ಕರಾವಳಿ

ಸಮಾಜಕ್ಕೆ ಸಾಮರಸ್ಯವನ್ನು ಸಾರಿದ ಹೊಸಮಠ ಶ್ರೀ ಗಣೇಶೋತ್ಸವ

ಸಮಗ್ರ ನ್ಯೂಸ್:‌ ಹೊಸಮಠದಲ್ಲಿ ದ್ವಿತೀಯ ವರುಷದ ಶ್ರೀ ಗಣೇಶೋತ್ಸವವು ಸತೀಶ್ಚಂದ್ರ ಶೆಟ್ಟಿ ಬೀರುಕ್ಕು ಅವರ ಅಧ್ಯಕ್ಷತೆಯಲ್ಲಿ ಸರ್ವಧರ್ಮದ ಪಾಲ್ಗೊಳ್ಳುವಿಕೆಯೊಂದಿಗೆ ಬಹಳ ವಿಜ್ರಂಭನೆಯಿಂದ ಜರುಗಿತು. ಎರಡು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನ ಧಾರ್ಮಿಕ ಸಭೆ ಹಾಗೂ ರವಿ ರಾಮಕುಂಜ ಸಾರಾಥ್ಯಲ್ಲಿ ಕಾಮಿಡಿ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸರ್ವಧರ್ಮದ ಮುಖಂಡರು ಭಾಗವಹಿಸಿ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದರು. ಧಾರ್ಮಿಕ ಪ್ರವಚನವನ್ನು ಲಕ್ಷ್ಮೀಶ ಗಬಲಡ್ಕ ಹಾಗೂ ಸಭಿಕರನ್ನು ನೋಡುವಾಗ ನೈಜ ಭಾರತದ ಅನಾವರಣವಾಗಿದೆ ಎಂದು ಸಂದೇಶ ಸಾರಿದರು. ಶ್ರೀ […]

ಸಮಾಜಕ್ಕೆ ಸಾಮರಸ್ಯವನ್ನು ಸಾರಿದ ಹೊಸಮಠ ಶ್ರೀ ಗಣೇಶೋತ್ಸವ Read More »

ಯೆನಪೋಯಾ ಕಾಲೇಜಿನಿಂದ ಫಾರ್ಮಾಕೊವಿಜಿಲೆನ್ಸ್ ನಲ್ಲಿ ಪ್ರಜಾ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯಕ್ರಮ|

ಸಮಗ್ರ ನ್ಯೂಸ್: ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನ ಕೇಂದ್ರ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೆ.22 ರಂದು ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರ ಉಳ್ಳಾಲ್ ಮಂಗಳೂರು ಇಲ್ಲಿ “ಫಾರ್ಮಾಕೊವಿಜಿಲೆನ್ಸ್ ನಲ್ಲಿ ಪ್ರಜಾ ವಿಶ್ವಾಸವನ್ನು ಹೆಚ್ಚಿಸುವುದು” ಎಂಬ ಕಾರ್ಯಕ್ರಮವನ್ನು ನಡೆಸಿದರು. ರಾಷ್ಟ್ರೀಯ ಫಾರ್ಮಾಕೊವಿಜಿಲೆನ್ಸ್ ವಾರದ ಸಂದರ್ಭದಲ್ಲಿ, ನಗರದ ಜನರ ವಿಶ್ವಾಸವನ್ನು ಹೆಚ್ಚಿಸಲು ಸಿದ್ಧತೆ ನಡೆಸಿದರು. ಈ ಕಾರ್ಯಕ್ರಮದ ಹೆಚ್ಚಿನ ಭಾಗವನ್ನು “ಫಾರ್ಮಾಕೊವಿಜಿಲೆನ್ಸ್ ನಲ್ಲಿ ಪ್ರಜಾ ವಿಶ್ವಾಸವನ್ನು ಹೆಚ್ಚಿಸುವುದು” ಎಂಬ ವಿಷಯದ ಸುತ್ತಲೂ ಹೇಗೆ ಪ್ರಯತ್ನಿಸಬೇಕು

ಯೆನಪೋಯಾ ಕಾಲೇಜಿನಿಂದ ಫಾರ್ಮಾಕೊವಿಜಿಲೆನ್ಸ್ ನಲ್ಲಿ ಪ್ರಜಾ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯಕ್ರಮ| Read More »

ಬಂಟ್ವಾಳ: ಕಾರು- ರಿಕ್ಷಾ ಡಿಕ್ಕಿ| ರಿಕ್ಷಾ ಚಾಲಕ ಮೃತ್ಯು

ಸಮಗ್ರ ನ್ಯೂಸ್: ಕಾರು ಡಿಕ್ಕಿಯಾಗಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಗ್ಗ ಸಮೀಪದ ಕಾಡಬೆಟ್ಟು ಕ್ರಾಸ್ ನಲ್ಲಿ ಸೆ. 23ರಂದು ನಡೆದಿದೆ. ಕೆಂಪು ಗುಡ್ಡೆ ನಿವಾಸಿ ವಿನಾಯಕ ಪೈ ಅವರು ಮನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಉಪಹಾರ ತರಲೆಂದು ವಗ್ಗದ ಹೊಟೇಲ್ ಒಂದಕ್ಕೆ ಹೋಗುವ ವೇಳೆ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ವ್ಯಾಗನಾರ್ ಕಾರು ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ವಿನಾಯಕ ಪೈ ಅವರನ್ನು ಕೂಡಲೇ ಆಸ್ಪತ್ರೆಗೆ

ಬಂಟ್ವಾಳ: ಕಾರು- ರಿಕ್ಷಾ ಡಿಕ್ಕಿ| ರಿಕ್ಷಾ ಚಾಲಕ ಮೃತ್ಯು Read More »

ಸುಳ್ಯ: ಔಷಧ ತರಲು ತೆರಳಿದ ಯುವಕ ಹೃದಯಾಘಾತಕ್ಕೆ ಬಲಿ

ಸಮಗ್ರ ನ್ಯೂಸ್: ಔಷಧ ತರಲುತೆರಳಿದ್ದ ಯುವಕ ದಾರಿ ಮಧ್ಯೆ ಹೃದಯಾಘಾತಕ್ಕೆ ಬಲಿಯಾದ ಘಟನೆ ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ಸಂಭವಿಸಿದೆ. ಮಡಿಕೇರಿಯ ಚೆಂಬು ಗ್ರಾಮದ ಆನ್ಯಾಳ ನಿವಾಸಿಯಾಗಿರುವ ಚಂದ್ರಶೇಖ‌ (35)ಮೃತ ಯುವಕ. ಇವರು ಅನಾರೋಗ್ಯ ನಿಮಿತ್ತ ಔಷಧ ಪಡೆಯಲು ನಿಂತಿಕಲ್ಲಿಗೆ ಹೋಗಿದ್ದರು. ಔಷಧಿ ಪಡೆದು ಆಟೋದಲ್ಲಿ ವಾಪಸ್ ಮನೆಗೆ ಹಿಂದುರುಗುತ್ತಿದ್ದಾಗ ದಾರಿ ಮಧ್ಯೆ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲು ಯತ್ನಿಸಿದರೂ ಅದಾಗಲೇ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.

ಸುಳ್ಯ: ಔಷಧ ತರಲು ತೆರಳಿದ ಯುವಕ ಹೃದಯಾಘಾತಕ್ಕೆ ಬಲಿ Read More »

ಸುಳ್ಯ: ಬೈಕ್ – ಕಾರು ಅಫಘಾತ: ಓರ್ವ ಗಂಭೀರ

ಸಮಗ್ರ ನ್ಯೂಸ್: ಬೈಕ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಸುಳ್ಯ ತಾಲುಕಿನ ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಸೆ.23ರಂದು ಸಂಭವಿಸಿದೆ. ಸುಳ್ಯದ ಜಿ.ಎಲ್. ಆಚಾರ್ಯ ಉದ್ಯೋಗಿರುವ ಪ್ರಶಾಂತ್ ಮತ್ತು ಅವರ ಪತ್ನಿ ಗಾಯಗೊಂಡವರು. ಇವರು ಬೈಕ್ ನಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗಬಾಂಜಿಕೋಡಿ ತಿರುವಿನಲ್ಲಿ ಎದುರಿನಿಂದ ಬಂದ ಕಾರು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಪರಿಣಾಮ ಪ್ರಶಾಂತ್ ಮತ್ತು ಅವರ ಪತ್ನಿ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಶಾಂತ್ ರವರಿಗೆ

ಸುಳ್ಯ: ಬೈಕ್ – ಕಾರು ಅಫಘಾತ: ಓರ್ವ ಗಂಭೀರ Read More »

ಸುಳ್ಯ: ಅ.8 ರಂದು ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡಿನಲ್ಲಿ ಬೃಹತ್ ಪ್ರತಿಭಟನೆ

ಸಮಗ್ರನ್ಯೂಸ್: ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡಿನಲ್ಲಿ ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ಇದರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಅ.8 ರಂದು ಸಂಜೆ 3ಗಂಟೆಗೆ ಐವರ್ನಾಡು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಡೆಯಲಿದೆ. 11 ವರ್ಷಗಳ ಹಿಂದೆ ಅತ್ಯಾಚಾರಗೊಂಡು ಹತ್ಯೆಯಾದ ಕು.ಸೌಜನ್ಯಳಿಗೆ ನ್ಯಾಯ ದೊರಕದೆ ಇದ್ದ ಕಾರಣ ರಾಜ್ಯದ ಮೂಲೆ ಮೂಲೆಗಳಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆಗಳು ನಡೆಯುತ್ತಿದೆ. ಅದೇ ರೀತಿ ಐವರ್ನಾಡು ಸೌಜನ್ಯ ಪರ ಹೋರಾಟ ಸಮಿತಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆಯಲಿದೆ. ಕಾರ್ಯಕ್ರಮದ

ಸುಳ್ಯ: ಅ.8 ರಂದು ಸೌಜನ್ಯಳ ನ್ಯಾಯಕ್ಕಾಗಿ ಐವರ್ನಾಡಿನಲ್ಲಿ ಬೃಹತ್ ಪ್ರತಿಭಟನೆ Read More »

ಮಂಗಳೂರು: ಸಿಸಿಬಿ ಕಾರ್ಯಾಚರಣೆ| ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಸಮಗ್ರ ನ್ಯೂಸ್: “ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರ ಮತ್ತೊಂದು ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಉಳ್ಳಾಲದ ಸುಭಾಷ್‌ನಗರ ಮನೆ ಜಾಕೀರ್‌ (29), ಬಂಟ್ವಾಳ ತಾಲೂಕು ಫರಂಗಿಪೇಟೆ, ಅರ್ಕುಳ ಗ್ರಾಮ ಕಾರ್ತಿಕ್ ಸುವರ್ಣ(27) ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 20 ಗ್ರಾಂ ತೂಕದ ರೂ. 1,00,000 ಮೌಲ್ಯದ ಎಂಡಿಎಂಎ ಮಾದಕ ವಸ್ತು, ಹೊಂಡಾ ಅಕ್ಟಿವಾ ಸ್ಕೂಟರ್,

ಮಂಗಳೂರು: ಸಿಸಿಬಿ ಕಾರ್ಯಾಚರಣೆ| ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ Read More »

ಸುಳ್ಯ: ಲಾಟರಿಯಲ್ಲಿ 25 ಕೋಟಿ ಗೆದ್ದರೆಂದು ಸುಳ್ಳು ಸುದ್ದಿ ಪ್ರಚಾರ| ಠಾಣೆ ಮೆಟ್ಟಿಲೇರಿದ ಸಂತ್ರಸ್ತ ಯುವಕ

ಸಮಗ್ರ ನ್ಯೂಸ್: ಕೇರಳ ಓಣಂ ಬಂಪರ್‌ ಲಾಟರಿ 25 ಕೋಟಿ ರೂ. ಭಾರಿ ಮೊತ್ತವನ್ನು ಸುಳ್ಯ ತಾಲೂಕಿನ ಯುವಕನೊಬ್ಬ ಗೆದ್ದಿದ್ದಾನೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸುಳ್ಳು ಸುದ್ದಿ ಹರಡಿದವರ ವಿರುದ್ಧ ಯುವಕನ ಮನೆಯವರು ಬೆಳ್ಳಾರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ನಿವಾಸಿ ಗೌತಮ್‌ ಕುಲ್ಸಿ ಮನೆ (27) ಸ್ವಂತ ಪಿಕಪ್‌ ಇರಿಸಿಕೊಂಡು ಅದರಲ್ಲಿ ಚಾಲಕರಾಗಿ ದುಡಿಯುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಅವರಿಗೆ ಕೇರಳ ಓಣಂ ಬಂಪರ್‌ ಲಾಟರಿ 25

ಸುಳ್ಯ: ಲಾಟರಿಯಲ್ಲಿ 25 ಕೋಟಿ ಗೆದ್ದರೆಂದು ಸುಳ್ಳು ಸುದ್ದಿ ಪ್ರಚಾರ| ಠಾಣೆ ಮೆಟ್ಟಿಲೇರಿದ ಸಂತ್ರಸ್ತ ಯುವಕ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ

ಸಮಗ್ರ ನ್ಯೂಸ್: ಇತ್ತೀಚಿಗೆ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ ಜರುಗಿತು. 2022-23ನೆಯ ಸಾಲಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಆನಂದ ಹೆಚ್. ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆಯನ್ನು ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕಿ ಲತಾ ಬಿ.ಟಿ. ಮಂಡಿಸಿದರು. ಸಂಘದ ಕಾರ್ಯಕಾರಿ ಸಮಿತಿಗೆ ತೆರವಾದ ನಾಲ್ಕು ಸ್ಥಾನಗಳಿಗೆ ಹೊಸದಾಗಿ ಸತೀಶ್ ಕೂಜುಗೂಡು, ಶಿವರಾಮ ರೈ, ನೀಲಪ್ಪ ಗೌಡ ಮತ್ತು ಸಾಯಿ ಗೀತ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ Read More »

ವಸಂತ ಗಿಳಿಯಾರ್ ಬಂಧನ

ಸಮಗ್ರ ನ್ಯೂಸ್:ಮಾನನಷ್ಟ ಕೇಸೊಂದರಲ್ಲಿ ಪತ್ರಕರ್ತ ವಸಂತ ಗಿಳಿಯಾರ್ ನನ್ನು ಬಂಧಿಸಿದ ಘಟನೆ ನಡೆದಿದೆ. ಕಟೀಲು ದೇವಸ್ಥಾನದ ಅನುವಂಶೀಯ ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ ಡಾ. ರಾಜೇಶ್ ಅವರನ್ನು ನಿಂದಿಸಲಾಗಿತ್ತು. ಹಾಗೂ ಹಿಂದೂ ಧರ್ಮನಿಂದನೆ ಮಾಡಿದ ಮತ್ತು ಮಾನಹಾನಿಕರವಾಗಿ ನಡೆದುಕೊಂಡ ವಸಂತ್ ಗಿಳಿಯಾರ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಆದರೆ ಕೋರ್ಟು ಕೊಟ್ಟ ವಾರಂಟಿಗೆ ಕ್ಯಾರೆ ಅನ್ನದೆ ಇದ್ದ ವಸಂತ ಗಿಳಿಯಾರ್ ನನ್ನು ಇದೀಗ ಅರೆಸ್ಟ್ ಮಾಡಿ ತದನಂತರ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ.

ವಸಂತ ಗಿಳಿಯಾರ್ ಬಂಧನ Read More »