ಕ್ರೈಂ

ಪರೇಶ್ ಮೇಸ್ತಾ ಕೊಲೆ ಗಲಭೆ ಪ್ರಕರಣ| 122 ಜನರ ಮೇಲಿನ ಕೇಸ್ ವಾಪಾಸ್

ಸಮಗ್ರ ನ್ಯೂಸ್: ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಪರೇಶ್ ಮೇಸ್ತಾ ಕೊಲೆ ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. 2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮೀನುಗಾರ ಕುಟುಂಬದ ಪರೇಶ್ ಮೇಸ್ತಾ ಅನುಮಾನಾಸ್ಪದವಾಗಿ ಸಾವು ಕಂಡಿದ್ದ. ಈ ಸಾವಿನ ಬಳಿಕ ಇಡೀ ಜಿಲ್ಲೆಯಲ್ಲಿ ಈ ಹತ್ಯೆ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಇದೊಂದು ಕೊಲೆ ಎಂದು ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಆರೋಪಿಸಿದ್ದವು. ಹತ್ಯೆ ಖಂಡಿಸಿ ಆಗಿನ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಸದ್ಯ […]

ಪರೇಶ್ ಮೇಸ್ತಾ ಕೊಲೆ ಗಲಭೆ ಪ್ರಕರಣ| 122 ಜನರ ಮೇಲಿನ ಕೇಸ್ ವಾಪಾಸ್ Read More »

ರೋಹಿಣಿ ನನ್ನ ಮಗನ ಸಾವಿಗೆ ಕಾರಣವಲ್ಲ| ಅಧಿಕಾರ ಬಳಸಿ ಕೆಲಸ ಮಾಡಿ; ಅವನ ಹೆಸರಿಗೆ ಮಸಿ ಹಚ್ಚಬೇಡಿ| ರೂಪಾ, ರೋಹಿಣಿಗೆ ದಿ. ಡಿ.ಕೆ ರವಿ ತಾಯಿ‌ ಗೌರಮ್ಮ ಮನವಿ

ಸಮಗ್ರ ನ್ಯೂಸ್: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ‌ಇಬ್ಬರು ಮಹಿಳಾ ಅಧಿಕಾರಿಗಳ ಕಿತ್ತಾಟದಲ್ಲಿ ನನ್ನ ಮಗನ ಹೆಸರು ತರಬೇಡಿ. ನನ್ನ ಮಗ ಮೃತಪಟ್ಟು 8 ವರ್ಷಗಳು ಕಳೆದಿವೆ. ನಿಮ್ಮ ಜಗಳದಿಂದ ನನ್ನ ಮಗನ ಹೆಸರಿಗೆ ಮಸಿ ಹಚ್ಚಬೇಡಿ ಎಂದು ಐಎಎಸ್‌ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿಕಾರಿದರು. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಲ ಗ್ರಾಮದಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಮಾಧ್ಯಮಗಳೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ

ರೋಹಿಣಿ ನನ್ನ ಮಗನ ಸಾವಿಗೆ ಕಾರಣವಲ್ಲ| ಅಧಿಕಾರ ಬಳಸಿ ಕೆಲಸ ಮಾಡಿ; ಅವನ ಹೆಸರಿಗೆ ಮಸಿ ಹಚ್ಚಬೇಡಿ| ರೂಪಾ, ರೋಹಿಣಿಗೆ ದಿ. ಡಿ.ಕೆ ರವಿ ತಾಯಿ‌ ಗೌರಮ್ಮ ಮನವಿ Read More »

ಮಂಗಳೂರು: ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತದ ಬಲೆಗೆ‌ ಬಿದ್ದ ಜಿ.ಪಂ‌ ಎಂಜಿನಿಯರ್

ಸಮಗ್ರ ನ್ಯೂಸ್: ಲಂಚ ಸ್ವೀಕರಿಸುತ್ತಿದ್ದಾಗಲೇ ಜಿಲ್ಲಾ ಪಂಚಾಯತ್‌ನ ಟೆಕ್ನಿಕಲ್‌ ಅಸಿಸ್ಟೆಂಟ್ಅ ಇಂಜಿನಿಯರ್‌ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಮಂಗಳೂರಿನ ಉರ್ವಾ ಸ್ಟೋರ್‌ ಬಳಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದಿದೆ. ಜಿ.ಪಂ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ವೇಳೆಯೇ ಇಂಜಿನಿಯರ್‌ ಲಂಚಾವತಾರ ಬಯಲಾಗಿದೆ. ಜಿಲ್ಲಾ ಪಂಚಾಯತ್ ನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ರೂಪಾ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಇವರು 8 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು

ಮಂಗಳೂರು: ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತದ ಬಲೆಗೆ‌ ಬಿದ್ದ ಜಿ.ಪಂ‌ ಎಂಜಿನಿಯರ್ Read More »

ಹುಬ್ಬಳ್ಳಿ: ಐತಿಹಾಸಿಕ ಸಿದ್ದಾರೂಢ ರಥೋತ್ಸವ ದಿನ ಯುವಕನ ಕಗ್ಗೊಲೆ| ಹಳೆ ವೈಷಮ್ಯಕ್ಕೆ ಬಲಿಯಾದ ದುರ್ದೈವಿ

ಸಮಗ್ರ ನ್ಯೂಸ್: ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ರಥೋತ್ಸವ ದಿನವೇ ಹಾಡುಹಗಲೆ ಯುವಕನೊಬ್ಬನನ್ನು ಮನಬಂದಂತೆ ಕೊಚ್ಚಿ ಕೊಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ನೇಕಾರ ನಗರ ನಿವಾಸಿಯಾದ ತಾಯಿ ಲಕ್ಷ್ಮೀ ಅವರ ಪುತ್ರ ನಾಗರಾಜ್ ಚಲವಾದಿ (26) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಈತ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದನು. ‌ ಕೊಲೆಗೆ ಹಳೇ ವೈಷಮ್ಯವೇ ಕಾರಣವೆಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಐತಿಹಾಸಿಕ ಸಿದ್ದಾರೂಢ ರಥೋತ್ಸವ ನಿಮಿತ್ತ ಆತನ ಸ್ನೇಹಿತರು ಭಕ್ತರಿಗೆ ಪಲಾವ್ ಮಾಡಿಸಿದ್ದರು ಆದನ್ನು ಕೊಡುವ ನೆಪದಲ್ಲಿ

ಹುಬ್ಬಳ್ಳಿ: ಐತಿಹಾಸಿಕ ಸಿದ್ದಾರೂಢ ರಥೋತ್ಸವ ದಿನ ಯುವಕನ ಕಗ್ಗೊಲೆ| ಹಳೆ ವೈಷಮ್ಯಕ್ಕೆ ಬಲಿಯಾದ ದುರ್ದೈವಿ Read More »

ಚಿಕ್ಕಮಗಳೂರು:ಬೈಕಿನಲ್ಲಿ ತೆರಳುತ್ತಿದ್ದವರ ಮೇಲೆ ಗುಂಡಿನ ದಾಳಿ

ಸಮಗ್ರ ನ್ಯೂಸ್ : ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಿದರೆ-ಚಂದುವಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನ ಪ್ರಕಾಶ್ (30)ಹಾಗೂ ಪ್ರವೀಣ್ (33) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿ ನಡೆಸಿದ ರಮೇಶ್ ಎಂಬಾಂತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಗುಂಡಿನದಾಳಿ ನಡೆಸಿದ ರಮೇಶ್ ಹಾಗೂ ಸಾವನ್ನಪ್ಪಿದ ಪ್ರಕಾಶ್, ಪ್ರವೀಣ್ ಎಲ್ಲರೂ ಸಂಬಂಧಿಕರು ಎಂದು ಹೇಳಲಾಗುತ್ತಿದೆ. ಆದರೆ, ಗುಂಡಿನ ದಾಳಿ ನಡೆಸಿದ ರಮೇಶ್ ಗೆ ಬಂದೂಕು ಎಲ್ಲಿಂದ

ಚಿಕ್ಕಮಗಳೂರು:ಬೈಕಿನಲ್ಲಿ ತೆರಳುತ್ತಿದ್ದವರ ಮೇಲೆ ಗುಂಡಿನ ದಾಳಿ Read More »

ಸ್ವಂತ ಅಳಿಯನನ್ನೇ ಅಪಹರಿಸಿದ ಪ್ರಕರಣ| ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ ಸೇರಿ 6 ಮಂದಿ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಅಳಿಯನ ಅಪಹರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕಿ‌, ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಸೇರಿದಂತೆ ಆರು ಮಂದಿ ವಿರುದ್ಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತನ್ನನ್ನು ಅಪಹರಣ ಮಾಡಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಅಳಿಯ ನವೀನ್ ಗೌಡ ನೀಡಿದ ದೂರಿನಂತೆ ದಿವ್ಯಪ್ರಭಾ, ಅವರ ಪುತ್ರಿ ಸ್ಪಂದನಾ(ನವೀನ್ ಪತ್ನಿ), ದಿವ್ಯಪ್ರಭಾರ ಪತಿ ಪರಶುರಾಮ ಸೇರಿ ಆರು ಜನರ ಮೇಲೆ ಎಫ್.ಐ.ಆರ್. ದಾಖಲು

ಸ್ವಂತ ಅಳಿಯನನ್ನೇ ಅಪಹರಿಸಿದ ಪ್ರಕರಣ| ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ ಸೇರಿ 6 ಮಂದಿ ವಿರುದ್ಧ ಎಫ್ಐಆರ್ Read More »

ಪ್ರೇಮಿಗಳ ದಿನದಂದು ಕಿಕ್ಕಿರಿದು ತುಂಬಿದ್ದ ರೈಲೊಳಗೆ ಯುವಜೋಡಿಯಿಂದ ಲೈಂಗಿಕ ಕ್ರಿಯೆ| ಮುಜುಗರಕ್ಕೆ ಒಳಗಾದ ಸಹಪ್ರಯಾಣಿಕರು

ಸಮಗ್ರ ನ್ಯೂಸ್: ಪ್ರೇಮಿಗಳ ದಿನದಂದು ರೈಲಿನಲ್ಲಿಯೇ ಜೋಡಿಯೊಂದು ಲೈಂಗಿಕ ಕ್ರಿಯೆ ನಡೆಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಪ್ರಯಾಣಿಕರನ್ನು ತಲ್ಲಣಗೊಳಿಸಿದೆ.ಪ್ರೇಮಿಗಳ ದಿನದ ಗೌರವಾರ್ಥವಾಗಿ ಸಿಡ್ನಿ ಜೋಡಿಯೊಂದು ಮೈಮರೆತು ವರ್ತಿಸಿದೆ. ರೈಲಿನಲ್ಲಿದ್ದ ಪ್ರಯಾಣಿಕರು ಮುಜುಗರಕ್ಕೆ ಒಳಗಾಗಿದ್ದಾರೆ. ಗಾಬರಿಗೊಂಡ ಪ್ರಯಾಣಿಕರು ಈ ಜೋಡಿಯ ಸಾರ್ವಜನಿಕ ಪ್ರೀತಿಯ ಪ್ರದರ್ಶನವನ್ನು ತಡೆಯುವಂತೆ ಹೇಳಿದ್ದಾರೆ. ಉತ್ತರ ಸಿಡ್ನಿ ಉಪನಗರಗಳಾದ ನಾರ್ಮಹರ್ಸ್ಟ್ ಮತ್ತು ಗಾರ್ಡನ್ ನಡುವೆ ರೈಲು ಸಾಗುವಾಗ ಘಟನೆ ನಡೆದಿದೆ. ಅಸಹ್ಯಕರ ದೃಶ್ಯ ನೋಡಲು ಮುಜುಗರವಾಗಿ ನಾನು ಅಲ್ಲಿಂದ ದೂರ ಹೋದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದು,

ಪ್ರೇಮಿಗಳ ದಿನದಂದು ಕಿಕ್ಕಿರಿದು ತುಂಬಿದ್ದ ರೈಲೊಳಗೆ ಯುವಜೋಡಿಯಿಂದ ಲೈಂಗಿಕ ಕ್ರಿಯೆ| ಮುಜುಗರಕ್ಕೆ ಒಳಗಾದ ಸಹಪ್ರಯಾಣಿಕರು Read More »

ಕುಟುಕು ಕಾರ್ಯಾಚರಣೆ ಎಫೆಕ್ಟ್| ಬಿಸಿಸಿಐ ಗೆ ಚೇತನ್ ಶರ್ಮಾ ರಾಜೀನಾಮೆ

ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅಂಗಿಕಾರ ಮಾಡಿದ್ದಾರೆ. ಖಾಸಗಿ ಚಾನೆಲ್‌ವೊಂದರ ರಹಸ್ಯ ಕಾರ್ಯಚರಣೆ ವೇಳೆ ಚೇತನ್ ಶರ್ಮಾ, ಭಾರತ ತಂಡದ ಕೆಲವು ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಭಾರತ ತಂಡದ ಕೆಲ ಆಟಗಾರರು ಫಿಟ್ನೆಸ್‌ ಸಾಬೀತಿಗೆ ಇಂಜೆಕ್ಷನ್‌ ತೆಗೆದುಕೊಳ್ಳುತ್ತಾರೆ ಎಂದಿದ್ದ ಚೇತನ್‌ ಶರ್ಮಾ, ವಿರಾಟ್ ಕೊಹ್ಲಿ

ಕುಟುಕು ಕಾರ್ಯಾಚರಣೆ ಎಫೆಕ್ಟ್| ಬಿಸಿಸಿಐ ಗೆ ಚೇತನ್ ಶರ್ಮಾ ರಾಜೀನಾಮೆ Read More »

ಯೋಗಿ ಆದಿತ್ಯನಾಥ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ| ಯುಪಿ ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ

ಸಮಗ್ರ ನ್ಯೂಸ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನಿವಾಸಕ್ಕೆ ಬಾಂಬ್‌ ದಾಳಿ ಮಾಡುವ ಕುರಿತು ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳಿಗೆ ಬೆದರಿಕೆ ಕರೆ ಬಂದಿದ್ದು, ಲಖನೌನಲ್ಲಿರುವ ಸಿಎಂ ಯೋಗಿ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬ ಸಿಎಂ ಯೋಗಿ ನಿವಾಸದ ಸುತ್ತ ಬಾಂಬ್‌ ಇರಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾನೆ. ಇದರಿಂದಾಗಿ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ನಿವಾಸದ ಸುತ್ತ ಭಾರಿ ತಪಾಸಣೆ ನಡೆಸಿದ್ದಾರೆ. ಇದಾದ ಬಳಿಕ ಯಾವುದೇ ಬಾಂಬ್‌

ಯೋಗಿ ಆದಿತ್ಯನಾಥ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ| ಯುಪಿ ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ Read More »

ಮಕ್ಕಳಾಗದ ಕೊರಗು; ಆತ್ಮಹತ್ಯೆ ಮಾಡಿಕೊಂಡ ಯುವಕ

ಸಮಗ್ರ ನ್ಯೂಸ್: ಎಲ್ಲರೂ ಮದುವೆಯಾದ ಮೇಲೆ ಮಕ್ಕಳನ್ನು ಬಯಸುವುದು ಸಹಜ. ಆದರೆ ಕೆಲವರಿಗೆ ಅವರ ಬಯಕೆ ಈಡೇರುವುದಿಲ್ಲ. ಇಲ್ಲೊಬ್ಬ ಯುವಕನಿಗೂ ಹಾಗೆಯೇ ಆಗಿದ್ದು ಮದುವೆಯಾಗಿ ಐದು ವರ್ಷಗಳಾಗಿದ್ದು ಮಕ್ಕಳಾಗಿಲ್ಲ. ಈತನಿಗೆ ಮಕ್ಕಳಿಲ್ಲದ ಕೊರಗು ಬಾಧಿಸಿದ್ದು ಪತ್ನಿ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಧರ್ಮರಾಜು(28) ಎಂದು ಗುರುತಿಸಲಾಗಿದ್ದು ಈತ ಜಂಗಲ್ ರೆಸಾರ್ಟ್ ನ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್​ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಐದು ವರ್ಷಗಳಿಂದ

ಮಕ್ಕಳಾಗದ ಕೊರಗು; ಆತ್ಮಹತ್ಯೆ ಮಾಡಿಕೊಂಡ ಯುವಕ Read More »