ಕರಾವಳಿ

ಅರಂತೋಡು: ಅಕ್ರಮ ಮರಳುಗಾರಿಕೆ| ಟಿಪ್ಪ‌ರ್ ವಶ;ಚಾಲಕ ಪರಾರಿ

ಸಮಗ್ರ ನ್ಯೂಸ್: ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿರುವ ಸುಳ್ಯ ಪೊಲೀಸರು ಮರಳು ಸಮೇತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಜ. 30ರಂದು ಸುಳ್ಯ ಎಸ್‌ಐ ಅವರು ಸಿಬ್ಬಂದಿ ಜೊತೆಗೆ ಅರಂತೋಡು ಪೇಟೆ ಬಳಿ ತೆರಳುವ ವೇಳೆ ನೂಜಿಕಲ್ಲು ಎಂಬಲ್ಲಿ ತೋಡಿನಿಂದ ಮರಳನ್ನು ಕಳ್ಳತನ ನಡೆಸುವ ಉದ್ದೇಶದಿಂದ ಅಕ್ರಮವಾಗಿ ಟಿಪ್ಪರ್ ಲಾರಿಗೆ ಲೋಡ್ ಮಾಡುತ್ತಿರುವುದು ಪತ್ತೆಯಾಗಿದೆ. ಪೊಲೀಸರನ್ನು ಕಂಡ ಚಾಲಕ ಪರಾರಿಯಾದನು. ಪರಿಶೀಲನೆ ವೇಳೆ ಯಾವುದೇ ಪರವಾನಿಗೆ ಇಲ್ಲದೇ ಮರಳು ತೆಗೆಯುವುದು ಪತ್ತೆಯಾಗಿದ್ದು,

ಅರಂತೋಡು: ಅಕ್ರಮ ಮರಳುಗಾರಿಕೆ| ಟಿಪ್ಪ‌ರ್ ವಶ;ಚಾಲಕ ಪರಾರಿ Read More »

ಸುಳ್ಯ: ಜಿ.ಪಂ ಇಂಜಿನಿಯರಿಂಗ್ ನೂತನ ಕಛೇರಿ ಶಿಲಾನ್ಯಾಸ ಕಾರ್ಯಕ್ರಮ

ಸಮಗ್ರ ನ್ಯೂಸ್ : ಸುಳ್ಯದ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಹಳೆ ಕಚೇರಿ ಕಟ್ಟಡ ಇದ್ದ ಜಾಗದಲ್ಲಿ ಹೊಸಕಟ್ಟಡ ನಿರ್ಮಿಸುವ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕಮವು ಫೆ.1 ರಂದು ಬೆಳಗ್ಗೆ ನೆರವೇರಿತು. ಈ ಕಟ್ಟಡ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ ನೆರವೇರಿಸಿದರು. ಸಮಾರು 1 ಕೋಟಿ 65 ಲಕ್ಷ ರೂ. ವೆಚ್ಚದ ಯೋಜನೆಯಾಗಿದೆ. ಪುರೋಹಿತ ಆಲಂಗಾರು ಹರೀಶ್ ಭಟ್‌ರವರ ನೇತ್ರತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಎಇಇ ರುಕ್ಷ್ಮಾಂಗದರವರು ಅಲ್ಲದೆ,

ಸುಳ್ಯ: ಜಿ.ಪಂ ಇಂಜಿನಿಯರಿಂಗ್ ನೂತನ ಕಛೇರಿ ಶಿಲಾನ್ಯಾಸ ಕಾರ್ಯಕ್ರಮ Read More »

ಸುಳ್ಯ: ಜಿ.ಪಂ ಇಂಜಿನಿಯರಿಂಗ್ ನೂತನ ಕಛೇರಿ ಶಿಲಾನ್ಯಾಸ ಕಾರ್ಯಕ್ರಮ

ಸಮಗ್ರ ನ್ಯೂಸ್ : ಸುಳ್ಯದ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಹಳೆ ಕಚೇರಿ ಕಟ್ಟಡ ಇದ್ದ ಜಾಗದಲ್ಲಿ ಹೊಸಕಟ್ಟಡ ನಿರ್ಮಿಸುವ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕಮವು ಫೆ.1 ರಂದು ಬೆಳಗ್ಗೆ ನೆರವೇರಿತು. ಈ ಕಟ್ಟಡ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯ ನೆರವೇರಿಸಿದರು. ಸಮಾರು 1 ಕೋಟಿ 65 ಲಕ್ಷ ರೂ. ವೆಚ್ಚದ ಯೋಜನೆಯಾಗಿದೆ. ಪುರೋಹಿತ ಆಲಂಗಾರು ಹರೀಶ್ ಭಟ್‌ರವರ ನೇತ್ರತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಜಿ.ಪಂ. ಇಂಜಿನಿಯರಿಂಗ್ ಉಪವಿಭಾಗದ ಎಇಇ ರುಕ್ಷ್ಮಾಂಗದರವರು ಅಲ್ಲದೆ,

ಸುಳ್ಯ: ಜಿ.ಪಂ ಇಂಜಿನಿಯರಿಂಗ್ ನೂತನ ಕಛೇರಿ ಶಿಲಾನ್ಯಾಸ ಕಾರ್ಯಕ್ರಮ Read More »

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ| ಸಂತೋಷ್ ರಾವ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲು ಆದೇಶ

ಸಮಗ್ರ ನ್ಯೂಸ್: 12 ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿ ಕು. ಸೌಜನ್ಯ(17) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಯಾಗಿದ್ದ ಸಂತೋಷ್ ರಾವ್ ಮೇಲಿನ ಸಾಕ್ಷಧಾರದ ಕೊರತೆಯಿಂದ ಜೂನ್ 16, 2023 ರಂದು ದೋಷಮುಕ್ತಗೊಳಿಸಿ ಆದೇಶ ನೀಡಲಾಗಿತ್ತು‌. ಅದರನ್ವಯ ಕೆಳ ನ್ಯಾಯಾಲಯ ಸಂತೋಷ್ ರಾವ್ ವಿರುದ್ದ ದೋಷ-ಮುಕ್ತಗೊಳಿಸಿದ ಆದೇಶದ ವಿರುದ್ಧ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಸಲ್ಲಿಸಿದ್ದ ಅಪೀಲು ಜ.30 ರಂದು ಬೆಂಗಳೂರು ಹೈಕೋರ್ಟ್ ನ ನ್ಯಾಯಾಧೀಶರಾದ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ವಿಜಯ

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ| ಸಂತೋಷ್ ರಾವ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲು ಆದೇಶ Read More »

ರೈತರ ಮನ ಗೆದ್ದ ಸುಳ್ಯ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ| ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಪ್ರಯೋಗ

ಸಮಗ್ರ ನ್ಯೂಸ್: ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇದರ 2013 24 ನೇ ಸಾಲಿನ ವಿಸ್ತರಣಾ ಘಟಕಗಳ ಬಲಪಡಿಸುವಿಕೆ ಯೋಜನೆ ಅಡಿಯಲ್ಲಿ ಹಾಲು ಕರೆಯುವ ಸ್ಪರ್ಧೆ (ಅತಿ ಹೆಚ್ಚು ಹಾಲು ಉತ್ಪಾದಿಸುತ್ತಿರುವ ಜಾನುವಾರುಗಳನ್ನು ಗುರುತಿಸಿ ಅವುಗಳ ಮಾಲಕರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ) ಜ. 31ರಂದು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ

ರೈತರ ಮನ ಗೆದ್ದ ಸುಳ್ಯ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ| ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಪ್ರಯೋಗ Read More »

ಸುಳ್ಯ: ಆಸ್ಪತ್ರೆಯಿಂದ ಬರುತ್ತಿದ್ದವರಿಗೆ ಆಟೋರಿಕ್ಷಾ ಡಿಕ್ಕಿ; ಮೂವರಿಗೆ ಗಾಯ

ಸಮಗ್ರ ನ್ಯೂಸ್: ಆಸ್ಪತ್ರೆಯಿಂದ ಬರುತ್ತಿದ್ದ ಮೂರು ಮಂದಿಗೆ ಆಟೋರಿಕ್ಷಾ ಡಿಕ್ಕಿಯಾದ ಘಟನೆ ಸುಳ್ಯದ ಸರಕಾರಿ ಆಸ್ಪತ್ರೆ ಮುಂಭಾಗ ಸಂಭವಿಸಿದೆ. ಬೈಕ್ ಚಾಲಕ ಆಸ್ಪತ್ರೆಯಿಂದ ಮುಖ್ಯ ರಸ್ತೆಗೆ ಬಂದು ಮಗು ಸೇರಿದಂತೆ ಇನ್ನಿಬ್ಬರನ್ನು ಹತ್ತಿಸಿಕೊಳ್ಳುವ ವೇಳೆ ಸುಳ್ಯ ನಗರದಿಂದ ಪುತ್ತೂರಿನ ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಲ್ಲಿದ್ದ ಮೂವರೂ ರಸ್ತೆಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆ ದಾಖಲಗಿದ್ದಾರೆ. ಸುಳ್ಯ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಆಸ್ಪತ್ರೆಯಿಂದ ಬರುತ್ತಿದ್ದವರಿಗೆ ಆಟೋರಿಕ್ಷಾ ಡಿಕ್ಕಿ; ಮೂವರಿಗೆ ಗಾಯ Read More »

ಕೈತೊಳೆಯುವ ವೇಳೆ ನೀರಿನ ಟ್ಯಾಂಕ್ ಒಡೆದು ಮಹಿಳೆ ಸಾವು| ಕಾರ್ಕಳದ ನಂದಳಿಕೆಯಲ್ಲಿ ದುರ್ಘಟನೆ

ಸಮಗ್ರ ನ್ಯೂಸ್: ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಮುಗಿಸಿ ಕೈ ತೊಳೆಯುವ ಸಂದರ್ಭ ಪಕ್ಕದಲ್ಲಿದ್ದ ಹಳೆಯ ನೀರಿನ ಟ್ಯಾಂಕ್ ಒಡೆದು ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ನಂದಳಿಕೆ ಎಂಬಲ್ಲಿ ಬುಧವಾರ ನಡೆದಿದೆ. ಮೃತ ಮಹಿಳೆಯನ್ನು ಶ್ರೀಲತಾ (50) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಮಹಿಳೆಯ ಮಗಳು ಪೂಜಾ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಮಹಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಮಾಡಿದ ಬಳಿಕ ಕೈ ತೊಳೆಯುವ

ಕೈತೊಳೆಯುವ ವೇಳೆ ನೀರಿನ ಟ್ಯಾಂಕ್ ಒಡೆದು ಮಹಿಳೆ ಸಾವು| ಕಾರ್ಕಳದ ನಂದಳಿಕೆಯಲ್ಲಿ ದುರ್ಘಟನೆ Read More »

ಕಡಬ: ಮಾರಕ‌ ಡೆಂಗ್ಯೂಗೆ ಯುವಕ ಬಲಿ

ಸಮಗ್ರ ನ್ಯೂಸ್: ಮಾರಕ ಡೆಂಗ್ಯೂ ಜ್ವರಕ್ಕೆ ಯುವಕನೊರ್ವ ಸಾವನಪ್ಪಿದ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿ ಎಂಬಲ್ಲಿ ನಡೆದಿದೆ. ಮೃತನನ್ನು ಇಲ್ಲಿನ ನಿವಾಸಿ ಶಿಜು(31) ಎಂದು ಗುರುತಿಸಲಾಗಿದೆ. ಶಿಜು ರವಿವಾರದಂದು ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಕಡಬದ ಕ್ಲಿನಿಕ್ ವೊಂದರಲ್ಲಿ ಚಿಕಿತ್ಸೆ ಪಡೆದು ಜ್ವರ ಪರೀಕ್ಷೆ ಮಾಡಿದ್ದರು. ಈ ವೇಳೆ ಡೆಂಗ್ಯೂ ಜ್ವರ ಪತ್ತೆಯಾಗಿದೆ. ನಂತರ ಮನೆಗೆ ಬಂದ ಶಿಜು ಅವರಿಗೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಾರನೇ ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ

ಕಡಬ: ಮಾರಕ‌ ಡೆಂಗ್ಯೂಗೆ ಯುವಕ ಬಲಿ Read More »

ಸುಳ್ಯ: ಫೆ.1 ಮತ್ತು 2ರಂದು ವಳಲಂಬೆ ಜಾತ್ರೆ

ಸಮಗ್ರ ನ್ಯೂಸ್: ಸುಳ್ಯದ ಗುತ್ತಿಗಾರು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ. 1 ಮತ್ತು 2ರಂದು ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ ನಡೆಯಲಿದೆ. ಫೆ. 1ರಂದು ಬೆಳಿಗ್ಗೆ ಗಂಟೆ 8-00ಕ್ಕೆ-ಗಣಪತಿ ಹೋಮ, 9-00ಕ್ಕೆ – ಏಕಾದಶ ರುದ್ರಾಭಿಷೇಕ, 12-00ಕ್ಕೆ – ನವ ಕಲಾಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಸಂಜೆ 6-00ರಿಂದ 7-00ರ ವರೆಗೆ ದೈವಗಳ ಭಂಡಾರ ತೆಗೆಯುವುದು, ಮತ್ತು ಚೆಂಡೆವಾದನ, ರಾತ್ರಿ ಗಂಟೆ 7-30ಕ್ಕೆ – ಮಹಾಪೂಜೆ ಮತ್ತು ಅನ್ನಸಂತರ್ಪಣೆ, 8-00ಕ್ಕೆ – ದೇವರ ಉತ್ಸವ

ಸುಳ್ಯ: ಫೆ.1 ಮತ್ತು 2ರಂದು ವಳಲಂಬೆ ಜಾತ್ರೆ Read More »

ಕುಮಾರಪರ್ವತ ಚಾರಣಕ್ಕೆ ನಿರ್ಬಂಧ| ಅರಣ್ಯ ಸಚಿವರ ಗಮನ ಸೆಳೆದ ಛಾಯಾಗ್ರಾಹಕ ಅನೂಪ್

ಸಮಗ್ರ ನ್ಯೂಸ್: ಪುಷ್ಪಗಿರಿ ವಲಯದ ಕುಮಾರ ಪರ್ವತಕ್ಕೆ ಕಳೆದ ವಾರಾಂತ್ಯ ಚಾರಣಿಗರ ದಟ್ಟಣೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಛಾಯಾಗ್ರಾಹಕ ಅನೂಪ್ ನರಿಯೂರು ಎಂಬ ಯುವಕ ಶೇರ್ ಮಾಡಿದ ವಿಡಿಯೋ ಅರಣ್ಯ ಸಚಿವರ ಗಮನ ಸೆಳೆದಿತ್ತು. ಈ ಹಿನ್ನಲೆಯಲ್ಲಿ ಚಾರಣ ನಿಯಂತ್ರಣಕ್ಕಾಗಿ ಫೆಬ್ರವರಿ 1ರಿಂದ ಪ್ರವೇಶಾವಕಾಶ ಬಂದ್ ಮಾಡಿ ಮುಂದಿನ ಆಕ್ಟೊಬರ್ ನಿಂದ ಆನ್ ಲೈನ್ ಬುಕ್ಕಿಂಗ್ ಆರಂಭಿಸಲು ಅರಣ್ಯ ಇಲಾಖೆ ಮಹತ್ವ ತೀರ್ಮಾನ ಕೈಗೊಂಡಿದೆ. ಚಾರಣಿಗರ ದಂಡೇ ಕುಮಾರ ಪರ್ವತದತ್ತ ಲಗ್ಗೆ ಇಟ್ಟಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ದ

ಕುಮಾರಪರ್ವತ ಚಾರಣಕ್ಕೆ ನಿರ್ಬಂಧ| ಅರಣ್ಯ ಸಚಿವರ ಗಮನ ಸೆಳೆದ ಛಾಯಾಗ್ರಾಹಕ ಅನೂಪ್ Read More »