ಕೃಷ್ಣಂ ವಂದೇ ಜಗದ್ಗುರುಂ| ಕೃಷ್ಣನ ಜೀವನ ದರ್ಶನವೇ ಪ್ರತಿದಿನದ ಹಬ್ಬ
ಸಮಗ್ರ ವಿಶೇಷ: ಜೀವನವನ್ನು ಪರಿಪೂರ್ಣವಾಗಿ ಕಾಣಿಸಿದವನು ಶ್ರೀಕೃಷ್ಣ. ಇದನ್ನು ನಾವು ಅವನು ಹಾಡಿನಲ್ಲಿ, ಎಂದರೆ ‘ಭಗವದ್ಗೀತೆ’ಯಲ್ಲಿ ಕಾಣಬಹುದು. ಜೀವನದ ಸಾಕ್ಷಾತ್ಕಾರದ ಹಾದಿಯಲ್ಲಿ ಎರಡು ಧರ್ಮಗಳು ಒದಗುತ್ತವೆ; ಒಂದು: ಪ್ರವೃತ್ತಿಧರ್ಮ; ಇನ್ನೊಂದು: ನಿವೃತ್ತಿಧರ್ಮ. ಪ್ರವೃತ್ತಿಧರ್ಮದ ಗತಿಯೇ ಕ್ರಿಯಾಶೀಲತೆ; ಕರ್ಮಮಾರ್ಗ. ನಿವೃತ್ತಿಧರ್ಮದ ಗತಿ ಎಂದರೆ ಕರ್ಮಸನ್ಯಾಸ; ಅದುವೇ ತ್ಯಾಗಮಾರ್ಗ. ಈ ಎರಡರ ಸಮನ್ವಯವನ್ನು ನಾವು ಭಗವದ್ಗೀತೆಯಲ್ಲಿ ಕಾಣುತ್ತೇವೆ. ಇದನ್ನು ಶಂಕರಾಚಾರ್ಯರು ಗೀತಾಭಾಷ್ಯದ ಆರಂಭದಲ್ಲಿಯೇ ಧ್ವನಿಸಿದ್ದಾರೆ ಕೂಡ. ಸಂಸಾರಿಯಾದವನು ಹೇಗಿರಬೇಕು ಎಂಬುದಕ್ಕೂ ಗೀತೆಯಲ್ಲಿ ಮಾರ್ಗದರ್ಶನ ಸಿಗುತ್ತದೆ; ಸನ್ಯಾಸಿಗಳಿಗೂ ಉಪದೇಶ ದೊರೆಯುತ್ತದೆ. ಹೀಗಾಗಿ […]
ಕೃಷ್ಣಂ ವಂದೇ ಜಗದ್ಗುರುಂ| ಕೃಷ್ಣನ ಜೀವನ ದರ್ಶನವೇ ಪ್ರತಿದಿನದ ಹಬ್ಬ Read More »










