ಕರಾವಳಿ

ಸೆ.02 ಮಂಗಳೂರಿಗೆ ಪ್ರಧಾನಿ ಮೋದಿ| ಪ್ರಮುಖ ವಿಷಯಗಳ ಚರ್ಚೆ ಸಾಧ್ಯತೆ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದು, ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಸೆ. 2 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಸರ್ಕಾರದ ಅಧಿಕೃತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಧಾನಿ ಅಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮೋದಿ ಮಂಗಳೂರು ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು, ಪ್ರಧಾನಿ ಭದ್ರತಾ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ಪೂರ್ವ ಸಿದ್ಧತೆ ಮತ್ತು ಭದ್ರತೆ ವ್ಯವಸ್ಥೆ ಪರಿಶೀಲನೆ […]

ಸೆ.02 ಮಂಗಳೂರಿಗೆ ಪ್ರಧಾನಿ ಮೋದಿ| ಪ್ರಮುಖ ವಿಷಯಗಳ ಚರ್ಚೆ ಸಾಧ್ಯತೆ Read More »

ಮಂಗಳೂರು ಬೀಚ್ ಗೆ ಬರುವ ಪ್ರವಾಸಿಗರಿಗೆ ಮಹತ್ವದ ಆದೇಶ

ಮಳೆಯ ಅರ್ಭಟಕ್ಕೆ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ನೀರಿಗೆ ಇಳಿಯದಂತೆ ಮಂಗಳೂರು ಬೀಚ್‌ ಅಭಿವೃದ್ಧಿ ಸಮಿತಿ ಎಚ್ಚರಿಕೆ ನೀಡಿದೆ. ದೂರದಿಂದಲೆ ಸಮುದ್ರವನ್ನು ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ ಪ್ರತೀ ವರ್ಷದಂತೆ ಮೇ 15ರಿಂದ ಸೆ.15ರ ವರಗೆ ಯಾವುದೇ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರುತ್ತದೆ. ಈ ಸಮಯದಲ್ಲಿ ಯಾವುದೇ ವಾಟರ್ ಸ್ಪೋರ್ಟ್ಸ್ ನಡೆಸಲು ಅನುಮತಿ ಇರುವುದಿಲ್ಲ. ಹೀಗಾಗಿ ಪ್ರವಾಸಿಗರಿಗೆ ದೂರದಿಂದಲೇ ಬೀಚ್‌ ನೋಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಮುಂದೆ ಸಮುದ್ರದ ನೀರಿನ ಒತ್ತಡವನ್ನು ನೋಡಿಕೊಂಡು ನೀರಿಗಿಳಿಯಲು

ಮಂಗಳೂರು ಬೀಚ್ ಗೆ ಬರುವ ಪ್ರವಾಸಿಗರಿಗೆ ಮಹತ್ವದ ಆದೇಶ Read More »

ಅಕ್ರಮ ಮರಳು ಸಾಗಾಣಿಕೆಗೆ ಪೊಲೀಸರು ಮತ್ತು ಅಧಿಕಾರಿಗಳು ಕ್ರಮ ವಹಿಸಿ – ದ.ಕ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಅಕ್ರಮ ಮರಳು ಸಾಗಾಣಿಕೆ ತಡೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪೊಲೀಸರೊಂದಿಗೆ ತಂಡವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ಉಳ್ಳಾಲ, ಕೋಟೆ ಪುರ, ಸೋಮೇಶ್ವರ, ಉಚ್ಚಿಲ, ಪೇರಿಬೈಲು,ತಲಪಾಡಿ ಸೇರಿದಂತೆ ವಿವಿಧೆಡೆ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವರದಿಯಾಗುತ್ತಿದೆ, ಅದನ್ನು ತಡೆಗಟ್ಟಲು ಜಿಲ್ಲಾಡಳಿತ ಅತಿ ಕಠಿನ ಕ್ರಮಗಳನ್ನು ಕೈಗೊಂಡಿದ್ದು, ಅಧಿಕಾರಿಗಳ ನಿಯೋಜನೆ ಹಾಗೂ ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಈ ಸ್ಥಳಗಳಲ್ಲಿ ಅಳವಡಿಸ ಲಾಗಿರುವ ಸಿಸಿಟಿವಿಗಳನ್ನು ಪರಿಶೀಲಿಸಬೇಕು, ತಡರಾತ್ರಿ ಸಂಚರಿಸುವ

ಅಕ್ರಮ ಮರಳು ಸಾಗಾಣಿಕೆಗೆ ಪೊಲೀಸರು ಮತ್ತು ಅಧಿಕಾರಿಗಳು ಕ್ರಮ ವಹಿಸಿ – ದ.ಕ ಜಿಲ್ಲಾಧಿಕಾರಿ ಸೂಚನೆ Read More »

ರಸ್ತೆಗುಂಡಿಗೆ ಬಿದ್ದ‌ ಬಸ್ಸ್; ಯುವಕನ ಬೆನ್ನುಹುರಿ ಜಖಂ

ಸಮಗ್ರ ನ್ಯೂಸ್: ಮಂಗಳೂರಿನಿಂದ ಪುತ್ತೂರಿಗೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ರಸ್ತೆಯ ಅವ್ಯವಸ್ಥೆಯಿಂದಾಗಿ ಬೆನ್ನು ಹುರಿ ಮುರಿದುಕೊಂಡ ಘಟನೆ ಕಲ್ಲಡ್ಕದಲ್ಲಿ‌ ನಡೆದಿದೆ. ಸುಳ್ಯದ ಬೆಳ್ಳಾರೆ ಮೂಲದ ವಿಜಯಕುಮಾರ್ ಎಂಬವರು ಗಾಯಗೊಂಡವರು. ಇವರು ಮಂಗಳೂರಿನಿಂದ ಪುತ್ತೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸು ಒಮ್ಮಿಂದೊಮ್ಮೆಲೆ ಗುಂಡಿಗೆ ಬಿದ್ದು ಹಾರಿದ್ದು, ಹಿಂಬದಿ ಸೀಟಿನಲ್ಲಿದ್ದ ವಿಜಯ್ ಸೀಟಿನಿಂದ ಎಸೆಯಲ್ಪಟ್ಟು, ತನ್ನ ಸೊಂಟಕ್ಕೆ ಏಟು ತಗುಲಿ ಗಂಭೀರಗೊಂಡಿದ್ದಾರೆ. ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯ ಕುಮಾರ್ ರವರು ಸೀಟಿನಿಂದ ಮೇಲಕ್ಕೆ‌ ಎಸೆಯಲ್ಪಟ್ಟು ಬೀಳುವಾಗ ಬಸ್ಸಿನ

ರಸ್ತೆಗುಂಡಿಗೆ ಬಿದ್ದ‌ ಬಸ್ಸ್; ಯುವಕನ ಬೆನ್ನುಹುರಿ ಜಖಂ Read More »

ಸುಳ್ಯ: ತಾಲೂಕು ಕಚೇರಿ ಸುತ್ತಾಮುತ್ತಾ ರಾತ್ರಿ ಎಣ್ಣೆ ಪಾರ್ಟಿ ನಡೆಯುತ್ತಾ..?‌| ಹಗಲು ಆಡಳಿತ ಕಚೇರಿ, ರಾತ್ರಿ ಪುಂಡಪೋಕರ ಅಡ್ಡೆ!?

ಸಮಗ್ರ ನ್ಯೂಸ್: ತಾಲೂಕಿನ ಸಮಗ್ರ ಆಡಳಿತವನ್ನು ನೋಡಿಕೊಳ್ಳುವ ಸುಳ್ಯ ತಾಲೂಕು ದಂಡಾಧಿಕಾರಿಗಳ‌‌ ಕಚೇರಿ ರಾತ್ರಿ ವೇಳೆ ಪುಂಡಪೋಕರ ಅಡ್ಡೆಯಾಗುತ್ತಿದೆಯಾ? ಹೀಗೊಂದು ಪ್ರಶ್ನೆ ಇದೀಗ ಕಾಡುತ್ತಿದೆ. ಹೌದು, ಸುಳ್ಯ ತಾಲೂಕು ಕಚೇರಿ ಹಗಲು ಹೊತ್ತಿನಲ್ಲಿ ಆಡಳಿತ ವರ್ಗದವರ ಕಚೇರಿ ಕೆಲಸಗಳಿಗೆ ಸೀಮಿತವಾಗಿದ್ದರೆ ಸಂಜೆ ಮಬ್ಬುಹರಿಯುತ್ತಿದ್ದಂತೆ ಪುಂಡರ ಆವಾಸ ತಾಣವಾಗಿ ಬದಲಾಗುತ್ತದೆ. ಸಂಜೆ ವೇಳೆಗೆ ಕಚೇರಿ ಮುಗಿಸಿ ಅಧಿಕಾರಿಗಳು ತಮ್ಮ ನಿವಾಸದತ್ತ ತೆರಳುತ್ತಿದ್ದಂತೆ ತಾಲೂಕು ಕಚೇರಿ ಸುತ್ತಮುತ್ತ ಅನೈತಿಕ ಚಟುವಟಿಕೆಗಳು ಗರಿಗೆದರುತ್ತವೆ. ಇದಕ್ಕೆ ಪೂಕರವಾಗಿ ಕೆಲವೊಂದು ದೃಶ್ಯಗಳು ಸಾಕ್ಷಿಯಾಗಿವೆ. ಕಚೇರಿಯ

ಸುಳ್ಯ: ತಾಲೂಕು ಕಚೇರಿ ಸುತ್ತಾಮುತ್ತಾ ರಾತ್ರಿ ಎಣ್ಣೆ ಪಾರ್ಟಿ ನಡೆಯುತ್ತಾ..?‌| ಹಗಲು ಆಡಳಿತ ಕಚೇರಿ, ರಾತ್ರಿ ಪುಂಡಪೋಕರ ಅಡ್ಡೆ!? Read More »

ಕಡಬ: ರಸ್ತೆಯಿಲ್ಲದೆ ರೋಗಿಷ್ಟ ತಾಯಿಯನ್ನು ಆಸ್ಪತ್ರೆಗೆ ಹೊತ್ತು ಸಾಗಿಸಿದ ಮಕ್ಕಳು| ಸಚಿವ ಎಸ್.ಅಂಗಾರರ ಕ್ಷೇತ್ರದಲ್ಲಿ ಮತ್ತೊಂದು ಕರುಣಾಜನಕ ದುಸ್ಥಿತಿ

ಸಮಗ್ರ ನ್ಯೂಸ್: ರಸ್ತೆ ಸಂಪರ್ಕವಿಲ್ಲದೆ ರೋಗಪೀಡಿತ ವೃದ್ಧ ತಾಯಿಯನ್ನು ಮಕ್ಕಳು ಹೊತ್ತುಕೊಂಡು ಆಸ್ಪತ್ರೆಗೆ ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಕಲ್ಲುಗುಡ್ಡೆ ಸಮೀಪದ ಬಳಕ್ಕ ಎಂಬಲ್ಲಿ ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ. ಘಟನೆಯ ವಿವರ:ಕಡಬ ತಾಲೂಕಿನ ಕಲ್ಲುಗುಡ್ಡೆ-ನೂಜಿಬಾಳ್ತಿಲ -ಬಳಕ್ಕ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಮಳೆಯಿಂದಾಗಿ ಹದಗೆಟ್ಟು ಹೋಗಿದೆ. ಇಲ್ಲಿನ ಜನರು ತಮ್ಮ ತಮ್ಮ ವಾಹನಗಳನ್ನು

ಕಡಬ: ರಸ್ತೆಯಿಲ್ಲದೆ ರೋಗಿಷ್ಟ ತಾಯಿಯನ್ನು ಆಸ್ಪತ್ರೆಗೆ ಹೊತ್ತು ಸಾಗಿಸಿದ ಮಕ್ಕಳು| ಸಚಿವ ಎಸ್.ಅಂಗಾರರ ಕ್ಷೇತ್ರದಲ್ಲಿ ಮತ್ತೊಂದು ಕರುಣಾಜನಕ ದುಸ್ಥಿತಿ Read More »

ಸುಳ್ಯ: ಕಾರಿನಲ್ಲೇ‌ ಮಗುವಿಗೆ ಜನ್ಮನೀಡಿದ ಮಹಿಳೆ

ಸಮಗ್ರ ನ್ಯೂಸ್: ಗರ್ಭಿಣಿ ಮಹಿಳೆಯೋರ್ವರು ಮನೆಯಲ್ಲಿ ಹೆರಿಗೆ ನೋವು ಕಾಣಿಸಿ ಆಸ್ಪತ್ರೆಗೆ ಕರೆತರುವ ವೇಳೆ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಸುಳ್ಯದಲ್ಲಿ ಇಂದು ಮುಂಜಾನೆ ನಡೆದಿದೆ. ಅರಂಬೂರು ನಿವಾಸಿ ಅಯಾಜ್ ಎಂಬವರ ಪತ್ನಿ ಸಫಿಯಾ ಕಾರಿನಲ್ಲಿ ಹೆರಿಗೆಯಾದ ಮಹಿಳೆ. ಈಕೆ ನಿನ್ನೆ ಪುತ್ತೂರಿನ ಸಂಬಂಧಿಕರ ಮನೆಗೆ ಸಫಿಯಾ ಮತ್ತು ಮನೆಯವರು ತೆರಳಿದ್ದು ರಾತ್ರಿ ಹನ್ನೊಂದು ಗಂಟೆಗೆ ಅರಂಬೂರಿನ ಅವರ ಮನೆಗೆ ಬಂದಿದ್ದರು. ರಾತ್ರಿ 2:30ರ ಸಮಯದಲ್ಲಿ ಸಫಿಯಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ವೈದ್ಯರು ನೀಡಿದ

ಸುಳ್ಯ: ಕಾರಿನಲ್ಲೇ‌ ಮಗುವಿಗೆ ಜನ್ಮನೀಡಿದ ಮಹಿಳೆ Read More »

ಆರ್ ಜೆ ತ್ರಿಶೂಲ್ ವಿರುದ್ದ ಸುಳ್ಯ ನ.ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ದೂರು| ಸಾಮಾಜಿಕ ಕಳಕಳಿಯನ್ನು ಹತ್ತಿಕ್ಕುವ ಪ್ರಯತ್ನವೇ?

ಸಮಗ್ರ ನ್ಯೂಸ್: ಮತ ಹಾಕಿ ಅಧಿಕಾರಕ್ಕೆ ಏರಿಸಿದ ಮತದಾರರಿಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರವೂ ಇರುತ್ತದೆ. ಆದರೆ ನಮ್ಮ ಸುಳ್ಯದ ವಿಷಯದಲ್ಲಿ ಇದು ಹಾಗಾಗದು. ಯಾಕೆಂದರೆ ಇಲ್ಲಿ ನೀವು ಓಟು ಮಾತ್ರ ನೀಡಬಹುದು. ಆದರೆ ಮುಂದುವರಿದು ಗೆದ್ದ ನಮ್ಮನ್ನು ಕೆಲಸ ಮಾಡದಿದ್ದರೆ ಪ್ರಶ್ನಿಸಬಾರದು. ಹಾಗೇನಾದರೂ ಪ್ರಶ್ನಿಸಿದಲ್ಲಿ ನೀವು ವಿರೋದ ಪಕ್ಷಗಳ ಗುಲಾಮರಾಗ್ತೀರಾ. ಅಥವಾ ಕಮ್ಯೂನಿಸ್ಟ್‌ ಆಗ್ತೀರಾ. ಹೌದು, ಸುಳ್ಯದಲ್ಲಿ ಕಳೆದ‌ ಕೆಲವು ದಿನಗಳಿಂದ ಸುದ್ದಿ ಮಾಡ್ತಿರೋದು ನ.ಪಂ ಅಧ್ಯಕ್ಷರು ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿರುವ ಯುವಕನೋರ್ವನ ನಡುವಿನ ಸೋಶಿಯಲ್

ಆರ್ ಜೆ ತ್ರಿಶೂಲ್ ವಿರುದ್ದ ಸುಳ್ಯ ನ.ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ದೂರು| ಸಾಮಾಜಿಕ ಕಳಕಳಿಯನ್ನು ಹತ್ತಿಕ್ಕುವ ಪ್ರಯತ್ನವೇ? Read More »

ಆರ್ ಜೆ. ತ್ರಿಶೂಲ್ ವಿರುದ್ಧ ವಿನಯ ಕುಮಾರ್ ಕಂದಡ್ಕ ದೂರು ಹಿನ್ನಲೆ,ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡನೆ*

ಸುಳ್ಯದ ಶ್ರೀರಾಂ ಪೇಟೆಯಿಂದ ಜೂನಿಯರ್ ಕಾಲೇಜಿಗೆ ತಿರುಗುವ ರಸ್ತೆಯ ಜಂಕ್ಷನ್ ನಲ್ಲಿ ದೊಡ್ಡ ಗುಂಡಿಯಾಗಿದ್ದು ಈ ಕುರಿತು ಆರ್ ಜೆ. ತ್ರಿಶೂಲ್ ಅವರು ಇತ್ತೀಚೆಗೆ ರಸ್ತೆ ಆವ್ಯವಸ್ಥೆಯ ಕುರಿತು ವಿಡಿಯೋ ಬಿಟ್ಟಿದ್ದರು ಮತ್ತು ಅವರಿಬ್ಬರೂ ಕರೆಯ ಮೂಲಕ ಮಾತನಾಡುವ ಆಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆಡಿಯೋದಲ್ಲಿ ಆರ್ ಜೆ . ತ್ರಿಶೂಲ್ ಅವರು ಅಧ್ಯಕ್ಷರಲ್ಲಿ ಅಷ್ಟು ದೊಡ್ಡ ದೊಡ್ಡ ಗುಂಡಿಗಳಿದೆ. ಅದನ್ನು ಸರಿಪಡಿಸಿ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಿದಾಗ ನಗರ ಪಂಚಾಯತ್ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕರವರು

ಆರ್ ಜೆ. ತ್ರಿಶೂಲ್ ವಿರುದ್ಧ ವಿನಯ ಕುಮಾರ್ ಕಂದಡ್ಕ ದೂರು ಹಿನ್ನಲೆ,ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡನೆ* Read More »

ಮಂಗಳೂರು: ಕಲ್ಲುಗಳನ್ನು ಹಾಕಿ ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿ – ಸಾರ್ವಜನಿಕರಿಂದ ಮೆಚ್ಚುಗೆ

ಮಂಗಳೂರು: ಕಂಕನಾಡಿ ಹೂವಿನ ಮಾರುಕಟ್ಟೆ ಬಳಿ ವಿದ್ಯಾರ್ಥಿಯೊಬ್ಬ ರಸ್ತೆ ಬದಿಯ ಗುಂಡಿಗೆ ಕಲ್ಲುಗಳನ್ನು ಹಾಕಿ ಮುಚ್ಚಿದ ಘಟನೆ ನಡೆದಿದ್ದು, ಬಾಲಕನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಂಕ್ರಿಟ್ ರಸ್ತೆಯಂಚಿನಲ್ಲಿ ಗುಂಡಿಯಿಂದ ಬೈಕ್ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿ ರಸ್ತೆಯ ಗುಂಡಿಯನ್ನು ಮುಚ್ಚಿದ್ದಾನೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಎಂ. ಜಿ. ಹೆಗಡೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ನಾಳೆಯ ಭರವಸೆಯ ಬೆಳಕು ಈ ವಿದ್ಯಾರ್ಥಿ. ಆತನಿಗೆ ಶುಭವಾಗಲಿ ಎಂದು ಬರೆದು ಕೊಂಡಿದ್ದು, ಇದೀಗ

ಮಂಗಳೂರು: ಕಲ್ಲುಗಳನ್ನು ಹಾಕಿ ರಸ್ತೆ ಗುಂಡಿ ಮುಚ್ಚಿದ ವಿದ್ಯಾರ್ಥಿ – ಸಾರ್ವಜನಿಕರಿಂದ ಮೆಚ್ಚುಗೆ Read More »