಂದು ಟೆನ್ಶನ್,  ಇದೆಲ್ಲಾ ಕಳೆದು ರಾತ್ರಿ ವೇಳೆ  ಹಾಸಿಗೆಗೆ ಹೋಗುವುದು ಆರಾಮದಾಯಕವಾಗಿರುತ್ತದೆ. ಎಲ್ಲರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು ಎಂದು ಬಯಸುತ್ತಾರೆ. ನಿದ್ರೆ ಮಾಡಲು ದಿಂಬು ಅತಿ ಅವಶ್ಯಕ.‌ ದಿಂಬು ಒಬ್ಬೊಬ್ಬರು ಒಂದೊಂದು ರೀತಿ ಕೊಳ್ಳುತ್ತಾರೆ. ಆದರೆ ಇಲ್ಲಿದೆ ಒಂದು ಅಪರೂಪದ ದಿಂಬು ವಿಶ್ವದ ಅತ್ಯಂತ ದುಬಾರಿ ದಿಂಬನ್ನು ನೆದರ್ಲೆಂಡ್ಸ್‌ನ ಫಿಸಿಯೋಥೆರಪಿಸ್ಟ್ ರಚಿಸಿದ್ದಾರೆ. ಹದಿನೈದು ವರ್ಷಗಳ ಕಠಿಣ ಪರಿಶ್ರಮದ ನಂತರ ಈ ದಿಂಬನ್ನು ವಿನ್ಯಾಸಗೊಳಿಸಲಾಗಿದೆ.  ಒಂದು ದಿಂಬಿಗೆ 57,000 ಡಾಲರ್‌ಗಳು, ಸರಿಸುಮಾರು 45 ಲಕ್ಷ

ವಿಶ್ವದ ಅತ್ಯಂತ ದುಬಾರಿ ದಿಂಬು ಇದು ! ಏಕೆ ಗೊತ್ತೆ Read More »

ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ

ಬಿಎಸ್‌ಎನ್‌ಎಲ್‌ ಉದ್ಯೋಗಿಗಳಿಗೆ ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌ ನವದೆಹಲಿ: ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದ್ದರೂ ಮುಂದಿನ 24 ತಿಂಗಳಿನಲ್ಲಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಬಿಎಸ್‌ಎನ್‌ಎಲ್‌ ಉದ್ಯೋಗಿಗಳು ಸ್ವಯಂ ನಿವೃತ್ತಿ ತೆಗೆದುಕೊಂಡು ಮನೆಗೆ ಹೋಗುತ್ತಾರೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಎಚ್ಚರಿಕೆ ನೀಡಿದ್ದಾರೆ. ಮುಖ್ಯ ಜನರಲ್ ಮ್ಯಾನೇಜರ್‌ಗಳೊಂದಿಗಿನ ಸಭೆಯಲ್ಲಿ ವೈಷ್ಣವ್‌, ಸರ್ಕಾರ ಬಿಎಸ್‌ಎನ್‌ಎಲ್‌ ಹಿಂದೆ ಬಂಡೆಯಾಗಿ ನಿಂತಿದ್ದು, ಕೆಲಸ ಮಾಡುತ್ತಿರುವ 62 ಸಾವಿರ ಉದ್ಯೋಗಿಗಳಿಂದ ಅದೇ ಮಟ್ಟದ ಬದ್ಧತೆಯನ್ನು ನಿರೀಕ್ಷಿಸುತ್ತಿದೆ. ನಾನು ಪ್ರತಿ ತಿಂಗಳು ಕಾರ್ಯಕ್ಷಮತೆಯ

ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ Read More »

ಈ ದೇವಸ್ಥಾನದಲ್ಲಿ ಹಾಕಿರುವ ಬೋರ್ಡ್ ಎಲ್ಲೆಡೆ ವೈರಲ್ ಏಕೆ ಗೊತ್ತೆ

ಪ್ರತಿದೇವಸ್ಥಾನಕ್ಕೆ ಹೋಗುವ ಮುನ್ನ ಪಾದರಕ್ಷೆ ಇಲ್ಲಿಯೇ ಬಿಡಿ.‌ಶಾಂತತೆ ಕಾಪಾಡಿ ಎಂಬ ಬರಹ ಸಾಮಾನ್ಯ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ಬರೆದ ಬೋರ್ಡ್ ಎಲ್ಲೆಡೆ ಸುದ್ದಿಯಗುತ್ತಿದೆ. ಇಲ್ಲೊಂದು ದೇವಸ್ಥಾನದಲ್ಲಿ ಪದವಿ ಮತ್ತು ಪಾದರಕ್ಷೆ ಇಲ್ಲಿಯೆ ಬಿಡ್ರಿ ಎಂದು ಬರೆಯುವ ಮೂಲಕ ಭಕ್ತರಲ್ಲಿ ಚಿಂತನೆ ಹುಟ್ಟುಹಾಕಲಾಗಿದೆ. ಈ ರೀತಿಯ ಬರಹ ಬರೆದಿರುವುದು ಹಾವೇರಿ ನಗರದ ತೇರುಬೀದಿಯ ಹನುಮಂತ ದೇವರ ದೇವಸ್ಥಾನದಲ್ಲಿ. ಈ ದೇವಸ್ಥಾನದಲ್ಲಿ ಪಾದರಕ್ಷೆ ಬಿಡುವ ಜಾಗದಲ್ಲಿ ಈ ರೀತಿ ಬರಹ ಬರೆಯಲಾಗಿದೆ. ದೇವಸ್ಥಾನದ ಹೊರಗೆ ಪದವಿ, ಹುದ್ದೆ, ಸ್ಥಾನಮಾನ ಮತ್ತು ಬಡವ

ಈ ದೇವಸ್ಥಾನದಲ್ಲಿ ಹಾಕಿರುವ ಬೋರ್ಡ್ ಎಲ್ಲೆಡೆ ವೈರಲ್ ಏಕೆ ಗೊತ್ತೆ Read More »

ವಿದ್ಯಾರ್ಥಿಗಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಇಸ್ರೋದಿಂದ ಉಡಾವಣೆ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕ ಮಿಷನ್ (ಎಸ್‌ಎಸ್‌ಎಲ್‌ವಿ) ಅನ್ನು ಪ್ರಾರಂಭಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂ ವೀಕ್ಷಣಾ ಉಪಗ್ರಹ (ಇಒಎಸ್-02) ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹ-ಆಜಾದಿಸ್ಯಾಟ್ ಅನ್ನು ಹೊತ್ತ ಎಸ್‌ಎಸ್‌ಎಲ್ವಿ-ಡಿ1 ಅನ್ನು ಇಸ್ರೋ ಉಡಾವಣೆ ಮಾಡಿದೆ. ಇನ್ನು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಒಂದು ಪರಿವೀಕ್ಷಣಾ ಉಪಗೃಹ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ದೇಶದ ಗ್ರಾಮೀಣ

ವಿದ್ಯಾರ್ಥಿಗಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಇಸ್ರೋದಿಂದ ಉಡಾವಣೆ Read More »

ವ್ಯಾಪಾರಕ್ಕಿಳಿದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡ್ತಿದೆಯಾ ಬಿಜೆಪಿ? ಧನದಾಹಕ್ಕೆ ರಾಷ್ಟ್ರಧ್ವಜ ವಿರೂಪ – ಕಾಂಗ್ರೆಸ್

ಸಮಗ್ರ ನ್ಯೂಸ್: ಆರ್ ಎಸ್ಎಸ್ ಹಾಗೂ ಬಿಜೆಪಿ ತಮ್ಮೊಳಗಿನ ತಿರಂಗಾ ದ್ವೇಷವನ್ನು ತೀರಿಸಿಕೊಳ್ಳಲೆಂದೇ ಧ್ವಜ ಸಂಹಿತೆಯನ್ನು ಬದಲಿಸಿ ರಾಷ್ಟ್ರಧ್ವಜದ ಘನತೆಯನ್ನು ಕುಗ್ಗಿಸುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ. ಪ್ರಚಾರದ ಹುಚ್ಚಿಗಾಗಿ ಕಳಪೆ ಮತ್ತು ಹಾಳಾದ ಧ್ವಜಗಳನ್ನು ಮಾರಾಟ ಮಾಡಿದ್ದು ದೇಶಕ್ಕೆ ಎಸಗಿದ ಮಹಾನ್ ದ್ರೋಹ. ಒಳಗೆ ತಿರಂಗಾ ದ್ವೇಷ, ಹೊರಗೆ ನಾಟಕ. ಪಕ್ಷದ ನಿಷ್ಠೆ, ಭಕ್ತಿ, ಪ್ರೀತಿ ಭಗವಾಧ್ವಜಕ್ಕೊ, ರಾಷ್ಟ್ರಧ್ವಜಕ್ಕೋ? ಮೊದಲು ಸ್ಪಷ್ಟಪಡಿಸಿ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಆಗ್ರಹಿಸಿದೆ. ಬಿಜೆಪಿಗೆ ನಿಜವಾಗಿಯೂ

ವ್ಯಾಪಾರಕ್ಕಿಳಿದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡ್ತಿದೆಯಾ ಬಿಜೆಪಿ? ಧನದಾಹಕ್ಕೆ ರಾಷ್ಟ್ರಧ್ವಜ ವಿರೂಪ – ಕಾಂಗ್ರೆಸ್ Read More »

ಮಂಗಳೂರು: ಪ್ರವೀಣ್ ಹತ್ಯೆ ತನಿಖೆ ವಹಿಸಿಕೊಳ್ಳಲು ‌ಎನ್ಐಎ ಗೆ ಆದೇಶಿಸಿದ ಕೇಂದ್ರ ಗೃಹ ಇಲಾಖೆ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ ವಹಿಸಿಕೊಳ್ಳುವಂತೆ ಆದೇಶಿಸಿದೆ. ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ವಿಪುಲ್ ಅಲೋಕ್ ಆಗಸ್ಟ್‌ 3 ರಂದು ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರಾಗಿ ಪತ್ರ ಬರೆದು ಆದೇಶಿಸಿದ್ದಾರೆ. ಆದೇಶದ ಪ್ರತಿಯನ್ನು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಡಿಜಿಪಿ ಅವರಿಗೆ

ಮಂಗಳೂರು: ಪ್ರವೀಣ್ ಹತ್ಯೆ ತನಿಖೆ ವಹಿಸಿಕೊಳ್ಳಲು ‌ಎನ್ಐಎ ಗೆ ಆದೇಶಿಸಿದ ಕೇಂದ್ರ ಗೃಹ ಇಲಾಖೆ Read More »

ವೈರಲ್ ಆಗ್ತಿದೆ ‘ಹರ್ ಘರ್ ತಿರಂಗಾ’ ಹಾಡು

ಸಮಗ್ರ ನ್ಯೂಸ್: ‘ಹರ್ ಘರ್ ತಿರಂಗಾ’ ಗೀತೆಯ ವಿಡಿಯೋ 75 ವರ್ಷಗಳ ಸ್ವಾತಂತ್ರ್ಯ ಮತ್ತು ಭಾರತದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸುತ್ತದೆ ಮತ್ತು ಸ್ಮರಿಸುತ್ತದೆ. ವಿಡಿಯೋದಲ್ಲಿ ಅಮಿತಾಬ್ ಬಚ್ಚನ್, ಕಪಿಲ್ ದೇವ್, ವಿರಾಟ್ ಕೊಹ್ಲಿ, ಅನುಪಮ್ ಖೇರ್, ಅನುಷ್ಕಾ ಶರ್ಮಾ, ಕೆಎಲ್ ರಾಹುಲ್, ಜಾಕಿ ಶ್ರಾಫ್, ಪ್ರಭಾಸ್ ಮತ್ತು ಆಶಾ ಭೋಂಸ್ಲೆ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. “ಹರ್ ಘರ್ ತಿರಂಗಾ…ಘರ್-ಘರ್ ತಿರಂಗಾ, ನಮ್ಮ ತ್ರಿವರ್ಣ ಧ್ವಜಕ್ಕೆ ಈ ಮಧುರವಾದ ವಂದನೆಯೊಂದಿಗೆ ನಮ್ಮ

ವೈರಲ್ ಆಗ್ತಿದೆ ‘ಹರ್ ಘರ್ ತಿರಂಗಾ’ ಹಾಡು Read More »

ತೀವ್ರ ಹೊಟ್ಟೆ ನೋವಿಂದ ಬಳಲುತ್ತಿದ್ದ ವ್ಯಕ್ತಿಯ ಹೊಟ್ಟೆ ಯಲ್ಲಿತ್ತು ಅಚ್ಚರಿ, ತಪಾಸಣೆ ವೇಳೆ ಪತ್ತೆ

ರಾಜಸ್ತಾನ: ಇಲ್ಲಿನ ಜೋಧ್ಪುರದಲ್ಲಿ ವ್ಯಕ್ತಿ 1 ರೂ. 63 ನಾಣ್ಯಗಳನ್ನು ನುಂಗಿದ್ದು, ಜುಲೈ 27ರಂದು ಆತನಿಗೆ ತೀವ್ರ ಹೊಟ್ಟೆ ನೋವು ಶುರುವಾಯಿತು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ವೇಳೆ ಹೊಟ್ಟೆಯಲ್ಲಿ ಲೋಹ ಇರುವುದು ಗೊತ್ತಾಗಿತ್ತು. ಆತ ನಾಣ್ಯಗಳನ್ನು ನುಂಗಿರೋದು ಎಕ್ಸರೇಯಲ್ಲಿ ಬೆಳಕಿಗೆ ಬಂದಿದೆ. 36 ವರ್ಷದ ಆ ಯುವಕ ಖಿನ್ನತೆಯಿಂದ ಬಳಲುತ್ತಿದ್ದ ಕೇವಲ ಎರಡು ದಿನಗಳಲ್ಲಿ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿಹಾಕಿದ್ದನು. ಎಂಡಿಎಂ ಆಸ್ಪತ್ರೆಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಡಾ. ನಾಗೇಂದ್ರ ಭಾರ್ಗವ ನೇತೃತ್ವದ

ತೀವ್ರ ಹೊಟ್ಟೆ ನೋವಿಂದ ಬಳಲುತ್ತಿದ್ದ ವ್ಯಕ್ತಿಯ ಹೊಟ್ಟೆ ಯಲ್ಲಿತ್ತು ಅಚ್ಚರಿ, ತಪಾಸಣೆ ವೇಳೆ ಪತ್ತೆ Read More »