ಕರಾವಳಿ

ಸುಳ್ಯ: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ವಾರ್ಷಿಕ ಮಹಾಸಭೆ

ಸಮಗ್ರ ನ್ಯೂಸ್: ಸುಳ್ಯ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಇದರ ವಾರ್ಷಿಕ ಮಹಾಸಭೆಯು ಅ. 26ರಂದು ಸುಳ್ಯದ ಸಿಎ ಬ್ಯಾಂಕ್ ಸಭಾಭವನದಲ್ಲಿ ಜರಗಿತು. ಟ್ರಸ್ಟ್ ನ ಅಧ್ಯಕ್ಷ ಇಂದಿರಾ ರಾಜಶೇಖರ್ ರೈ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯ ನೋಟಿಸ್ ಟ್ರಸ್ಟ್ ನ ನಿರ್ದೇಶಕ ವೀಣಾ ಮೊಂಟೆಡ್ಕ ಓದಿ ದಾಖಲಿಸಿದರು. ಪ್ರಾಸ್ತಾವಿಕ ಮಾತಿನೊಂದಿಗೆ 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ ಮಂಡಿಸಿದರು. 2022-23 ನೇ ಸಾಲಿನ ಲೆಕ್ಕ ಪರಿಶೀಲನಾ ವರದಿಯನ್ನು ಟ್ರಸ್ಟ್ […]

ಸುಳ್ಯ: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ವಾರ್ಷಿಕ ಮಹಾಸಭೆ Read More »

ಪುತ್ತೂರು: ಕಾಸು ಪಡೆದು ಫ್ರೀ ಟಿಕೆಟ್ ಕೊಟ್ಟ ಕೆಎಸ್ಆರ್ ಟಿಸಿ ನಿರ್ವಾಹಕ!!

ಸಮಗ್ರ ನ್ಯೂಸ್: ಸರ್ಕಾರ ಮಹಿಳೆಯರಿಗೆ ಹೊರಡಿಸಿದ ಫ್ರೀ ಬಸ್ ವ್ಯವಸ್ಥೆಯನ್ನು ಕೆಲವು ಕಂಡಕ್ಟರ್ ಗಳು ಹಣ ಕೊಟ್ಟು ಪ್ರಯಾಣಿಸುವ ಮಹಿಳೆಯರಿಗೆ ಸರ್ಕಾರ ನೀಡಿದ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರ ಉಚಿತ ಚೀಟಿ ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಮತ್ತೆ ಹೊರೆ ಹೊರಿಸುತ್ತಿರುವ ಘಟನೆ ನಡೆದಿದೆ. ಮಂಗಳೂರಿನಿಂದ ಪುತ್ತೂರಿಗೆ ಹೋಗುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಒಂದರಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ನೆಹರೂ ನಗರದಿಂದ ಪುತ್ತೂರಿಗೆ ಆಧಾರ್‌ ತೋರಿಸದೇ ಹಣ ಕೊಟ್ಟು ಟಿಕೆಟ್ ಪಡೆದಿದ್ದಳು. ಆದರೆ ಆಕೆಗೆ ಫ್ರೀ ಟಿಕೆಟ್

ಪುತ್ತೂರು: ಕಾಸು ಪಡೆದು ಫ್ರೀ ಟಿಕೆಟ್ ಕೊಟ್ಟ ಕೆಎಸ್ಆರ್ ಟಿಸಿ ನಿರ್ವಾಹಕ!! Read More »

ಸುಳ್ಯ: ಅ. 29ರಂದು ಮುಕ್ತ ರಸ್ತೆ ಓಟ

ಸಮಗ್ರ ನ್ಯೂಸ್: ಸುಳ್ಯ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ನ ದಶಮಾನೋತ್ಸವದ ಪ್ರಯುಕ್ತ ಅ. 29 ರಂದು ಸುಳ್ಯದಲ್ಲಿ ಮುಕ್ತ ಓಟ ಸ್ಪರ್ಧೆ ನಡೆಯಲಿದೆ. ಪುರುಷರ ಮುಕ್ತ ಓಟ ಸ್ಪರ್ಧೆಯು ಅರಂತೋಡಿನಿಂದ, ಮಹಿಳೆಯರಿಗೆ ಪೆರಾಜೆ, 17 ಕೆಳಗಿನ ಬಾಲಕ ಬಾಲಕಿಯರಿಗೆ ಅರಂಬೂರಿನಿಂದ ಸ್ಪರ್ಧೆ ಆರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಸುಳ್ಯ ಇದರ ಸಂಘಟಕರನ್ನು (9535040270, 9980343515, 9449268699, 9164154656) ಸಂಪರ್ಕಿಸಬಹುದಾಗಿದೆ. ಸ್ಪರ್ಧಾ ವಿಜೇತರಿಗೆ ನಗದು ಹಾಗೂ ಪ್ರಮಾಣ ಪತ್ರ ನೀಡಿ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

ಸುಳ್ಯ: ಅ. 29ರಂದು ಮುಕ್ತ ರಸ್ತೆ ಓಟ Read More »

ಸುಳ್ಯ: ಕಾರು-ಬುಲೆಟ್ ಬೈಕ್ ಮುಖಾಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಕಾರು ಹಾಗೂ ಬುಲೆಟ್ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಅರಂತೋಡು ಗ್ರಾಮದ ಪೆಲ್ತಡ್ಕದಲ್ಲಿ ಅ.24ರಂದು ನಡೆದಿದೆ. ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬುಲೆಟ್ ಬೈಕ್ ಹಾಗೂ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಪೆಲ್ತಡ್ಕದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಕಾಲಿಗೆ ಗಾಯವಾಗಿದೆ.

ಸುಳ್ಯ: ಕಾರು-ಬುಲೆಟ್ ಬೈಕ್ ಮುಖಾಮುಖಿ ಡಿಕ್ಕಿ Read More »

ಸುಳ್ಯ: ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಆಯುಧಪೂಜೆ

ಸಮಗ್ರ ನ್ಯೂಸ್: ಸುಳ್ಯ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ, ಶ್ರೀ ಗುಳಿಗ ದೈವ, ಸ್ವಾಮಿ ಶ್ರೀ ಕೊರಗಜ್ಜ ದೈವಸ್ಥಾನ ಶ್ರೀ ಕ್ಷೇತ್ರ ಕೊರಂಬಡ್ಕ ಇಲ್ಲಿ ನವರಾತ್ರಿಯ ಪ್ರಯುಕ್ತ ಸಾಮೂಹಿಕ ಆಯುಧಪೂಜೆ ಕಾರ್ಯಕ್ರಮ ನಡೆಯಿತು.

ಸುಳ್ಯ: ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಆಯುಧಪೂಜೆ Read More »

ಸುಳ್ಯ: ಹೊಸಗದ್ದೆ ನಾದ ಪಯಸ್ವಿನಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಶ್ರೀ ದುರ್ಗಾ ಮಹಾಲಕ್ಷ್ಮೀ ದೇವಸ್ಥಾನ ಶ್ರೀಧಾಮ ಮಾಣಿಲದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ಅ. 21ರಂದು ನಡೆಯಿತು. ಈ ಸಂಧರ್ಭದಲ್ಲಿ ಸುಳ್ಯ ನಾದ ಪಯಸ್ವಿನಿ ಭಜನಾ ತಂಡ ಹೊಸಗದ್ದೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮವನ್ನು ಜನಾರ್ಧನ ಜಿ. ಜಯನಗರ, ಭವನ್ ನಾರಜೆ, ಅನಿಲ್ ಕುದ್ಪಾಜೆ, ಮನೋಜ್ ಕುದ್ಪಾಜೆ, ನಮಿತಾ ಕುದ್ಪಾಜೆ, ರಶ್ಮಿತಾ ಕುದ್ಪಾಜೆ, ಆತ್ಮಿಕ ಜಿ. ಜಯನಗರ, ಅಂಕಿತ ಕುದ್ಪಾಜೆ, ಯಶ್ವಿನಿ ಬಿ.ಯಸ್. ಹೊಸಗದ್ದೆ, ಸಾನಿಧ್ಯ ಕುದ್ಪಾಜೆ, ಯದ್ವಿತ್ ಬಿ.ಯಸ್. ಹೊಸಗದ್ದೆ ನಡೆಸಿಕೊಟ್ಟರು.

ಸುಳ್ಯ: ಹೊಸಗದ್ದೆ ನಾದ ಪಯಸ್ವಿನಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ Read More »

ಪುತ್ತೂರು: ಮದುವೆ ಟೆಂಪೋ ಪಲ್ಟಿ| ಹಲವರಿಗೆ ಗಾಯ

ಸಮಗ್ರ ನ್ಯೂಸ್: ಬೆಳ್ಳಾರೆಯಿಂದ ಪುತ್ತೂರು ಈಶ್ವರಮಂಗಲ ಕಡೆಗೆ ತೆರಳುತ್ತಿದ್ದ ಮದುವೆಯ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಾಲ್ತಾಡಿ ಬಳಿ ಪಲ್ಟಿಯಾದ ಘಟನೆ ಅ. 22 ರಂದು ನಡೆದಿದೆ. ಘಟನೆಯಲ್ಲಿ ಈಶ್ವರಮಂಗಲ ಮೂಲದ ವರನ ಕಡೆಯ ಸಂಬಂಧಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆ ತರಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಪುತ್ತೂರು: ಮದುವೆ ಟೆಂಪೋ ಪಲ್ಟಿ| ಹಲವರಿಗೆ ಗಾಯ Read More »

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಒಳಗೆ ಅಕ್ರಮ ಪ್ರವೇಶ| ಇತ್ತಂಡಗಳ 20 ಮಂದಿ ವಿರುದ್ಧ ಕೇಸ್ ದಾಖಲು

ಸಮಗ್ರ ನ್ಯೂಸ್: ಪರಶುರಾಮ ಥೀಮ್ ಪಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಅ. 21 ರಂದು ಒಟ್ಟು 20 ಮಂದಿಯ ವಿರುದ್ಧ ಕೇಸ್ ದಾಖಲಾಗಿದೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ ನಂತರ ಅ. 19ರಂದು ಕೆಲವರು ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮೂರ್ತಿಯ ಪಕ್ಕಕ್ಕೆ ಹೋಗಿ ಮೂರ್ತಿಯ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಇದರಿಂದ ನನ್ನ ಮತ್ತು ಇತರ ಸಮಾನ ಮನಸ್ಕರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ದಿವ್ಯಾ ನಾಯಕ್‌ ಎಂಬವರು ಸುಹಾಸ್‌ ಶೆಟ್ಟಿ ಮುಟ್ಲುಪಾಡಿ,

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಒಳಗೆ ಅಕ್ರಮ ಪ್ರವೇಶ| ಇತ್ತಂಡಗಳ 20 ಮಂದಿ ವಿರುದ್ಧ ಕೇಸ್ ದಾಖಲು Read More »

ಸುರತ್ಕಲ್:ರಕ್ತದಾನ ಮಹಾದಾನ-ಡಾ. ಕೆ.ವಿ. ಪ್ರಕಾಶ್|ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರ

ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರ ಸುರತ್ಕಲ್: ವೆನ್ಲಾಕ್ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಪಣಂಬೂರಿನ ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರವು ಆದಿತ್ಯವಾರ ಬೆಳಗ್ಗೆ ಪಣಂಬೂರು ಎನ್ ಎಂಪಿಎ ಆಫೀಸರ್ಸ್ ಕ್ಲಬ್ ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಸಿ ಮಾತಾಡಿದ ಡಾ. ಕೆ.ವಿ. ಪ್ರಕಾಶ್ ಅವರು, “ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ನಂತಹ ಸಾಮಾಜಿಕ ಸಂಘಟನೆಗಳು ರಕ್ತದಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ನಾಲ್ಕು ಜನರ

ಸುರತ್ಕಲ್:ರಕ್ತದಾನ ಮಹಾದಾನ-ಡಾ. ಕೆ.ವಿ. ಪ್ರಕಾಶ್|ಗೋಲ್ಡನ್ ಈಗಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರ Read More »

ಉಡುಪಿ: ಸ್ನಾನಕ್ಕೆ ನದಿಗೆ ತೆರಳಿದ್ದ ಇಬ್ಬರು ನೀರುಪಾಲು

ಸಮಗ್ರ ನ್ಯೂಸ್: ನದಿಗೆ ಸ್ನಾನಕ್ಕೆಂದು ಹೋದ ಇಬ್ಬರು ನೀರು ಪಾಲಾದ ಘಟನೆ ಉಡುಪಿಯ ಹೆಬ್ರಿ ಸಮೀಪದ ಕಬ್ಬಿನಾಲೆ ಮತ್ತಾವು ಎಂಬಲ್ಲಿ ಅ. 21ರಂದು ನಡೆದಿದೆ. ಕರ್ಜೆ ನಿವಾಸಿ ಉಮೇಶ್ ಶೆಟ್ಟಿ (48) ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ಚಾರ ಹುರ್ತುರ್ಕೆ ನಿವಾಸಿ ಪ್ರಸ್ತುತ್ ಹೆಗ್ಡೆ (21) ಅ. 21ರಂದು ಸಂಜೆ 3 ಗಂಟೆಗೆ ಸ್ನಾನಕ್ಕೆ ಹೋದವರು ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಸ್ನಾನಕ್ಕೆ ನದಿಗೆ ತೆರಳಿದ್ದ ಇಬ್ಬರು ನೀರುಪಾಲು Read More »