ಕರಾವಳಿ

ಕರಾವಳಿಗರೇ ಎಚ್ಚರ| ಮುಂದಿನ 48 ಗಂಟೆಗಳಲ್ಲಿ ಭಾರೀ ಬಿಸಿಗಾಳಿ ಬೀಸಲಿದೆ ಜೋಕೆ

ಸಮಗ್ರ ನ್ಯೂಸ್: ಬೇಸಿಗೆ ಪ್ರಾರಂಭದಲ್ಲೇ ಅತೀ ಹೆಚ್ಚು ಕರಾವಳಿಯಲ್ಲಿ ಸೆಖೆ ಹೆಚ್ಚಾಗಿದ್ದು, ಇದೀಗ ದಕ್ಷಿಣಕನ್ನಡ ಉಡುಪಿ ಸಹಿತ ಕರಾವಳಿ ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಬಲವಾದ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೆ ಈ ಅವಧಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರುವ ಸಾಧ್ಯತೆಗಳಿದ್ದು, ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶೇಷ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯ

ಕರಾವಳಿಗರೇ ಎಚ್ಚರ| ಮುಂದಿನ 48 ಗಂಟೆಗಳಲ್ಲಿ ಭಾರೀ ಬಿಸಿಗಾಳಿ ಬೀಸಲಿದೆ ಜೋಕೆ Read More »

ಕಾರ್ಕಳ: ಹೆಲ್ಮೆಟ್ ಧರಿಸದೇ ಮುಸ್ಲಿಂ ಮಾಲೀಕತ್ವದ ಬೈಕ್ ಓಡಿಸಿದ ಸುನಿಲ್ ಕುಮಾರ್| ಸಚಿವರ ನಿಯಮ ಉಲ್ಲಂಘನೆ ಜಾಲತಾಣಗಳಲ್ಲಿ ಟ್ರೊಲ್

ಸಮಗ್ರ ನ್ಯೂಸ್: ಕಾರ್ಕಳದಲ್ಲಿ ನಡೆದ ವಿಜಯ ಸಂಕಲ್ಪ ಬೈಕ್ ರ್ಯಾಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಸುನೀಲ್ ಕುಮಾರ್ ಹೆಲ್ಮೆಟ್ ಧರಿಸದೆ ಮುಸ್ಲಿಂ ಮಾಲೀಕತ್ವ ಬೈಕ್‌ನಲ್ಲಿ ಸಂಚಾರ ನಡೆಸಿ, ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಟ್ರೋಲ್‌ ಮಾಡಲಾಗುತ್ತಿದೆ. ಮುಂಬರುವ ವಿಧಾನ ಸಭಾ ಚುನಾವಣೆಗೆ ಮತದಾರರನ್ನು ಸೆಳೆಯಲು ಕಾರ್ಕಳ ನಗರದಲ್ಲಿ ವಿಜಯ ಸಂಕಲ್ಪ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಬೈಕ್ ಜಾಥಾ ಭಾಗಿಯಾದವರು ಯಾರು ಹೆಲ್ಮೆಟ್ ಧರಿಸಿರಲಿಲ್ಲ. ಕಾರ್ಯಕರ್ತರು ಅಲ್ಲದೇ ಸಚಿವ ಸುನೀಲ್ ಕುಮಾರ್ ಸಹ ಹೆಲ್ಮೆಟ್ ಧರಿಸಿರಲಿಲ್ಲ. ಅಷ್ಟೆ ಅಲ್ಲದೇ

ಕಾರ್ಕಳ: ಹೆಲ್ಮೆಟ್ ಧರಿಸದೇ ಮುಸ್ಲಿಂ ಮಾಲೀಕತ್ವದ ಬೈಕ್ ಓಡಿಸಿದ ಸುನಿಲ್ ಕುಮಾರ್| ಸಚಿವರ ನಿಯಮ ಉಲ್ಲಂಘನೆ ಜಾಲತಾಣಗಳಲ್ಲಿ ಟ್ರೊಲ್ Read More »

ಸುಳ್ಯದಲ್ಲೇ ಹೀಗೇಕೆ? ಹೊಸಸೇತುವೆ ರಚನೆಗೆ ಸಿಗಲಿಲ್ಲ ಅನುದಾನ| ಕೊಂಬಾರಿನಲ್ಲಿ ಕುಸಿದು ಬಿದ್ದ ಕಿರು ಸೇತುವೆ|

ಸಮಗ್ರ ನ್ಯೂಸ್: ನೀರಿನ ಪೈಪ್ ಅಳವಡಿಸುವ ಸಲುವಾಗಿ ಗುಂಡಿ ಅಗೆಯುತ್ತಿದ್ದ ಜೆಸಿಬಿಯೊಂದು ಹಳೆಯ ಕಿರು ಸೇತುವೆ ಮೇಲೆ ಹೋದ ಪರಿಣಾಮ ಸೇತುವೆ ಮುರಿದು ಬಿದ್ದ ಘಟನೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ತಾಲೂಕಿನ ಕೊಂಬಾರಿನಲ್ಲಿ ಇಂದು ನಡೆದಿದೆ. ಕಡಬ ತಾಲೂಕಿನ ಕೊಂಬಾರು ಗ್ರಾಮದಿಂದ ಕೆಂಜಳಕ್ಕೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ಪ್ರಮುಖ ರಸ್ತೆಯಲ್ಲಿನ ಹಳೆ ಸೇತುವೆ ಇದಾಗಿದ್ದು ಈ ಹಿಂದೆ ಜೆಸಿಬಿ ಹೋದ ಹಿನ್ನೆಲೆಯಲ್ಲಿ ಕಿರು ಸೇತುವೆ ಮುರಿದು ಬಿದ್ದಿತ್ತು. ಬಳಿಕ ಗ್ರಾಮಸ್ಥರೇ ಕಬ್ಬಿಣದ ಶೀಟ್,ಮರದ ಹಲಗೆ

ಸುಳ್ಯದಲ್ಲೇ ಹೀಗೇಕೆ? ಹೊಸಸೇತುವೆ ರಚನೆಗೆ ಸಿಗಲಿಲ್ಲ ಅನುದಾನ| ಕೊಂಬಾರಿನಲ್ಲಿ ಕುಸಿದು ಬಿದ್ದ ಕಿರು ಸೇತುವೆ| Read More »

ಮಂಗಳೂರು ಚಿನ್ನದ ಅಂಗಡಿ ಸಿಬ್ಬಂದಿ ಕೊಲೆ ಪ್ರಕರಣ| ಕೇರಳ ಮೂಲದ ಆರೋಪಿಯ ಸೆರೆ

ಸಮಗ್ರ ನ್ಯೂಸ್: ಮಂಗಳೂರು ನಗರದ ಚಿನ್ನಾಭರಣದ ಅಂಗಡಿಯೊಂದರ ಸಿಬ್ಬಂದಿಯನ್ನು ಫೆ.3ರಂದು ಮಧ್ಯಾಹ್ನ ಚೂರಿಯಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಕೇರಳ ಮೂಲದ ಕೊಯಿಲಾಂಡಿಯ ಶಿಫಾಝ್ (33) ಎಂಬಾತನನ್ನು ಗುರುವಾರ ಕಾಸರಗೋಡಿನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಹಂಪನಕಟ್ಟೆಯ ‘ಮಂಗಳೂರು ಜ್ಯುವೆಲ್ಲರ್ಸ್‌’ನಲ್ಲಿ ಕೆಲಸ ಮಾಡುತ್ತಿದ್ದ ಅತ್ತಾವರ ನಿವಾಸಿಯಾಗಿದ್ದ ರಾಘವೇಂದ್ರ ಆಚಾರ್ಯ (50) ರನ್ನು ಫೆ.3ರಂದು ಕೊಲೆ ಮಾಡಲಾಗಿತ್ತು.ಅಂದು ಮಧ್ಯಾಹ್ನ 1:30ಕ್ಕೆ ತಾನು ಊಟಕ್ಕೆ ತೆರಳಿದ್ದು, ಅಪರಾಹ್ನ 3:44ರ ವೇಳೆಗೆ ಮರಳಿ ಅಂಗಡಿಯ ಬಳಿ ಬಂದು ಕಾರು ನಿಲ್ಲಿಸಿದಾಗ ‘ತನಗೆ ಚೂರಿಯಿಂದ

ಮಂಗಳೂರು ಚಿನ್ನದ ಅಂಗಡಿ ಸಿಬ್ಬಂದಿ ಕೊಲೆ ಪ್ರಕರಣ| ಕೇರಳ ಮೂಲದ ಆರೋಪಿಯ ಸೆರೆ Read More »

ಕಡಬ: ಮತ್ತೆ ಪ್ರತ್ಯಕ್ಷಗೊಂಡ ಒಂಟಿ‌ಸಲಗ; ಆತಂಕದಲ್ಲಿ ಗ್ರಾಮಸ್ಥರು

ಸಮಗ್ರ ನ್ಯೂಸ್: ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆಯಲ್ಲಿ ಒಂಟಿಸಲಗವನ್ನು ಹಿಡಿದ ಬಳಿಕ ಶಾಂತವಾಗಿದ್ದ ಕಡಬ ತಾಲೂಕಿನ ಕಲ್ಲುಗುಡ್ಡೆ, ಉದನೆ, ರೆಂಜಿಲಾಡಿ ಗ್ರಾಮಗಳಲ್ಲಿ ಇದೀಗ ಮತ್ತೊಂದು ಒಂಟಿಸಲಗ ಪ್ರತ್ಯಕ್ಷಗೊಂಡಿದೆ. ಕಲ್ಲುಗುಡ್ಡೆ-ಉದನೆ ಸಂಪರ್ಕ ರಸ್ತೆಯ ನಿಡ್ಡೋ ಬಳಿಯ ಅರಣ್ಯದಲ್ಲಿ ನಾಲ್ಕು ದಿನಗಳ ಹಿಂದೆ ಕಾಡಾನೆಯೊಂದು ವ್ಯಕ್ತಿಯೋರ್ವರಿಗೆ ಕಾಣಿಸಿದೆ ಎಂಬ ಮಾಹಿತಿ ಲಭಿಸಿದೆ. ರವಿವಾರ(ಫೆ.26) ಬೆಳಗ್ಗೆ ಕಾಡಾನೆ ಸಿಕ್ಕಿದ್ದು ಅವರು ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ತಂಡವು ಕಾಡಾನೆ ಪತ್ತೆ ಕಾರ್ಯವನ್ನು ಮತ್ತೆ ಚುರುಗೊಳಿಸಿದೆ. ಅಡೆಂಜ, ಬಳಕ್ಕ, ಇಚಿಲಡ್ಕ, ನಿಡ್ಡೋ ಅರಣ್ಯ

ಕಡಬ: ಮತ್ತೆ ಪ್ರತ್ಯಕ್ಷಗೊಂಡ ಒಂಟಿ‌ಸಲಗ; ಆತಂಕದಲ್ಲಿ ಗ್ರಾಮಸ್ಥರು Read More »

ಮಂಗಳೂರು: ನಮಗಿನ್ನಾರು ದಿಕ್ಕಿಲ್ಲೆಂದು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಮಹಿಳೆಯೊರ್ವರು ತನ್ನ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳೂರು ನಗರದ ಕೊಡಿಯಾಲ್ ಗುತ್ತಿನಲ್ಲಿ ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಕೊಡಿಯಾಲ್ ಬೈಲ್ ಗುತ್ತು ಬಳಿ ಘಟನೆ ಸಂಭವಿಸಿದ್ದು ವಿಜಯ(33) ಮತ್ತು ಶೋಭಿತಾ (4) ಮೃತಪಟ್ಟವರು. ಮನೆಯಲ್ಲಿ ತಾಯಿ ವಿಜಯ ಜತೆ ಇಬ್ಬರು ಹೆಣ್ಣು ಮಕ್ಕಳು ವಾಸಿಸುತ್ತಿದ್ದು, ಮೂವರು ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟರೆ, ಇನ್ನೊರ್ವ ಮಗಳು ಅದೃಷ್ಟವಶಾತ್‌ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.

ಮಂಗಳೂರು: ನಮಗಿನ್ನಾರು ದಿಕ್ಕಿಲ್ಲೆಂದು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ Read More »

ಕಡಬದ ರಾಮಕುಂಜ ಕೊಯಿಲ ಫಾರ್ಮ್ ನಲ್ಲಿ ಭಾರೀ ಅಗ್ನಿ ಅವಘಡ| 50 ಎಕ್ರೆ ಪ್ರದೇಶ ಬೆಂಕಿಗಾಹುತಿ

ಸಮಗ್ರ ನ್ಯೂಸ್: ಕಡಬ ತಾಲೂಕಿನ ರಾಮಕುಂಜ ಸಮೀಪದ ಕೊಯಿಲ ಪಶು ಸಂಗೋಪನ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಒಣ ಹುಲ್ಲುಗಳಿಂದ ಆವೃತ್ತವಾಗಿದ್ದ ಗುಡ್ದಕ್ಕೆ ಇಂದು ಮಧ್ಯಾಹ್ನದ ಸುಮಾರಿಗೆ ಬೆಂಕಿ ತಗುಲಿದ್ದು ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆ 50 ಎಕರೆಯಷ್ಟು ದೂರ ಆವರಿಸಿತ್ತು. ಇದರಿಂದ ಸೃಷ್ಟಿಯಾದ ದಟ್ಟ ಹೊಗೆ ಮುಗಿಲೆತ್ತರಕ್ಕೆ ಚಾಚಿದ್ದು, ಭಯಾನಕವಾಗಿತ್ತು. ಪ್ರಕೃತಿ ರಮಣೀಯವಾದ ಹಸಿರು ಹುಲ್ಲುಗಾವಲಿಗೆ ಪ್ರಸಿದ್ದಿ ಪಡೆದಿದ್ದ ಕೇಂದ್ರದಲ್ಲಿ ನೂರಾರು ಮಲೆನಾಡ ಗಿಡ್ಡ ದೇಶಿ ಗೋವುತಳಿ ಸಂರಕ್ಷಿಸಪಡುತಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ . ಘಟನಾ

ಕಡಬದ ರಾಮಕುಂಜ ಕೊಯಿಲ ಫಾರ್ಮ್ ನಲ್ಲಿ ಭಾರೀ ಅಗ್ನಿ ಅವಘಡ| 50 ಎಕ್ರೆ ಪ್ರದೇಶ ಬೆಂಕಿಗಾಹುತಿ Read More »

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆ

ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಸ್ಪರ್ಧಾ ಕಾರ್ಯಕ್ರಮವು ಜರುಗಿತು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ , ಸಂಘಟಕ , ಸಾಹಿತಿ ಮತ್ತು ಚಿತ್ರನಿರ್ದೇಶಕರಾದ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು .ಪುತ್ತೂರಿನ ನವೀನಾಂಜಲಿ ಫೇಸ್ ಬುಕ್ ಲೈವ್ ಕಾರ್ಯಕ್ರಮ ಸಂಯೋಜಕ ಮತ್ತು ಗಾಯಕರಾದ ನವೀನ ಪುತ್ತೂರು ರವರು ಕಾರ್ಯಕ್ರಮ ಉದ್ಘಾಟಿಸಿದರು

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆ Read More »

ಸುಳ್ಯ: ಅರಂತೋಡಿನಲ್ಲಿ ಶ್ರೀ ಮಲ್ಲಿಕಾರ್ಜುನ ಫ್ಯೂಯಲ್ ಪಂಪ್ ಶುಭಾರಂಭ

ಸಮಗ್ರ ನ್ಯೂಸ್: ಅರಂತೋಡಿನಲ್ಲಿ ಶ್ರೀ ಮಲ್ಲಿಕಾರ್ಜುನ ಫ್ಯೂಯಲ್‌ರವರ ನಯಾರಾ ಎನರ್ಜಿ ಪೆಟ್ರೋಲ್ ಪಂಪ್ ಮಾ.೧ರಂದು ಶುಭಾರಂಭಗೊಂಡಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ ನೆರವೇರಿಸಿ ಗ್ರಾಹಕರಿಗೆ ಒಳ್ಳೆಯ ಅನುಕೂಲವಾಗಲಿ ,ಇಡೀ ಗ್ರಾಮವೇ ಮೆಚ್ಚುವಂತಹ ಕೆಲಸ ಪ್ರಹ್ಲಾದ್ ಕುಟುಂಬ ಮಾಡಿದೆ ಎಂದು ಶುಭ ಹಾರೈಸಿದರು. ಬಳಿಕ ಮಾತನಾಡಿದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಾಹಿದ್ ಮಾತನಾಡಿ ಪಂಪ್ ಆರಂಭವಾಗಿರುವುದು ಒಳ್ಳೆಯ ಕೆಲಸ ,ಊರಿನವರಿಗೆ ಉಪಯೋಗವಾಗಲಿ ಉದ್ಯೋಗ ಸೃಷ್ಟಿಸುವ ಕೆಲಸ ಪ್ರಹ್ಲಾದ್ ಮಾಡಿದ್ದಾರೆ ಎಂದು ಶುಭ

ಸುಳ್ಯ: ಅರಂತೋಡಿನಲ್ಲಿ ಶ್ರೀ ಮಲ್ಲಿಕಾರ್ಜುನ ಫ್ಯೂಯಲ್ ಪಂಪ್ ಶುಭಾರಂಭ Read More »

ಸುಳ್ಯ: ಚಿನ್ನದ ಸರ ಕಾಣೆಯಾಗಿದೆ

ಸಮಗ್ರ ನ್ಯೂಸ್: ಮದುವೆಗೆ ತೆರಳಿದ ಮಹಿಳೆಯೊಬ್ಬರ 7 ಪವನ್ ತಾಳಿ ಸರ ಅಡ್ಕಾರು ನ ಸುಬ್ರಹ್ಮಣ್ಯ ದೇವಸ್ಥಾನ ಬಳಿ ಕಾಣೆಯಾಗಿರುತ್ತದೆ. ಸಿಕ್ಕಿದವರು ಸುಳ್ಯ ಪೋಲೀಸ್ ಠಾಣೆಗೆ ತಂದುಕೊಡಬೇಕಾಗಿ ವಿನಂತಿ.ಪೊಲೀಸ್ ಠಾಣೆ ನಂಬರ್: 08257230337

ಸುಳ್ಯ: ಚಿನ್ನದ ಸರ ಕಾಣೆಯಾಗಿದೆ Read More »