ಕರಾವಳಿ

ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ| ವೆಂಕಟ್ ವಳಲಂಬೆ ನೇಮಕಕ್ಕೆ ವಿರೋಧ| ಪಕ್ಷದ ಚಟುವಟಿಕೆ ಸ್ಥಗಿತಕ್ಕೆ ನಿರ್ಧಾರ

ಸಮಗ್ರ ನ್ಯೂಸ್: ಬಿಜೆಪಿಯ ಸುಳ್ಯ ಮಂಡಲ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆಯವರನ್ನು ನೇಮಕ ಮಾಡಿದ ರೀತಿಯನ್ನು ವಿರೋಧಿಸಿರುವ ಸುಳ್ಯ ಮಂಡಲ ಬಿಜೆಪಿಯ ಈ ವ್ಯವಸ್ಥೆಯನ್ನು ಜಿಲ್ಲಾ ಸಮಿತಿಯವರು ಸರಿಪಡಿಸುವವರೆಗೆ ಪಕ್ಷದ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಸುಳ್ಯ ಮಂಡಲ ಸಮಿತಿಯು ವಿನಯಕುಮಾರ್ ಮುಳುಗಾಡು ಅವರ ಹೆಸರನ್ನು ಮಂಡಲ ಅಧ್ಯಕ್ಷತೆಗೆ ಸೂಚಿಸಿ ಜಿಲ್ಲಾ ಕಮಿಟಿಗೆ ಶಿಫಾರಸ್ಸು ಕಳುಹಿಸಿತ್ತು. ಈ ಶಿಫಾರಸ್ಸನ್ನು ಹೊರತುಪಡಿಸಿ ಬೇರೆಯವರನ್ನು ನೇಮಕ ಮಾಡುವಾಗ ಮಂಡಲ ಸಮಿತಿಯನ್ನು ಸಂಪರ್ಕಿಸದೆ ತಮ್ಮ ಇಚ್ಛೆಯಂತೆ ನೇಮಕ ಮಾಡಿರುವುದು ಸರಿಯಲ್ಲ. ಈ ರೀತಿ

ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ| ವೆಂಕಟ್ ವಳಲಂಬೆ ನೇಮಕಕ್ಕೆ ವಿರೋಧ| ಪಕ್ಷದ ಚಟುವಟಿಕೆ ಸ್ಥಗಿತಕ್ಕೆ ನಿರ್ಧಾರ Read More »

ಸುಳ್ಯ: ಬಿಜೆಪಿ ಮಂಡಲದ ನೂತನ ಅದ್ಯಕ್ಷರಾಗಿ ವೆಂಕಟ್ ವಳಲಂಬೆ ನೇಮಕ

ಸಮಗ್ರ ನ್ಯೂಸ್: ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಸಮಿತಿ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆಯವರನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಘೋಷಿಸಿದ್ದಾರೆ. ವೆಂಕಟ್ ವಳಲಂಬೆಯವರು ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಹರೀಶ್ ಕಂಜಿಪಿಲಿಯವರು ಪ್ರಸ್ತುತ ಅಧ್ಯಕ್ಷರಾಗಿದ್ದು, ಇವರ ನೇಮಕಕ್ಕೆ ಮೊದಲು ವೆಂಕಟ್ ವಳಲಂಬೆಯವರು ಅಧ್ಯಕ್ಷರಾಗಿದ್ದು ಇದೀಗ ಎರಡನೇ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಅವರು ಈ ಹಿಂದೆ 2015 ರಿಂದ 2020 ರವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ವೆಂಕಟ್ ವಳಲಂಬೆ ನೇಮಕಕ್ಕೆ ಪಕ್ಷದೊಳಗೆ ಅಸಮಾಧಾನ ಇದ್ದರೂ ಕೊನೆಕ್ಷಣದಲ್ಲಿ ರಾಜ್ಯದ ಹಿರಿಯರ

ಸುಳ್ಯ: ಬಿಜೆಪಿ ಮಂಡಲದ ನೂತನ ಅದ್ಯಕ್ಷರಾಗಿ ವೆಂಕಟ್ ವಳಲಂಬೆ ನೇಮಕ Read More »

ಪರಿವಾರ ವಿಸರ್ಜಿಸಿ ಪುತ್ತಿಲ ಬಿಜೆಪಿಗೆ ಬರಬಹುದು| ಕಮಲ ಪಾಳಯದಿಂದ ಅರುಣ್ ಕುಮಾರ್ ಗೆ ಷರತ್ತುಬದ್ಧ ಆಹ್ವಾನ

ಸಮಗ್ರ ನ್ಯೂಸ್: ಬಿಜೆಪಿಗೆ ಸಡ್ಡು ಹೊಡೆದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಆರಂಭಗೊಂಡ ಪುತ್ತಿಲ ಪರಿವಾರವನ್ನು ಬಿಜೆಪಿ ಜೊತೆ ವಿಲೀನ ಮಾಡುವ ಪ್ರಯತ್ನಗಳು ಭರದಿಂದ ಸಾಗಿದ್ದು ಈ ಮಧ್ಯೆ ಅರುಣ್ ಪುತ್ತಿಲರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲು ಪರಿವಾರ ಬೇಡಿಕೆ ಇಟ್ಟಿದೆ. ಬಿಜೆಪಿ ಪುತ್ತಿಲ ಪರಿವಾರ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಲೋಕಾಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ

ಪರಿವಾರ ವಿಸರ್ಜಿಸಿ ಪುತ್ತಿಲ ಬಿಜೆಪಿಗೆ ಬರಬಹುದು| ಕಮಲ ಪಾಳಯದಿಂದ ಅರುಣ್ ಕುಮಾರ್ ಗೆ ಷರತ್ತುಬದ್ಧ ಆಹ್ವಾನ Read More »

ಸುಳ್ಯ:ವಿಜೃಂಭಣೆಯಿಂದ ನಡೆದ ವಳಲಂಬೆ ಜಾತ್ರೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವ ನಡೆಯಿತು. ಶ್ರೀದೇವರ ದರ್ಶನ ಬಲಿ ಗುರುವಾರ (ಫೆ.1) ರಾತ್ರಿ ನಡೆಯಿತು. ನಂತರ ವಸಂತ ಕಟ್ಟೆ ಪೂಜೆ ಬಳಿಕ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ಇಂದು ಬೆಳಗ್ಗೆ 5-00ಕ್ಕೆ ಉಳ್ಳಾಕ್ಲು – ಉಳ್ಳಾಲ್ತಿ ನೇಮ, ಕುಮಾರ ದೈವ ನೇಮ, ಶ್ರೀ ದೇವರಿಗೆ ಪೂಜೆ, ರಕ್ತೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ, ಮಧ್ಯಾಹ್ನ ಮಹಾಪೂಜೆ ಬಳಿಕ ದೈವಗಳ

ಸುಳ್ಯ:ವಿಜೃಂಭಣೆಯಿಂದ ನಡೆದ ವಳಲಂಬೆ ಜಾತ್ರೆ Read More »

ಪಂಜ:ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವದಿ ಜಾತ್ರೋತ್ಸವ| ಬಂಟರಮಲೆಯಲ್ಲಿ ತೀರ್ಥ ಪೂಜೆ

ಸಮಗ್ರ ನ್ಯೂಸ್: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಯವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯ ಕ್ರಮಗಳೊಂದಿಗೆ ಫೆ. 1ರಂದು ನಡೆಯಿತು. ಇಂದು (ಫೆ.2) ಮುಂಜಾನೆ ಬಂಟಮಲೆಯ ತೀರ್ಥದ ಪೂಜೆ ಸಲ್ಲಿಸಿ ಜಾತ್ರೆಗೆ ತೀರ್ಥ ತಂದ ಬಳಿಕ ಉತ್ಸವ, ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿಯ ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ರಾತ್ರಿ ಗಂಟೆ 7 ರಿಂದ

ಪಂಜ:ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವದಿ ಜಾತ್ರೋತ್ಸವ| ಬಂಟರಮಲೆಯಲ್ಲಿ ತೀರ್ಥ ಪೂಜೆ Read More »

ಜಿಲ್ಲಾ ಎನ್ಎಸ್ ಯುಐ ಉಪಾದ್ಯಕ್ಷರಾಗಿ ಕೀರ್ತನ್ ಗೌಡ ಕೊಡಪಾಲ ಅಯ್ಕೆ

ಸಮಗ್ರ ನ್ಯೂಸ್: ಜಿಲ್ಲಾ ಎನ್ಎಸ್ ಯುಐ(NSUI) ಸಮಿತಿಯನ್ನು ರಾಜ್ಯ ಎನ್ಎಸ್ ಯುಐ ಸಮಿತಿಯು ಬಿಡುಗಡೆ ಮಾಡಿದ್ದು, ಜಿಲ್ಲಾ ಉಪಾಧ್ಯಕ್ಷರಾಗಿ ಕೀರ್ತನ್ ಗೌಡ ಕೊಡಪಾಲ ಅವರನ್ನು ಅಯ್ಕೆ ಮಾಡಲಾಗಿದೆ. ಇವರು ಈ ಹಿಂದೆ ಎನ್ಎಸ್ ಯುಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಿದ್ದು, ನಾಯಕತ್ವ ಗುಣವನ್ನು ತನ್ನ ಜೀವದಲ್ಲಿ ಅಳವಡಿಸಿಕೊಂಡು ಎಲ್ಲಾ ನಾಯಕರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರುವ ಇವರನ್ನು ಜಿಲ್ಲಾ NSUI

ಜಿಲ್ಲಾ ಎನ್ಎಸ್ ಯುಐ ಉಪಾದ್ಯಕ್ಷರಾಗಿ ಕೀರ್ತನ್ ಗೌಡ ಕೊಡಪಾಲ ಅಯ್ಕೆ Read More »

ಬೆಳ್ಳಾರೆ: ವಿದ್ಯುತ್ ಪರಿವರ್ತಕದ ಬಳಿ ಹೊತ್ತಿಕೊಂಡ ಬೆಂಕಿ

ಸಮಗ್ರ ನ್ಯೂಸ್: ಬೆಳ್ಳಾರೆ ಜ್ಞಾನಗಂಗ ಸೆಂಟ್ರಲ್ ಸ್ಕೂಲ್ ಹತ್ತಿರದ ವಿದ್ಯುತ್ ಪರಿವರ್ತಕದ ಬಳಿ ಬೆಂಕಿ ಹೊತ್ತಿಕೊಂಡ ಘಟನೆ ಫೆ. 2ರಂದು ಮಧ್ಯಾಹ್ನ ಸಂಭವಿಸಿದೆ. ಬೆಂಕಿ ಹತ್ತಿಕೊಂಡ ಪರಿಣಾಮ ಸುತ್ತಲೂ ಹೊತ್ತಿ ಉರಿದಿದೆ. ಮೆಸ್ಕಾಂ ಇಲಾಖಾ ಸಿಬ್ಬಂಧಿಗಳು ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸ್ಥಳದಲ್ಲಿ ಪ್ರತಿ ವರ್ಷ ಇದೇ ರೀತಿ ಬೆಂಕಿ ಹತ್ತಿಕೊಳ್ಳುತ್ತಿರುತ್ತದೆ.

ಬೆಳ್ಳಾರೆ: ವಿದ್ಯುತ್ ಪರಿವರ್ತಕದ ಬಳಿ ಹೊತ್ತಿಕೊಂಡ ಬೆಂಕಿ Read More »

ಸುಳ್ಯ: ಐವರ್ನಾಡು ಶ್ರೀ ಪಂಚಲಿಗೇಶ್ವರ ದೇವಸ್ಥಾನ ಜಾತ್ರೋತ್ಸವ  ಗೊನೆ ಮೂಹೂರ್ತ 

ಸಮಗ್ರ ನ್ಯೂಸ್: ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮ ಫೆ.02 ರಂದು ನಡೆಯಿತು. ಪೂಜಾ ಕಾರ್ಯವನ್ನು ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ನೆರವೇರಿಸಿದರು. ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ  ಎಸ್.ಎನ್.ಮನ್ಮಥ, ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು, ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ, ವ್ಯ.ಸ.ನಿಕಟಪೂರ್ವ ಸದಸ್ಯರಾದ ದಾಸಪ್ಪ ಗೌಡ ಕೋಡ್ತೀಲು, ಕೆ.ವಾಮನ ಗೌಡ ಕೋಂದ್ರಮಜಲು, ತಾರಾ

ಸುಳ್ಯ: ಐವರ್ನಾಡು ಶ್ರೀ ಪಂಚಲಿಗೇಶ್ವರ ದೇವಸ್ಥಾನ ಜಾತ್ರೋತ್ಸವ  ಗೊನೆ ಮೂಹೂರ್ತ  Read More »

ಮಂಗಳೂರು:ಕಾರು ಬೆಂಕಿಗಾಹುತಿ| ಚಾಲಕ ಅಪಾಯದದಿಂದ ಪಾರು

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಈ ವೇಳೆ ಬೆಂಕಿ ಹತ್ತಿಕೊಂಡ ಪರಿಣಾಮ ಕಾರು ಬೆಂಕಿಗಾಹುತಿಯಾದ ಘಟನೆ ಜ. 31ರಂದು ತಡರಾತ್ರಿ ನಗರದ ಹೊರವಲಯದ ಕುಡುಪು ಬೈತುರ್ಲಿ ಜಂಕ್ಷನ್ ಸಮೀಪ ನಡೆದಿದೆ. ಕಾರು ಚಾಲಕ ಕರಣ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕುಡುಪು ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರಿನೊಳಗೆ ಸಿಲುಕಿದ್ದ ಚಾಲಕನನ್ನು ಅದೇ ದಾರಿಯಲ್ಲಿ ಹೋಗುತ್ತಿದ್ದ ಲಾರಿಯವರು ನಿಲ್ಲಿಸಿ ಹೊರಗೆಳೆದಿದ್ದಾರೆ. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಬೆಂಕಿ

ಮಂಗಳೂರು:ಕಾರು ಬೆಂಕಿಗಾಹುತಿ| ಚಾಲಕ ಅಪಾಯದದಿಂದ ಪಾರು Read More »

ಕುಮಾರ ಪರ್ವತ ಚಾರಣ ಅವ್ಯವಸ್ಥೆ ಕುರಿತು ಜಾಲತಾಣದಲ್ಲಿ ಗಮನ ಸೆಳೆದಿದ್ದ ಅನೂಪ್ ನರಿಯೂರುಗೆ ಸನ್ಮಾನ| ಸಾಮಾಜಿಕ ಕಾಳಜಿಗಾಗಿ ಕುಕ್ಕೆಯಲ್ಲಿ ಗೌರವಾರ್ಪಣೆ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ದೇವಾಲಯ ಹಾಗೂ ಕುಮಾರ ಪರ್ವತಕ್ಕೆ ಟ್ರಕ್ಕಿಂಗ್ ಮಾಡಲು ಬಂದು ದೇವಾಲಯ ಹಾಗೂ ಪರ್ವತದ ಹೆಸರಿಗೆ ಮುಜುಗರ ತರುವ ರೀತಿ ವರ್ತಿಸುತಿದ್ದವರನ್ನು ನಿಷೇಧಿಸುವ ಹೋರಾಟದಲ್ಲಿ ಯಶಸ್ವಿಯಾದ ಅನೂಪ್ ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮವು ಫೆ.1 ರಂದು ನಡೆಯಿತು. ಇತ್ತೀಚಿನ ದಿನಗಳಲ್ಲಿ ಕುಮಾರ ಪರ್ವತಕ್ಕೆ ಟ್ರಕ್ಕಿಂಗ್ ಮಾಡಲು ಸಾವಿರಾರು ಜನ ಬರುತ್ತಿದ್ದರು. ಅಲ್ಲದೆ ಒಂದೇ ಸಮಯಕ್ಕೆ ಏಕಾಏಕಿ ನುಗ್ಗಿ ಪ್ರಕೃತಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಮಾರಕವಾಗುವ ರೀತಿಯಲ್ಲಿ

ಕುಮಾರ ಪರ್ವತ ಚಾರಣ ಅವ್ಯವಸ್ಥೆ ಕುರಿತು ಜಾಲತಾಣದಲ್ಲಿ ಗಮನ ಸೆಳೆದಿದ್ದ ಅನೂಪ್ ನರಿಯೂರುಗೆ ಸನ್ಮಾನ| ಸಾಮಾಜಿಕ ಕಾಳಜಿಗಾಗಿ ಕುಕ್ಕೆಯಲ್ಲಿ ಗೌರವಾರ್ಪಣೆ Read More »