“ಶರತ್ ಮಡಿವಾಳನಂತೆ ನಿನ್ನ ಹೆಣವೂ ಬೀಳುತ್ತೆ”| ಪಂಚಾಯತ್ ಸದಸ್ಯನಿಗೆ ಕೊಲೆ ಬೆದರಿಕೆ| ದೂರು ನೀಡಿದರೂ ಎಫ್ಐಆರ್ ದಾಖಲಿಸದ ಪೊಲೀಸರು
ಸಮಗ್ರ ನ್ಯೂಸ್: ಅನಾಮಿಕ ಫೋನ್ ಕರೆಯೊಂದು ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದು ದೂರು ದಾಖಲಾಗಿರುವ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಡೆದಿದೆ. ಗ್ರಾ.ಪಂ ಸದಸ್ಯ ಚಂದ್ರಹಾಸ ಈಶ್ವರಮಂಗಲ ಎಂಬವರಿಗೆ ಕಳೆದ ವಾರ ಹೊಸ ನಂಬರ್ ಗಳಿಂದ ಬೆದರಿಕೆ ಕರೆ ಬಂದಿದ್ದು, ಕೂಡಲೆ ಚಂದ್ರಹಾಸ್ ಅವರು ಪುತ್ತೂರು ಗ್ರಾಮಾಂತರ ಠಾಣೆಗೆ ತೆರಳಿ ಈ ಬಗ್ಗೆ ಕೇಸ್ ದಾಖಲಿಸಿದ್ದರು. ಬೆದರಿಕೆ ಕರೆಯೊಡ್ಡಿದವರ ಮೇಲೆ ಕೇಸ್ ದಾಖಲಿಸುವುದಕ್ಕೆ ನ್ಯಾಯಾಲಯದಿಂದ ಅನುಮತಿ ಕೋರಿ ಅರ್ಜಿ ತರುವಂತೆ ಠಾಣೆಯಲ್ಲಿ […]










