ಕರಾವಳಿ

ವಿಟ್ಲ: ಹಿಂದೂ ಯುವತಿಯನ್ನು‌ ಮದುವೆಯಾದ ಮುಸ್ಲಿಂ ಯುವಕ| ಸಂಘಟನೆಗಳಿಂದ ಲವ್ ಜಿಹಾದ್ ಆರೋಪ

ಸಮಗ್ರ ನ್ಯೂಸ್: ಅನ್ಯಕೋಮಿನ ಯುವಕನೋರ್ವ ಮೈಸೂರು ಮೂಲದ ಹಿಂದೂ ಯುವತಿಯನ್ನು ವಿವಾಹವಾದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್(27) ಎಂಬ ಅನ್ಯಕೋಮಿನ ಯುವಕ ಮೈಸೂರು ಲೋಕನಾಯಕನ ನಗರದ ಸೌಂದರ್ಯ(24) ಎಂಬ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಉಬೈದ್ ಮತ್ತು ಸೌಂದರ್ಯ ಮೈಸೂರಿನಲ್ಲಿ ರಿಜಿಸ್ಟರ್ ವಿವಾಹವಾಗಿದ್ದು, ಅವರ ಮದುವೆಯ ರಿಜಿಸ್ಟರ್ ಪತ್ರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಜೋಡಿ ಕೆಲ ದಿನ ಹಿಂದೆ ವಿಟ್ಲದಲ್ಲಿ ತಿರುಗಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಕೇರಳದಲ್ಲಿ ನಿಶ್ಚಿತಾರ್ಥವಾದ ಈ

ವಿಟ್ಲ: ಹಿಂದೂ ಯುವತಿಯನ್ನು‌ ಮದುವೆಯಾದ ಮುಸ್ಲಿಂ ಯುವಕ| ಸಂಘಟನೆಗಳಿಂದ ಲವ್ ಜಿಹಾದ್ ಆರೋಪ Read More »

ಭಾರೀ ಮಳೆ ಹಿನ್ನಲೆ; ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 4 ರ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನಲ್ಲಿ ಕಳೆದ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಹಿನ್ನಲೆ; ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಮತ್ತೆ ಕೊಡಗು ಗಡಿಭಾಗದಲ್ಲಿ ಅಗೋಚರ ಸದ್ದು| ಭೂಮಿಯೊಳಗೆ ಕಂಪನ

ಸಮಗ್ರ ನ್ಯೂಸ್: ಭೂಕಂಪದ ಭಯದ ನೆರಳಲ್ಲಿ ಬದುಕುತ್ತಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗದ ಜನರಿಗೆ ಈಗ ದಿನನಿತ್ಯ ಜೋರಾದ ಶಬ್ದ ಹಾಗೂ ಲಘು ಕಂಪನಗಳೊಂದಿಗೆ ಬದುಕುವಂತಾಗಿದೆ. ಸರಣಿ ಕಂಪನ ಅನುಭವಿಸಿ ಚಿಂತೆಯಲ್ಲಿರುವ ಪೆರಾಜೆ ಹಾಗೂ ಚೆಂಬುವಿನಲ್ಲಿ ಇದೀಗ ಭಾನುವಾರ ರಾತ್ರಿ 9.15 ರಿಂದ 9.20 ರ ವೇಳೆಯಲ್ಲಿ ಕಂಪನದ ಅನುಭವ ಆಗಿದೆ ಎಂಬ ಮಾಹಿತಿ ಲಭಿಸಿದೆ. ಭೂಮಿಯೊಡಲಿನಿಂದ ಮೊದಲಿಗೆ ಅಗೋಚರ ಶಬ್ಧ ಹಾಗೂ ನಂತರ ಸಣ್ಣ ಮಟ್ಟಿನ ಕಂಪನ ಆಗಿದೆ ಎಂದು ತಿಳಿಸಿದ್ದಾರೆ. ಹಿಂದಿನ

ಮತ್ತೆ ಕೊಡಗು ಗಡಿಭಾಗದಲ್ಲಿ ಅಗೋಚರ ಸದ್ದು| ಭೂಮಿಯೊಳಗೆ ಕಂಪನ Read More »

ಅತಿಥಿಯಾಗಿ ವ್ಯಕ್ತಿಯ ಮನೆಗೆ ಬಂದಾತ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಯಜಮಾನನಿಗೆ ಟ್ಯಾಪಿಂಗ್ ಕತ್ತಿಯಿಂದ ಇರಿದು ಪರಾರಿ

ಸಮಗ್ರ ನ್ಯೂಸ್ : ಅತಿಥಿಯಾಗಿ ವ್ಯಕ್ತಿಯ ಮನೆಗೆ ಬಂದಿದ್ದಾತ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಮನೆಯ ಯಜಮಾನನಿಗೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯೊಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು‌ ಎಂಬಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ತೋಟದ ಮಜಲು ನಿವಾಸಿ ಲೂಕೋಸ್ ಎಂದು ಗುರುತಿಸಲಾಗಿದೆ. ಕೇರಳ ಮೂಲದ ಲೂಕೋಸ್ ಎಂಬವರು ಎಂಟು ವರ್ಷಗಳ ಹಿಂದೆ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ಜಾಗ ಖರೀದಿಸಿ ದಂಪತಿಗಳು ವಾಸವಾಗಿದ್ದರು. ಆದರೆ ಕಳೆದ ಎರಡು

ಅತಿಥಿಯಾಗಿ ವ್ಯಕ್ತಿಯ ಮನೆಗೆ ಬಂದಾತ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ಯಜಮಾನನಿಗೆ ಟ್ಯಾಪಿಂಗ್ ಕತ್ತಿಯಿಂದ ಇರಿದು ಪರಾರಿ Read More »

ಪುತ್ತೂರು: ಪೆರ್ಲಂಪಾಡಿಯಲ್ಲಿ ಕಾಲುಸಂಕ ನಿರ್ಮಿಸಿ ಬಡಕುಟುಂಬದ ಕೃಷಿಗೆ ಹಾನಿ| ಮನವಿಕೊಟ್ಟರೂ ಕೈಕಟ್ಟಿ ಕುಳಿತ ಪಿಡಿಒ| ಕಾಮಗಾರಿ ಸ್ಥಳ ಬದಲಾಯಿಸಿದ ಪಂಚಾಯತ್ ಸದಸ್ಯ..?

ಪುತ್ತೂರು: ಕಾಲುಸಂಕ ನಿರ್ಮಿಸಿ ಸ್ಥಳೀಯ ಬಡ ಕುಟುಂಬದವರ ಕೃಷಿಗೆ ಹಾನಿ ಮಾಡಿದ್ದಲ್ಲದೆ ಪರಿಹಾರ ಕೊಡುವುದಾಗಿ ಹೇಳಿಕೊಂಡು ವಂಚಿಸುತ್ತಿರುವ ಘಟನೆ ಪುತ್ತೂರು ತಾಲೂಕಿನ ಪೆರ್ಲಂಪಾಡಿ ಗ್ರಾಮದ ಪಾಂಬಾರು ಎಂಬಲ್ಲಿ ನಡೆದಿದೆ. ಪಾಂಬಾರು ನಿವಾಸಿಯಾಗಿರುವ ಬಾಬು ಗೌಡರ ಕುಟುಂಬ ಈ ಸಮಸ್ಯೆಗೆ ಒಳಗಾದವರು. ಇವರು ಸರಿಸುಮಾರು 50 ವರ್ಷಗಳಿಂದ ಆ ಜಾಗದಲ್ಲಿ ವಾಸಮಾಡುತ್ತಿದ್ದು, ಸದ್ಯ ಬಾಬು ಗೌಡ ಮತ್ತು ಅವರ ಪತ್ನಿ ಹಾಗು ಒರ್ವ ಮಗ ವಸಂತ ಕುಮಾರ್ ವಾಸಿಸುತ್ತಿದ್ದಾರೆ. ಇವರಿಗೆ ವಯಸ್ಸಾಗಿದ್ದು ಮಗ ವಸಂತ್ ಕುಮಾರ್ ಮನೆಯ ಎಲ್ಲಾ

ಪುತ್ತೂರು: ಪೆರ್ಲಂಪಾಡಿಯಲ್ಲಿ ಕಾಲುಸಂಕ ನಿರ್ಮಿಸಿ ಬಡಕುಟುಂಬದ ಕೃಷಿಗೆ ಹಾನಿ| ಮನವಿಕೊಟ್ಟರೂ ಕೈಕಟ್ಟಿ ಕುಳಿತ ಪಿಡಿಒ| ಕಾಮಗಾರಿ ಸ್ಥಳ ಬದಲಾಯಿಸಿದ ಪಂಚಾಯತ್ ಸದಸ್ಯ..? Read More »

ಸುಳ್ಯ: ಮರ್ಕಂಜದ ಅಳವುಪಾರೆ ಗಣಿಗಾರಿಕೆ ತಾತ್ಕಾಲಿಕ ಸ್ಥಗಿತ| ಗ್ರಾಮಸ್ಥರ ಹೋರಾಟಕ್ಕೆ ಸಿಗಬಹುದೇ ಶಾಶ್ವತ ಗೆಲುವು?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ‌ ತಾಲೂಕಿನ ಮರ್ಕಂಜದ ಅಳವುಪಾರೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಾತ್ಕಾಲಿಕ ಬಂದ್ ಮಾಡಿರುವುದಾಗಿ ವರದಿಯಾಗಿದೆ. ಕೆಲ ದಿನಗಳಿಂದ ಉಂಟಾಗುತ್ತಿರುವ ಭೂಕಂಪನದಿಂದ ಭಯಗೊಂಡಿರುವ ಮರ್ಕಂಜ ಗ್ರಾಮಸ್ಥರು ಇದಕ್ಕೆ ಗಣಿಗಾರಿಕೆಯ ಪ್ರಭಾವ ಕೂಡ ಇದೆಯೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಗಣಿ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ. ಹಾಗಾಗಿ ಅದರ ವರದಿ ಬರುವ ತನಕ ಗಣಿಯನ್ನು ಬಂದ್ ಮಾಡಿಸುವಂತೆ ಗ್ರಾಮಸ್ಥರು ಪ್ರತಿಭಟನೆಯ ನಡೆಸಿದ್ದರು. ಈ ಪ್ರತಿಭಟನೆಗೆ ಅಂಬೇಡ್ಕರ್ ರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಂದರ ಪಾಟಜೆ,

ಸುಳ್ಯ: ಮರ್ಕಂಜದ ಅಳವುಪಾರೆ ಗಣಿಗಾರಿಕೆ ತಾತ್ಕಾಲಿಕ ಸ್ಥಗಿತ| ಗ್ರಾಮಸ್ಥರ ಹೋರಾಟಕ್ಕೆ ಸಿಗಬಹುದೇ ಶಾಶ್ವತ ಗೆಲುವು? Read More »

ದಿನದಲ್ಲಿ ಎರಡನೇ ಕಂಪಿಸಿದ ಭೂಮಿ| ಚೆಂಬು, ಸಂಪಾಜೆಯಲ್ಲಿ‌ ಭಾರೀ ನಡುಕ

ಸಮಗ್ರ ನ್ಯೂಸ್: ಕೊಡಗಿನ‌ ಚೆಂಬು, ಸಂಪಾಜೆ ಸೇರಿದಂತೆ ದಕ್ಷಿಣಕನ್ನಡದ ಕೆಲವು ಕಡೆಗೆ ಇದೀಗ 8.15 ಕ್ಕೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಜನರು ಮತ್ತೆ ಮತ್ತೆ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನ ಸದ್ದು ಮತ್ತು‌ ಭೂಮಿ ಕಂಪಿಸುತ್ತಿರುವುದರ ಹಿಂದಿನ ವಾಸ್ತವ ವಿಚಾರಗಳ ಬಗ್ಗೆ ತಕ್ಷಣ ಸೂಕ್ತ ಅಧ್ಯಯನ ನಡೆಯಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ದಿನದಲ್ಲಿ ಎರಡನೇ ಕಂಪಿಸಿದ ಭೂಮಿ| ಚೆಂಬು, ಸಂಪಾಜೆಯಲ್ಲಿ‌ ಭಾರೀ ನಡುಕ Read More »

ಐವರ್ನಾಡು; ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತ್ಯು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತಪಟ್ಟ ಘಟನೆಯೊಂದು ಜು.2 ರಂದು ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ ಅಪ್ಸರವರ ಮಗ ಹೈದರ್ ಅಲಿ ಮೃತ ಬಾಲಕ. ಈತ ಪ್ರಿಡ್ಜನ್ನು ಮುಟ್ಟಿದಾಗ ಶಾಕ್ ಹೊಡೆದಿದೆ ಎನ್ನಲಾಗಿದೆ

ಐವರ್ನಾಡು; ಪ್ರಿಡ್ಜ್ ನಿಂದ ಶಾಕ್ ಹೊಡೆದು 4 ವರ್ಷದ ಬಾಲಕ ಮೃತ್ಯು Read More »

ಬಂಟ್ವಾಳ; ಕಾರುಗಳ ನಡುವೆ ಅಪಘಾತ; ಚಾಲಕನಿಗೆ  ಗಂಭೀರ ಗಾಯ

ಸಮಗ್ರ ನ್ಯೂಸ್ : ಎರಡು ಕಾರುಗಳ ನಡುವೆ ಅಪಘಾತ ನಡೆದ ಕಾರಣ ಕಾರು ಚಾಲಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಬಿ.ಸಿ‌.ರೋಡ್ ಪುಂಜಾಲಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ನಯನಾಡು ನಿವಾಸಿ ಬ್ಯಾಪ್ಟಿಸ್ ಲೋಬೋ ಅವರ ಪುತ್ರ ಕಾರು ಚಾಲಕ ರಾಕ್ಲಿನ್ ಲೋಬೋ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವೂರು ಸಮೀಪ ಬಡಗುಂಡಿ ಸಮೀಪ ರಿಟ್ಜ್ ಹಾಗೂ ಎರಿಟಿಗಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎರಿಟಿಗ ಕಾರಿನಲ್ಲಿ ಇತರ ಪ್ರಯಾಣಿಕರಿಗೂ ಗಾಯಗಳಾಗಿದೆ

ಬಂಟ್ವಾಳ; ಕಾರುಗಳ ನಡುವೆ ಅಪಘಾತ; ಚಾಲಕನಿಗೆ  ಗಂಭೀರ ಗಾಯ Read More »

ಕರಾವಳಿಯಲ್ಲಿ ಪ್ರವಾಹದ ಭೀತಿ ಇದ್ದರೂ ಶಾಸಕರ ಲೆಹ್ ಲಡಾಖ್ ಪ್ರವಾಸ…!!

ಸಮಗ್ರ ನ್ಯೂಸ್: ಮಳೆಯಿಂದಾಗಿ ಕರಾವಳಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಈ ಸಂದರ್ಭ , ವಿಧಾನಸಭೆಯ ಭರವಸೆ ಸಮಿತಿಗೆ ಸೇರಿದ ಶಾಸಕರ ಗುಂಪು ಚುನಾಯಿತರೂ ಇಲ್ಲದ ಲೇಹ್ ಮತ್ತು ಲಡಾಖ್‌ಗೆ ‘ಅಧ್ಯಯನ ಪ್ರವಾಸ’ ಕೈಗೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ. ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ನಿಯೋಗ ಗುರುವಾರ 6 ದಿನಗಳ ಲೇಹ್ ಮತ್ತು ಲಡಾಖ್ ಪ್ರವಾಸಕ್ಕೆ ತೆರಳಿದೆ. ಇಲ್ಲಿ ಪ್ರಶ್ನಾರ್ಹವಾದದ್ದು ಅವರ ಭೇಟಿಯ ಸ್ಥಳ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದ್ದು, ಇದು ಕೇಂದ್ರ ನೇಮಿತ

ಕರಾವಳಿಯಲ್ಲಿ ಪ್ರವಾಹದ ಭೀತಿ ಇದ್ದರೂ ಶಾಸಕರ ಲೆಹ್ ಲಡಾಖ್ ಪ್ರವಾಸ…!! Read More »