ಭಾರತ ಪಾಕಿಸ್ತಾನದ ನಡುವೆ ಕಾಶ್ಮೀರ ವಿಚಾರವೇ ನಿರ್ಣಾಯಕ/ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅನ್ವರ್ ಉಲ್ ಹಕ್ ಕಾಕರ್
ಸಮಗ್ರ ನ್ಯೂಸ್: ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪನೆಗೆ ಕಾಶ್ಮೀರ ವಿಚಾರವೇ ನಿರ್ಣಾಯಕವಾದುದು ಎಂದು ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಕಾಕರ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನದಲ್ಲಿ ಮಾತನಾಡಿದ ಕಾಕರ್, ‘ ಪಾಕ್ ತನ್ನ ನೆರೆಯ ರಾಷ್ಟ್ರಗಳ ಜೊತೆಗೆ ಶಾಂತಿಯುತವಾದ ಬಾಂಧವ್ಯವನ್ನು ಹೊಂದಲು ಇಷ್ಟಪಡುತ್ತದೆ. ಭಾರತದ ಜೊತೆ ಶಾಂತಿಯುತ ಬಾಂಧವ್ಯವನ್ನು ಹೊಂದಲು ಕಾಶ್ಮೀರ ವಿಷಯವೇ ನಿರ್ಣಾಯಕವಾದುದು. ಕಾಶ್ಮೀರ ಕುರಿತಂತೆ ತನ್ನ ನಿರ್ಣಯವನ್ನು ಜಾರಿಗೊಳಿಸಲು ಭದ್ರತಾ ಮಂಡಳಿ ಮಹತ್ವ […]










