ಸಮಗ್ರ ಸಮಾಚಾರ

ಇಸ್ರೇಲ್ – ಇರಾನ್ ಯುದ್ಧ ಪರಿಣಾಮ| ಮಕಾಡೆ ಮಲಗಿದ ಷೇರು ಮಾರುಕಟ್ಟೆ

ಸಮಗ್ರ ನ್ಯೂಸ್: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಅದರಲ್ಲೂ ಷೇರು ಮಾರುಕಟ್ಟೆ ಕಳೆದ ಮೂರು ದಿನಗಳಿಂದ ಕುಸಿತದಲ್ಲೇ ಇದ್ದು, ಯಾವಾಗ ಏರಿಕೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ. ಮಾರ್ಚ್ 4, ಬುಧವಾರದಂದು, ಭಾರತೀಯ ಷೇರು ಮಾರುಕಟ್ಟೆಯಲ್ಲಿ (Stock Market Crash) ಭಾರೀ ಕುಸಿತವಾಗಿದೆ. ಸೆನ್ಸೆಕ್ಸ್ 1,750 ಅಂಕಗಳನ್ನು (ಶೇ 2.2) ಇಳಿಕೆಯಾಗಿ ಆರಂಭಿಕ ವಹಿವಾಟಿನಲ್ಲಿ, ದಿನದ ಕನಿಷ್ಠ ಮಟ್ಟ 78,480.63ಕ್ಕೆ ಇಳಿದರೆ, ನಿಫ್ಟಿ 50 (Nifty 50) […]

ಇಸ್ರೇಲ್ – ಇರಾನ್ ಯುದ್ಧ ಪರಿಣಾಮ| ಮಕಾಡೆ ಮಲಗಿದ ಷೇರು ಮಾರುಕಟ್ಟೆ Read More »

ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ ಮಂಜೂರು| ಸುಳ್ಯವನ್ನು ಕೇಂದ್ರಸ್ಥಾನವನ್ನಾಗಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ(ಎಲಿಫೆಂಟ್ ಟಾಸ್ಕ್‌ಪೋರ್ಸ್) ಮಂಜೂರು ಮಾಡಿ ಸರಕಾರ‌ ಆದೇಶ ಮಾಡಿದೆ. ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಪ್ರತಿ ವರ್ಷವೂ ಬೆಳೆ ಪರಿಹಾರ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗಿದಾಗ ಅವುಗಳನ್ನು ಹಿಮ್ಮೆಟ್ಟಿಸಲು ಮಡಿಕೇರಿ ವಿಭಾಗದಿಂದ ಆನೆ ಕಾರ್ಯಪಡೆ ಕರೆಯಿಸಬೇಕಾಗುತ್ತಿತ್ತು. ಇದರಿಂದ ಹಿಮ್ಮೆಟ್ಟಿಸುವ ಪ್ರಕ್ರಿಯೆ

ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ ಮಂಜೂರು| ಸುಳ್ಯವನ್ನು ಕೇಂದ್ರಸ್ಥಾನವನ್ನಾಗಿಸಿ ರಾಜ್ಯ ಸರ್ಕಾರ ಆದೇಶ Read More »

ಅಯತುಲ್ಲಾ ಅಲಿ ಖಾಮಿನೈ ಪುತ್ರ ಮೊಜ್ತಬಾ ಖಾಮಿನೈ ಇರಾನ್ ನ ಸರ್ವೋಚ್ಚ ನಾಯಕನಾಗಿ ನೇಮಕ

ಸಮಗ್ರ ನ್ಯೂಸ್: ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಅವರ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಬುಧವಾರದ ಮಾಧ್ಯಮ ವರದಿ ತಿಳಿಸಿದೆ. ಇರಾನ್‌ನ ತಜ್ಞರ ಸಭೆಯು ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದು, ಪ್ರಭಾವಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (ಐಆರ್‌ಜಿಸಿ) ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ‘ಇರಾನ್ ಇಂಟರ್‌ನ್ಯಾಷನಲ್’ ವರದಿ ಹೇಳಿದೆ. 56 ವರ್ಷದ ಮೊಜ್ತಬಾ ಖಾಮಿನೈ, ದಿವಂಗತ ಅಲಿ ಖಾಮಿನೈ

ಅಯತುಲ್ಲಾ ಅಲಿ ಖಾಮಿನೈ ಪುತ್ರ ಮೊಜ್ತಬಾ ಖಾಮಿನೈ ಇರಾನ್ ನ ಸರ್ವೋಚ್ಚ ನಾಯಕನಾಗಿ ನೇಮಕ Read More »

ಒಮಾನ್: ಕೈತಪ್ಪಿದ ಪ್ರೀತಿಗಾಗಿ ಲೈವ್ ನಲ್ಲೇ ಸುಸೈಡ್ ಮಾಡಿಕೊಂಡ ಮಂಗಳೂರಿನ ಯುವಕ

ಸಮಗ್ರ ನ್ಯೂಸ್: ಒಮಾನ್ ದೇಶದಲ್ಲಿ ಉದ್ಯೋಗದಲ್ಲಿದ್ದ ತಾಲ್ಲೂಕಿನ ಸೋಮೇಶ್ವರ ಯುವಕ ಪ್ರೇಮ ವೈಫಲ್ಯದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೊ ಪ್ರಸಾರ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮೇಶ್ವರದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಮೃತ ಯುವಕ. ಒಂದೂವರೆ ವರ್ಷಗಳಿಂದ ಒಮಾನ್ ದೇಶದಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಊರಿಗೆ ಮರಳಿದ್ದ ಅವರು ರಜೆ ಮುಗಿಸಿ ಈಚೆಗಷ್ಟೇ ಒಮಾನ್‌ಗೆ ತೆರಳಿದ್ದರು. ಪುನೀತ್ ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವದ ಯುವತಿಯೊಬ್ಬರನ್ನು

ಒಮಾನ್: ಕೈತಪ್ಪಿದ ಪ್ರೀತಿಗಾಗಿ ಲೈವ್ ನಲ್ಲೇ ಸುಸೈಡ್ ಮಾಡಿಕೊಂಡ ಮಂಗಳೂರಿನ ಯುವಕ Read More »

ಇರಾನ್ ಧ್ವಜ ಹಿಡಿದಿದ್ದ ವ್ಯಕ್ತಿಯಿಂದ ಗುಂಡಿನ ದಾಳಿ| ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ಮೂವರು ಸಾವು

ಸಮಗ್ರ ನ್ಯೂಸ್: ಟೆಕ್ಸಾಸ್​ನ ಆಸ್ಟಿನ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವಿಗೀಡಾಗಿದ್ದು, ಹನ್ನೆರಡಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಕೋರನನ್ನು ಎನ್‌ಡಿಯಾಗಾ ಡಯಾಗ್ನೆ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಸವಿತಾ ಶಾನ್ ಕೂಡ ಒಬ್ಬರು. ಸವಿತಾ ಅವರು ಟೆಕ್ಸಾಸ್​ ವಿಶ್ವವಿದ್ಯಾಲಯದಲ್ಲಿ ಹಾನರ್ಸ್ ಪದವಿ ಪಡೆಯುತ್ತಿದ್ದರು. ಬುಫೋರ್ಡ್‌ನ ಬ್ಯಾಕ್‌ಯಾರ್ಡ್ ಬಿಯರ್ ಗಾರ್ಡನ್‌ನಲ್ಲಿ ಈ ದಾಳಿ ನಡೆದಿದೆ. ಇದು ವಿದ್ಯಾರ್ಥಿಗಳ ನೆಚ್ಚಿನ ಹೋಟೆಲ್​ ಆಗಿದ್ದು, ವಿದ್ಯಾರ್ಥಿಗಳೆಲ್ಲರು ಆಗಾಗ್ಗೆ

ಇರಾನ್ ಧ್ವಜ ಹಿಡಿದಿದ್ದ ವ್ಯಕ್ತಿಯಿಂದ ಗುಂಡಿನ ದಾಳಿ| ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ಮೂವರು ಸಾವು Read More »

ಪುತ್ತೂರು: ಕೆಳಮಟ್ಟದಲ್ಲಿ ಹಾರಾಡಿ ಆತಂಕ ಸೃಷ್ಟಿಸಿದ ಮಿನಿ ಜೆಟ್ ವಿಮಾನ| ಸ್ಪಷ್ಟನೆ ನೀಡಿದ ವರಿಷ್ಠಾಧಿಕಾರಿ

ಸಮಗ್ರ ನ್ಯೂಸ್: ಪುತ್ತೂರು ನಗರದ ಆಕಾಶದಲ್ಲಿ ಮಂಗಳವಾರ (ಮಾ. 3) ಮಧ್ಯಾಹ್ನ ಮಿನಿ ಜೆಟ್ ವಿಮಾನವೊಂದು ಅತೀ ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಸಾರ್ವಜನಿಕ ವಲಯದಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದ ಘಟನೆ ನಡೆದಿದೆ. ಏನಿದು ಘಟನೆ? ಮಧ್ಯಾಹ್ನದ ವೇಳೆ ಹಠಾತ್ತನೆ ಬಂದ ಮಿನಿ ಜೆಟ್ ವಿಮಾನವೊಂದು ಭೂಮಿಗೆ ಅತೀ ಸಮೀಪದಲ್ಲಿ ಹಾರಾಟ ನಡೆಸತೊಡಗಿತು. ಅದರಲ್ಲೂ ವಿಶೇಷವಾಗಿ ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗದ್ದೆಯ ಮೇಲ್ಭಾಗದಲ್ಲಿ ಅತ್ಯಂತ ತಳಮಟ್ಟದಲ್ಲಿ ವಿಮಾನ ಹಾರಾಡುತ್ತಿರುವುದನ್ನು ಕಂಡು

ಪುತ್ತೂರು: ಕೆಳಮಟ್ಟದಲ್ಲಿ ಹಾರಾಡಿ ಆತಂಕ ಸೃಷ್ಟಿಸಿದ ಮಿನಿ ಜೆಟ್ ವಿಮಾನ| ಸ್ಪಷ್ಟನೆ ನೀಡಿದ ವರಿಷ್ಠಾಧಿಕಾರಿ Read More »

‘ ಇರಾನ್ ಗೆ ಇವರನ್ನೂ ಕಳುಹಿಸಿಬಿಡಿ, ತಮ್ಮ ಜನರ ಜೊತೆಗೆ ಪ್ರತಿಭಟಿಸಲಿ’| ನಟಿ ರಶ್ಮಿ ಗೌತಮ್ ಟ್ವೀಟ್

ಸಮಗ್ರ ನ್ಯೂಸ್: ಕಾಶ್ಮೀರ, ಕರ್ನಾಟಕ, ಕೇರಳದಲ್ಲಿ ಖಮೇನಿ ಹತ್ಯೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ಶಿಯಾ ಮುಸ್ಲಿಮರು ರಸ್ತೆಗಿಳಿದು ಭಾನುವಾರ ಪ್ರತಿಭಟನೆ ನಡೆಸಿದ್ದರು. ಅಮೆರಿಕಾ ಹಾಗೂ ಇಸ್ರೇಲ್ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರ ಹಾಕಿದ್ದಾರೆ. “ಈ ಪ್ರತಿಭಟನೆಕಾರರನ್ನು ಕೂಡ ಇರಾನ್ ದೇಶಕ್ಕೆ ಕಳುಹಿಸಿಬಿಡಿ” ಎಂದು ತೆಲುಗು ನಟಿ, ನಿರೂಪಕಿ ರಶ್ಮಿ ಗೌತಮ್ ಟ್ವೀಟ್ ಮಾಡಿದ್ದಾರೆ. ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆ ಸಂಬಂಧ ಮಾಡಿದ್ದ ಟ್ವೀಟ್ ಅನ್ನು ರಶ್ಮಿ ಗೌತಮ್ ರೀ-ಟ್ವೀಟ್ ಮಾಡಿ “ದಯವಿಟ್ಟು

‘ ಇರಾನ್ ಗೆ ಇವರನ್ನೂ ಕಳುಹಿಸಿಬಿಡಿ, ತಮ್ಮ ಜನರ ಜೊತೆಗೆ ಪ್ರತಿಭಟಿಸಲಿ’| ನಟಿ ರಶ್ಮಿ ಗೌತಮ್ ಟ್ವೀಟ್ Read More »

‘ಎನ್ ಡಿಎ ಜೊತೆಗೆ ಮುಂದುವರಿಯುವೆ’| ಕುಕ್ಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ

ಸಮಗ್ರ ನ್ಯೂಸ್: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಮಿತ್ರ ಪಕ್ಷಗಳೊಂದಿಗೆ ಸೇರಿ ಜನಪರ ಆಡಳಿತ ನಡೆಸುತ್ತಿದೆ. ನಮ್ಮ ಜೆಡಿಎಸ್ ಪಕ್ಷವೂ ಎನ್‌ಡಿಎ ಜತೆಗೆ ಮುಂದಿನ ಚುನಾವಣೆಯನ್ನೂ ಎದುರಿಸಲಿದೆ’ ಎಂದು ರಾಜ್ಯಸಭಾ ಸದಸ್ಯ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರದೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಜತೆಗಿನ ನಮ್ಮ ಮೈತ್ರಿ ನಿರಾತಂಕವಾಗಿದೆ. ನರೇಂದ್ರ ಮೋದಿ ನಾಯಕನಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಜನಪರ

‘ಎನ್ ಡಿಎ ಜೊತೆಗೆ ಮುಂದುವರಿಯುವೆ’| ಕುಕ್ಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ Read More »

ಇರಾನ್ ದಾಳಿಯಲ್ಲಿ ಅಮೇರಿಕಾದ ಶಕ್ತಿಶಾಲಿ ಯುದ್ಧವಿಮಾನ ಪತನ

ಸಮಗ್ರ ನ್ಯೂಸ್: ಅಮೆರಿಕಾ ಮತ್ತು ಇಸ್ರೇಲ್‌ ನಡೆಸಿದ ಇರಾನ್ ಮೇಲಿನ ದಾಳಿ ಹಾಗೂ ಇರಾನ್‌ನ ಸುಪ್ರೀಂ ಲೀಡರ್ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಮಧ್ಯೆ, ಕುವೈತ್ ಆಕಾಶದಲ್ಲಿ ಹಾರಾಡುತ್ತಿದ್ದ ಶಕ್ತಿಶಾಲಿ F-15 ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಇರಾನ್ ಸೋಮವಾರ ಘೋಷಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಎಫ್-15 ವಿಮಾನದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು, ಅದು ನಿಧಾನವಾಗಿ ಸುರುಳಿ ಸುತ್ತುತ್ತಾ ಕೆಳಕ್ಕೆ ಬೀಳುತ್ತಿರುವುದು ಕಂಡುಬಂದಿದೆ.ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್

ಇರಾನ್ ದಾಳಿಯಲ್ಲಿ ಅಮೇರಿಕಾದ ಶಕ್ತಿಶಾಲಿ ಯುದ್ಧವಿಮಾನ ಪತನ Read More »

ಸಾಲ ಮರುಪಾವತಿಯಲ್ಲಿ ದ.ಕ ಜಿಲ್ಲೆಗೆ ಅಗ್ರಸ್ಥಾನ – ಎಂ.ಎನ್ ರಾಜೇಂದ್ರ ಕುಮಾರ್

ಸಮಗ್ರ ನ್ಯೂಸ್: ಕಳೆದ 29 ವರ್ಷಗಳಲ್ಲಿ ಕೃಷಿ ಸಾಲ ಶೇ.100ರಷ್ಟು ಮರು ಪಾವತಿ ಮಾಡುವ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಈ ಬಗ್ಗೆ ನಬಾರ್ಡ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ನಬಾರ್ಡ್ ಕೂಡ ಮುಂದಾಗಿದೆ ಎಂದು ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಅವರು ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ 5ನೇ ಬೋಳೂರು ಶಾಖೆಯ ನೂತನ ಸ್ವಂತ ಕಚೇರಿ ಕಟ್ಟಡ

ಸಾಲ ಮರುಪಾವತಿಯಲ್ಲಿ ದ.ಕ ಜಿಲ್ಲೆಗೆ ಅಗ್ರಸ್ಥಾನ – ಎಂ.ಎನ್ ರಾಜೇಂದ್ರ ಕುಮಾರ್ Read More »