ಕರಾವಳಿ

ಕೊನೆಗೂ ಸುರತ್ಕಲ್- ಹೆಜಮಾಡಿ‌ ಟೋಲ್ ಗೇಟ್ ಗೆ ವಿವಾಹ ಮಾಡಿಸಿದ ಬಿಜೆಪಿ ‌ಸರ್ಕಾರ| ಹೀಗೊಂದು ವೆಡ್ಡಿಂಗ್ ಕಾರ್ಡ್ ವೈರಲ್!!

ಸಮಗ್ರ ನ್ಯೂಸ್: ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ಗೇಟ್ ಗೆ ಬಿಜೆಪಿ ಸರ್ಕಾರದ ಕೃಪೆಯಿಂದ ಶುಭ ವಿವಾಹ. ಇಂತಹದ್ದೊಂದು ವಿವಾಹ ಆಮಂತ್ರಣದ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸುರತ್ಕಲ್ ನ ಎನ್ ಐಟಿಕೆ ಬಳಿಯಿದ್ದ ಅಕ್ರಮ ಟೋಲ್ ಗೇಟ್ ಇತ್ತೀಚೆಗೆ ಸಾರ್ವಜನಿಕರ ಭಾರೀ ಆಕ್ರೋಶದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಆದರೆ, ಇದಾದ ಬಳಿಕ ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಗೇಟ್ ನ ಟೋಲ್ ಅನ್ನೂ ಸೇರಿಸಿ ದುಪ್ಪಟ್ಟು ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಟೋಲ್

ಕೊನೆಗೂ ಸುರತ್ಕಲ್- ಹೆಜಮಾಡಿ‌ ಟೋಲ್ ಗೇಟ್ ಗೆ ವಿವಾಹ ಮಾಡಿಸಿದ ಬಿಜೆಪಿ ‌ಸರ್ಕಾರ| ಹೀಗೊಂದು ವೆಡ್ಡಿಂಗ್ ಕಾರ್ಡ್ ವೈರಲ್!! Read More »

ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದವನ ಶವ ಗುರುವಾಯನಕೆರೆಯಲ್ಲಿ ಪತ್ತೆ…!1

ಸಮಗ್ರ ನ್ಯೂಸ್ :ಗೆಳೆಯರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದೇನೆ ಎಂದು ಹೇಳಿದ್ದ ಆಟೋ ರಿಕ್ಷಾ ಚಾಲಕನ ಮೃತದೇಹ ಗುರುವಾಯನಕೆರೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಆಟೊ ರಿಕ್ಷಾ ಡ್ರೈವರ್ ಪ್ರವೀಣ್ ಎಂದು ಗುರುತಿಸಲಾಗಿದ್ದು, ಇವರು ನ. 30ರ ಮುಂಜಾನೆ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆ ಕೂಡಲೇ ಸ್ನೇಹಿತರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದಾಗ ಗುರುವಾಯನಕೆರೆಯ ಕೆರೆಯ ಬಳಿ ಪ್ರವೀಣ್ ರಿಗೆ ಸೇರಿದ ಕೆಲವು ದಾಖಲೆಗಳು ಪತ್ತೆಯಾಗಿದ್ದವು. ಇದರಿಂದಾಗಿ ಕೆರೆಗೆ ಹಾರಿ ಅವರು

ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದವನ ಶವ ಗುರುವಾಯನಕೆರೆಯಲ್ಲಿ ಪತ್ತೆ…!1 Read More »

ಬೆಳ್ತಂಗಡಿ: ಅಡಿಕೆ‌ ಮರ ಬಿದ್ದು ಕಾರ್ಮಿಕ ಸಾವು

ಸಮಗ್ರ ನ್ಯೂಸ್: ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ತಲೆ ಮೇಲೆ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಮುಂಡಾಜೆ ಗ್ರಾಮದ ಕುಂಟಾಲಪಳಿಕೆ ನಿವಾಸಿ ಅಣ್ಣು ನಲ್ಕೆ (66) ಎಂದು ಗುರುತಿಸಲಾಗಿದೆ. ಇವರು ಕುವೆತ್ಯಾರು ನಿವಾಸಿ ನವೀನ್ ಎಂಬವರ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ತೋಟದ ಹಳೆಯ ಅಡಿಕೆ ಮರಗಳನ್ನು ನೌಫಾಲ್ ಎಂಬರು ಕಡಿಯುತ್ತಿದ್ದರು. ಈ ವೇಳೆ ಅಡಿಕೆ ಮರವೊಂದು ಆಕಸ್ಮಿಕವಾಗಿ ಅಣ್ಣು ಅವರ ತಲೆ ಮೇಲೆ ಬಿದ್ದಿದ್ದು

ಬೆಳ್ತಂಗಡಿ: ಅಡಿಕೆ‌ ಮರ ಬಿದ್ದು ಕಾರ್ಮಿಕ ಸಾವು Read More »

ಸುಳ್ಯ: ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ 8 ವರ್ಷದ ಬಾಲಕಿ ಸಾವು

ಸುಳ್ಯ: ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ ಘಟನೆ ಸುಳ್ಯದ ಅರಂತೋಡು ಗ್ರಾಮದಲ್ಲಿ ನ. 30ರಂದು ಸಂಭವಿಸಿದೆ. ಅರಂತೋಡು ಪೇಟೆಯಲ್ಲಿ ಹೊಟೇಲ್ ನಡೆಸುತ್ತಿರುವ ಯೋಗೀಶ್ ಅವರ ಪುತ್ರಿ ಖುಷಿ (8) ಮೃತ ಬಾಲಕಿ. ಅರಂತೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಬಾಲಕಿ ಖುಷಿ, ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಬಾಲಕಿ ತಂದೆ ಯೋಗೀಶ್, ತಾಯಿ ಲಲಿತಾರನ್ನು

ಸುಳ್ಯ: ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ 8 ವರ್ಷದ ಬಾಲಕಿ ಸಾವು Read More »

ಕರಾವಳಿಯಲ್ಲಿ ಮತ್ತೊಂದು ಧರ್ಮದಂಗಲ್ ಶುರು| ಲವ್ ಜಿಹಾದ್ ವಿರುದ್ದ ಹಿಂಜಾವೇ ಪೋಸ್ಟರ್ ಅಭಿಯಾನ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಮತ್ತೊಂದು ಧರ್ಮ ದಂಗಲ್‌ ಶುರುವಾಗಿದ್ದು, ಲವ್‌ ಜಿಹಾದ್‌ ವಿರುದ್ಧ ಹಿಂದೂ ಜಾಗರಣ ವೇದಿಕೆ ಜಾಗೃತಿ ಮೂಡಿಸಲು ಮುಂದಾಗಿದ್ದು ದೆಹಲಿ ಶ್ರದ್ಧಾ ಕೇಸ್‌ ಮುಂದಿಟ್ಟುಕೊಂಡು ಇದೀಗ ಹೊಸ ಪೋಸ್ಟರ್‌ ವಾರ್‌ ಮೂಲಕ ಕಿಚ್ಚು ಹಚ್ಚಿದ್ದಾರೆ. ಈ ಪೋಸ್ಟರ್‌ನಲ್ಲಿ ‘ಕಣ್ಣಿದ್ದು ಕುರುಡಾಗಬೇಡಿ ತಿಳಿದು ತಪ್ಪು,ಮಾಡಬೇಡಿ.. ಹಿಂದೂ ಯುವತಿಯ ಜೊತೆ ತಿರುಗಾಡಿದ್ರೆ ಹುಷಾರ್‌..! ಶವ ಯಾತ್ರೆ ಮಾಡಲಾಗುತ್ತದೆ’ ಎಂದು ಮುಸ್ಲಿಂ ಸಮುದಾಯದ ಯುವಕರಿಗೆ ಭಜರಂಗದಳ ಸಂಚಾಲಕ ಪುನೀತ್‌ ಅತ್ತಾವರ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ‘ಇನ್ನೂ ಪದೇ ಪದೇ

ಕರಾವಳಿಯಲ್ಲಿ ಮತ್ತೊಂದು ಧರ್ಮದಂಗಲ್ ಶುರು| ಲವ್ ಜಿಹಾದ್ ವಿರುದ್ದ ಹಿಂಜಾವೇ ಪೋಸ್ಟರ್ ಅಭಿಯಾನ Read More »

ಭೀಕರ ಅಪಘಾತಕ್ಕೆ 6 ಮಂದಿ ಬಲಿ| 15ಕ್ಕೂ ಹೆಚ್ಚು ಜನರು ಗಂಭೀರ

ಸಮಗ್ರ ನ್ಯೂಸ್: ಬಸ್​ ಮತ್ತು ಟ್ರಕ್​ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೇಚ್​ನ ತಪ್ಪೆ ಸಿಪಾಹ್​ನಲ್ಲಿ ನಡೆದಿದೆ. ಗಾಯಗೊಂಡವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಟ್ರಕ್​ ಡ್ರೈವರ್​ ತಪ್ಪು ದಾರಿಯಲ್ಲಿ ಬಂದ ಕಾರಣ ಬಸ್​ಗೆ ಡಿಕ್ಕಿಯಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿರುವವರಿಗೆ ಸಿಎಂ ಯೋಗಿ ಆದಿತ್ಯನಾಥ್​ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸರಿಯಾದ

ಭೀಕರ ಅಪಘಾತಕ್ಕೆ 6 ಮಂದಿ ಬಲಿ| 15ಕ್ಕೂ ಹೆಚ್ಚು ಜನರು ಗಂಭೀರ Read More »

ಹೆಚ್ಚುವರಿ ಟ್ರಾಫಿಕ್ ಸಿಬ್ಬಂದಿ ನೇಮಿಸಲು ಮೊಯಿದೀನ್ ಬಾವಾ ಮನವಿ

ಸುರತ್ಕಲ್: ಮಂಗಳೂರಿನ ಯೆಯ್ಯಾಡಿ ಪ್ರದೇಶದಲ್ಲಿ ಬೆಳಗ್ಗಿನ ಸಮಯ ವಾಹನ ದಟ್ಟಣೆ ಜಾಸ್ತಿಯಾಗಿದ್ದು ಪ್ರತಿ ದಿನ ಆ ಪ್ರದೇಶದಲ್ಲಿ ಸಂಚರಿಸುವ ಜನ ಸಾಮಾನ್ಯರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಕದ್ರಿ ಟ್ರಾಫಿಕ್ ಪೋಲಿಸ್ ಅಧಿಕಾರಿಗಳ ಜೊತೆಗೆ ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಮಾತುಕತೆ ನಡೆಸಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ ಜೊತೆಗಿದ್ದರು.

ಹೆಚ್ಚುವರಿ ಟ್ರಾಫಿಕ್ ಸಿಬ್ಬಂದಿ ನೇಮಿಸಲು ಮೊಯಿದೀನ್ ಬಾವಾ ಮನವಿ Read More »

ಮಂಗಳೂರು: ‘ಬೀಪ್ ಬಿರಿಯಾನಿ ದೊರೆಯುತ್ತದೆ’ ವಿಡಿಯೋ ವೈರಲ್| ಹೊಟೇಲ್ ಮಾಲಕ ಪೊಲೀಸ್ ವಶ

ಮಂಗಳೂರು: ಮುಡಿಪು ಇಲ್ಲಿನ ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ದನದ ಮಾಂಸದ ಬಿರಿಯಾನಿ ಇದೆ ಎಂದು ವೀಡಿಯೋ ಮಾಡಿ ಹರಿ ಬಿಟ್ಟು ವ್ಯಾಪಾರ ಮಾಡುತಿದ್ದ ಹೋಟೆಲಿಗೆ ಹಿಂದು ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದ್ದಾರೆ. ಪೊಲೀಸರ ಜೊತೆಗೆ ಹಿಂ.ಜಾ.ವೇ ಕಾರ್ಯಕರ್ತರು ದಾಳಿ ಮಾಡಿ ದನದ ಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ಪರಿಶೀಲಿಸಿದ್ದಾರೆ‌. ಈ ವೇಳೆ ಗೋಮಾಂಸವೆಂದು ದೃಢಪಟ್ಟಿದ್ದು, ಹೋಟೆಲ್ ಮಾಲಕ ಹುಸೇನ್ ಎಂಬವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು: ‘ಬೀಪ್ ಬಿರಿಯಾನಿ ದೊರೆಯುತ್ತದೆ’ ವಿಡಿಯೋ ವೈರಲ್| ಹೊಟೇಲ್ ಮಾಲಕ ಪೊಲೀಸ್ ವಶ Read More »

“ಬಿಜೆಪಿ ಶಾಸಕ ಗರುಡಾಚಾರ್ ಸೌಹಾರ್ದತೆಯ ಪಾಠ ಕಲಿಸಿದ್ದಾರೆ” -ಮೊಯಿದೀನ್ ಬಾವಾ

ಸುರತ್ಕಲ್: “ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ರವರು ದೇವಸ್ಥಾನ ಮುಂಭಾಗ ವ್ಯಾಪಾರ ಮಾಡುವುದನ್ನು ವಿರೋಧಿಸುವ ಶಕ್ತಿಗಳಿಗೆ ಕಾನೂನು ರೀತಿಯಲ್ಲಿ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ, ಈ ಮೂಲಕ ಸರ್ವ ಧರ್ಮೀಯರ ಸೌಹಾರ್ದತೆಯ ಸಂದೇಶವನ್ನು ಸಾರುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಡವುವ ಶಕ್ತಿಗಳಿಗೆ ಸರಿಯಾಗಿ ಎಚ್ಚರಿಕೆಯನ್ನು ನೀಡಿದ್ದಾರೆ” ಎಂದು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ ಹೇಳಿದ್ದಾರೆ. “ಯಾವುದೇ ಶಕ್ತಿಗಳಿಗೆ ಹೆದರದೆ, ಹಿಂಜರಿಕೆ ತೋರದೆ ಪ್ರಜಾಪ್ರಭುತ್ವ ಸಂದೇಶವನ್ನು ಎತ್ತಿ ಹಿಡಿದಿದ್ದಾರೆ, ಬಿಜೆಪಿ

“ಬಿಜೆಪಿ ಶಾಸಕ ಗರುಡಾಚಾರ್ ಸೌಹಾರ್ದತೆಯ ಪಾಠ ಕಲಿಸಿದ್ದಾರೆ” -ಮೊಯಿದೀನ್ ಬಾವಾ Read More »

ಯಕ್ಷರಂಗದ ಧ್ರುವತಾರೆ, ಮಾತಿನ ಮೋಡಿಗಾರ ಕುಂಬಳೆ ಸುಂದರ ರಾವ್ ಇನ್ನಿಲ್ಲ

ಸಮಗ್ರ ನ್ಯೂಸ್: ಯಕ್ಷರಂಗದಲ್ಲಿ ಮಾತಿನ ಮನೆ ಕಟ್ಟಿದ ಹಿರಿಯ ಕಲಾವಿದ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬಳೆ ಸುಂದರ್ ರಾವ್(88) ನ.30ರ ಮುಂಜಾನೆ ನಿಧನ ಹೊಂದಿದ್ದಾರೆ. ಯಾವುದೇ ಬಗೆಯ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದ ಅವರಿಗೆ ಪಾದುಕಾ ಪಟ್ಟಾಭಿಷೇಕದ ಭರತ, ವಿರಾಟ ಪರ್ವದ ಉತ್ತರ ಕುಮಾರ, ಕೃಷ್ಣ ಸಂಧಾನದ ಕೃಷ್ಣ, ದಕ್ಷಯಜ್ಞದ ಈಶ್ವರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ದೀಕ್ಷಿತ, ತ್ರಿಪುರ ಮಥನದ ಚಾರ್ವಾಕ ಮುಂತಾದ ಪಾತ್ರಗಳು ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು. ಭಕ್ತಿ, ಕರುಣಾರಸದ ಪಾತ್ರಗಳನ್ನು

ಯಕ್ಷರಂಗದ ಧ್ರುವತಾರೆ, ಮಾತಿನ ಮೋಡಿಗಾರ ಕುಂಬಳೆ ಸುಂದರ ರಾವ್ ಇನ್ನಿಲ್ಲ Read More »