ರಾಷ್ಟ್ರೀಯ

ನಾಳೆ(ಅ.12) ಕಂಪಿಸಲಿದೆ ನಿಮ್ಮ‌ ಮೊಬೈಲ್| ಭಯಬೇಡ… ಹೀಗೆ ಮಾಡಿ…

ಸಮಗ್ರ ನ್ಯೂಸ್: ಮೊಬೈಲ್ ಫೋನ್ ಗಳು ಆಗಾಗ ಅಪ್ ಡೇಟ್ ಆಗುವುದರ ಜೊತೆಗೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಈ ಬೆನ್ನಲ್ಲೆ ನಾಳೆ (ಅ.12) ಮೊಬೈಲ್ ಕಂಪಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದ ಪ್ರಕಾರ ಅ.12ರಂದು ನಿಮ್ಮ ಮೊಬೈಲ್ ಫೋನ್‌ಗೆ ಎಚ್ಚರಿಕೆಯ ಸಂದೇಶ ಒಂದು ಬರಲಿದೆ. ಈ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಧ್ವನಿ ಕೇಳಲಿದ್ದು ಜೊತೆಗೆ ಮೊಬೈಲ್ ಕಂಪಿಸಲಿದೆ. ಆದರೆ ಈ ಬಗ್ಗೆ ಜನ ಭಯಪಡುವ ಅಗತ್ಯವಿಲ್ಲ ಎಂದಿರುವ ಭಾರತದ ದೂರಸಂಪರ್ಕ ಇಲಾಖೆ, […]

ನಾಳೆ(ಅ.12) ಕಂಪಿಸಲಿದೆ ನಿಮ್ಮ‌ ಮೊಬೈಲ್| ಭಯಬೇಡ… ಹೀಗೆ ಮಾಡಿ… Read More »

ಮಾಜಿ ಪ್ರಧಾನಿ ವಾಜಪೇಯಿ ಪ್ಯಾಲೆಸ್ತೀನ್ ಗೆ ಬೆಂಬಲ‌ ನೀಡಿದ್ರಾ? ವೈರಲ್ ಆಗ್ತಿದೆ ಅಟಲ್ ಜೀ ಹಳೆಯ ಭಾಷಣ

ಸಮಗ್ರ ನ್ಯೂಸ್: ಭಾರತದ ಮಾಜಿ ಪ್ರಧಾನಿ ಮತ್ತು ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಸುಮಾರು 46 ವರ್ಷಗಳ ಹಿಂದೆ ನಡೆದ ಸಭೆಯೊಂದರಲ್ಲಿ ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತರು ಮತ್ತು ʻಇಸ್ರೇಲ್ ಭೂಮಿಯನ್ನು ಖಾಲಿ ಮಾಡುವಂತೆʼ ಒತ್ತಾಯಿಸಿದರು. ಇಸ್ರೇಲ್ ಮತ್ತು ಗಾಜಾದ ಹಮಾಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಈ ವೀಡಿಯೊ ಮರುಕಳಿಸಿದೆ. ಹಮಾಸ್ ಹೋರಾಟಗಾರರು ಶನಿವಾರ ಇಸ್ರೇಲ್‌ನ ಮೇಲೆ ಬಹು-ಹಂತದ ಅನಿರೀಕ್ಷಿತ ದಾಳಿಯನ್ನು ಬಿಚ್ಚಿಟ್ಟ ನಂತರ, ಬೆಂಜಮಿನ್ ನೆಟ್ಯಾನ್‌ಹು ಸರ್ಕಾರವು ಪ್ರತೀಕಾರವಾಗಿ ಗಾಜಾವನ್ನು ಸಂಪೂರ್ಣ

ಮಾಜಿ ಪ್ರಧಾನಿ ವಾಜಪೇಯಿ ಪ್ಯಾಲೆಸ್ತೀನ್ ಗೆ ಬೆಂಬಲ‌ ನೀಡಿದ್ರಾ? ವೈರಲ್ ಆಗ್ತಿದೆ ಅಟಲ್ ಜೀ ಹಳೆಯ ಭಾಷಣ Read More »

ಅಮರ್ತ್ಯ ಸೇನ್ ನಿಧನ ಸುಳ್ಸುದ್ದಿ – ಪುತ್ರಿ ನಂದನ ಸೆನ್

ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ ನಿಧನರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಅವರ ಪುತ್ರಿ ನಂದನ ಸೆನ್ ಅವರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ಸ್ನೇಹಿತರೇ, ನಿಮ್ಮ ಕಾಳಜಿಗೆ ಧನ್ಯವಾದಗಳು ಆದರೆ ಇದು ಸುಳ್ಳು ಸುದ್ದಿ: ಬಾಬಾ ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ನಾವು ಕುಟುಂಬದೊಂದಿಗೆ ಅದ್ಭುತವಾದ ವಾರವನ್ನು ಕಳೆದಿದ್ದೇವೆ-ಕಳೆದ ರಾತ್ರಿ ನಾವು ವಿದಾಯ ಹೇಳಿದಾಗ ಅವರ ಅಪ್ಪುಗೆ ಯಾವಾಗಲೂ ಪ್ರಬಲವಾಗಿದೆ! ಅವರು ಹಾರ್ವರ್ಡ್‌ನಲ್ಲಿ ವಾರಕ್ಕೆ 2 ಕೋರ್ಸ್‌ಗಳನ್ನು ಕಲಿಸುತ್ತಿದ್ದಾರೆ, ಎಂದಿನಂತೆ ಕಾರ್ಯನಿರತರಾಗಿದ್ದಾರೆ!” ಎಂದು

ಅಮರ್ತ್ಯ ಸೇನ್ ನಿಧನ ಸುಳ್ಸುದ್ದಿ – ಪುತ್ರಿ ನಂದನ ಸೆನ್ Read More »

‘ಭಾರತದಷ್ಟು ಸುರಕ್ಷಿತ ದೇಶ ಇನ್ನೊಂದಿಲ್ಲ’ | ಇಸ್ರೇಲ್‌ನಿಂದ ವಾಪಾಸ್ಸಾದ ಬಳಿಕ ನಟಿ ನುಶ್ರತ್ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ಹಮಾಸ್​ನಿಂದ ದಾಳಿಗೊಳಗಾಗಿರುವ ಇಸ್ರೇಲ್​ನಲ್ಲಿ ಬಾಲಿವುಡ್ ನಟಿ ನುಶ್ರತ್ ಭರೂಚಾ ಸಿಕ್ಕಿಹಾಕಿಕೊಂಡಿದ್ದರು. ನುಶ್ರತ್ ಭರೂಚಾ ಅವರು ಹೈಫಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್​​ಗೆ ಹೋಗಿದ್ದರು. ಆದರೆ ಅದೇ ವೇಳೆ ಹಮಾಸ್ ಉಗ್ರರಿಂದ ಏಕಾಏಕಿ ದಾಳಿ ನಡೆದಿದೆ. ಹೀಗಾಗಿ ನಟಿ ದಾಳಿ ಸಂದರ್ಭ ಅಪಾಯದ ವಾತಾವರಣದಲ್ಲಿ ಇಸ್ರೇಲ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದರೆ ಭಾರತದ ಶ್ರಮದ ಫಲವಾಗಿ ನಟಿಗೆ ಏನೂ ಅನಾಹುತ ಸಂಭವಿಸಿಲ್ಲ. ನಟಿ ಸುರಕ್ಷಿತವಾಗಿ ಭಾರತವನ್ನು ತಲುಪಿದ್ದಾರೆ. ಇದೀಗ ನಟಿ ಮಾಧ್ಯಮಗಳ ಎದುರು ಬಂದು ಸಾವಿನ ಬಾಯಿಗೆ ತಾವು ಹೋಗಿದ್ದ

‘ಭಾರತದಷ್ಟು ಸುರಕ್ಷಿತ ದೇಶ ಇನ್ನೊಂದಿಲ್ಲ’ | ಇಸ್ರೇಲ್‌ನಿಂದ ವಾಪಾಸ್ಸಾದ ಬಳಿಕ ನಟಿ ನುಶ್ರತ್ ಪ್ರತಿಕ್ರಿಯೆ Read More »

ಆರ್ಥಿಕ ತಜ್ಞ, ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಇನ್ನಿಲ್ಲ

ಸಮಗ್ರ ನ್ಯೂಸ್: ಭಾರತದ ಧೀಮಂತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಇಂದು (ಅ. 10) ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಪತ್ನಿ ಎಮ್ಮಾ ರಾತ್ಸ್​ಚೈಲ್ಡ್ ಹಾಗು ನಾಲ್ವರು ಮಕ್ಕಳನ್ನು ಅವರು ಅಗಲಿದ್ದಾರೆ. ನವದೆಹಲಿ: ಭಾರತದ ಧೀಮಂತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಇಂದು (ಅ. 10) ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಪತ್ನಿ ಎಮ್ಮಾ ರಾತ್ಸ್​ಚೈಲ್ಡ್ ಹಾಗು ನಾಲ್ವರು ಮಕ್ಕಳನ್ನು ಅವರು ಅಗಲಿದ್ದಾರೆ. ಬ್ರಿಟನ್ ದೇಶದಲ್ಲಿ ವಾಸವಿದ್ದ ಅಮರ್ತ್ಯ ಸೇನ್ ಸಾವಿನ

ಆರ್ಥಿಕ ತಜ್ಞ, ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಇನ್ನಿಲ್ಲ Read More »

ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ/ ರಾಮನ ಅಕ್ಷತೆ ವಿತರಣೆ

ಸಮಗ್ರ ನ್ಯೂಸ್: ಆಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಶ್ರೀರಾಮನಿಗೆ ಸಮರ್ಪಣೆಯಾಗಲಿರುವ ಅಕ್ಷತೆಯನ್ನು ದೇಶಾದ್ಯಂತ ವಿತರಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ಧರಿಸಿದೆ. ದಸರಾ ಸಂಭ್ರಮಾಚರಣೆಯ ಬಳಿಕ ಅಯೋಧ್ಯೆಯಲ್ಲಿ ಅಕ್ಷತಾ ಪೂಜೆಯನ್ನು ನೆರವೇರಿಸಲಾಗುತ್ತದೆ. ಬಳಿಕ ವಿಶ್ವ ಹಿಂದೂ ಪರಿಷತ್‍ನ ಸ್ವಯಂಸೇವಕರು ಅಯೋಧ್ಯೆಗೆ ಬಂದು ಅಕ್ಷತೆಯನ್ನು ಕೊಂಡೊಯ್ಯುತ್ತಾರೆ. ನಂತರ ಅದನ್ನು ದೇಶದ ವಿವಿಧ ಭಾಗಗಳಲ್ಲಿ ಹಂಚುವ ಕುರಿತು ನಿರ್ಧರಿಸಲಾಗುತ್ತದೆ. ಜನವರಿ 1 ರಿಂದ 15ರವರೆಗೆ ಅಕ್ಷತೆಯನ್ನು ವಿತರಿಸಲಾಗುತ್ತದೆ ಎಂದು ಟ್ರಸ್ಟ್ ತಿಳಿಸಿದೆ.

ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ/ ರಾಮನ ಅಕ್ಷತೆ ವಿತರಣೆ Read More »

ರಾಜಸ್ಥಾನದಲ್ಲಿ ನವೆಂಬರ್ 23ರಂದು ಚುನಾವಣೆ/ ಬಿಜೆಪಿ ಮೊದಲ ಪಟ್ಟಿ ಸಿದ್ಧ

ಸಮಗ್ರ ನ್ಯೂಸ್: ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ರಾಜಸ್ಥಾನದಲ್ಲಿ ನವೆಂಬರ್ 23 ರಂದು ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. 41 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ರಾಜಸ್ಥಾನದಿಂದ ಲೋಕಸಭೆಗೆ ಆಯ್ಕೆಯಾಗಿರುವ 7 ಸಂಸದರಿಗೆ ಟಿಕೆಟ್ ನೀಡಲಾಗಿದೆ. ರಾಜಸ್ಥಾನದ ಪ್ರಮುಖ 7 ಸಂಸದರು ವಿಧಾನಸಭೆ ಸ್ಪರ್ಧಿಸಿ ಬಿಜೆಪಿ ಅಧಿಕಾರಕ್ಕೆ ತರುವ ಹೊಣೆ ಹೊತ್ತುಕೊಂಡಿದ್ದಾರೆ.ಸಂಸದ ರಾಜ್ಯವರ್ಧನ್ ರಾಥೋಡ್ ಜೋತ್ವಾರ ಕ್ಷೇತ್ರದಿಂದ , ಸಂಸದೆ ದಿವ್ಯ ಕುಮಾರ್

ರಾಜಸ್ಥಾನದಲ್ಲಿ ನವೆಂಬರ್ 23ರಂದು ಚುನಾವಣೆ/ ಬಿಜೆಪಿ ಮೊದಲ ಪಟ್ಟಿ ಸಿದ್ಧ Read More »

ಸಹಕಾರಿ ಕ್ಷೇತ್ರದ ಗಣಕೀಕರಣ/ ಭರ್ಜರಿ ಅನುದಾನ ನೀಡಿದ ಕೇಂದ್ರ ಸರ್ಕಾರ

ಸಮಗ್ರ ನ್ಯೂಸ್: ಗ್ರಾಮೀಣ ಆರ್ಥಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಹಕಾರಿ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಮುಂದಾಗಿದ್ದು, ಕೃಷಿ ಮತ್ತು ಗ್ರಾಮೀಣ ಸಹಕಾರಿ ಸಂಘಗಳ ಕಂಪ್ಯೂಟರೀಕರಣಕ್ಕೆ 225.09 ಕೋಟಿ ರೂಪಾಯಿಗಳನ್ನು ನೀಡಲು ಮುಂದಾಗಿದೆ. ದೇಶದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹಕಾರಿ ಸಂಘಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಕೇಂದ್ರದ ಅನುದಾನ ಇದರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಸಹಕಾರಿ ಕ್ಷೇತ್ರದ ಗಣಕೀಕರಣ/ ಭರ್ಜರಿ ಅನುದಾನ ನೀಡಿದ ಕೇಂದ್ರ ಸರ್ಕಾರ Read More »

ಪಂಚರಾಜ್ಯ ಚುನಾವಣೆಗೆ ಮಹೂರ್ತ ಫಿಕ್ಸ್| ಕೇಂದ್ರ ಚು. ಆಯೋಗದಿಂದ ದಿನ‌ ನಿಗದಿ

ಸಮಗ್ರ ನ್ಯೂಸ್: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ನಿಗದಿಪಡಿಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ. ಮಧ್ಯಪ್ರದೇಶ ಹಾಗೂ ಮಿಜೋರಾಂನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದೆ, ಛತ್ತೀಸ್ ಗಢದಲ್ಲಿ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ, ರಾಜಸ್ಥಾನದಲ್ಲಿ ನವೆಂಬರ್ 23ರಂದು ಹಾಗೂ ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಫಲಿತಾಂಶ ಹೊರಬರಲಿದೆ.

ಪಂಚರಾಜ್ಯ ಚುನಾವಣೆಗೆ ಮಹೂರ್ತ ಫಿಕ್ಸ್| ಕೇಂದ್ರ ಚು. ಆಯೋಗದಿಂದ ದಿನ‌ ನಿಗದಿ Read More »

ಕೇಂದ್ರದ ಬರ ಅಧ್ಯಯನ/ ಹತ್ತು ದಿನದಲ್ಲಿ ವರದಿ: ಕೃಷ್ಣ ಭೈರೇಗೌಡ

ಸಮಗ್ರ ನ್ಯೂಸ್: ಕೇಂದ್ರ ಸರಕಾರದ ಅಧಿಕಾರಿಗಳ ತಂಡವು ರಾಜ್ಯದ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿದ್ದು, ಹತ್ತು ದಿನಗಳ ಒಳಗಾಗಿ ತನ್ನ ವರದಿಯನ್ನು ಸಲ್ಲಿಸಲಿದೆ. ಆ ಬಳಿಕ ಪರಿಹಾರಧನದ ಕುರಿತು ನಿರ್ಧಾರವಾಗಲಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಲ್ಲಿ ಸಹಾಯಧನ ನೀಡುವಂತೆ ಕೋರಲಾಗಿತ್ತು. ಈ ಕುರಿತು ಕೇಂದ್ರ ಕೃಷಿ ಸಚಿವರ ಭೇಟಿಗೆ ಪ್ರಯತ್ನಸಿದ್ದರೂ, ಅದು ಸಫಲವಾಗಿರಲಿಲ್ಲ. ಇದೀಗ ಕೇಂದ್ರದ ಅಧಿಕಾರಿಗಳ ತಂಡ ಅಧ್ಯಯನ

ಕೇಂದ್ರದ ಬರ ಅಧ್ಯಯನ/ ಹತ್ತು ದಿನದಲ್ಲಿ ವರದಿ: ಕೃಷ್ಣ ಭೈರೇಗೌಡ Read More »