ಕರಾವಳಿ

ದೇವಸ್ಥಾನದ ಭಗವಧ್ವಜ ತೆಗೆಸಲು ಎಸ್ಐ ಸೂಚನೆ| ಖಡಕ್ ವಾರ್ನಿಂಗ್ ನೀಡಿದ ಹಿಂಜಾವೇ|

ಮಂಗಳೂರು: ‘ಕಾರಿಂಜ ಕ್ಷೇತ್ರದ ಸಮೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಜಾಗರಣ ವೇದಿಕೆ ಮತ್ತು ಜಿಲ್ಲಾಧಿಕಾರಿ ನಡುವಿನ ಜಟಾಪಟಿ ಮುಂದುವರೆದಿದೆ. ಈ ವಿಚಾರವಾಗಿ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ ವಿರುದ್ಧ ದೂರು ದಾಖಲಿಸುವ ಮೂಲಕ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಕಾರಿಂಜ ಕ್ಷೇತ್ರದಲ್ಲಿ ಹಾಕಲಾದ ಭಗವಧ್ವಜವನ್ನು ತೆಗೆಯಬೇಕು ಎಂದು ಪುಂಜಾಲಕಟ್ಟೆ ಠಾಣೆಯ […]

ದೇವಸ್ಥಾನದ ಭಗವಧ್ವಜ ತೆಗೆಸಲು ಎಸ್ಐ ಸೂಚನೆ| ಖಡಕ್ ವಾರ್ನಿಂಗ್ ನೀಡಿದ ಹಿಂಜಾವೇ| Read More »

ಮೌಡ್ಯಕ್ಕೆ ಬಲಿಯಾಯ್ತು ‘ಶ್ರೀತಾಳೆ’ | ಸತತ ಪ್ರಯತ್ನದ ಬಳಿಕವೂ ಮರಕ್ಕೆ ಬಿತ್ತು ಕೊಡಲಿಯೇಟು|

ಉಡುಪಿ: ಪರಿಸರ ಪ್ರೇಮಿಗಳ ಅವಿರತ ಪ್ರಯತ್ನಗಳ ಹೊರತಾಗಿಯೂ ಬೆಳ್ತಂಗಡಿ ತಾಲೂಕು ವೇಣೂರು ಬಳಿಯ ಕರಿಮಣೇಲು ಗ್ರಾಮದಲ್ಲಿದ್ದ ಶ್ರೀತಾಳೆಮರ ಕೊನೆಗೂ ಮೌಢ್ಯಕ್ಕೆ ಬಲಿಯಾಗಿದೆ ಎಂದು ಮರವನ್ನು ಉಳಿಸಲು ಹೋರಾಡಿದ ಉಡುಪಿಯ ಪ್ರೊ.ಎಸ್.ಎ.ಕೃಷ್ಣಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್‌ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ. ತಮ್ಮ ಸತತ ಪ್ರಯತ್ನದಿಂದ ಉಡುಪಿ ಸಮೀಪದ ಆತ್ರಾಡಿಯಲ್ಲಿದ್ದ ಶ್ರೀತಾಳೆ ಮರವನ್ನು ಮನೆಯವರ ಜೊತೆ ಮಾತನಾಡಿ ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು. ಆ ಮನೆಯ ಯಜಮಾನರು ಇಂದಿಗೂ ಜೀವಂತವಾಗಿದ್ದಾರೆ. ಕರಿಮಣೇಲು ಮನೆಯವರಿಗೂ ಮನವರಿಕೆ ಮಾಡುವ ಎಲ್ಲಾ ಪ್ರಯತ್ನಗಳನ್ನು ನಾವು

ಮೌಡ್ಯಕ್ಕೆ ಬಲಿಯಾಯ್ತು ‘ಶ್ರೀತಾಳೆ’ | ಸತತ ಪ್ರಯತ್ನದ ಬಳಿಕವೂ ಮರಕ್ಕೆ ಬಿತ್ತು ಕೊಡಲಿಯೇಟು| Read More »

ಕೃಷಿಭೂಮಿಯನ್ನು ನೋಡಲು ಬಂದ ಯಜಮಾನನನ್ನು ಭೂಮಿಯೊಳಗೆ ಹೂತಿಟ್ಟ ಕಿರಾತಕರು| ಆಸ್ತಿ ಆಸೆಗೆ ಸಂಬಂಧಿಕರೇ ಕೊಲೆಗೈದು ಬೃಹನ್ನಾಟಕ|

ಪುತ್ತೂರು: ಆತ ತಾನು ಖರೀದಿಸಿಸ ಪ್ರೀತಿಯ ಕೃಷಿ ಭೂಮಿಯನ್ನು ನೋಡಲು ಬಂದಿದ್ದ. ಆದರೆ ವಿಧಿಯಾಟ ಬೇರೆ ಆಗಿತ್ತು. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಆತನನ್ನು ಸಂಬಂಧಿಕರೇ ಫೋಟೋ ಫ್ರೇಮ್ ನೊಳಗೆ ಆಗುವಂತೆ ಮಾಡಿದ್ದಾರೆ. ಜಮೀನು ನೋಡಲು ಬಂದವನನ್ನು ಸಂಬಂಧಿಕರೇ ಕೊಲೆಮಾಡಿ ಕಾಡಿನ ಮಧ್ಯೆ ಹೂತು ಹಾಕಿದ್ದಾರೆ. ಈ ಘಟನೆ ನಡೆದದ್ದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಗುಳಿ ಎಂಬಲ್ಲಿ. ಮೈಸೂರಿನ ಸುಬ್ರಹ್ಮಣ್ಯ ನಗರದ ಜಗದೀಶ್ (58) ಎಂಬವರೇ ಕೊಲೆಯಾದ ದುರ್ದೈವಿ. ತನ್ನ ಕೃಷಿ ಭೂಮಿಯನ್ನು ಮುಗುಳಿ

ಕೃಷಿಭೂಮಿಯನ್ನು ನೋಡಲು ಬಂದ ಯಜಮಾನನನ್ನು ಭೂಮಿಯೊಳಗೆ ಹೂತಿಟ್ಟ ಕಿರಾತಕರು| ಆಸ್ತಿ ಆಸೆಗೆ ಸಂಬಂಧಿಕರೇ ಕೊಲೆಗೈದು ಬೃಹನ್ನಾಟಕ| Read More »

ಮಂಗಳೂರು: ಪ್ರಜ್ಞೆ ತಪ್ಪಿಸಿ ಬ್ಲೂಫಿಲಂ ಶೂಟಿಂಗ್| ಮಹಿಳೆ ಸೇರಿ ಮೂರು ಮಂದಿ ಖತರ್ನಾಕ್ ಗಳು ಅಂದರ್|

ಮಂಗಳೂರು : ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಗೆ ಒಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಇನ್ಲ್ಯಾಂಡ್ ಅಪಾರ್ಟ್ಮೆಂಟ್ ನಿವಾಸಿ ಅಝ್ವೀನ್ ಸಿ. (24), ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಸಫ್ನಾ ಅಲಿಯಾಸ್ ಹತೀಜಮ್ಮ (23) ಬಂಧಿತ ಆರೋಪಿಗಳು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿಮಾಹಿತಿ ನೀಡಿದ್ದಾರೆ. ದುಬೈನಲ್ಲಿ ಉದ್ಯೋಗದಲ್ಲಿದ್ದು, ವಾಪಾಸಾಗಿದ್ದ ವ್ಯಕ್ತಿಯೊಬ್ಬರ ಮನೆಗೆ ಅಝ್ವಿನ್ ಹಾಗೂ ಆತನ

ಮಂಗಳೂರು: ಪ್ರಜ್ಞೆ ತಪ್ಪಿಸಿ ಬ್ಲೂಫಿಲಂ ಶೂಟಿಂಗ್| ಮಹಿಳೆ ಸೇರಿ ಮೂರು ಮಂದಿ ಖತರ್ನಾಕ್ ಗಳು ಅಂದರ್| Read More »

ಪಲ್ಲಕ್ಕಿ ಹೊತ್ತು ವಿವಾದಕ್ಕೀಡಾದ ಶಾಸಕ ಹರೀಶ್ ಪೂಂಜಾ|

ಬೆಳ್ತಂಗಡಿ: ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದ ವೆಂಕಟರಮಣ ದೇವಸ್ಥಾನದ ದೇವಲ ಪಲ್ಲಕಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೊತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮವನ್ನು ಮುಗಿಸಿ ಮನೆ ತೆರಳುತ್ತಿದ್ದ ಶಾಸಕ ಹರೀಶ್ ಪೂಂಜಾ ಅವರನ್ನು ಬೆಳ್ತಂಗಡಿ ಲಾಯಿಲ ವೆಂಕಟರಮಣ ದೇವರ ಪಲ್ಲಕ್ಕಿ ಹೊರಲು ಸ್ಥಳೀಯ ಯುವಕರು ಒತ್ತಾಯಿಸಿದ್ದಾರೆ. ಈ ಹಿನ್ನಲೆ ಶಾಸಕರು ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದಾರೆ. ಇದು ಸದ್ಯ ವಿವಾದಕ್ಕೆ ಕಾರಣವಾಗಿದ್ದು. ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದ ವೆಂಕಟರಮಣ ದೇವಸ್ಥಾನದಲ್ಲಿ ಗೌಡ ಸಾರಸ್ವತರಲ್ಲದೆ ಬೇರೆ ಜಾತಿಗೆ ಪಲ್ಲಕ್ಕಿ

ಪಲ್ಲಕ್ಕಿ ಹೊತ್ತು ವಿವಾದಕ್ಕೀಡಾದ ಶಾಸಕ ಹರೀಶ್ ಪೂಂಜಾ| Read More »

ಪುತ್ತೂರು: ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ| ಆರೋಪಿಗಳನ್ನು ತಕ್ಷಣ ಬಂಧಿಸಲು ಸಿಎಫ್ಐ ಆಗ್ರಹ

ಪುತ್ತೂರು: ಕೊಂಬೆಟ್ಟು ಕಾಲೇಜ್‍ನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಬುಧವಾರ ಸಂಜೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ಧರಣಿ ನಡೆಸಿದರು. ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು 24 ಗಂಟೆಗಳ ಒಳಗಾಗಿ ಬಂಧಿಸುವಂತೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಗ್ರಹಿಸಿದರು. ಪುತ್ತೂರು ಡಿವೈಎಸ್‍ಪಿ ಅವರು ಸಕಾರಾತ್ಮಕ ಭರವಸೆ ನೀಡಿದ ಬಳಿ ಧರಣಿಯನ್ನು ಹಿಂಪಡೆದರು. ಧರಣಿಯಲ್ಲಿ ಸಿಎಫ್‍ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾಧ್ಯಕ್ಷ ಅನ್ಸಾರ್

ಪುತ್ತೂರು: ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ಪ್ರಕರಣ| ಆರೋಪಿಗಳನ್ನು ತಕ್ಷಣ ಬಂಧಿಸಲು ಸಿಎಫ್ಐ ಆಗ್ರಹ Read More »

ಹಿಂಜಾವೇ ಪ್ರಮುಖ್ ಜಗದೀಶ ಕಾರಂತ ವಿರುದ್ದ ದ.ಕ ಡಿಸಿ ದೂರು| ‘ಡಿಸಿ ಕೊರಳಪಟ್ಟಿ ಹಿಡಿಯುತ್ತೇವೆ’ ಎಂದಿದ್ದ ಕಾರಂತ್

ಮಂಗಳೂರು: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ವಿರುದ್ಧ ಮಂಗಳೂರು ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ದೂರು ನೀಡಿದ್ದಾರೆ. ನವೆಂಬರ್ 22ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಾರಿಂಜದಲ್ಲಿ ಭಾಷಣ ಮಾಡುವ ವೇಳೆ, ಜಿಲ್ಲಾಧಿಕಾರಿ ಕೊರಳಪಟ್ಟಿ ಹಿಡಿಯುತ್ತೇವೆ ಎಂದು ಬಹಿರಂಗ ಬೆದರಿಕೆ ಹಾಕಿದ ಹಿನ್ನೆಲೆ ಜಗದೀಶ್ ಕಾರಂತ್ ವಿರುದ್ಧ ದೂರು ದಾಖಲಿಸಲಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆಯಲ್ಲಿ ನಾಲಿಗೆ ಹರಿಬಿಟ್ಟಿದ್ದ ಜಗದೀಶ್ ಕಾರಂತ್ ವಿರುದ್ಧ ಇದೀಗ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಕ್ರಮ

ಹಿಂಜಾವೇ ಪ್ರಮುಖ್ ಜಗದೀಶ ಕಾರಂತ ವಿರುದ್ದ ದ.ಕ ಡಿಸಿ ದೂರು| ‘ಡಿಸಿ ಕೊರಳಪಟ್ಟಿ ಹಿಡಿಯುತ್ತೇವೆ’ ಎಂದಿದ್ದ ಕಾರಂತ್ Read More »

ಸುಳ್ಯ: ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ| ಚಾಲಕ ಅಪಾಯದಿಂದ ಪಾರು|

ಸುಳ್ಯ: ಚಲಿಸುತ್ತಿದ್ದ ಕಾರೊಳಗೆ ಏಕಾಏಕಿ ಬೆಂಕಿ ಹತ್ತಿಕೊಂಡ ಪರಿಣಾಮ ಕಾರು ಸಂಪೂರ್ಣ ಆಹುತಿಯಾದ ಘಟನೆ ಕಡಬ ತಾಲೂಕಿನ ಬಳ್ಪದ ಪಾದೆ ಎಂಬಲ್ಲಿ ನಡೆದಿದೆ. ಪಂಜದ ಕೇಶವ ಆಚಾರಿ ಎಂಬವರು ತಮ್ಮ ಕಾರಿನಲ್ಲಿ ( KA19- P7242) ಏನೆಕಲ್ಲು ಕಡೆಯಿಂದ ಕೆಲಸ ಮುಗಿಸಿ ಬರುತ್ತಿರುವಾಗ ಪಾದೆ ಬಳಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ನಿಲ್ಲಿಸಿ ಬೋನೆಟ್ ತೆರೆಯುವಷ್ಟರಲ್ಲಿ ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಸುಳ್ಯ: ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ| ಚಾಲಕ ಅಪಾಯದಿಂದ ಪಾರು| Read More »

ಸುರತ್ಕಲ್: ಸೆಲ್ಫಿ ತೆಗೆಯಲು ಗೂಡ್ಸ್ ರೈಲ್ ಏರಿದ ಯುವಕನಿಗೆ ವಿದ್ಯುತ್ ಶಾಕ್

ಸುರತ್ಕಲ್: ಯುವಕನೋರ್ವ ಗೂಡ್ಸ್ ರೈಲಿನ ಮೇಲೆ ಏರಿ ಸೆಲ್ಫಿ ತೆಗೆಯಲು ಹೋದ ಯುವಕನಿಗೆ ವಿದ್ಯುತ್ ಆಘಾತವಾಗಿ ಸುಟ್ಟ ಗಾಯಗಳಾದ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣ ಸಮೀಪದ ಅಗರಮೇಲು ಎಂಬಲ್ಲಿ ನ .23 ರ ಮಂಗಳವಾರ ಸಂಜೆ ನಡೆದಿದೆ. ಮಂಗಳೂರಿನ‌ ಸಲ್ಮಾನ್ ಪಾರಸ್ (21) ವಿದ್ಯುತ್ ಅವಘಡಕ್ಕೆ ಒಳಗಾದ ಯುವಕನಾಗಿದ್ದಾನೆ.‌ ನಿಲುಗಡೆಗೊಂಡಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿದ ಸಲ್ಮಾನ್ ಫಾರಿಸ್ ಸೆಲ್ಫಿ ತೆಗೆಯಲು ಮುಂದಾದಾಗಿದ್ದಾನೆ. ಆದರೆ ಪಕ್ಕದಲ್ಲೇ ಹಾದು ಹೋಗಿರುವ ಹೈವೋಲ್ಟೇಜ್ ತಂತಿಗಳನ್ನು ಗಮನಿಸದ ಕಾರಣ ವಿದ್ಯುತ್

ಸುರತ್ಕಲ್: ಸೆಲ್ಫಿ ತೆಗೆಯಲು ಗೂಡ್ಸ್ ರೈಲ್ ಏರಿದ ಯುವಕನಿಗೆ ವಿದ್ಯುತ್ ಶಾಕ್ Read More »

ಬೆಳ್ತಂಗಡಿ: ಮಚ್ಚಿನಿಂದ ಕೊಚ್ಚಿ ಕೊಲೆಗೈಯಲು ಯತ್ನ| ಸಹೋದರರಿಬ್ಬರು ಗಂಭೀರ, ಆರೋಪಿಗಳನ್ನು ಕಂಬಿಹಿಂದೆ ಕಳುಹಿಸಿದ ಪೊಲೀಸರು|

ಬೆಳ್ತಂಗಡಿ: ಸಹೋದರರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ಯಲೆತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ನಡೆದಿದ್ದು, ತಕ್ಷಣವೇ ಕಾರ್ಯಪೃವೃತ್ತರಾದ ಪೊಲೀಸರು ಮಂಗಳವಾರ ರಾತ್ರಿಯೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದವರನ್ನು ನೆಲ್ಲಿಗುಡ್ಡೆ ನಿವಾಸಿಗಳಾದ ಹೈದರ್ ಯಾನೆ ಜಾಕ್ ಹೈದರ್ ಮತ್ತು ಅವರ ಅಣ್ಣ ರಫೀಕ್ ಎಂದು ಗುರುತಿಸಲಾಗಿದೆ. ಮಂಗಳವಾರದಂದು ರಾತ್ರಿ ಸುಮಾರು 11:45ರ ವೇಳೆ ಹೈದರ್ ಮತ್ತು ರಫೀಕ್ ಆಟೋದಲ್ಲಿ ಬಾಡಿಗೆ ಹೋಗಿ ವಾಪಾಸ್ಸು ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಳಿಯ ಗ್ರಾಮದ ಗೋವಿಂದೂರು ಶಾಲೆಯ ಬಳಿಯಲ್ಲಿ ಅಶುತೋಷ್

ಬೆಳ್ತಂಗಡಿ: ಮಚ್ಚಿನಿಂದ ಕೊಚ್ಚಿ ಕೊಲೆಗೈಯಲು ಯತ್ನ| ಸಹೋದರರಿಬ್ಬರು ಗಂಭೀರ, ಆರೋಪಿಗಳನ್ನು ಕಂಬಿಹಿಂದೆ ಕಳುಹಿಸಿದ ಪೊಲೀಸರು| Read More »