ಕ್ರೈಂ

ಮಂಗಳೂರು: ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಮಂಗಳೂರಿನ ಲಾಡ್ಜ್ ವೊಂದರಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಕೇರಳ ಮೂಲದ ರವೀಂದ್ರ (55) ಹಾಗೂ ಸುಧಾ (50) ಆತ್ಮಹತ್ಯೆಗೈದ ದಂಪತಿ ಎಂದು ತಿಳಿದುಬಂದಿದೆ. ಇವರು ಕೇರಳದ ತಳೀಪರಂಬು ನಿವಾಸಿ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.ಎರಡು ದಿನಗಳ ಹಿಂದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಟ್ಟೆ ವ್ಯಾಪಾರಿಗಳಾದ ಈ ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಂಗಳೂರು: ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ Read More »

ಬೆಳ್ತಂಗಡಿ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ‌ ಸಾವು

ಸಮಗ್ರ ನ್ಯೂಸ್: ನಾಲ್ಕು ದಿನಗಳ ಹಿಂದೆ ನಡೆದ ಟಿಪ್ಪರ್ ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಫೆ.7ರಂದು ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಕೊಕ್ಕಡ ಸೌತಡ್ಕ ನಿವಾಸಿ ಸಿರಾಜ್ ಎಂದು ಗುರುತಿಸಲಾಗಿದೆ. ಟಿಪ್ಪರ್ ಮತ್ತು ಸಿರಾಜ್ ಸಂಚರಿಸುತ್ತಿದ್ದ ಬೈಕ್ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಕೆಂಪಕೋಡಿ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿ ಸಿರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಪಘಾತದ ತೀವ್ರತೆಗೆ‌ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿರಾಜ್ ಇಂದು ಚಿಕಿತ್ಸೆ

ಬೆಳ್ತಂಗಡಿ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ‌ ಸಾವು Read More »

ಮಂಗಳೂರು ಸಿಟಿ ನರ್ಸಿಂಗ್ ಕಾಲೇಜಿನಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ; ಕೆಲವರು ಗಂಭೀರ

ಸಮಗ್ರ ನ್ಯೂಸ್: ಮಂಗಳೂರು ನಗರದ ಸಿಟಿ ಹಾಸ್ಪಿಟಲ್ ಗೆ ಸೇರಿರುವ ಸಿಟಿ ನರ್ಸಿಂಗ್ ಕಾಲೇಜ್ ನ ನೂರಾರು ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥಗೊಂಡಿರುವ ಘಟನೆ ಇಂದು ರಾತ್ರಿ ಬೆಳಕಿಗೆ ಬಂದಿದೆ. ಶಕ್ತಿನಗರದ ಹಾಸ್ಟೆಲ್ ನಲ್ಲಿ ಘಟನೆ ನಡೆದಿದ್ದು, ಅಸ್ವಸ್ಥ ವಿದ್ಯಾರ್ಥಿಗಳನ್ನು ಕಾಲೇಜ್ ಬಸ್ ಗಳಲ್ಲಿ ಕರೆತಂದು ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವ ಮಾಹಿತಿ ಲಭಿಸಿದೆ. ರಾತ್ರಿ ಊಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಘಟನೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ.

ಮಂಗಳೂರು ಸಿಟಿ ನರ್ಸಿಂಗ್ ಕಾಲೇಜಿನಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ; ಕೆಲವರು ಗಂಭೀರ Read More »

ತೆಂಗಿನಮರ ಏರಿದಾತ ಮರದಲ್ಲೇ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ತೆಂಗಿನ ಮರ ಹತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮರದ ಮೇಲೆಯೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫೆ.6 ರ ಬೆಳಗ್ಗೆ 7.30ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಮೈಲಸಂದ್ರದ ವಿಜಯಶ್ರೀ ಲೇಔಟ್‍ನ ವೆಂಕಟರಮಣ ದೇವಸ್ಥಾನದ ಸಮೀಪ ಸುಮಾರು 40 ಅಡಿ ಎತ್ತರದ ಮರದಲ್ಲಿ ತೆಂಗಿನ ಕಾಯಿ ಕೀಳಲು ನಾರಾಯಣಪ್ಪ ಎಂಬವರು ಹತ್ತಿ ತೆಂಗಿನ ಗರಿ ಮೇಲೆ ಕುಳಿತಿದ್ದಾರೆ. ಆ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ. ಹಲವು ಬಾರಿ ಕೂಗಿದರೂ

ತೆಂಗಿನಮರ ಏರಿದಾತ ಮರದಲ್ಲೇ ಹೃದಯಾಘಾತದಿಂದ ಸಾವು Read More »

“ಈ ಬಾಲಕಿ ಈ ಬಾಲಕನ ಅರ್ಧಾಂಗಿ ಆಗ್ಲೇಬೇಕು”| ಅಂಕೋಲದಲ್ಲೊಂದು ವಿಚಿತ್ರ ಘಟನೆ

ಸಮಗ್ರ ನ್ಯೂಸ್: ಉತ್ತರ ಕನ್ನಡದ ಅಂಕೋಲಾದಲ್ಲೊಂದು ವಿಶೇಷ ಘಟನೆ ನಡೆದಿದ್ದು, ದೇವರು ಹೇಳಿದಂತೆ ಪೂಜಾರಿ ಜೊತೆ ಭಕ್ತೆಯ ಮದುವೆ ನಡೆಸಲಾಗಿದೆ . ಆದರೆ ಕೆಲವರು ಲಾಭವಾಗಿ ಮಾಡಿಕೊಂಡು ದೈವದ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಮಹಿಳೆಯನ್ನು ಮದುವೆಯಾಗಲು ನರ್ತಕನೋರ್ವ ದೈವದ ಹೆಸರು ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಂಕೋಲಾ ಅಂಬಾರಕೊಡ್ಲ ಎಂಬ ಸ್ಥಳದಲ್ಲಿ ದೈವ ನರ್ತಕ ಪಾತ್ರಿ ಮಹಿಳೆಗೆ ಮೋಸ ಮಾಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅಂಬಾರಕೊಡ್ಲದಲ್ಲಿ ದೇವಸ್ಥಾನ ನಿರ್ಮಿಸಿ ಕಾಳಿ, ದುರ್ಗೆ,

“ಈ ಬಾಲಕಿ ಈ ಬಾಲಕನ ಅರ್ಧಾಂಗಿ ಆಗ್ಲೇಬೇಕು”| ಅಂಕೋಲದಲ್ಲೊಂದು ವಿಚಿತ್ರ ಘಟನೆ Read More »

ಒಂದೇ ಸಮಯಕ್ಕೆ 12 ಮಂದಿ ಜೊತೆ ಚಾಟಿಂಗ್| ಕೆಲಸ ಕೊಡಿಸುವೆಂದು ಕಾಮದಾಹಕ್ಕೆ ಬಳಸಿಕೊಂಡ ಖತರ್ ನಾಕ್| ರೀಲ್ಸ್ ಸ್ಟಾರ್ ಗಳೇ‌ ಈತನ ಟಾರ್ಗೆಟ್!!

ಸಮಗ್ರ ನ್ಯೂಸ್: ಒಳ್ಳೆ ಕೆಲಸ, ಕೈತುಂಬ ಸಂಬಳ, ಹೇಳಿಕೊಳ್ಳೊಕೆ ಯಾವುದೂ ಸಮಸ್ಯೆ ಇಲ್ಲದ ವ್ಯಕ್ತಿಗೆ ಕಾಮದ ಹುಚ್ಚು ತಲೆಗೇರಿದರೆ ಆಗೋದೇನು ಎಂಬುವುದಕ್ಕೆ ಈ ಘಟನೆ ಸಾಕ್ಷಿ. ಈತನ ಮೈಗಂಟಿದ ಕಾಮದ ಹುಚ್ಚು ಅಮಾಯಕ ಹೆಣ್ಣು ಮಕ್ಕಳ ಕಡೆ ತಿರುಗಿತ್ತು. ಜಾಗತೀಕರಣಗೊಂಡ ಸೋ ಕಾಲ್ಡ್ ಜಮಾನದಲ್ಲಿ ಹೆಣ್ಣು ಮಕ್ಕಳು ಮಾಡೊ ರೀಲ್ಸ್, ಡ್ಯಾನ್ಸ್‌ಗಳು ಆತನ ಹುಚ್ಚಿಡಿಸಿದ್ದವು. ಹಾಗಂತೆ ಈತ ಅವರಿಗೆ ಬಲೆ ಹಾಕುತ್ತಿರಲಿಲ್ಲ. ಅಮಾಯಕ ಹಾಗೂ ಕೆಲಸ ಹುಡುಕುವ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿಕೊಳ್ಳುತಿದ್ದ. ಇನ್ನು ಈತನ ಮೆಸೆಜ್

ಒಂದೇ ಸಮಯಕ್ಕೆ 12 ಮಂದಿ ಜೊತೆ ಚಾಟಿಂಗ್| ಕೆಲಸ ಕೊಡಿಸುವೆಂದು ಕಾಮದಾಹಕ್ಕೆ ಬಳಸಿಕೊಂಡ ಖತರ್ ನಾಕ್| ರೀಲ್ಸ್ ಸ್ಟಾರ್ ಗಳೇ‌ ಈತನ ಟಾರ್ಗೆಟ್!! Read More »

ಜೈಲರ್ ನಿರ್ಲಕ್ಷ್ಯ: ಕೈದಿ ಪರಾರಿ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತಾಲೂಕಿನ ಕಾರಾಗೃಹದಲ್ಲಿ ಜೈಲರ್ ನಿರ್ಲಕ್ಷ್ಯದಿಂದ ಕೈದಿ ಪರಾರಿಯಾಗಿದ್ದ ಘಟನೆ ನಡೆದಿದೆ. ದರೋಡೆ ಪ್ರಕರಣದಲ್ಲಿ ಕಳೆದ ವರ್ಷ ಜೈಲುಪಾಲಾಗಿದ್ದ ಯಲ್ಲಾಪುರ ಮೂಲದ ಪ್ರಕಾಶ್ ಸಿದ್ದಿ ಇಂದು (ಶನಿವಾರ) ಬೆಳಗ್ಗೆ ಆತನನ್ನು ಹೊರಕ್ಕೆ ಜೈಲರ್ ಬಿಟ್ಟಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡ ಕೈದಿ ಪರಾರಿಯಾಗಿ ಪೊಲೀಸರಿಗೆ ತಲೆನೋವಾಗಿದ್ದನು. ಕೊನೆಗೂ ಕೈದಿ ಬಂಧನ: ಶಿರಸಿ ಸಬ್ ಜೈಲಿನಿಂದ ಪರಾರಿಯಾಗಿದ್ದ ಕೈದಿಯನ್ನು ಶಿರಸಿ ಪೋಲಿಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿ ತಾಲೂಕಿನ ಜಡ್ಡಿಮನೆ ಬಳಿ ಕೈದಿಯನ್ನು

ಜೈಲರ್ ನಿರ್ಲಕ್ಷ್ಯ: ಕೈದಿ ಪರಾರಿ Read More »

ಭೀಕರ ಬೈಕ್ ಅಪಘಾತ; ಎಎಸ್ಐ ಸಾವು

ಸಮಗ್ರ ನ್ಯೂಸ್: ಭೀಕರ ಬೈಕ್ ಅಪಘಾತದಲ್ಲಿ ಹೊಸಪೇಟೆ ಎಎಸ್‌ಐ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಬಳಿ ನಡೆದಿದೆ. ಮೃತರನ್ನು ಶಬ್ಬೀರ್ ಹುಸೇನ್ (59) ಎಂದು ಗುರುತಿಸಲಾಗಿದೆ. ಬೈಕ್ ಜಗಳೂರು ತಾಲೂಕಿನ ಚಿನ್ನು ಡಾಬಾ ಬಳಿ ಅಪಘಾತಕ್ಕೀಡಾಗಿದೆ. ಮೃತ ಶಬ್ಬೀರ್ ಹೊಸಪೇಟೆ ಠಾಣೆಯ ಎ ಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಭೀಕರ ಬೈಕ್ ಅಪಘಾತ; ಎಎಸ್ಐ ಸಾವು Read More »

ಕ್ರೂಸರ್ – ಗೂಡ್ಸ್ ವಾಹನದ ಮದ್ಯೆ ಭೀಕರ ಅಪಘಾತ; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಕ್ರೂಸರ್ ಮತ್ತು ಗೂಡ್ಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ‌ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೆರಹಟ್ಟಿ – ಸಮೀಪದ ಘಟ್ಟನಟ್ಟಿ ಕ್ರಾಸ್ ಬಳಿ ನಡೆದಿದೆ. ಕ್ರೂಸರ್ ನಲ್ಲಿದ್ದವರು ಸವದತ್ತಿ ಎಲ್ಲಮ್ಮ ದೇವಿಯ ದರ್ಶನ ಪಡೆದು ಮರಳಿ ತಮ್ಮೂರಿಗೆ ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಸಿಂದಗಿ ತಾಲೂಕಿನ ಭಕ್ತಾದಿಗಳೆಂದು ಗುರುತಿಸಲಾಗಿದೆ. ಕ್ರೂಸರ್ ನಲ್ಲಿದ್ದ 12 ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಗಾಯಾಳುಗಳನ್ನು ಇವರನ್ನು ಅಂಬುಲೆನ್ಸ್ ಮುಖಾಂತರ

ಕ್ರೂಸರ್ – ಗೂಡ್ಸ್ ವಾಹನದ ಮದ್ಯೆ ಭೀಕರ ಅಪಘಾತ; ಇಬ್ಬರು ಗಂಭೀರ Read More »

ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ

ಸಮಗ್ರ ನ್ಯೂಸ್: ಐದು ದಶಕಗಳ ವೃತ್ತಿಜೀವನವನ್ನ ಹೊಂದಿದ್ದ ಜನಪ್ರಿಯ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಾಣಿ ಜಯರಾಮ್ ಕನ್ನಡ ಸೇರಿ ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಬಂಗಾಳಿ ಮತ್ತು ತುಳು ಸೇರಿದಂತೆ 19 ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ವಾಣಿ ಜಯರಾಮ್ ಅವರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂಗಳು ಸೇರಿದಂತೆ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಪ್ರಪಂಚದಾದ್ಯಂತ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿಗಳನ್ನು ಸಹ ನೀಡಿದ್ದಾರೆ. ವಾಣಿ ಜಯರಾಮ್

ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ Read More »