ಕರಾವಳಿ

ಆದರ್ಶ ಗ್ರಾಮ ಬಳ್ಪದ ಅಭಿವೃದ್ಧಿ ದೇಶಕ್ಕೆ ಮಾದರಿ| ಕೇಂದ್ರ ಸಚಿವ ಭಗವಂತ ಖೂಬಾ ಶ್ಲಾಘನೆ

ಸಮಗ್ರ ನ್ಯೂಸ್: ಬಳ್ಪ ಗ್ರಾಮ ಪಂಚಾಯತ್ ನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ 58 ಕೋಟಿ ರೂ ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ದೇಶಕ್ಕೆ ಮಾದರಿ ಯಾಗಿದೆ ಎಂದು ಕೇಂದ್ರ ರಾಸಾಯನಿಕ,‌ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಭಗವಂತ ಖೂಬ ಶ್ಲಾಘಿಸಿದರು. ಅವರು ಬುಧವಾರ ಕಡಬ ತಾಲೂಕಿನ ಬಳ್ಪ-ಕೇನ್ಯದ ಗ್ರಾಮ ಉತ್ಸವ ಸಮಿತಿ ಆಶ್ರಯ ದಲ್ಲಿ ಹಮ್ಮಿಕೊಂಡಿದ್ದ ಸಂಸದರ ಆದರ್ಶ ಗ್ರಾಮದ ಗ್ರಾಮೋತ್ಸವ -2024 ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕುಗ್ರಾಮದಲ್ಲೂ ಕಡುಬಡವರ ಅಭಿವೃದ್ಧಿಗಾಗಿ ಸಂಸದರ ಆದರ್ಶ […]

ಆದರ್ಶ ಗ್ರಾಮ ಬಳ್ಪದ ಅಭಿವೃದ್ಧಿ ದೇಶಕ್ಕೆ ಮಾದರಿ| ಕೇಂದ್ರ ಸಚಿವ ಭಗವಂತ ಖೂಬಾ ಶ್ಲಾಘನೆ Read More »

ಕುಕ್ಕೆ ಸುಬ್ರಹ್ಮಣ್ಯ: ಜ.12ರಿಂದ ಕಿರುಷಷ್ಟಿ ಮಹೋತ್ಸವ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವ ಸ್ಥಾನ ದಲ್ಲಿ ಜ. 16ರ ವರೆಗೆ ಕಿರುಷಷ್ಠಿ ಮಹೋತ್ಸವ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜ.12ರಂದು ಸಾಯಂಕಾಲ 5ಕ್ಕೆ ಶ್ರೀ ಕಾರ್ತಿಕ ವೇದಿಕೆಯಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಮ ಎಸ್‌. ಸುಳ್ಳಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಜ. 16ರಂದು ಪೂರ್ವಾಹ್ನ ದೇವಾಲಯ ಆಡಳಿತ ದರ್ಮದರ್ಶಿಗಳ ಚಿಂತನ ಸಭೆ ಗುಡಿ-ಜನರ ಜೀವನಾಡಿ ಶ್ರೀ ಕಾರ್ತಿಕ ವೇದಿಕೆಯಲ್ಲಿ ನಡೆಯಲಿದೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯ: ಜ.12ರಿಂದ ಕಿರುಷಷ್ಟಿ ಮಹೋತ್ಸವ Read More »

ಕಾಪು: ಮಳೆಗಾಲ ಕೆಸರು, ಬೇಸಿಗೆಯಲ್ಲಿ ಧೂಳು| ಇದು ರಸ್ತೆ ಪ್ರಯಾಣಿಕರ ಪಾಡು

ಸಮಗ್ರ ನ್ಯೂಸ್: ವರ್ಷವಿಡಿ ಧೂಳು ಇಲ್ಲವೇ ಕೆಸರಿನಿಂದ ತುಂಬಿದ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಸಂಕಷ್ಟಪಡಬೇಕಾದ ದುಸ್ಥಿತಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಅಗರ್ ದಂಡೆ ಕೇಂಜಿಬೈಲು ರಸ್ತೆ ಪ್ರಯಾಣಿಕರಿಗೆ ಎದುರಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆಗಾಲದಲ್ಲಿ ಕೆಸರುಮಯ ರಸ್ತೆಯಾದರೆ ಬೇಸಿಗೆಯಲ್ಲಿ ಧೂಳುಮಯ ರಸ್ತೆಯಿಂದಾಗಿ ಇಲ್ಲಿನ ಜನ ವರ್ಷವಿಡೀ ಸಂಕಷ್ಟ ಪಡುವಂತ ಸ್ಥಿತಿ ಎದುರಾಗಿದೆ. ಸುಮಾರು 500 ಮೀಟರ್ ಉದ್ದದ ರಸ್ತೆ ಇದಾಗಿದ್ದು 100 ಮೀಟರ್ ಮಾತ್ರ ಕಾಂಕ್ರೀಟ್ ರಸ್ತೆಯಾಗಿದೆ. ವಯಸ್ಸಾದವರನ್ನು ಇಲ್ಲವೇ ಅನಾರೋಗ್ಯಕ್ಕೆ ಒಳಗಾದವರನ್ನು

ಕಾಪು: ಮಳೆಗಾಲ ಕೆಸರು, ಬೇಸಿಗೆಯಲ್ಲಿ ಧೂಳು| ಇದು ರಸ್ತೆ ಪ್ರಯಾಣಿಕರ ಪಾಡು Read More »

ಕಡಬ: ಅಸ್ತಿ ಪಂಜರ ಪತ್ತೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಎಡಮಂಗಲ ಗ್ರಾಮದ ನಡುಮನೆ ಎಂಬಲ್ಲಿ ಅಸ್ತಿ ಪಂಜರ ಪತ್ತೆಯಾಗಿದೆ. ಸ್ಥಳೀಯ ಮನೆಯ ಕೆಲಸದ ಆಳುಗಳು ಸೊಪ್ಪು ತರಲು ಹೋದಾಗ ಮನುಷ್ಯನ ಅಸ್ತಿ ಪಂಜರ ಕಂಡು ವಿಷಯ ತಿಳಿಸಿದರೆನ್ನಲಾಗಿದೆ. ವಿಷಯ ತಿಳಿದ ಮನೆಯವರು ಬೆಳ್ಳಾರೆ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ಅನಾಥ ಅಸ್ತಿ ಪಂಜರ ತನಿಖೆ ನಡೆಸುತ್ತಿದ್ದಾರೆ. ಮರದಲ್ಲಿ ಕತ್ತಿ ಕಂಡುಬಂದಿದ್ದು, ಸುಮಾರು 6 ತಿಂಗಳ ಹಿಂದೆ ಮರಕೆಸು ಕೊಯ್ಯಲು ಹೋದ ವ್ಯಕ್ತಿ ಮೃತಪಟ್ಟಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಡಬ: ಅಸ್ತಿ ಪಂಜರ ಪತ್ತೆ Read More »

ಬಿಳಿನೆಲೆ: ಅಂಗಡಿ, ಟಾಟಾ ಸುಮೋ ಮೇಲೆ ಉರುಳಿದ ಬೃಹದಾಕಾರದ ಮರ| ಮರ ಕಡಿಯದಂತೆ ಗ್ರಾಮಸ್ಥರಿಂದ ಪ್ರತಿಭಟನೆ| ಅಧಿಕಾರಿಗಳಿಂದ ಪರಿಹಾರ ದೊರಕಿಸಲು ಮನವಿ

ಸಮಗ್ರ ನ್ಯೂಸ್: ಬಿಳಿನೆಲೆ ಕೈಕಂಬದಲ್ಲಿ ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಬಿದ್ದ ಬೃಹದಾಕಾರದ ಮರವನ್ನು ಕಡಿಯದಂತೆ ಗ್ರಾಮಸ್ಥರು ಜ. 8ರಂದು ಪ್ರತಿಭಟನೆ ನಡೆಸಿದರು. ಪರಿಹಾರದ ಭರವಸೆ ನೀಡುವ ತನಕ ಕಡಿಯದಂತೆ ತಡೆದು, ಅಧಿಕಾರಿಗಳೊಂದಿಗೆ ಪರಿಹಾರದ ಭರವಸೆಯನ್ನು ತೆಗೆದುಕೊಂಡರು. ಮತ್ತು ಸ್ಥಳ ಮಹಜರಿಗೆ ಒತ್ತಾಯಿಸಿ ಮೇಲಾಧಿಕರಿಗಳಿಂದ ಆದಷ್ಟು ಬೇಗ ಪರಹಾರ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶಾರದ ದಿನೇಶ್ ಬಿಳಿನೆಲೆ, ಉಪಾಧ್ಯಕ್ಷ ಶಿವಶಂಕರ್ ಬಿಳಿನೆಲೆ, ಪಂಚಾಯತ್ ಸದಸ್ಯೆ ಭವ್ಯಶ್ರೀ ಕುಕ್ಕಾಜೆ, ಕಂದಾಯ ಇಲಾಖೆಯ ತಹಶೀಲ್ದಾರ್,

ಬಿಳಿನೆಲೆ: ಅಂಗಡಿ, ಟಾಟಾ ಸುಮೋ ಮೇಲೆ ಉರುಳಿದ ಬೃಹದಾಕಾರದ ಮರ| ಮರ ಕಡಿಯದಂತೆ ಗ್ರಾಮಸ್ಥರಿಂದ ಪ್ರತಿಭಟನೆ| ಅಧಿಕಾರಿಗಳಿಂದ ಪರಿಹಾರ ದೊರಕಿಸಲು ಮನವಿ Read More »

ಸುಳ್ಯ: ರಾಮಕೃಷ್ಣ ಕೊಲೆ ಪ್ರಕರಣ| ಡಾ|ಕೆ.ವಿ.ರೇಣುಕಾ ಪ್ರಸಾದ್ ಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿಯಾಗಿದ್ದ ಡಾ. ರಾಮಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಡಾ.ಕೆ.ವಿ.ರೇಣುಕಾ ಪ್ರಸಾದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಡಾ.ಕೆ.ವಿ.ರೇಣುಕಾಪ್ರಸಾದ್ ಹಾಗೂ ಇತರ 4 ಮಂದಿಗೆ ಕರ್ನಾಟಕ ಹೈಕೋರ್ಟ್ ಕಳೆದ ಅ.5ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಡಾ.ರೇಣುಕಾ ಪ್ರಸಾದ್ ಹಾಗೂ ಇತರ ಆರೋಪಿಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ

ಸುಳ್ಯ: ರಾಮಕೃಷ್ಣ ಕೊಲೆ ಪ್ರಕರಣ| ಡಾ|ಕೆ.ವಿ.ರೇಣುಕಾ ಪ್ರಸಾದ್ ಗೆ ಜಾಮೀನು ಮಂಜೂರು Read More »

ಬಿಳಿನೆಲೆ: ಅಂಗಡಿ, ಟಾಟಾ ಸುಮೋ ಮೇಲೆ ಉರುಳಿದ ಮರ

ಸಮಗ್ರ ನ್ಯೂಸ್: ಬಿಳಿನೆಲೆ ಕೈಕಂಬದಲ್ಲಿ ಚಲಿಸುತ್ತಿದ್ದ ಟಾಟಾ ಸುಮೋ ಮೇಲೆ ಮರ ಬಿದ್ದು ಚಾಲಕ ಹಾಗೂ ಪಾದಾಚಾರಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಜ.8ರಂದು ಸಂಭವಿಸಿದೆ. ನೆಟ್ಟಣದ ಟಾಟಾ ಸುಮೋದ ಮೇಲೆ ಮರ ಬಿದ್ದ ಪರಿಣಾಮ ಅದರ ಚಾಲಕ ಶೇಖರ್ ಮತ್ತು ಪಾದಾಚಾರಿ ವ್ಯಕ್ತಿಯೋರ್ವರಿಗೆ ಗಾಯವಾಗಿದೆ. ಅಲ್ಲದೆ ಅಂಗಡಿಯ ಮೇಲೆಯೂ ಮರ ಬಿದ್ದ ಪರಿಣಾಮ ಅಂಗಡಿಗೂ ಹಾನಿಯಾಗಿದೆ.

ಬಿಳಿನೆಲೆ: ಅಂಗಡಿ, ಟಾಟಾ ಸುಮೋ ಮೇಲೆ ಉರುಳಿದ ಮರ Read More »

ಪುತ್ತೂರು:ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವಿನ ಕನ್ನಡ್ಕದಲ್ಲಿ ಜ. 7ರಂದು ನಡೆದಿದೆ. ಪಡುವನ್ನೂರು ಗ್ರಾಮದ ಕನ್ನಡ ಕಜೆಮೂಲೆ ನಿವಾಸಿ ಚಂದ್ರಶೇಖರ್ ಗೌಡರ ಮಗಳು ದೀಕ್ಷಾ (16) ಇಂದು(ಜ.7) ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯಲ್ಲಿದ್ದ ತಂದೆ-ತಾಯಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದಳು. ಮನೆಯ ರೂಮಲ್ಲಿ ಫ್ಯಾನ್ ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುತ್ತೂರು ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು

ಪುತ್ತೂರು:ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಪ್ರಾಮಾಣಿಕತೆ ಮೆರೆದ ಪುತ್ತೂರು ಶಾಸಕರ ಸಾರಥಿ| ಕಳೆದುಕೊಂಡ ಐಫೋನ್ ಹಿಂತಿರುಗಿಸಿ ಪ್ರಾಮಾಣಿಕತೆಗೆ ಪಾತ್ರರಾದರು

ಸಮಗ್ರ ನ್ಯೂಸ್: ಪುತ್ತೂರು ಶಾಸಕರ ಕಚೇರಿಗೆ ಆಗಮಿಸಿದ ಆಶಿಕ್ ಎಂಬವರು ಹಿಂದಿರುಗುವ ಸಮಯ ಕಚೇರಿ ಹೊರಾಂಗಣದಲ್ಲಿ ಕಳೆದುಕೊಂಡಿದ್ದ ಲಕ್ಷಾಂತರ ಮೌಲ್ಯದ ಫೋನನ್ನು ಶಾಸಕರ ಕಾರು ಚಾಲಕ ಜಯಾನಂದ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ಆಶಿಕ್ ಅವರು ಶಾಸಕರ ಜೊತೆ ಮಾತನಾಡಿ ಹಿಂದಿರುಗುವ ವೇಳೆ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ಮೊಬೈಲ್ ಹುಡುಕಾಟ ಮಾಡಿದಾಗ, ಶಾಸಕರ ಕಾರು ಚಾಲಕ ಜಯಾನಂದ ಗೌಡ ಅವರು ಕಚೇರಿ ಆವರಣದಲ್ಲಿ ಬಿದ್ದಿದ್ದ ಮೊಬೈಲ್ ಅನ್ನು ಗಮನಿಸಿ ಆಶೀಕ್ ಅವರಿಗೆ ನೀಡಿದ್ದಾರೆ.

ಪ್ರಾಮಾಣಿಕತೆ ಮೆರೆದ ಪುತ್ತೂರು ಶಾಸಕರ ಸಾರಥಿ| ಕಳೆದುಕೊಂಡ ಐಫೋನ್ ಹಿಂತಿರುಗಿಸಿ ಪ್ರಾಮಾಣಿಕತೆಗೆ ಪಾತ್ರರಾದರು Read More »

ಸುಳ್ಯ: ಬ್ಯಾನರ್ ಹರಿದ ಪ್ರಕರಣ| 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು| ಬ್ಯಾನರ್ ಹರಿದವರಾರು ಗೊತ್ತೇ?

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದ್ದ ಆಯೋದ್ಯೆ ಹಾಗೂ ರಾಮನ ಚಿತ್ರವಿರುವ ಬ್ಯಾನರ್‌ ಹರಿದ ಪ್ರಕರಣವನ್ನು ಕೇವಲ 24 ಗಂಟೆಯೊಳಗಡೆ ಪೊಲೀಸರು ಬೇಧಿಸಿದ್ದಾರೆ. ಸುಳ್ಯ ಪೇಟೆಯಲ್ಲಿರುವ ಸುಮಾರು 40 ಸಿಸಿ ಕ್ಯಾಮೇರಾ ಪೋಟೊಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣದ ಹಿಂದಿನ ನಿಗೂಢತೆಯನ್ನು ಬಯಲು ಮಾಡಿದ್ದಾರೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜ 22 ರಂದು‌ ನಡೆಯಲಿರುವ ರಾಮಲಲ್ಲಾನ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮದ ಪ್ರಚಾರರ್ಥ ಸುಳ್ಯ ಆಟೋ ರಿಕ್ಷಾ ಸಂಘದ ವತಿಯಿಂದ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ

ಸುಳ್ಯ: ಬ್ಯಾನರ್ ಹರಿದ ಪ್ರಕರಣ| 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು| ಬ್ಯಾನರ್ ಹರಿದವರಾರು ಗೊತ್ತೇ? Read More »