ಕ್ರೈಂ

ಮಾಸ್ಕ್ ಇಲ್ಲದೇ‌ ಬ್ಯಾಂಕ್ ಪ್ರವೇಶಿಸಿದ ಗ್ರಾಹಕ, ಸೆಕ್ಯೂರಿಟಿ ಗಾರ್ಡ್ ನಿಂದ ಫೈರಿಂಗ್

ಉತ್ತರ ಪ್ರದೇಶ: ಮಾಸ್ಕ್ ಧರಿಸಿದೆ ಬ್ಯಾಂಕ್ ಒಳಪ್ರವೇಶಿಸಲು ಯತ್ನಿಸಿದ ಗ್ರಾಹಕನ ಮೇಲೆ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗ್ರಾಹಕ ರಾಜೇಶ್ ಕುಮಾರ್ ಬರೇಲಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಗೆ ಆಗಮಿಸಿದ್ದಾನೆ. ಬ್ಯಾಂಕ್‌ನಲ್ಲಿನ ಕೆಲಸಕ್ಕೆ 11.30ಕ್ಕೆ ಆಗಮಿಸಿದ ರಾಜೇಶ್ ಕುಮಾರ್ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಮಾಸ್ಕ್ ಧರಿಸಿದೆ ಒಳ ಪ್ರವೇಶಿಸಲು ಸಾಧ್ಯವಿಲ್ಲ ಎಂದಿದ್ದಾನೆ.ಸೆಕ್ಯೂರಿಟಿ ಗಾರ್ಡ್ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಹಕ ನೇರವಾಗಿ ಬ್ಯಾಂಕ್ ಒಳ ಪ್ರವೇಶಿಸಲು […]

ಮಾಸ್ಕ್ ಇಲ್ಲದೇ‌ ಬ್ಯಾಂಕ್ ಪ್ರವೇಶಿಸಿದ ಗ್ರಾಹಕ, ಸೆಕ್ಯೂರಿಟಿ ಗಾರ್ಡ್ ನಿಂದ ಫೈರಿಂಗ್ Read More »

ರೇಖಾ ಕದಿರೇಶ್ ಹತ್ಯೆ ಆರೋಪಿಗಳ ಮೇಲೆ ಫೈರಿಂಗ್

ಬೆಂಗಳೂರು: ನಿನ್ನೆ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಎಂಬ ಇಬ್ಬರು ನಗರದ ಸುಮನಹಳ್ಳಿ ಎಂಬಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಆರೋಪಿಗಳನ್ನು ಕಂಡ ಕೂಡಲೇ ಪೊಲೀಸರು ಶರಣಾಗುವಂತೆ ತಿಳಿಸಿದ್ದಾರೆ. ಆದರೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿ ಸಿದ್ದಾರೆ. ಈ ವೇಳೆ ಪೊಲೀಸರು ಸ್ವರಕ್ಷಣೆಗಾಗಿ ಪೀಟರ್ ಮತ್ತು ಸೂರ್ಯ

ರೇಖಾ ಕದಿರೇಶ್ ಹತ್ಯೆ ಆರೋಪಿಗಳ ಮೇಲೆ ಫೈರಿಂಗ್ Read More »

ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾಗಿದೆ | ಇದೀಗ ಜಾತಿ ನೆಪ ಹೇಳಿ ಬೇರೆ ಮದುವೆಯಾದ ಪತಿ

ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಜಾತಿ ಹೆಸರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಮತ್ತೊಂದು ಮದುವೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. 5 ವರ್ಷದ ಹಿಂದೆ ಬಂಗಾರಪೇಟೆ ತಾಲೂಕಿನ ದೊಡ್ಡ ಚಿನ್ನಹಳ್ಳಿಯ ಸುನಿಲ್, ಚಿಕ್ಕ ಅಂಕಂಡಹಳ್ಳಿಯ ಕಾವ್ಯಾ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ 4 ವರ್ಷದ ಹಾಗೂ 9 ತಿಂಗಳ ಎರಡು ಗಂಡು ಮಕ್ಕಳಿವೆ. ಈ ಮಧ್ಯೆ ಪತಿ ತನ್ನ ತಾಯಿಯ ಮನೆಗೆ ಹೋಗಿ ಬರುತ್ತಿದ್ದು, ಮನೆಯವರ ಮಾತು ಕೇಳಿರುವ ಸುನಿಲ್, ಮತ್ತೊಂದು

ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾಗಿದೆ | ಇದೀಗ ಜಾತಿ ನೆಪ ಹೇಳಿ ಬೇರೆ ಮದುವೆಯಾದ ಪತಿ Read More »

ಮುಸ್ಲಿಂ ಯುವತಿ, ದಲಿತ ಯುವಕನ ಬರ್ಬರ ಹತ್ಯೆ ಪ್ರಕರಣ | ಕಲ್ಲು ಎತ್ತಿ ಹಾಕಿದ ಆರೋಪಿಗಳು ಅಂದರ್

ವಿಜಯಪುರ: ಮುಸ್ಲಿಂ ಯುವತಿ ಹಾಗೂ ದಲಿತ ಯುವಕನನ್ನು ಬರ್ಬರ ಹತ್ಯೆ ಮಾಡಿ, ಜಿಲ್ಲೆಯ ಸಲಾಡಹಳ್ಳಿ ಗುಡ್ಡಪ್ರದೇಶದಲ್ಲಿ ಇಬ್ಬರ ಶವನ್ನು ಎಸೆಯಲಾಗಿತ್ತು. ಇದೀಗ ಈ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಲಕೇರಿ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ಮಧ್ಯಾಹ್ನ ಬಸವರಾಜ್ (19), ದಾವಲಭಿ (18) ಎಂಬ ಪ್ರೇಮಿಗಳ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಯುವತಿ ತಂದೆ ಬಂದಗಿಸಾಬ್ ತಂಬದ್ (50), ಸಹೋದರ ದಾವಲ್ ಪಟೇಲ್ (29), ಅಳಿಯರಾದ

ಮುಸ್ಲಿಂ ಯುವತಿ, ದಲಿತ ಯುವಕನ ಬರ್ಬರ ಹತ್ಯೆ ಪ್ರಕರಣ | ಕಲ್ಲು ಎತ್ತಿ ಹಾಕಿದ ಆರೋಪಿಗಳು ಅಂದರ್ Read More »

ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣ | ತಂದೆಯ ಕೊಲೆಗೆ ಲಕ್ಷ ರೂ. ಸುಪಾರಿ ಕೊಟ್ಟಿದ್ದ ಮಗ | ಒಂದಲ್ಲ, ಎರಡಲ್ಲ ಮೂರನೇ ಪ್ರಯತ್ನಕ್ಕೆ ತಂದೆ ಯಮಲೋಕಕ್ಕೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪಾಪಿ ಮಗನೇ ಸುಪಾರಿ ಲಕ್ಷ ರೂ.ಕೊಟ್ಟು ಜನ್ಮ ಕೊಟ್ಟ ತಂದೆಯನ್ನೇ ಕೊಲೆ ಮಾಡಿಸಿರುವುದಾಗಿ, ಅದಲ್ಲದೆ ಒಂದಲ್ಲಾ, ಎರಡಲ್ಲಾ ಮೂರನೇ ಬಾರಿಯಲ್ಲಿ ತಂದೆ ತಂದೆಯ ಕೊಲೆ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ರೈತ ಶ್ರೀನಿವಾಸಮೂರ್ತಿ (65)ರವರು ಮಗನಿಂದ ಕೊಲೆಯಾದವರು. ಅವರ ಮಗ ರೋಹಿತ್, ಹಾಗೂ ರಂಗನಾಥ್ ಮತ್ತು ರವಿಕುಮಾರ್ ಕೊಲೆ ಪ್ರಕರಣದ ಅರೋಪಿಗಳು. ಶ್ರೀನಿವಾಸಮೂರ್ತಿಯವರ ಮಗ

ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣ | ತಂದೆಯ ಕೊಲೆಗೆ ಲಕ್ಷ ರೂ. ಸುಪಾರಿ ಕೊಟ್ಟಿದ್ದ ಮಗ | ಒಂದಲ್ಲ, ಎರಡಲ್ಲ ಮೂರನೇ ಪ್ರಯತ್ನಕ್ಕೆ ತಂದೆ ಯಮಲೋಕಕ್ಕೆ Read More »

ಪುತ್ತೂರು: ಯುವಕ ನೇಣಿಗೆ ಶರಣು

ಪುತ್ತೂರು: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ನಡೆದಿದೆ. ಇಲ್ಲಿನ ನೆರೋಲ್ತಡ್ಕ ನಿವಾಸಿ 20 ವರ್ಷದ ಯುವಕ ಶರತ್ ಆತ್ಮಹತ್ಯೆ ಮಾಡಿಕೊಂಡವರು. ಇಂದು ಮದ್ಯಾಹ್ನ ಇದ್ದಕ್ಕಿದ್ದಂತೆ ಶರತ್ ಮನೆಯಿಂದ ಕಾಣೆಯಾಗಿದ್ದಾರೆ. ಮನೆಯವರು ಹುಡುಕಾಡಿದಾಗ ಮನೆಯ ಪಕ್ಕದ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶರತ್ಪ ಮೃತದೇಹ ಪತ್ತೇಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈಶ್ವರಮಂಗಲ ಹೊರಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು: ಯುವಕ ನೇಣಿಗೆ ಶರಣು Read More »

ಟಿಕ್‌ಟಾಕ್‌ನಲ್ಲಿ ಪರಿಚಯ, ಫೇಸ್ಬುಕ್‌ನಲ್ಲಿ ಪ್ರೇಮ | ಮದುವೆಯಾಗಿ 7 ತಿಂಗಳಲ್ಲಿ ಯುವತಿಯ ಬದುಕು ಅಂತ್ಯ

ಕೊಪ್ಪಳ: ಬ್ಯಾನ್ ಆಗುವುದಕ್ಕೂ ಮುನ್ನವೇ ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ, ಬಳಿಕ ಫೇಸ್ಬುಕ್, ವಾಟ್ಸಪ್‌ನಲ್ಲಿ ಮಾತುಕತೆ, ಸಲಿಗೆ ಬೆಳೆದಿದ್ದು, ಪ್ರೀತಿಗೆ ತಿರುಗಿದ ಬಳಿಕ ಮದುವೆಯಾಗಿದ್ದಾರೆ. ಇದೀಗ ಮದುವೆಯಾದ ೭ ತಿಂಗಳ ಬಳಿಕ ಯುವತಿಯ ಬದುಕು ದುರಂತ ಅಂತ್ಯವಾಗಿದೆ. ಈ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ಹಾಗೂ ಗಂಗಾವತಿ ತಾಲೂಕಿನ ಸಾಣಾಪುರದ ವಿಕ್ರಂ ಕಳೆದ ಒಂದೂವರೆ ವರ್ಷದ ಹಿಂದೆ ಟಿಕ್‌ಟಾಕ್ ಮೂಲಕ ಪರಿಚಯವಾಗಿ ಬಳಿಕ ಪ್ರೇಮದಲ್ಲಿ ಬಿದ್ದಿದ್ದಾರೆ. ನಂತರ

ಟಿಕ್‌ಟಾಕ್‌ನಲ್ಲಿ ಪರಿಚಯ, ಫೇಸ್ಬುಕ್‌ನಲ್ಲಿ ಪ್ರೇಮ | ಮದುವೆಯಾಗಿ 7 ತಿಂಗಳಲ್ಲಿ ಯುವತಿಯ ಬದುಕು ಅಂತ್ಯ Read More »

ಪ್ರೇಯಸಿಗೆ ನಿಶ್ಚಿತಾರ್ಥ ಕೇಳಲು ಹೋದ ಪ್ರಿಯಕರನ ಬರ್ಬರ ಹತ್ಯೆ

ತಮಿಳುನಾಡು: ತಾನು ಪ್ರೀತಿಸಿದ ಹುಡುಗಿಗೆ ನಿಶ್ಚಿತಾರ್ಥ ವಾಗಿರುವುದನ್ನು ತಿಳಿದು ಹುಡುಗಿ ಮನೆಗೆ ವಿಚಾರಿಸಲು ತೆರಳಿದ ಯುವಕನನ್ನು, ಯುವತಿಯ ಮನೆಯವರು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ರಾಜ್ಯದ ದಿಂಡಿಗಲ್ ಜಿಲ್ಲೆಯ ಯುವಕ ಭಾರತಿ ರಾಜ್ (21) ಕೊಲೆಯಾದವನು. ಈತ ಹಾಗೂ ಪಕ್ಕದ ಊರಿನ ಯುವತಿ ಪರಮೇಶ್ವರಿ ಎಂಬಾಕೆ ಕಳೆದ ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಷಯ ತಿಳಿದ ಯುವತಿಯ ಮನೆಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಇವರು ಬೇರೆ ಬೇರೆಯಾಗಿರಲಿಲ್ಲ. ಇದನ್ನು ಕಂಡ ಯುವತಿಯ

ಪ್ರೇಯಸಿಗೆ ನಿಶ್ಚಿತಾರ್ಥ ಕೇಳಲು ಹೋದ ಪ್ರಿಯಕರನ ಬರ್ಬರ ಹತ್ಯೆ Read More »

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ

ಬೆಂಗಳೂರು: ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿದೆ. ಛಲವಾದಿಪಾಳ್ಯ ಕಾರ್ಪೊರೇಟ್ ಆಗಿದ್ದ ರೇಖಾ ಕದಿರೇಶ್ ಅವರನ್ನು ಸಹಚರರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರೇಖಾ ಕದಿರೇಶ್ ಮನೆ ಮುಂದೆಯೇ ಇಂದು ಹಲ್ಲೆ ನಡೆದಿತ್ತು. ಮನೆಯ ಒಳಗಡೆ ಇದ್ದ ರೇಖಾ ಅವರನ್ನು ಹೊರಗೆ ಕರೆದು ಮಾರಕ ಅಸ್ತ್ರಗಳಿಂದ ಹಲ್ಲೆ ನಡೆದಿತ್ತು. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿದ್ದಾರೆ. ಛಲವಾದಿ ಪಾಳ್ಯದ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ರೇಖಾ ಅವರ

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ Read More »

ಬೆಳ್ತಂಗಡಿ: ಮಗನ ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ | ಹಲವು ದಿನಗಳಿಂದ ನಡೆಯುತ್ತಿತ್ತು ಜಗಳ | ಹೆಂಡತಿ, ಮಗನಿಂದ ಅಂತರ ಕಾಯ್ದುಕೊಂಡಿದ್ದ ಬಾಬು ನಾಯ್ಕ

ಬೆಳ್ತಂಗಡಿ: ಮಗನನ್ನು ಕಡಿದು ಕೊಲೆ ಮಾಡಿ ತಂದೆಯೂ ಆತ್ಮಹತ್ಯೆಗೆ ಶರಣಾದ ಘಟನೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದು ಪುಂಜಾಲಕಟ್ಟೆಯಲ್ಲಿ ನಡೆದಿದೆ. ಈ ಜಗಳ ಹಲವು ದಿನಗಳಿಂದ ನಡೆಯುತ್ತಿದ್ದು, ಈತ ಹೆಂಡತಿ, ಮಗನಿಂದ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ. ಬಾಬುನಾಯ್ಕ ಹೆಂಡತಿ ಮತ್ತು ಮಗನೊಂದಿಗೆ ಮನೆಯಲ್ಲಿ ವಾಸವಾಗಿದ್ದು, ಕುಡಿತದ ಚಟ ಹೊಂದಿದ್ದ. ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಇಂದು ಮತ್ತೆ ಬಾಬು ನಾಯ್ಕ್ ಪತ್ನಿ ಗೋಡಂಬಿ ಫ್ಯಾಕ್ಟರಿಗೆ ಕೆಲಸಕ್ಕೆ ತೆರಳಿದ್ದು, ಈ ವೇಳೆ

ಬೆಳ್ತಂಗಡಿ: ಮಗನ ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ | ಹಲವು ದಿನಗಳಿಂದ ನಡೆಯುತ್ತಿತ್ತು ಜಗಳ | ಹೆಂಡತಿ, ಮಗನಿಂದ ಅಂತರ ಕಾಯ್ದುಕೊಂಡಿದ್ದ ಬಾಬು ನಾಯ್ಕ Read More »