ದೇಶ-ವಿದೇಶ

ಆಧಾರ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಸೂಚನೆ ನೀಡಿದ ಕೇಂದ್ರ

ಸಮಗ್ರ ನ್ಯೂಸ್: ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಜನರಿಗೆ ತಮ್ಮ ಆಧಾರ್ ಕಾರ್ಡ್ ಮತ್ತು ಪ್ರತಿಗಳನ್ನು ಎಲ್ಲಿಯೂ ಬಿಡದಂತೆ ಸಲಹೆ ನೀಡಿದೆ. ಸಾಮಾಜಿಕ ಮಾಧ್ಯಮಗಳು ಮತ್ತು ಇತರ ಸಾರ್ವಜನಿಕ ವೇದಿಕೆಗಳಲ್ಲಿ ಆಧಾರ್ ಸಂಖ್ಯೆಯನ್ನು ಪ್ರದರ್ಶಿಸಬಾರದು ಮತ್ತು ಹಂಚಿಕೊಳ್ಳಬಾರದು ಎಂದು ಹೇಳಿದೆ. ಆಧಾರ್ ಅನ್ನು ಧೈರ್ಯವಾಗಿ ಬಳಸಬಹುದು ಆದರೆ ಅದರ ಬಳಕೆಯ ಮೇಲೆ ಕಣ್ಣಿಡುವುದು ಉತ್ತಮ ಎಂದು ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಎಚ್ಚರಿಸಿದೆ. ಇತರರೊಂದಿಗೆ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ತಿಳಿಸಿದೆ. […]

ಆಧಾರ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಸೂಚನೆ ನೀಡಿದ ಕೇಂದ್ರ Read More »

ಅಮೂಲ್ ಮತ್ತು ನಂದಿನಿ ಸಂಸ್ಥೆಗಳ ಮಿಲನಕ್ಕೆ ಆಕ್ರೋಶ| ‘ಸೇವ್ ನಂದಿನಿ’ ಅಭಿಯಾನ ಶುರು ಮಾಡಿದ ಕನ್ನಡಿಗರು| ಅಣ್ಣಾವ್ರ ಜಾಹೀರಾತು ವಿಡಿಯೋ ವೈರಲ್

ಸಮಗ್ರ ನ್ಯೂಸ್: ಅಮೂಲ್ ಹಾಗೂ ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಹಾಲಿನ ಡೈರಿಗಳನ್ನು ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಹೇಳಿದ್ದಾರೆ. ಆದರೆ ಇದಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕನ್ನಡಿಗರು ‘ಸೇವ್ ನಂದಿನಿ’ ಎನ್ನುವ ಅಭಿಯಾನ ಶುರು ಮಾಡಿದ್ದಾರೆ. ಇಂತಹ ಹೊತ್ತಲ್ಲೇ ಅಣ್ಣಾವ್ರು ಕಾಣಿಸಿಕೊಂಡಿದ್ದ ನಂದಿನಿ ಹಾಲಿನ ಜಾಹೀರಾತು ವಿಡಿಯೋ ವೈರಲ್ ಆಗಿದೆ. ಯಾವುದೇ ಉತ್ಪನ್ನ ತಯಾರಕರು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಜಾಹೀರಾತುಗಳ ಮೊರೆ ಹೋಗುತ್ತಾರೆ. ಗ್ರಾಹಕರನ್ನು ಸೆಳೆಯಲು

ಅಮೂಲ್ ಮತ್ತು ನಂದಿನಿ ಸಂಸ್ಥೆಗಳ ಮಿಲನಕ್ಕೆ ಆಕ್ರೋಶ| ‘ಸೇವ್ ನಂದಿನಿ’ ಅಭಿಯಾನ ಶುರು ಮಾಡಿದ ಕನ್ನಡಿಗರು| ಅಣ್ಣಾವ್ರ ಜಾಹೀರಾತು ವಿಡಿಯೋ ವೈರಲ್ Read More »

ವರ್ಷಾಂತ್ಯಕ್ಕೆ ಸಾರ್ವಕಾಲಿಕ ದಾಖಲೆ ಬರೆದ ಟೀಂ ಇಂಡಿಯಾ| ಗರಿಷ್ಠ ಪಂದ್ಯ ಗೆದ್ದು ನಂ.1 ಪಟ್ಟಕ್ಕೇರಿದ ರೋಹಿತ್ ಪಡೆ

ಸಮಗ್ರ ನ್ಯೂಸ್: 2022ನೇ ವರ್ಷಾಂತ್ಯಕ್ಕೆ ಭಾರತ ಕ್ರಿಕೆಟ್​ ತಂಡ ಕ್ರಿಕೆಟ್​ ಕ್ಷೇತ್ರದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇದುವರೆಗೆ ಯಾವುದೇ ತಂಡದ ಮಾಡದ ಗೆಲುವಿನ ಸಾಧನೆಯಾಗಿದ್ದು, ವಿಶ್ವದ ನಂಬರ್​ ಒನ್​ ತಂಡ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸುಮಾರು ಏಳು ನಾಯಕರ ಮುಂದಾಳತ್ವದಲ್ಲಿ ಆಡಿರುವ ಭಾರತ ತಂಡ ಚರಿತ್ರೆ ಸೃಷ್ಟಿಸಿದೆ. 2022ರ ಅಂತ್ಯಕ್ಕೆ ಭಾರತ ತಂಡ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 46 ಪಂದ್ಯಗಳಲ್ಲಿ ಜಯ ಗಳಿಸಿದೆ. ರೋಹಿತ್​ ಶರ್ಮ ಕಾಯಂ ನಾಯಕತ್ವದ ಟೀಮ್ ಇಂಡಿಯಾ ವರ್ಷಾಂತ್ಯಕ್ಕೆ ಗರಿಷ್ಠ ಪಂದ್ಯಗಳನ್ನು

ವರ್ಷಾಂತ್ಯಕ್ಕೆ ಸಾರ್ವಕಾಲಿಕ ದಾಖಲೆ ಬರೆದ ಟೀಂ ಇಂಡಿಯಾ| ಗರಿಷ್ಠ ಪಂದ್ಯ ಗೆದ್ದು ನಂ.1 ಪಟ್ಟಕ್ಕೇರಿದ ರೋಹಿತ್ ಪಡೆ Read More »

ವರ್ಷಾಂತ್ಯದಲ್ಲಿ ದೇಶಾದ್ಯಂತ ಯುಪಿಐ ಸರ್ವರ್ ಡೌನ್| ಗೂಗಲ್, ಫೋನ್ ಪೇ, ಪೇಟಿಎಂ ಇಲ್ಲದೆ ಪರದಾಟ

ಸಮಗ್ರ ನ್ಯೂಸ್: ದೇಶಾದ್ಯಂತ ಒಂದು ಗಂಟೆಯಿಂದ ಯುಪಿಐ ವಹಿವಾಟು ಸ್ಥಗಿತಗೊಂಡು ಬಳಕೆದಾರರಿಗೆ ತೊಂದರೆಯಾಗಿದೆ.ಸಾವಿರಾರು ಬಳಕೆದಾರರು ತಮಗೆ ಆದ ತೊಂದರೆಯ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಯುಪಿಐ ಏಕೆ ಕೆಲಸ ಮಾಡುತ್ತಿಲ್ಲ, ಅದು ಸ್ಥಗಿತಗೊಂಡು ಒಂದು ಗಂಟೆಯಾಗಿದೆ ಎಂದು ಬಳಕೆದಾರರು ದೂರಿದ್ದಾರೆ. ಎಲ್ಲಾ ಅಪ್ಲಿಕೇಶನ್ ಗಳಲ್ಲಿ ಯುಪಿಐ ಡೌನ್ ಆಗಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಅಪ್ಲಿಕೇಶನ್ ಗಳಲ್ಲಿ ಯುಪಿಐ ಡೌನ್ ಆಗಿದೆ ಎಂದು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ಯುಪಿಐ ಸರ್ವರ್ ಡೌನ್ ಆಗಿದೆ

ವರ್ಷಾಂತ್ಯದಲ್ಲಿ ದೇಶಾದ್ಯಂತ ಯುಪಿಐ ಸರ್ವರ್ ಡೌನ್| ಗೂಗಲ್, ಫೋನ್ ಪೇ, ಪೇಟಿಎಂ ಇಲ್ಲದೆ ಪರದಾಟ Read More »

ಹೊಸ ವರ್ಷಕ್ಕೆ ಭಾರತದಲ್ಲಿ ಲಾಂಚ್ ಆಗಲಿದೆ ರೆಡ್ಮಿ ನೋಟ್- 12 ಸೀರೀಸ್ ಮೊಬೈಲ್| ಏನಿದರ ವಿಶೇಷತೆ ಗೊತ್ತಾ?

ಸಮಗ್ರ ಡಿಜಿಟಲ್ ಡೆಸ್ಕ್: ಭಾರತದಲ್ಲಿ ಹೆಚ್ಚು ಮೆಚ್ಚುಗೆ ಪಡೆದ ಮತ್ತು ಅತ್ಯಂತ ಜನಪ್ರಿಯವಾದ ನೋಟ್ ಸರಣಿಯ ಪರಂಪರೆಯನ್ನು ಮುಂದುವರೆಸುತ್ತಾ, ಶಿಯೋಮಿ ತನ್ನ ಇತ್ತೀಚಿನ ರೆಡ್ಮಿ ನೋಟ್ 12 ಸರಣಿಯನ್ನು ಜನವರಿ 5, 2023 ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಸೂಪರ್ನೋಟ್’ ಸರಣಿಯು ವೈಶಿಷ್ಟ್ಯಗೊಳಿಸಲಿದೆ ಎಂದು ಬ್ರ್ಯಾಂಡ್ ಅಧಿಕೃತವಾಗಿ ಘೋಷಿಸಿದೆ. ಭಾರತದಲ್ಲಿ ರೆಡ್ಮಿ ನೋಟ್ 12 5G, ರೆಡ್ಮಿ ನೋಟ್ 12 ಪ್ರೊ 5G, ಮತ್ತು ರೆಡ್ಮಿ ನೋಟ್ 12 ಪ್ರೊ+ 5G ಮಾದರಿಗಳಲ್ಲಿ ಲಗ್ಗೆ ಇಡಲಿದೆ. ಹೊಸ

ಹೊಸ ವರ್ಷಕ್ಕೆ ಭಾರತದಲ್ಲಿ ಲಾಂಚ್ ಆಗಲಿದೆ ರೆಡ್ಮಿ ನೋಟ್- 12 ಸೀರೀಸ್ ಮೊಬೈಲ್| ಏನಿದರ ವಿಶೇಷತೆ ಗೊತ್ತಾ? Read More »

ಜೀವನ್ಮರಣ ಹೋರಾಟದಲ್ಲಿ ರಿಷಬ್ ಪಂತ್| ಏಮ್ಸ್ ನಲ್ಲಿ ಮುಂದುವರಿದ ಚಿಕಿತ್ಸೆ

ಸಮಗ್ರ ನ್ಯೂಸ್: ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರಿಷಭ್ ಪಂತ್ ತೀವ್ರ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಕಾರು ಚಾಲನೆ ಮಾಡುವಾಗ ಕ್ರಿಕೆಟರ್ ನಿದ್ರೆಗೆ ಜಾರಿದ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಬಿಎಂಡಬ್ಲ್ಯೂ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕ್ರಿಕೆಟಿಗ ಕಾರಿನಲ್ಲಿ ಒಬ್ಬರೇ ಇದ್ದರು ಮತ್ತು ಧಗಧಗನೇ ಹೊತ್ತಿಉರಿದ ಕಾರಿನ ಗಾಜು ಒಡೆದು ಹೊರ ಬಂದು ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಉತ್ತರಾಖಂಡ್ ಪೊಲೀಸ್ ಡಿಜಿಪಿ

ಜೀವನ್ಮರಣ ಹೋರಾಟದಲ್ಲಿ ರಿಷಬ್ ಪಂತ್| ಏಮ್ಸ್ ನಲ್ಲಿ ಮುಂದುವರಿದ ಚಿಕಿತ್ಸೆ Read More »

”ನಿಮ್ಮ ತಾಯಿ ನಮ್ಮೆಲ್ಲರಿಗೂ ತಾಯಿ”| ಸಾಂತ್ವನದ ನುಡಿಯಲ್ಲಿ ಗದ್ಗದಿತರಾದ ಮಮತಾ ಬ್ಯಾನರ್ಜಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ಹೀರಾಬೆನ್‌ ಅವರ ಅಗಲಿಕೆಯ ನೋವಿನ ನಡುವೆಯೂ, ಅಂತ್ಯ ಸಂಸ್ಕಾರ ನೆರವೇರಿಸಿದ ಬಳಿಕ ವಿರಾಮವನ್ನೂ ತೆಗೆದುಕೊಳ್ಳದೆ, ಪಶ್ಚಿಮ ಬಂಗಾಳದಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಆನ್‌ಲೈನ್‌ ಮೂಲಕ ಭಾಗವಹಿಸಿದ್ದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗದ್ಗದಿತರಾಗಿ ಸಾಂತ್ವನ ಹೇಳಿದರು. ‘ನಿಮ್ಮ ತಾಯಿಯವರ ನಿಧನದ ಹಿನ್ನೆಲೆಯಲ್ಲಿ ನಾವೆಲ್ಲ ದುಃಖತಪ್ತರಾಗಿದ್ದೇವೆ. ಇದು ತಮಗೂ ವೈಯಕ್ತಿಕವಾಗಿ ಬಹು ದೊಡ್ಡ ನಷ್ಟ. ನಿಮ್ಮ ತಾಯಿ ನಮಗೆಲ್ಲರಿಗೂ ತಾಯಿ. ನನಗೂ ನನ್ನ ತಾಯಿಯ ನೆನಪಾಗುತ್ತಿದೆ. ತಾಯಿ

”ನಿಮ್ಮ ತಾಯಿ ನಮ್ಮೆಲ್ಲರಿಗೂ ತಾಯಿ”| ಸಾಂತ್ವನದ ನುಡಿಯಲ್ಲಿ ಗದ್ಗದಿತರಾದ ಮಮತಾ ಬ್ಯಾನರ್ಜಿ Read More »

ತಾಯಿಯ ಅಂತ್ಯಕ್ರಿಯೆ ಬಳಿಕ ಕರ್ತವ್ಯಕ್ಕೆ ಹಾಜರಾದ ಮೋದಿ!!

ಸಮಗ್ರ ನ್ಯೂಸ್: ಅಹಮದಾಬಾದ್ ನ ಯು ಎಸ್ ಮೆಹ್ತಾ ಆಸ್ಪತ್ರೆಯಲ್ಲಿ ಇಂದು ಅನಾರೋಗ್ಯದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಾಯಿ ಹೀರಾಬೆನ್ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಕರ್ತವ್ಯಕ್ಕೆ ಹಾಜರಾದರು. ಅವರ ಅಂತ್ಯಕ್ರಿಯೆಯನ್ನು ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ. ಪ್ರಧಾನಿ ಮೋದಿ ತಾಯಿಯ ಪಾರ್ಥೀವ ಶರೀರದ ಚಿತೆಗೆ ಅಗ್ನಿಸ್ಪರ್ಷ ಮಾಡಿದರು. ಈ ಮೂಲಕ ಮೋದಿಯವರ ತಾಯಿ ಹೀರಾ ಬೆನ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ತಾಯಿ ಹೀರಾಬೆನ್‌ ಅಂತ್ಯಕ್ರಿಯೆ ಬಳಿಕ ಪ್ರಧಾನಿ ಮೋದಿ ಅವರು ಕರ್ತವ್ಯಕ್ಕೆ

ತಾಯಿಯ ಅಂತ್ಯಕ್ರಿಯೆ ಬಳಿಕ ಕರ್ತವ್ಯಕ್ಕೆ ಹಾಜರಾದ ಮೋದಿ!! Read More »

ಎಲ್ಐಸಿ ಜೊತೆಗೆ ನಾಲ್ಕು ವಿಮಾ ಕಂಪನಿಗಳು ವಿಲೀ‌ನ| ಬಯಲಾಯ್ತು ಮತ್ತೊಂದು ದೊಡ್ಡ ಸುದ್ದಿ

ಸಮಗ್ರ ನ್ಯೂಸ್:ದೇಶದಲ್ಲಿ ನಡೆಯುತ್ತಿರುವ ಖಾಸಗೀಕರಣ ಮತ್ತು ವಿಲೀನದ ನಡುವೆ ಮತ್ತೊಂದು ದೊಡ್ಡ ಸುದ್ದಿ ಹೊರಬೀಳುತ್ತಿದೆ. ಈಗ ದೇಶದ ನಾಲ್ಕು ಸರ್ಕಾರಿ ಸಾಮಾನ್ಯ ವಿಮಾ ಕಂಪನಿಗಳನ್ನು ಎಲ್‌ಐಸಿಯೊಂದಿಗೆ ವಿಲೀನಗೊಳ್ಳುತ್ತವೆ ಎಂಬ ಮಾಹಿತಿ ಹೊರಬಿದ್ದಿದೆ. ಇವುಗಳಲ್ಲಿ ರಾಷ್ಟ್ರೀಯ ವಿಮೆ, ನ್ಯೂ ಇಂಡಿಯಾ ಅಶ್ಯೂರೆನ್ಸ್, ಓರಿಯಂಟಲ್ ಇನ್ಶುರೆನ್ಸ್ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಸೇರಿವೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ಕಾಯಿದೆ 1999 ಮತ್ತು ವಿಮಾ ಕಾಯಿದೆ 1938 ರ ಅಡಿಯಲ್ಲಿ ಇದನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ

ಎಲ್ಐಸಿ ಜೊತೆಗೆ ನಾಲ್ಕು ವಿಮಾ ಕಂಪನಿಗಳು ವಿಲೀ‌ನ| ಬಯಲಾಯ್ತು ಮತ್ತೊಂದು ದೊಡ್ಡ ಸುದ್ದಿ Read More »

ಭೀಕರ ಅಪಘಾತ; ಕ್ರಿಕೆಟಿಗ ರಿಷಬ್ ಪಂತ್ ಗಂಭೀರ

ಸಮಗ್ರ ನ್ಯೂಸ್: ಭಾರತದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾದ ಘಟನೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ನಡೆದಿದೆ. ರೂರ್ಕಿಯಿಂದ ದೆಹಲಿಗೆ ಬರುತ್ತಿದ್ದ ವೇಳೆ ಮರ್ಸಿಡಿಸ್ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ರಿಷಬ್ ಅವರ ಹಣೆ, ಕಣ್ಣು , ಬೆನ್ನಿಗೆ ಮತ್ತು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ವರದಿಯಾಗಿದೆ. ಸದ್ಯ ಇವರನ್ನು ಚಿಕಿತ್ಸೆಗಾಗಿ ದೆಹಲಿಯ ಸೆಕ್ಷಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಪೊಲೀಸ್

ಭೀಕರ ಅಪಘಾತ; ಕ್ರಿಕೆಟಿಗ ರಿಷಬ್ ಪಂತ್ ಗಂಭೀರ Read More »