ಸುಳ್ಯ ಗಡಿಭಾಗದಲ್ಲೊಂದು ಸ.ಹಿ.ಪ್ರಾ ಶಾಲೆ ಕಾಸರಗೋಡು!!| ಕನ್ನಡವೇ ಗೊತ್ತಿಲ್ಲದ ಕನ್ನಡ ಟೀಚರ್ ವಿರುದ್ದ ತಿರುಗಿ ಬಿದ್ದ ವಿದ್ಯಾರ್ಥಿಗಳು|ಕೇರಳ ಸರ್ಕಾರದ ಭಾಷಾ ತಾರತಮ್ಯದ ಪರಮಾವಧಿ ಕಥೆ!
ಸಮಗ್ರ ನ್ಯೂಸ್: ಸೋಮವಾರವನ್ನು ಕನ್ನಡದಲ್ಲಿ ಭಾನುವಾರ ಎಂದು ಹೇಳುವ ಶಿಕ್ಷಕಿಯೋರ್ವರನ್ನು ಕನ್ನಡ ಮಾಧ್ಯಮ ಶಾಲೆಗೆ ನಿಯುಕ್ತಿಗೊಳಿಸಿದ ಘಟನೆಯೊಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಅಡೂರು ಸರಕಾರಿ ಶಾಲೆಯಲ್ಲಿ ನಡೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಇದರಲ್ಲಿ ಯಾವ ರೀತಿಯಲ್ಲಿ ಕನ್ನಡ ಶಾಲೆಯನ್ನು ಮುಚ್ಚಲು ಮಲಯಾಳವನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುವುದನ್ನು ತೋರಿಸಲಾಗಿತ್ತೋ,ಅಂಥಹುದೇ ಒಂದು ಘಟನೆ ಅಡೂರಿನ ಸರಕಾರಿ ಶಾಲೆಯಲ್ಲಿ ನಡೆಯುತ್ತಿದೆ. ಕನ್ನಡ ಮತ್ತು ಮಲಯಾಳಂ ಮಾದ್ಯಮದ ಪ್ರತ್ಯೇಕ ಶಾಲೆ










