ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲಿ 60 ಮಂದಿ ಸ್ಪರ್ಧೆ
ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಮಪತ್ರ ಸಲ್ಲಿಸಿದ್ದ 72 ಜನರಲ್ಲಿ 12 ಜನರು ನಾಮಪತ್ರ ಹಿಂತೆಗೆದುಕೊಂಡುದರಿಂದ ಈಗ ಸ್ಪರ್ಧೆಯಲ್ಲಿ 60 ಮಂದಿ ಉಳಿದಿದ್ದಾರೆ. ಮಂಗಳೂರು ಉತ್ತರದಲ್ಲಿ 10, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದಿರೆ, ಮಂಗಳೂರು ದಕ್ಷಿಣಗಳಲ್ಲಿ ತಲಾ 8, ಬಂಟ್ವಾಳ 6, ಮಂಗಳೂರು ಉಳ್ಳಾಲದಲ್ಲಿ 4 ಮಂದಿ ಉಳಿದಿದ್ದಾರೆ. ಮೇ.10 ರಂದು ಚುನಾವಣೆ ನಡೆಯಲಿದ್ದು, ಮೇ. 13ಕ್ಕೆ ಈ ಸ್ಪರ್ಧಾಳುಗಳ ಭವಿಷ್ಯ ತಿಳಿಯಲಿದೆ.
ದ.ಕ ಜಿಲ್ಲೆಯ 8 ಕ್ಷೇತ್ರಗಳಲ್ಲಿ 60 ಮಂದಿ ಸ್ಪರ್ಧೆ Read More »










