ಮದುವೆಯಾಗಲು ನಾದಿನಿಯನ್ನೇ ಅಪಹರಿಸಿದ ಬಾವ| ಮೂವರು ಅರೆಸ್ಟ್
ಬೆಂಗಳೂರು: ಮದುವೆ ಮಾಡಿಕೊಳ್ಳಲು ನಾದಿನಿಯನ್ನೇ ಕಿಡ್ನಾಪ್ ಮಾಡಿದ ಬಾವ ಮತ್ತು ಕೃತ್ಯಕ್ಕೆ ಸಾಥ್ ನೀಡಿದ ಮತ್ತಿಬ್ಬರನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವಂತೆ ಬಲವಂತ ಮಾಡಿ ನಾದಿನಿಯನ್ನು ದೇವರಾಜ್ ಅಪಹರಣ ಮಾಡಿದ್ದ. ಜನವರಿ 22 ರಂದು ಯುವತಿಯನ್ನು ಅಪಹರಣ ಮಾಡಲಾಗಿತ್ತು. ನಂದಿನಿಯನ್ನು ಮದುವೆಯಾಗುವುದಕ್ಕಾಗಿ ದೇವರಾಜ್ ಅಪಹರಣದ ಕತೆ ಕಟ್ಟಿದ್ದ. ಆರೋಪಿ ಸೇರಿದಂತೆ ಸೇರಿದಂತೆ ಮೂವರನ್ನು ಹಾಸನದ ಸಕಲೇಶಪುರದಲ್ಲಿ ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನವರಿ 22 ರಂದು ಅಪಹರಿಸಲಾಗಿದ್ದ ಯುವತಿಯನ್ನು ರಕ್ಷಣೆ ಮಾಡಲಾಗಿದೆ ಎನ್ನಲಾಗಿದೆ.
ಮದುವೆಯಾಗಲು ನಾದಿನಿಯನ್ನೇ ಅಪಹರಿಸಿದ ಬಾವ| ಮೂವರು ಅರೆಸ್ಟ್ Read More »








