ಕ್ರೈಂ

ಗುಂಡ್ಯ: ಭಿನ್ನಕೋಮಿನ ಜೋಡಿಯ ಪತ್ತೆ ಪ್ರಕರಣ| ಸಂಘಟನೆಯ ವಿರುದ್ಧ ದೂರು ನೀಡಿದ ಯುವಕ

ಸಮಗ್ರ ನ್ಯೂಸ್: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಕಾಡಿನಲ್ಲಿ ಭಿನ್ನಕೋಮಿನ ಜೋಡಿ ಪತ್ತೆ ಪ್ರಕರಣ ಸಂಬಂಧಿಸಿ, ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ. ನಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರು ನಮ್ಮನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಇದೊಂದು ‘ಲವ್ ಜಿಹಾದ್’ ಎಂದು ಹೇಳಲಾಗಿದೆ. ಹಲ್ಲೆ ಮಾಡಿದ ಆರೋಪದಲ್ಲಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಆಟೋ ರಿಕ್ಷಾದಲ್ಲಿ […]

ಗುಂಡ್ಯ: ಭಿನ್ನಕೋಮಿನ ಜೋಡಿಯ ಪತ್ತೆ ಪ್ರಕರಣ| ಸಂಘಟನೆಯ ವಿರುದ್ಧ ದೂರು ನೀಡಿದ ಯುವಕ Read More »

ಕಾಸರಗೋಡು: ಪುತ್ರನಿಂದಲೇ ತಂದೆಯ ಕೊಲೆ

ಸಮಗ್ರ ನ್ಯೂಸ್: ತಂದೆಯನ್ನು ಪುತ್ರ ಕೊಲೆಗೈದ ಘಟನೆ ಆದೂರು ಸಮೀಪದ ಪಾಂಡಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತಪಟ್ಟವರನ್ನು ಬಾಲಕೃಷ್ಣ (56) ಮತ್ತು ಕೊಲೆಗಾರನನ್ನು ನರೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಪಾನಮತ್ತರಾಗಿ ಪರಸ್ಪರ ಹೊಡೆ ದಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಪುತ್ರನ ಹೊಡೆತಕ್ಕೆ ತಂದೆ ಬಲಿಯಾಗಿದ್ದಾರೆ. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪುತ್ರ ನರೇಂದ್ರ ಪ್ರಸಾದ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.

ಕಾಸರಗೋಡು: ಪುತ್ರನಿಂದಲೇ ತಂದೆಯ ಕೊಲೆ Read More »

ಗುಂಡ್ಯ: ಪೊದೆಯೊಳಗೆ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ

ಸಮಗ್ರ ನ್ಯೂಸ್ : ಭಿನ್ನಕೋಮಿನ ಜೋಡಿಯೊಂದು ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗುಂಡ್ಯ ಕಾಡಿನ ಪೊದೆಯೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಾ ಸಿಕ್ಕಿಬಿದ್ದಿರುವ ಘಟನೆ ಇಂದು ನಡೆದಿದೆ. ಪೊದೆಯೊಳಗೆ ಚಕ್ಕಂದವಾಡುತ್ತಿದ್ದ ಈ ಯುವ ಜೋಡಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿ ಪೊಲೀಸರಿಗೆ ಒಪ್ಪಿಸಿರುವ ಬಗ್ಗೆ ತಿಳಿದು ಬಂದಿದೆ. ಈ ಜೋಡಿಯ ಕುರಿತು ಫೋಟೋ ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೇಣೂರು ಮೂಲದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಇಂದು ಗುಂಡ್ಯಕ್ಕೆ ಜಾಲಿ ಟ್ರಿಪ್ ತೆರಳಿದ್ದು, ಕಾಡಿನ

ಗುಂಡ್ಯ: ಪೊದೆಯೊಳಗೆ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ Read More »

ಜಿಮ್‌ ನಲ್ಲಿ ಮಂಗಳೂರಿನ ಮಹಿಳೆಯ ಸಾವು ಪ್ರಕರಣ| ಸಾವಿನ ಅಸಲಿ ಕಾರಣ ಬಿಚ್ಚಿಟ್ಟ ಪೋಸ್ಟ್ ಮಾರ್ಟಮ್‌ ರಿಪೋರ್ಟ್..!

ಸಮಗ್ರ ನ್ಯೂಸ್: ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಾ ಇರುವಾಗಲೇ ನಗರದ ಬೈಯಪ್ಪನಹಳ್ಳಿ ಜಿಮ್‌ನಲ್ಲಿ ಯುವತಿ ಕುಸಿದು ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಕಾರಣವು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ. ಮಂಗಳೂರು ಮೂಲದ ವಿನಯಾ ಕುಮಾರಿ (35) ಜಿಮ್​ನಲ್ಲಿ ಮೃತಪಟ್ಟಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಸಾವನ್ನಪ್ಪಿದ್ದ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮಾರ್ಚ್ 26 ರಂದು ಘಟನೆ ನಡೆದಿತ್ತು. ಜಿಮ್ ವರ್ಕ್ ಔಟ್ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದ ವಿನಯಾ, ಅವರು

ಜಿಮ್‌ ನಲ್ಲಿ ಮಂಗಳೂರಿನ ಮಹಿಳೆಯ ಸಾವು ಪ್ರಕರಣ| ಸಾವಿನ ಅಸಲಿ ಕಾರಣ ಬಿಚ್ಚಿಟ್ಟ ಪೋಸ್ಟ್ ಮಾರ್ಟಮ್‌ ರಿಪೋರ್ಟ್..! Read More »

ಬೆಳ್ತಂಗಡಿ: 7 ತಿಂಗಳ ಗರ್ಬಿಣಿಯಿಂದ ಅತ್ಯಾಚಾರ ದೂರು ದಾಖಲು| ಪರಿಚಯಸ್ಥನೇ ಗರ್ಭಧರಿಸಲು ಕಾರಣವಂತೆ!?

ಸಮಗ್ರ ನ್ಯೂಸ್: ಪರಿಚಯದ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ನಡೆಸಿ, ಪ್ರಸ್ತುತ ತಾನು 7 ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಲವಂತಿಗೆ ಗ್ರಾಮದ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದಾರೆ. ತನ್ನ ಪರಿಚಯದ ಸಂಜೀವ ಎಂಬ ವ್ಯಕ್ತಿ ದಿನಾಂಕ ಕಳೆದ ಆ.3 ರಂದು ಹಾಗೂ 05 ರಂದು ನನ್ನ ಮನೆಗೆ ಬಂದು ನನ್ನ ಇಚ್ಛೆಗೆ ವಿರುದ್ಧವಾಗಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ, ಪ್ರಸ್ತುತ ನಾನು 7 ತಿಂಗಳ ಗರ್ಭೀಣಿಯಾಗಿದ್ದು, ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು

ಬೆಳ್ತಂಗಡಿ: 7 ತಿಂಗಳ ಗರ್ಬಿಣಿಯಿಂದ ಅತ್ಯಾಚಾರ ದೂರು ದಾಖಲು| ಪರಿಚಯಸ್ಥನೇ ಗರ್ಭಧರಿಸಲು ಕಾರಣವಂತೆ!? Read More »

ಮೂಡುಬಿದಿರೆ: ಬೈಕ್‌‌ಗಳ ಮುಖಾಮುಖಿ: ಓರ್ವ ಮೃತ್ಯು

ಸಮಗ್ರ ನ್ಯೂಸ್: ಬೈಕ್‌‌ಗಳೆರಡು ಮುಖಾಮುಖಿ ಢಿಕ್ಕಿಯಾದ ಪರಿಣಾಮವಾಗಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಕೊಡಂಗಲ್ಲು ಬಳಿ ಇಂದು ನಡೆದಿದೆ. ಹೊಸಂಗಡಿ ಬಳಿಯ ಎದುರುಗುಡ್ಡೆ ನಿವಾಸಿ, ಪೊರಟ ವ್ಯಾಪಾರಿ ರವೀಂದ್ರ (36) ಮೃತಪಟ್ಟ ವ್ಯಕ್ತಿ. ಅವರು ತನ್ನ ಸಹೋದರ ರಾಜೇಂದ್ರ ಪೂಜಾರಿಯೊಂದಿಗೆ ಮಹಾವೀರ ಕಾಲೇಜು ಬಳಿಯಿಂದ ಹೊಸಂಗಡಿ ಕಡೆಗೆ ಹೋಗುತ್ತಿದ್ದಾಗ ಗಂಟಾಲ್ ಕಟ್ಟೆ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಯೆನಪೋಯ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಜಸ್ಟಿನ್ ಮಿನೇಜಸ್ ಅವರು ರವೀಂದ್ರ ಅವರ ಬೈಕ್ ಗೆ ಢಿಕ್ಕಿ ಹೊಡೆದಿದ್ದು ತೀವೃ

ಮೂಡುಬಿದಿರೆ: ಬೈಕ್‌‌ಗಳ ಮುಖಾಮುಖಿ: ಓರ್ವ ಮೃತ್ಯು Read More »

ಟ್ಯೂಷನ್ ಶಿಕ್ಷಕಿಯ‌ ಬೆತ್ತಲೆ ಚಿತ್ರ ಸೆರೆಹಿಡಿದ ಪೋಲಿ ಸ್ಟೂಡೆಂಟ್

ಸಮಗ್ರ ನ್ಯೂಸ್: ಟ್ಯೂಷನ್ ಶಿಕ್ಷಕಿ ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಸೆರೆಹಿಡಿದಿದ್ದಕ್ಕೆ 16 ವರ್ಷದ ಹುಡುಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗ ತನ್ನ ಶಿಕ್ಷಕಿ ಸ್ನಾನ ಮಾಡಲು ತೆರಳುವ ಮುನ್ನ ಬಾತ್ ರೂಮ್‍ನಲ್ಲಿ ಮೊಬೈಲ್ ಫೋನ್‍ನನ್ನು ಬಚ್ಚಿಟ್ಟಿದ್ದಾನೆ. ಹುಡುಗನಿಗೆ 10-11 ವರ್ಷದವನಾ ಗಿದ್ದಗಲಿಂದಲೂ ಶಿಕ್ಷಕಿ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಆದರೆ ಒಮ್ಮೆ ಮೊಬೈಲ್ ಫೋನ್ ಬಾತ್ ರೂಂನ ಸೋಪ್ ಬಾಕ್ಸ್ ಹಿಂದೆ ಕಂಡುಬಂದಿದ್ದು, ಶಿಕ್ಷಕಿ ಸ್ನಾನ ಮಾಡುತ್ತಿರುವ ವೀಡಿಯೋ ರೆಕಾರ್ಡ್ ಆಗುತ್ತಿರುವ ಬಗ್ಗೆ ತಿಳಿದುಬಂದಿದೆ. ನಂತರ ಮೊಬೈಲ್ ಫೋನ್ ಪರಿಶೀಲಿಸಿದ

ಟ್ಯೂಷನ್ ಶಿಕ್ಷಕಿಯ‌ ಬೆತ್ತಲೆ ಚಿತ್ರ ಸೆರೆಹಿಡಿದ ಪೋಲಿ ಸ್ಟೂಡೆಂಟ್ Read More »

ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಅಪಘಾತದಲ್ಲಿ ಸಾವು

ಸಮಗ್ರ ನ್ಯೂಸ್: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಹೋಗುತ್ತಿದ್ದ ವೇಳೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಜಿನ್ನಾಗರ ಗ್ರಾಮದ ಬಳಿ ನಡೆದಿದೆ. ಒಂದೇ ಬೈಕ್​ನಲ್ಲಿ ಪರೀಕ್ಷೆ ಬರೆಯಲು ಮೂವರು ವಿದ್ಯಾರ್ಥಿಗಳು ತೆರಳುತ್ತಿದ್ದರು. ಈ ವೇಳೆ, ನವೀನ್ (16) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ಇದ್ದ ಶರತ್, ದರ್ಶನ್​ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ನಡೆಯುತ್ತಿದ್ದ ಗಣಿತ ಪರೀಕ್ಷೆ ಬರೆಯಲು ಡಾ. ರಾಜೇಂದ್ರ ಪ್ರಸಾದ್ ಹೈಸ್ಕೂಲ್ ವಿದ್ಯಾರ್ಥಿಗಳು

ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಅಪಘಾತದಲ್ಲಿ ಸಾವು Read More »

ಕುಕ್ಕೆ ಸುಬ್ರಹ್ಮಣ್ಯ: ಸ್ಕೂಟಿಗೆ ಢಿಕ್ಕಿ ಹೊಡೆದ ಕಾರು| ನಿವೃತ್ತ ಎಎಸ್ಐ ಸಾವು

ಸಮಗ್ರ ನ್ಯೂಸ್: ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಲಾಯಿಸುತ್ತಿದ್ದ ನಿವೃತ್ತ ಎಎಸ್ಐ ಎ. ಪೆರ್ಗಡೆ ಗೌಡ ಎಂಬವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದ ಬಳಿಯಲ್ಲಿ ನಡೆದಿದೆ. ಹಿಂದಿನಿಂದ ಡಿಕ್ಕಿ ಹೊಡೆದ ಕಾರು ಸುಮಾರು ದೂರ ಅವರನ್ನು ಎಳೆದುಕೊಂಡು ಹೋಗಿದ್ದು, ತಲೆಗೆ ಗಾಯವಾಗಿದ್ದು ದೇಹದ ಹಲವು ಭಾಗಗಳಿಗೆ ಗಾಯವಾಗಿದ್ದು, ತಕ್ಷಣ ಅವರನ್ನು ಕಡಬ ಆಸ್ಪತ್ರೆಗೆ ಸಾಗಿಸಲಾಯಿತಾದರೂ‌ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ: ಸ್ಕೂಟಿಗೆ ಢಿಕ್ಕಿ ಹೊಡೆದ ಕಾರು| ನಿವೃತ್ತ ಎಎಸ್ಐ ಸಾವು Read More »

ಕಡಬ: ಪರ್ಸ್ ಎಗರಿಸಿದ ಬಾಲಕರು

ಸಮಗ್ರ ನ್ಯೂಸ್: ಅಟೋ ರಿಕ್ಷಾದಲ್ಲಿದ್ದ ವ್ಯಕ್ತಿಯೋರ್ವರ ಪರ್ಸನ್ನು ಅಪ್ರಾಪ್ತ ಬಾಲಕರಿಬ್ಬರು ಎಗರಿಸಿ ಪರಾರಿಯಾಗಲು ಯತ್ನಿಸಿದ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ನಡೆದಿದೆ. ಈ ವೇಳೆ ಸ್ಥಳೀಯರು ಅವರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಪರ್ಸ್ ಎಗರಿಸಿದ ಅಪ್ತಾಪ್ತ ಬಾಲಕರು ಕುಂತೂರು ಸಮೀಪದವರೆಂದು ತಿಳಿದು ಬಂದಿದ್ದು, ಈ ಬಾಲಕರು ಕಡಬ ಸಮೀಪದ ಕೇವಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಅಲ್ಲಿಯ ವ್ಯಕ್ತಿಯೋರ್ವರು ಅಟೋ ರಿಕ್ಷಾದಲ್ಲಿ ಬಂದಿದ್ದು ಅವರು ತಮ್ಮ ಸ್ನೇಹಿತರೋರ್ವರ ಜತೆ ಮಾತನಾಡುತ್ತಿದ್ದಾಗ ಆ ವ್ಯಕ್ತಿಯ ಪರ್ಸನ್ನು ಈ

ಕಡಬ: ಪರ್ಸ್ ಎಗರಿಸಿದ ಬಾಲಕರು Read More »