ದೇಶ-ವಿದೇಶ

ಎದೆನೋವು, ಉಸಿರಾಟ ಸಮಸ್ಯೆಂದು ಆಸ್ಪತ್ರೆ ತೆರಳಿದ ವ್ಯಕ್ತಿಯ ಶ್ವಾಸಕೋಶದಲ್ಲಿ ಮೂಗುತಿ ಪತ್ತೆ

ಸಮಗ್ರ ನ್ಯೂಸ್ : ಅಮೆರಿಕಾ ಮೂಲದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆ ಹಾಗೂ ಎದೆನೋವಿನಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ತೆರಳಿದಾಗ ಅವರಿಗೆ ಅಚ್ಚರಿ ಕಾದಿತ್ತು. ಮೂಗುತಿ ಸುಮಾರು ಐದು ವರ್ಷಗಳ ಹಿಂದೆ ಕಳೆದು ಹೋಗಿದ್ದು, ಇದೀಗ ಅವರ ಶ್ವಾಸಕೋಶದಲ್ಲಿ ಪತ್ತೆಯಾಗಿದೆ. ಅಮೆರಿಕ ಮೂಲದ ಜಾಯ್ ಲಿಕಿನ್ಸ್ ಎಂಬವರು ರಾತ್ರಿ ವೆಳೆ ಮಲಗಿದ್ದ ವೇಳೆ ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪರೀಕ್ಷೆ ಮಾಡಿ ನ್ಯೂಮೋನಿಯಾ ಲಕ್ಷಣಗಳಿರಬಹುದು ಎಂದು ತಿಳಿಸಿದರು. ಆದರೆ ಎಕ್ಸ್‌-ರೇ ತೆಗೆದು […]

ಎದೆನೋವು, ಉಸಿರಾಟ ಸಮಸ್ಯೆಂದು ಆಸ್ಪತ್ರೆ ತೆರಳಿದ ವ್ಯಕ್ತಿಯ ಶ್ವಾಸಕೋಶದಲ್ಲಿ ಮೂಗುತಿ ಪತ್ತೆ Read More »

ಜಿಮ್ ನಲ್ಲಿ ಶಕ್ತಿ ಪ್ರದರ್ಶಿಸುವ ಮದುಮಗಳ ವೆಡ್ಡಿಂಗ್ ಫೋಟೋ ಶೂಟ್, ಸಕ್ಕತ್ತ್ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್​ ವೆಡ್ಡಿಂಗ್ ಫೋಟೋಶೂಟ್ ಇದೀಗ ಟ್ರೆಂಡ್ ಆಗಿದ್ದು, ವಿಭಿನ್ನ ಕಾನ್ಸೆಪ್ಟ್ ಮೂಲಕ ಫೋಟೋಶೂಟ್ ಮಾಡ್ತಾರೆ. ನಂತರ ಸೋಶಿಯಲ್ ಮಿಡಿಯಾ ದಲ್ಲಿ ಅಪ್ಲೋಡ್ ಮಾಡಿ ಬಾರಿ ವೈರಲ್ ಆಗುತ್ತದೆ. ಮೊನ್ನೆ ತಾನೇ ರಸ್ತೆ ಗುಂಡಿಗಳಲ್ಲಿ ಕೇರಳದ ಮದುಮಗಳ ಪೋಟೋ ಶೂಟ್ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಮದುಮಗಳೊಬ್ಬಳು ಜಿಮ್​ನಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ಕಾಂಜೀವರಂ ಸೀರೆಯುಟ್ಟು, ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡು ಜಿಮ್​ನಲ್ಲಿ ಕಸರತ್ತು ನಡೆಸಿದ್ದಾಳೆ. 25 ಕೆ.ಜಿ ಡಂಬಲ್ಸ್​​ ಎತ್ತಿಕೊಂಡು ಫೋಟೋಗೆ

ಜಿಮ್ ನಲ್ಲಿ ಶಕ್ತಿ ಪ್ರದರ್ಶಿಸುವ ಮದುಮಗಳ ವೆಡ್ಡಿಂಗ್ ಫೋಟೋ ಶೂಟ್, ಸಕ್ಕತ್ತ್ ವಿಡಿಯೋ ವೈರಲ್ Read More »

ಈ‌ ಮುದ್ದಾದ ಅಕ್ಷರಗಳಿಂದಲೇ ಈ ಡಾಕ್ಟರ್ ಪೇಮಸ್| ಇವರ ಔಷಧ ಚೀಟಿಗೆ ಜನ ಫಿದಾ!!

ಸಮಗ್ರ ನ್ಯೂಸ್: ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತದೆ. ಬಹುತೇಕ ವೈದ್ಯರು ಬರಹ ಅಸ್ಪಷ್ಟವಾಗಿರುತ್ತದೆ. ಜನಸಾಮಾನ್ಯರಿಗೆ ಅದರ ಮೊದಲ ಅಕ್ಷರ ಬಿಟ್ರೆ ಬೇರೇನೂ ಗೊತ್ತಾಗದು. ಆದರೆ ಇಲ್ಲೊಬ್ಬ ಡಾಕ್ಟರ್ ಈಗ ಈ ಅಪವಾದಕ್ಕೆ ಹೊರತಾಗಿದ್ದಾರೆ. ಕೇರಳದ ಮಕ್ಕಳ ತಜ್ಞರೊಬ್ಬರು ಬರೆದಿರುವ ಔಷಧ ಚೀಟಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೇರಳದ ಪಾಲಕ್ಕಾಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ಡಾ. ನಿತಿನ್ ನಾರಾಯಣನ್ ಅವರು ತಮ್ಮ ಔಷಧ ಚೀಟಿಯಿಂದಲೇ ಸಾಮಾಜಿಕ

ಈ‌ ಮುದ್ದಾದ ಅಕ್ಷರಗಳಿಂದಲೇ ಈ ಡಾಕ್ಟರ್ ಪೇಮಸ್| ಇವರ ಔಷಧ ಚೀಟಿಗೆ ಜನ ಫಿದಾ!! Read More »

ಮುಸ್ಲಿಂ ಯುವಕರನ್ನು ಐಸಿಸ್ ಗೆ ಸೇರಲು ಪ್ರೇರೇಪಣೆ ಆರೋಪ| ಪಿಎಫ್ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಅರೆಸ್ಟ್

ಸಮಗ್ರ ನ್ಯೂಸ್: ಎನ್ ಐ ಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಫಿಎಫ್‌ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ನನ್ನು ಬಂಧಿಸಿದ್ದಾರೆ. ಈತನನ್ನು ದೆಹಲಿಗೆ ಕರೆತರಲಾಗುತ್ತಿದ್ದು, ಬಳಿಕ ಎನ್ ಐ ಎ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ಯಾಸಿರ್ ಹಸನ್ ಮುಸ್ಲಿಂ ಯುವಕರನ್ನು ಐಸಿಸ್ ಗೆ ಸೇರಿಸಲು ಪ್ರೇರೇಪಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.‌ ದೇಶದ ಒಳಗೆ ಹಣ ಒಗ್ಗೂಡಿಸಿ ಟೆರರ್ ಫಂಡಿಂಗ್ ನಡೆಸುತ್ತಿದ್ದನು ಎಂಬ ಆರೋಪದಡಿ ಅಧಿಕೃತವಾಗಿ ಯಾಸಿರ್ ಹಸನ್ ನ್ನು ಬಂಧಿಸಿ ಕರೆ ತರಲಾಗುತ್ತಿದೆ ಎಂಬ

ಮುಸ್ಲಿಂ ಯುವಕರನ್ನು ಐಸಿಸ್ ಗೆ ಸೇರಲು ಪ್ರೇರೇಪಣೆ ಆರೋಪ| ಪಿಎಫ್ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಅರೆಸ್ಟ್ Read More »

ಸುಧಾ ಮೂರ್ತಿಯವರು ಪಿಎಂ ಕೇರ್ಸ್ ಫಂಡ್ ಟ್ರಸ್ಟ್ ಗೆ ನೇಮಕ

ಸಮಗ್ರ ನ್ಯೂಸ್:  ಪಿಎಂ ಕೇರ್ಸ್ ಫಂಡ್ ಟ್ರಸ್ಟಿಯಾಗಿ ರತನ್ ಟಾಟಾ, ಸಲಹಾ ಮಂಡಳಿಗೆ ಸುಧಾ ಮೂರ್ತಿ ಅವರು ನೇಮಕಗೊಂಡಿದ್ದಾರೆ. ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಟ್ರಸ್ಟಿಗಳನ್ನು ಪಿಎಂ ಕೇರ್ಸ್ ಫಂಡ್​ನ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸಲು ಸ್ವಾಗತಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಿಎಂ ಕೇರ್ಸ್ ಫಂಡ್​ ಇತರ ಟ್ರಸ್ಟಿಗಳಾಗಿದ್ದಾರೆ. ಪ್ರಧಾನಮಂತ್ರಿ ಕೇರ್ಸ್ ಫಂಡ್ ಟ್ರಸ್ಟ್ಗೆ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ ಟಿ ಥಾಮಸ್, ಮಾಜಿ

ಸುಧಾ ಮೂರ್ತಿಯವರು ಪಿಎಂ ಕೇರ್ಸ್ ಫಂಡ್ ಟ್ರಸ್ಟ್ ಗೆ ನೇಮಕ Read More »

ಭಾರತದ ಶ್ರೀಮಂತ ಮಹಿಳೆಯಾದ ನೈಕಾ ಕಂಪನಿ ಸಂಸ್ಥಾಪಕಿ ಫಲ್ಗುಣಿ ನಾಯರ್

ಸಮಗ್ರ ನ್ಯೂಸ್: ನೈಕಾ ಕಂಪನಿ ಸಂಸ್ಥಾಪಕಿ ಫ‌ಲ್ಗುಣಿ ನಾಯರ್‌ ಅವರು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಅವರನ್ನು ಹಿಂದಿಕ್ಕಿ ಸ್ವಂತ ಬಲದಿಂದ ಮೇಲೆ ಬಂದ ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ. ಭಾರತದ ಶ್ರೀಮಂತರ ಪಟ್ಟಿ-2022ಯನ್ನು ಐಐಎಫ್‌ಎಲ್‌ ವೆಲ್ತ್‌ ಹುರುನ್‌ ಬಿಡುಗಡೆಗೊಳಿಸಿದ್ದು, ಅದರ ಪ್ರಕಾರ ಭಾರತದ ಶ್ರೀಮಂತ ಮಹಿಳೆಯಾಗಿ ಫ‌ಲ್ಗುಣಿ ನಾಯರ್‌ ಹೊರಹೊಮ್ಮಿದ್ದಾರೆ. ಹಾಗೆಯೇ ಈ ವರ್ಷ ಫ‌ಲ್ಗುಣಿ ನಾಯರ್‌ ಮತ್ತು ಅವರ ಕುಟುಂಬದ ಆಸ್ತಿ ಮೌಲ್ಯ 30,000 ಕೋಟಿ ರೂ.ಗಳಷ್ಟು ಹೆಚ್ಚಿದ್ದು, ಫ‌ಲ್ಗುಣಿ ನಾಯರ್‌ ಅವರ ನಂತರದ

ಭಾರತದ ಶ್ರೀಮಂತ ಮಹಿಳೆಯಾದ ನೈಕಾ ಕಂಪನಿ ಸಂಸ್ಥಾಪಕಿ ಫಲ್ಗುಣಿ ನಾಯರ್ Read More »

ದೇಶಾದ್ಯಂತ ಏಕಕಾಲಕ್ಕೆ ಎನ್ಐಎ ದಾಳಿ| 100 ಕ್ಕೂ ಹೆಚ್ಚು ಮಂದಿ ವಶಕ್ಕೆ| ಎಸ್ಡಿಪಿಐ, ಪಿಎಫ್ಐ ಸಂಘಟನೆಗಳೇ ಟಾರ್ಗೆಟ್

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಬೆಳ್ಳಂಬೆಳಗ್ಗೆಯೇ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಪ್ರತಿರೋಧ ತೋರಿದ ಹಲವಾರು ಮಂದಿಯನ್ನು ವಶಪಡಿಸಿಕೊಳ್ಳಲಾಗಿದೆ. ದೇಶದ ನಾನಾ ಕಡೆಗಳಲ್ಲಿರುವ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಕರ್ನಾಟಕ ಸೇರಿ ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಲ್ಲೂ ಪಿಎಫ್‌ಐ, ಎಸ್‌ಡಿಪಿಐ ಕಚೇರಿಗಳ ಮೇಲೆ ತನಿಖಾ

ದೇಶಾದ್ಯಂತ ಏಕಕಾಲಕ್ಕೆ ಎನ್ಐಎ ದಾಳಿ| 100 ಕ್ಕೂ ಹೆಚ್ಚು ಮಂದಿ ವಶಕ್ಕೆ| ಎಸ್ಡಿಪಿಐ, ಪಿಎಫ್ಐ ಸಂಘಟನೆಗಳೇ ಟಾರ್ಗೆಟ್ Read More »

ಮಂಗಳೂರು: ಪಿಎಫ್ಐ, ಎಸ್ಡಿಪಿಐ ಕಚೇರಿ ಮೇಲೆ ಎನ್ಐಎ ದಾಳಿ

ಸಮಗ್ರ ನ್ಯೂಸ್: ದೇಶದ ಹಲವೆಡೆ ಎನ್.ಐ.ಎ. ಅಧಿಕಾರಿಗಳು ದಾಳಿ ಮಾಡಿದ್ದು, ಮಂಗಳೂರಿನಲ್ಲಿ ಎಸ್.ಡಿ.ಪಿ.ಐ. ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್‌.ಡಿ.ಪಿ.ಐ.ಮತ್ತು ಪಿಎಫ್‌ಐ ಕಚೇರಿಗಳ ಮೇಲೆ ದಾಳಿ ಮಾಡಿರುವ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯನ್ನು ಬಂದ್ ಮಾಡಿ ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಎಸ್‌.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅಬೂಬಕರ್

ಮಂಗಳೂರು: ಪಿಎಫ್ಐ, ಎಸ್ಡಿಪಿಐ ಕಚೇರಿ ಮೇಲೆ ಎನ್ಐಎ ದಾಳಿ Read More »

ತಾಜ್ ಮಹಲ್ ನಲ್ಲಿ ಮಂಗಗಳ ಹಾವಳಿ; ಪ್ರವಾಸಿಗರ  ಮೇಲೆ ದಾಳಿ

ಆಗ್ರಾ : ತಾಜ್​ಮಹಲ್​ನಲ್ಲಿ ಮಂಗಳ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗರ ಮೇಲೆ ದಾಳಿ ಮಾಡಿದ್ದು, ಇತ್ತೀಚೆಗೆ ತಾಜ್ ಮಹಲ್ ನೋಡಲು ಬಂದಿದ್ದ ಸ್ಪೇನ್ ಮಹಿಳೆಯ ಮೇಲೆ ಮಂಗಗಳು ದಾಳಿ ನಡೆಸಿದ್ದವು. ಇಂದು ತಾಜ್​ಮಹಲ್​ನ ಈಸ್ಟ್ ಗೇಟ್‌ನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಮಂಗಗಳು ದಾಳಿ ಮಾಡಿವೆ. ಮಂಗಗಳ ಗುಂಪೊಂದು ಈಸ್ಟ್ ಗೇಟ್‌ನಲ್ಲಿ ಟಿಕೆಟ್​ಗಾಗಿ ನಿಂತಿದ್ದ ಸ್ಪ್ಯಾನಿಷ್ ಪ್ರವಾಸಿ ಯುವತಿ ಕ್ರಿಸ್ಟಿನಾ ಮೇಲೆ ದಾಳಿ ಮಾಡಿವೆ. ಕೂಡಲೇ ಅವರರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಟಿಕೆಟ್​ ಪಡೆಯಲು ಕ್ರಿಸ್ಟಿನಾ ನಿಂತಿದ್ದಾಗ ಸುತ್ತುವರೆದ

ತಾಜ್ ಮಹಲ್ ನಲ್ಲಿ ಮಂಗಗಳ ಹಾವಳಿ; ಪ್ರವಾಸಿಗರ  ಮೇಲೆ ದಾಳಿ Read More »

ಹಿಂದಿನ ಸೀಟ್ ಬೆಲ್ಟ್ ಗಳಿಗೆ ಎಚ್ಚರಿಕೆಯ ಅಲಾರಂ ವ್ಯವಸ್ಥೆ ಅಳವಡಿಸಲು ಕಡ್ಡಾಯ ಸೂಚನೆ

ಸಮಗ್ರ ನ್ಯೂಸ್: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಾರು ತಯಾರಕರು ಹಿಂದಿನ ಸೀಟ್ ಬೆಲ್ಟ್‌ಗಳಿಗೆ ಎಚ್ಚರಿಕೆಯ(ಅಲಾರಾಂ) ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ಕರಡು ನಿಯಮಗಳನ್ನು ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ಕರಡು ನಿಯಮಗಳ ಕುರಿತು ಸಾರ್ವಜನಿಕ ಕಾಮೆಂಟ್‌ಗಳಿಗೆ ಅಕ್ಟೋಬರ್ 5 ಕೊನೆಯ ದಿನಾಂಕವಾಗಿದೆ.

ಹಿಂದಿನ ಸೀಟ್ ಬೆಲ್ಟ್ ಗಳಿಗೆ ಎಚ್ಚರಿಕೆಯ ಅಲಾರಂ ವ್ಯವಸ್ಥೆ ಅಳವಡಿಸಲು ಕಡ್ಡಾಯ ಸೂಚನೆ Read More »