ಸುಳ್ಯ: ಕೊನೆಗೂ ಐಸಿಯುನಿಂದ ಹೊರಬಂದ ಅಂಬ್ಯುಲೆನ್ಸ್!
ಸಮಗ್ರ ನ್ಯೂಸ್: ಸರಿಯಾದ ನಿರ್ವಹಣೆ ಇಲ್ಲದೆ ಸಾರ್ವಜನಿಕ ಸೇವೆಗೆಂದು ಮೀಸಲಿರಿಸಿದ್ದ ಅಂಬ್ಯುಲೆನ್ಸ್ ಶಿಥಿಲಾವಸ್ಥೆಗೊಂಡಿದ್ದು, ಸದ್ಯ ಅದನ್ನು ನವೀಕರಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗಿದೆ. ತಾಲೂಕಿನ ಐವರ್ನಾಡು ಜನಸ್ಪಂದನಾ ಟ್ರಸ್ಟ್ ವತಿಯಿಂದ ನೀಡಲ್ಪಟ್ಟಿದ್ದ ಅಂಬ್ಯುಲೆನ್ಸ್ ಸರಿಯಾದ ನಿರ್ವಹಣೆ ಇಲ್ಲದೆ ಪಾಳುಬಿದ್ದಿತ್ತು. ಈ ಕುರಿತಂತೆ ನಿಮ್ಮ ‘ಸಮಗ್ರ ಸಮಾಚಾರ’ ವರದಿ ಬಿತ್ತರಿಸಿದ ಬಳಿಕ ಮಾಧ್ಯಮಗಳೂ ವರದಿ ಮಾಡಿದ್ದವು. ವರದಿ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಮುಖಂಡರು ಅಂಬ್ಯುಲೆನ್ಸ್ ಅನ್ನು ದುರಸ್ತಿಗೊಳಿಸಿದ್ದು, ಮತ್ತೆ ಸಾರ್ವಜನಿಕ ಸೇವೆಗೆ ಲಭಿಸುವಂತಾಗಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಲಭಿಸಲೆಂದು
ಸುಳ್ಯ: ಕೊನೆಗೂ ಐಸಿಯುನಿಂದ ಹೊರಬಂದ ಅಂಬ್ಯುಲೆನ್ಸ್! Read More »










