ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ| ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ‘ಟ್ರೀ ಸ್ಕೂಟರ್’!| ವಾರಕ್ಕೆ ಉಳಿತಾಯವಾಗುತ್ತೆ ₹ 24 ಸಾವಿರ!!
ಸಮಗ್ರ ನ್ಯೂಸ್: ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಕ್ಕೆ ಕಾರ್ಮಿಕರು ಸಿಗುವುದಿಲ್ಲ ಎಂಬುದು ಎಲ್ಲ ರೈತರ ಅಳಲು. ಇದಕ್ಕೆ ಪರಿಹಾರ ಎನ್ನುವಂತೆ ಮಂಗಳೂರು ಮೂಲದ ನಿವಾಸಿಯೊಬ್ಬರು ವಿನೂತನವಾದ ‘ಟ್ರೀ ಸ್ಕೂಟರ್’ ಕಂಡುಹಿಡಿದಿದ್ದಾರೆ. ಕಾರ್ಮಿಕ ಶಕ್ತಿ ಮತ್ತು ಅಡಿಕೆ ಮರಗಳ ಅಕಾಲಿಕ ನಿರ್ವಹಣೆಯು ಕೃಷಿ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಂತರವನ್ನು ಮನಗಂಡ ಗಣಪತಿ ಭಟ್ ಅವರು ರೈತರಿಗೆ ಬಳಸಲು ಸುಲಭವಾದ ಟ್ರೀ ಸ್ಕೂಟರ್ ಅನ್ನು ಆವಿಷ್ಕರಿಸಿದ್ದಾರೆ, ಇದು ಕಾರ್ಮಿಕರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ […]









