ಕ್ರೈಂ

ಶಿಕ್ಷಣ ನೀತಿಗೆ ಬೇಸತ್ತು ಯುವಕ‌ ಆತ್ಮಹತ್ಯೆ| ಸಾಯುವ ಮುನ್ನ ವ್ಯವಸ್ಥೆ ಬದಲಾಗಲೆಂದು ವಿಡಿಯೋ ಮಾಡಿಟ್ಟ ದುರ್ದೈವಿ

ಹಾಸನ: ಶಿಕ್ಷಣ ನೀತಿಯಿಂದ ಬೇಸತ್ತು, ಶಿಕ್ಷಣ ವ್ಯವಸ್ಥೆ ಬದಲಾಗಲಿ, ನನ್ನ ಬಲಿದಾನ ಬದಲಾವಣೆಗೆ ದಾರಿದೀಪವಾಗಲಿ’ ಎನ್ನುತ್ತಾ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ. ಶಿಕ್ಷಣ ವ್ಯವಸ್ಥೆ ಬದಲಾಗದಿದ್ದರೆ ಸಾಧನೆ ಸಾಧ್ಯವಿಲ್ಲ ಎಂದು ಸಾಯುವ ಮುನ್ನ ವೀಡಿಯೋ ಮಾಡಿರುವ ಹೇಮಂತ್‌ ಎಂಬ ವಿದ್ಯಾರ್ಥಿ, ಮುಖ್ಯಮಂತ್ರಿಗಳು, ಶಿಕ್ಷಣ ಇಲಾಖೆ, ವಿಟಿಯು ಸೇರಿದಂತೆ ಎಲ್ಲಾ ರಾಜಕೀಯ ನಾಯಕರು ಶಿಕ್ಷಣ ಸುಧಾರಣೆಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಅರಸೀಕೆರೆ ತಾಲ್ಲೂಕಿನ ಹಿರಿಯಾಳು ಗ್ರಾಮದ ನಿವಾಸಿಯಾಗಿದ್ದ ಹೇಮಂತ್‌ ಹಾಸನದ ಖಾಸಗಿ ತಾಂತ್ರಿಕ […]

ಶಿಕ್ಷಣ ನೀತಿಗೆ ಬೇಸತ್ತು ಯುವಕ‌ ಆತ್ಮಹತ್ಯೆ| ಸಾಯುವ ಮುನ್ನ ವ್ಯವಸ್ಥೆ ಬದಲಾಗಲೆಂದು ವಿಡಿಯೋ ಮಾಡಿಟ್ಟ ದುರ್ದೈವಿ Read More »

ಬಂಟ್ವಾಳ : ರಾತ್ರೋರಾತ್ರಿ ತಲ್ವಾರ್ ಝುಳಪಿಸಿದ ಬಜರಂಗಿಗಳು!!, ಬಿಜೆಪಿ ಮುಖಂಡ ಗಂಭೀರ|ಮನೆ ಮಂದಿಗೆ ಕೊಲೆ ಬೆದರಿಕೆ

ಬಂಟ್ವಾಳ: ಬಿಜೆಪಿ ಮುಖಂಡನ ಮೇಲೆ ಭಜರಂಗದಳ ಕಾರ್ಯಕರ್ತರಿಂದಲೇ ತಲವಾರು ದಾಳಿ ನಡೆಸಿ ಕೊಲೆ ಯತ್ನ‌ ನಡೆದ ಘಟನೆ ಅ26ರ ತಡ ರಾತ್ರಿ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ನಿವಾಸಿ ಬಿಜೆಪಿ ಅಮ್ಟಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ಹಲ್ಲೆಗೆ ಒಳಗಾದವರು. ಇವರ ಮೇಲೆ ಭಜರಂಗದಳ ಕಾರ್ಯಕರ್ತರು ಎನ್ನಲಾದ ನಿತಿನ್ ಬಡಗಬೆಳ್ಳೂರು, ನಿಶಾಂತ್ ಬಡಗಬೆಳ್ಳೂರು, ಪವನ್ ಕುಮ್ಡೇಲ್ ಹಾಗೂ ಇನ್ನಿತರರು ತಲವಾರು ಸಹಿತ ಮನೆಗೆ ನುಗ್ಗಿ ತಲವಾರಿನಿಂದ ಮಾರಣಾಂತಿಕ ದಾಳಿ ನಡೆಸಿ ಕೊಲೆ

ಬಂಟ್ವಾಳ : ರಾತ್ರೋರಾತ್ರಿ ತಲ್ವಾರ್ ಝುಳಪಿಸಿದ ಬಜರಂಗಿಗಳು!!, ಬಿಜೆಪಿ ಮುಖಂಡ ಗಂಭೀರ|ಮನೆ ಮಂದಿಗೆ ಕೊಲೆ ಬೆದರಿಕೆ Read More »

ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ! – ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಮನವಿ

ನವದೆಹಲಿ: ವೈಯಕ್ತಿಕ ಉದ್ದೇಶಕ್ಕಾಗಿ ಸಣ್ಣಪ್ರಮಾಣದ ಡ್ರಗ್ಸ್ ಸೇವಿಸುತ್ತಿರುವ ವ್ಯಕ್ತಿಗಳನ್ನು ಅಪರಾಧದಿಂದ(ಜೈಲು ಶಿಕ್ಷೆಯಿಂದ) ಹೊರಗಡೆ ಇಡುವ ಮಹತ್ವ ಶಿಫಾರಸನ್ನು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಮಾಡಿದೆ. ಈ ಶಿಫಾರಸನ್ನು ಕೇಂದ್ರ ಕಂದಾಯ ಇಲಾಖೆಗೆ ಕಳಿಸಲಾಗಿದ್ದು, ಮಾದಕ ವಸ್ತು ನಿಗ್ರಹ ಕಾಯ್ದೆಎನ್‍ಡಿಪಿಎಸ್( Narcotic Drugs and Psychotropic Substances Act)ತಿದ್ದು ಪಡಿ ಮಾಡಬೇಕು ಎಂದು ತಿಳಿಸಿದೆ. ಇದೀಗ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಇದಕ್ಕೂ ಮುನ್ನ ಕನ್ನಡದ ಚಿತ್ರರಂಗದ ಹಲವು ಕಲಾವಿದರು

ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ! – ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ಮನವಿ Read More »

ಪ್ರೀತಿ ಕೈಕೊಟ್ಟಿತೆಂದು ಆತ್ಮಹತ್ಯೆ ಮಾಡಿಕೊಂಡ ಜಿಮ್ ಟ್ರೈನರ್| ಸಾವಿನಲ್ಲೂ ಸಾರ್ಥಕತೆ ಮೆರದ‌ ಭಗ್ನ ಪ್ರೇಮಿ|

ಪ್ರೀತಿಸಿದವಳು ಕೈ ಕೊಟ್ಟಳೆಂದು ಹತಾಶೆಗೊಳಗಾದ ಜಿಮ್ ಟ್ರೈನರ್ ಒಬ್ಬರು ಸೆಲ್ಫೀ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಸಾವಿಗೆ ಮುನ್ನ ವಿಡಿಯೋ ಮಾಡಿದ್ದ ಜಿಮ್ ಟ್ರೈನರ್ ಕಾರ್ತಿಕ್ (29) ತನಗೆ ಮೋಸ ಮಾಡಿದ ಯುವತಿ ಮತ್ತು ಆಕೆಯ ಸ್ನೇಹಿತ ಹಾಗೂ ಸ್ನೇಹಿತೆಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದ. ಮೊದಲು ಪ್ರೀತಿಸಿದ್ದ ಯುವತಿ ಕೆಲವು ದಿನಗಳಿಂದ ನನಗೆ ನೀನು ಇಷ್ಟವಿಲ್ಲವೆಂದು ಮಾತೇ ಬಿಟ್ಟಿದ್ದಳು. ಇದು ಕಾರ್ತಿಕ್ ಗೆ ಆಘಾತ ತಂದಿತ್ತು. ವಿಶೇಷವೆಂದರೆ

ಪ್ರೀತಿ ಕೈಕೊಟ್ಟಿತೆಂದು ಆತ್ಮಹತ್ಯೆ ಮಾಡಿಕೊಂಡ ಜಿಮ್ ಟ್ರೈನರ್| ಸಾವಿನಲ್ಲೂ ಸಾರ್ಥಕತೆ ಮೆರದ‌ ಭಗ್ನ ಪ್ರೇಮಿ| Read More »

ಪುತ್ತೂರು: ವ್ಯಾಯಾಮದ ನೆಪದಲ್ಲಿ ಸೊಂಟ ಮುಟ್ಟಿದರೆಂಬ ಆರೋಪ| ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಶಿಕ್ಷಕ ಅಂದರ್

ಪುತ್ತೂರು: ವ್ಯಾಯಾಮ ಮಾಡಿಸುವಾಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯೊಂದರ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ದೈಹಿಕ ಶಿಕ್ಷಣ ನಿರ್ದೇಶಕ ಕೊಂಬೆಟ್ಟು ನಿವಾಸಿ ಎಲ್ಯಾಸ್ ಪಿಂಟೋ ಬಂಧಿತ ಆರೋಪಿ. ಈ ಶಿಕ್ಷಕ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿರುವ ಮಡಿಕೇರಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಗೆ ಅ.23ರಂದು ಲೈಂಗಿಕ ಕಿರುಕುಳ ನೀಡಿದ್ದು ಆಕೆ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದರು. ಆಕೆಯ ಪೋಷಕರು ಸಂಸ್ಥೆಗೆ ಬಂದು

ಪುತ್ತೂರು: ವ್ಯಾಯಾಮದ ನೆಪದಲ್ಲಿ ಸೊಂಟ ಮುಟ್ಟಿದರೆಂಬ ಆರೋಪ| ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಶಿಕ್ಷಕ ಅಂದರ್ Read More »

ಟಿಪ್ಪರ್ ಗೆ ಬೈಕ್ ಢಿಕ್ಕಿ| ತಾಯಿ- ಮಗು ಸಾವು

ಬೆಂಗಳೂರು: ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು ತಾಯಿ, ಮಗು ಸ್ಥಳದಲ್ಲೇ ಮೃತಪಟ್ಟ ಮನಕಲಕುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ. ಪುರಂನಿಂದ ತಮಿಳುನಾಡಿನ ಧರ್ಮಪುರಿಗೆ ಬುಲೆಟ್ನಲ್ಲಿ ತೆರಳುತ್ತಿದ್ದ ವೇಳೆ ಮಾರತ್ತಹಳ್ಳಿ ಹೊರವರ್ತುಲ ರಸ್ತೆಯಲ್ಲಿ ಟಿಪ್ಪರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬೈಕ್ನ ಹಿಂಬದಿ ಕುಳಿತಿದ್ದ ತಾಯಿ-ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಶಿವಕುಮಾರ್ಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್‌ಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್ ಗೆ ಬೈಕ್ ಢಿಕ್ಕಿ| ತಾಯಿ- ಮಗು ಸಾವು Read More »

ಪತಿ ಮೇಲೆ ಸಿಟ್ಟಿಗೆ – ಮೂರು ತಿಂಗಳ ಕಂದಮ್ಮನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ| ಯುಟ್ಯೂಬ್ ನಲ್ಲಿ ಬಯಲಾಯ್ತು ಕೊಲೆ ಪ್ರಕರಣ !!!

ಭೋಪಾಲ್: ಪತಿ ಮೇಲೆ ಇರುವ ಕೋಪಕ್ಕೆ ತನ್ನ ಮೂರು ತಿಂಗಳ ಕಂದಮ್ಮನನ್ನು ತಾಯಿಯೇ ಕೊಂದು ಹಾಕಿರುವ ಘಟನೆ ಅಕ್ಟೋಬರ್ 12 ರಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಸ್ವಾತಿ ಎಂಬಾಕೆ ತನ್ನ 3 ತಿಂಗಳ ಮಗಳನ್ನು ಹತ್ಯೆ ಮಾಡಿದ್ದಾಳೆ. ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ. ಕಾಣೆಯಾದ ಮಗುವಿಗಾಗಿ ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಸಿಗದೇ ಇದ್ದಾಗ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪಕ್ರರಣ ದಾಖಲಿಸಿಕೊಂಡ ಪೊಲೀಸರು ತನಿಖೆ

ಪತಿ ಮೇಲೆ ಸಿಟ್ಟಿಗೆ – ಮೂರು ತಿಂಗಳ ಕಂದಮ್ಮನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ| ಯುಟ್ಯೂಬ್ ನಲ್ಲಿ ಬಯಲಾಯ್ತು ಕೊಲೆ ಪ್ರಕರಣ !!! Read More »

ಕಂದಕಕ್ಕೆ ಉರುಳಿದ ದಿಬ್ಬಣದ ಬಸ್ಸ್| 2 ಸಾವು, 27 ಮಂದಿಗೆ ಗಾಯ|

ದೊಡ್ಡಬಳ್ಳಾಪುರ : ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ವಾಪಸ್ ಹೋಗುತ್ತಿದ್ದ ಬಸ್ ಘಾಟಿ ಸುಬ್ರಮಣ್ಯ ಬಳಿಯ ಕಂದಕಕ್ಕೆ ಉರುಳಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು,27 ಜನರು ಗಾಯಗೊಂಡಿರುವ ಘಟನೆ ನಡೆದಿದೆ. ತಾಲೂಕಿನ ಘಾಟಿ ಸುಬ್ರಮಣ್ಯದ ಒಕ್ಕಲಿಗರ ಸಮುದಾಯ ಭವನದಲ್ಲಿ ಗೌರಿಬಿದನೂರು ತಾಲೂಕಿನ ಪಿಂಚಾರ್ಲಹಳ್ಳಿಯ ಕಡೆಯವರ ಮದುವೆ ಇದ್ದು, ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುತ್ತಮುತ್ತಲಿನ ಗ್ರಾಮದ ಸಂಬಂಧಿಕರು ಮತ್ತು ಸ್ನೇಹಿತರು ಬಸ್ ನಲ್ಲಿ ಬಂದಿದ್ದರು. ಮದುವೆ ಕಾರ್ಯಕ್ರಮ ಮುಗಿದ ನಂತರ ಬಸ್ ನಲ್ಲಿ ಊರಿಗೆ ವಾಪಸ್ ಆಗುವವಾಗ ಸುಮಾರು

ಕಂದಕಕ್ಕೆ ಉರುಳಿದ ದಿಬ್ಬಣದ ಬಸ್ಸ್| 2 ಸಾವು, 27 ಮಂದಿಗೆ ಗಾಯ| Read More »

ಪ್ರವಾಸಿಗರನ್ನು ಕಾಡಲ್ಲೇ ಬಿಟ್ಟುಬಂದ ಚಾಲಕ!

ಹಾಸನ: ಪ್ರವಾಸಕ್ಕೆಂದು ತೆರಳಿದ್ದ ಕುಟುಂಬದ ಹತ್ತು ಜನ ಸದಸ್ಯರನ್ನು ಅರಣ್ಯದಲ್ಲಿ ಬಿಟ್ಟು ಬಂದ ಘಟನೆ ಬಂಡಿಪುರದಲ್ಲಿ ನಡೆದಿದೆ. ಮೈಸೂರು, ಬಂಡಿಪುರ, ಮಲೈಮಹದೇಶ್ವರ ಬೆಟ್ಟ ಮತ್ತಿತರ ಸ್ಥಳಕ್ಕೆ ಪ್ರವಾಸಕ್ಕೆಂದು ಅ.18 ರಂದು ಹಾಸನದಿಂದ ಚಾಮುಂಡೇಶ್ವರಿ ಟೆಂಪೋ ಟ್ರಾವೆಲರ್‌ ಸಂಸ್ಥೆಯ ವಾಹನದಲ್ಲಿ ಕುಟುಂಬ ಪ್ರವಾಸಕ್ಕೆ ತೆರಳಿತ್ತು. ಬಲಮುರಿ ಜಲಪಾತಕ್ಕೆ ತೆರಳಿ ಊಟ ಮುಗಿಸಿದ ಬಳಿಕ ಚಾಲಕ ಬಂದು ವಾಹನ ಕೆಟ್ಟು ಹೋಗಿದೆ ಬೇರೆ ವಾಹನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅದರಂತೆ ಮಧ್ಯಾಹ್ನದಿಂದ ಕಾದು ಸುಸ್ತಾದ ಬಳಿಕ ರಾತ್ರಿ 7 ಗಂಟೆಯಲ್ಲಿ

ಪ್ರವಾಸಿಗರನ್ನು ಕಾಡಲ್ಲೇ ಬಿಟ್ಟುಬಂದ ಚಾಲಕ! Read More »

ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಮಾಡಿದ ವಕೀಲ ನಿಗೂಢ ನಾಪತ್ತೆ |ಬಾರ್ ಅಸೋಸಿಯೇಷನ್​ನಿಂದ ರಾಜೇಶ್ ಭಟ್ ಗೆ ಗೇಟ್ ಪಾಸ್| ವಕಾಲತ್ತು ‌ಅಧಿಕಾರ ಮೊಟಕು|

ಮಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ನಾಪತ್ತೆಯಾಗಿದ್ದು, ಮಂಗಳೂರು ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಇದರ ನಡುವೆ ವಕೀಲ ರಾಜೇಶ್ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಆದರೆ ನ್ಯಾಯಾಲಯ ಮಧ್ಯಂತರ ಜಾಮೀನನ್ನು ತಿರಸ್ಕರಿಸಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ಮಧ್ಯೆ ಅರೋಪಿಯನ್ನು ಪೊಲೀಸರು ಬಂಧಿಸಲು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ರಾಜೇಶ್ ಭಟ್ ಅಮಾನತುಆರೋಪ ಪ್ರಕರಣಕ್ಕೆ ಸಂಬಂಧಿಸಿ ಬಾರ್ ಅಸೋಸಿಯೇಷನ್​ನಿಂದ ರಾಜೇಶ್ ಭಟ್ ಅಮಾನತು ಆಗಿದ್ದಾರೆ. ಕರ್ನಾಟಕ ಸ್ಟೇಟ್

ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಮಾಡಿದ ವಕೀಲ ನಿಗೂಢ ನಾಪತ್ತೆ |ಬಾರ್ ಅಸೋಸಿಯೇಷನ್​ನಿಂದ ರಾಜೇಶ್ ಭಟ್ ಗೆ ಗೇಟ್ ಪಾಸ್| ವಕಾಲತ್ತು ‌ಅಧಿಕಾರ ಮೊಟಕು| Read More »