ಸಮಗ್ರ ಸಮಾಚಾರ

ಅಸಂಘಟಿತ ಕಾರ್ಮಿಕರಿಗೆ 2,000 ರೂ. ಪರಿಹಾರ ಧನ : ಡಿಸಿ ಡಾ. ರಾಜೇಂದ್ರ ಕೆ.ವಿ

ಮಂಗಳೂರು: ಕೋವಿಡ್‌ ಲಾಕ್‌ಡೌನ್‌ ಹಿನ್ನಲೆಯಲ್ಲಿ ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ರಾಜ್ಯ ಸರ್ಕಾರದ ವತಿಯಿಂದ ₹2,000 ಪರಿಹಾರಧನವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದ್ದಾರೆ. ಈ ಕುರಿತು ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲಸವಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕ ವಲಯದ 18 ರಿಂದ 65 ವರ್ಷದೊಳಗಿನ ಕ್ಷೌರಿಕ, ಅಗಸ, ಟೈಲರ್, ಅಕ್ಕಸಾಲಿಗ, ಕಮ್ಮಾರ, ಕುಂಬಾರ, ಗೃಹಕಾರ್ಮಿಕರು, ಚಿಂದಿ ಆಯುವವರು, ಹಮಾಲಿ ಇತ್ಯಾದಿ ಕಾರ್ಮಿಕರುಗಳು ಈ ಪರಿಹಾರ […]

ಅಸಂಘಟಿತ ಕಾರ್ಮಿಕರಿಗೆ 2,000 ರೂ. ಪರಿಹಾರ ಧನ : ಡಿಸಿ ಡಾ. ರಾಜೇಂದ್ರ ಕೆ.ವಿ Read More »

ಹೇಳಿಕೊಟ್ಟಿದ್ದು ಒಂದು, ಕೇಳಿದ್ದು ಮತ್ತೊಂದು : ಎಕ್ಸಾಂ ಎಡವಟ್ಟಿನಲ್ಲಿ ಮಕ್ಳೆಲ್ಲಾ ಫೇಲ್

ಸಮಾಚಾರ ವರದಿ: ಸಾಮಾನ್ಯವಾಗಿ ಪರೀಕ್ಷೆಗಳು ಅಂದಾಗ ಮಕ್ಕಳಿಗೆ ಕಲಿಸಿದ್ದನ್ನೇ ಪ್ರಶ್ನೆಗಳನ್ನಾಗಿ ಕೇಳಿ ಉತ್ತರ ಪಡೆದುಕೊಳ್ತಾರೆ. ಸರಿ ಉತ್ತರ ಬರೆದವ್ನು ಪಾಸ್ ಆದ್ರೆ ಉತ್ತರ ಸರಿ ನೀಡದವ್ನಿಗೆ ಕಡಿಮೆ ಅಂಕವೋ ಅಥವಾ ಫೇಲೋ ಆಗ್ತಾನೆ. ಆದ್ರೆ ಎಕ್ಸಾಮಿನರ್ ತಪ್ಪು ಪ್ರಶ್ನೆ ಕೇಳಿ ಸರಿ ಉತ್ತರ ನಿರೀಕ್ಷಿಸಿದರೆ ಆಗೋದೇನು? ಇಲ್ಲಿ ಆಗಿದ್ದು ಅದೇ.ಪಾಠದಲ್ಲಿ ಇಲ್ಲದ ಪ್ರಶ್ನೆ ಕೇಳಿದ್ದು, ಮಕ್ಕಳಿಗೆ ಉತ್ತರಿಸಲಾಗದೇ ಹೆಚ್ಚೂ ಕಮ್ಮಿ ಎಲ್ಲಾ ಮಕ್ಕಳು ಫೇಲಾದ ಪ್ರಸಂಗ ನಡೆದಿದೆ. ಅಂದ ಹಾಗೆ ಈ ಪರೀಕ್ಷೆ ನಡೆದದ್ದು ಅಂತಿಮ ಸೆಮಿಸ್ಟರ್

ಹೇಳಿಕೊಟ್ಟಿದ್ದು ಒಂದು, ಕೇಳಿದ್ದು ಮತ್ತೊಂದು : ಎಕ್ಸಾಂ ಎಡವಟ್ಟಿನಲ್ಲಿ ಮಕ್ಳೆಲ್ಲಾ ಫೇಲ್ Read More »

ಕೆ ಎಸ್ ಆರ್ ಟಿ ಸಿ ಹೆಸರು ಕೇರಳ ಪಾಲು ಸತ್ಯಕ್ಕೆ ದೂರವಾದ ಮಾತು | ವ್ಯವಸ್ಥಾಪಕ ನಿರ್ದೇಶಕರ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ “ಕೆಎಸ್‌ಆರ್‌ಟಿಸಿ” ಎಂಬ ಹೆಸರು ಬಳಸುವಂತಿಲ್ಲವೆಂದು, ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿರವರು ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದಾರೆ. ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಯನ್ನು ನೋಡಿ ಆಶ್ಚರ್ಯವಾಗಿದೆ. ಇದು ವಸ್ತುಷಃ ಸತ್ಯಕ್ಕೆ ದೂರವಾದ ವರದಿಯಾಗಿದೆ ಎಂದು ಕ ರಾ ರ ಸಾ ನಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ ಕಳಸದ ಸ್ಪಷ್ಟೀಕರಣ ನೀಡಿದ್ದಾರೆ.

ಕೆ ಎಸ್ ಆರ್ ಟಿ ಸಿ ಹೆಸರು ಕೇರಳ ಪಾಲು ಸತ್ಯಕ್ಕೆ ದೂರವಾದ ಮಾತು | ವ್ಯವಸ್ಥಾಪಕ ನಿರ್ದೇಶಕರ ಸ್ಪಷ್ಟನೆ Read More »

ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಒತ್ತಾಯಿಸಿ ಜೂ.5ರಂದು ಅತಿಥಿ ಉಪನ್ಯಾಸಕರಿಂದ ಆನ್ಲೈನ್ ಚಳುವಳಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಪ.ಪೂ ಅತಿಥಿ ಉಪನ್ಯಾಸಕರ ಸಂಘವು ಜೂ.5 ರಂದು ಆನ್ ಲೈನ್ ಚಳುವಳಿ ನಡೆಸಲಿದೆ.ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರ ಬಾಕಿ ಇರುವ 2021 ನೇ ಶೈಕ್ಷಣಿಕ ಸಾಲಿನ ಎಲ್ಲಾ ಮಾಸಿಕ ವೇತನವನ್ನು ಬಿಡುಗಡೆ ಮಾಡಬೇಕು. ಕೋವಿಡ್ ವಿಶೇಷ ಪ್ಯಾಕೇಜ್ ನೀಡಬೇಕು. ಸೇವಾ ಭದ್ರತೆಯನ್ನು ಖಾತ್ರಿ ಮತ್ತು ಈ ಹಿಂದೆ ಕಾರ್ಯನಿರ್ವಹಿಸುತ್ತಾ ಇದ್ದ ಅತಿಥಿ ಉಪನ್ಯಾಸಕರನ್ನು ಮುಂದಿನ ದಿನಗಳಲ್ಲಿ ಸೇವೆಗೆ ನೇಮಕಾತಿ ಮಾಡಿಕೊಳ್ಳವುದು, 2021 ನೇ ಶೈಕ್ಷಣಿಕ ವರ್ಷದಲ್ಲಿ ಸರಕಾರಿ

ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಒತ್ತಾಯಿಸಿ ಜೂ.5ರಂದು ಅತಿಥಿ ಉಪನ್ಯಾಸಕರಿಂದ ಆನ್ಲೈನ್ ಚಳುವಳಿ Read More »

ಲಸಿಕೆ ಪಡೆಯಲು ಹಿಂಜರಿಯುವವರಿಗೆ ಇವರೇ ಸ್ಫೂರ್ತಿ | ಮೊದಲ ಡೋಸ್ ಪಡೆದು ಆರೋಗ್ಯವಾಗಿದ್ದಾರೆ 124 ವರ್ಷದ ಅಜ್ಜಿ

ಶ್ರೀನಗರ: ಜಗತ್ತನ್ನೇ ನಡುಗಿಸಿ ಕ್ರೌರ್ಯ ಮೆರೆಯುತ್ತಿರುವ ಕೊರೋನ ಕಂಡರೆ, ಕೇಳಿದರೆ ಹಲವರಿಗೆ ಭಯ. ಕಳೆದೆರಡು ವರ್ಷದಲ್ಲಿ ತಾಂಡವವಾಡುತ್ತಿರುವ ಕೊರೋನ ಜೀವ-ಜಗತ್ತನ್ನೇ ನಡುಗಿಸಿದ ಬಿಟ್ಟಿದೆ. ಕೊರೋನ ಹೆಸರು ಕೇಳಿ ಭಯ ಪಡುವುದರಲ್ಲಿ ತಪ್ಪಿಲ್ಲ ಆದರೆ ಕೆಲ ಜನರು ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಭಯಪಟ್ಟು ಹಿಂಜರಿಯುತ್ತಿರುವುದು ಅಚ್ಚರಿಯ ವಿಷಯ. ಆದರೆ ಇಲ್ಲೊಬ್ಬ ಬರೋಬ್ಬರಿ 124 ವರ್ಷದ ವೃದ್ಧರೊಬ್ಬರು ಮೊದಲ ಡೋಸ್ ಲಸಿಕೆ ಪಡೆದು ವ್ಯಾಕ್ಸಿನ್ ಪಡೆಯಲು ಹಿಂಜರಿಕೆ ಉಳ್ಳವರಿಗೆ ಸ್ಪೂರ್ತಿ ಎನಿಸಿದ್ದಾರೆ. ಇವರ ಹೆಸರು ರೆಹತಿ ಬೇಗಂ. ಜಮ್ಮು ಕಾಶ್ಮೀರದ

ಲಸಿಕೆ ಪಡೆಯಲು ಹಿಂಜರಿಯುವವರಿಗೆ ಇವರೇ ಸ್ಫೂರ್ತಿ | ಮೊದಲ ಡೋಸ್ ಪಡೆದು ಆರೋಗ್ಯವಾಗಿದ್ದಾರೆ 124 ವರ್ಷದ ಅಜ್ಜಿ Read More »

ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ

ಮಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆ ವಿರುದ್ಧ ಪ್ರತಿಭಟಿಸಿ ಧರಣಿ ಕೂತಿದ್ದ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಾಗ ಅವರ ಕುಟುಂಬಕ್ಕೆ ಹತ್ತು ಲಕ್ಷಕ್ಕೂ ಅಧಿಕ ಬಿಲ್ ಮಾಡಿದ್ದ, ಮೃತದೇಹ ನೀಡದೆ ಸತಾಯಿಸಿದ ಖಾಸಗಿ ಆಸ್ಪತ್ರೆ ವಿರುದ್ಧ ಸುಹೈಲ್ ಕಂದಕ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ ಧರಣಿ ಕೂತಿದ್ದರು. ಪ್ರತಿಭಟನೆಗೆ ಮಣಿದ ಆಸ್ಪತ್ರೆ ಮೃತದೇಹ ಹಸ್ತಾಂತರ ಮಾಡಿದ್ದರು. ಘಟನೆ ನಡೆದು ಹಲವು ದಿನಗಳು ಕಳೆದರೂ

ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ Read More »

ಎಸ್ಸೆಸ್ಸೆಲ್ಸಿ ಮಕ್ಕಳು ಭಯಪಡಬೇಕಿಲ್ಲ : ಪರೀಕ್ಷೆ ಕುರಿತು ಅಭಯ ನೀಡಿದ ಸಿ.ಎಂ

ಬೆಳಗಾವಿ: ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಘೋಷಣೆ ಮಾಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಕೋವಿಡ್ ನಿಯಂತ್ರಣಕ್ಕೆ ಬಂದರೆ ಮಾತ್ರ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಇಲ್ಲವಾದಲ್ಲಿ ಈ ವರ್ಷ ಪರೀಕ್ಷೆ ನಡೆಸುವುದಿಲ್ಲ ಎಂದು ಅಭಯ ನೀಡಿದರು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ

ಎಸ್ಸೆಸ್ಸೆಲ್ಸಿ ಮಕ್ಕಳು ಭಯಪಡಬೇಕಿಲ್ಲ : ಪರೀಕ್ಷೆ ಕುರಿತು ಅಭಯ ನೀಡಿದ ಸಿ.ಎಂ Read More »

ಮಂಗಳೂರಲ್ಲಿ ಮತ್ತೆ ಆ್ಯಕ್ಟಿವ್ ಆದ ಡ್ರಗ್ಸ್ ದಂಧೆ: ವಿ.ವಿ ಬಳಿ ಮೂವರು ಅರೆಸ್ಟ್

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಯನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಮಂಜೇಶ್ವರ ಉಪ್ಪಳ ಗೇಟ್ ಬಳಿ ನಿವಾಸಿಗಳಾದ ಮಹಮ್ಮದ್ ಮುನಾಫ್‌, ಮಹಮ್ಮದ್ ಮುಝಾಂಬಿಲ್ ಮತ್ತು ಅಹಮ್ಮದ್ ಮಸೂಕ್ ರವರನ್ನು ವಶಕ್ಕೆ ಪಡೆದಿದ್ದಾರೆ.ಕೊಣಾಜೆ ಪೊಲೀಸ್ ಠಾಣಾ ಪೊಲೀಸರಿಗೆ ಕೇರಳ ರಾಜ್ಯಕ್ಕೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ದೊರೆತಾಗ ಕೊಣಾಜೆ ವಿಶ್ವವಿದ್ಯಾನಿಲಯದ ಗಣೇಶ್ ಮಹಲ್ ಎಂಬಲ್ಲಿ ಕಾರೊಂದನ್ನು ನಿಲ್ಲಿಸಿ ತಪಾಸಣೆ ಮಾಡಿ, ಅವರಿಂದ

ಮಂಗಳೂರಲ್ಲಿ ಮತ್ತೆ ಆ್ಯಕ್ಟಿವ್ ಆದ ಡ್ರಗ್ಸ್ ದಂಧೆ: ವಿ.ವಿ ಬಳಿ ಮೂವರು ಅರೆಸ್ಟ್ Read More »

ಸೆಕ್ಸ್‌ದಂಧೆಯಿಂದ ಲಕ್ಷ ಲಕ್ಷ ಆದಾಯ ಸಿಗ್ತಿತ್ತಂತೆ | ದಿನಕ್ಕೊಂದು ಭಯಾನಕ ಸತ್ಯ ಬಾಯ್ಬಿಡ್ತಿದಾರೆ ಬಾಂಗ್ಲಾ ಯುವತಿಯ ರೇಪಿಸ್ಟ್ ಗಳು

ಬೆಂಗಳೂರು: ಕಳೆದ ವಾರ ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿಯ ಮೇಲೆ ನಡೆದಿದ್ದ ಭಯಾನಕ ಹಾಗೂ ವಿಕೃತ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳಿಂದ ಭಯಾನಕ ಸತ್ಯಗಳು ಹೊರಬೀಳುತ್ತಿವೆ. ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಅವರ ವಿಚಾರಣೆಯನ್ನು ತೀವ್ರಗೊಳಿಸುತ್ತಿದ್ದಂತೆಯೇ ಒಂದೊಂದೇ ಸತ್ಯವನ್ನು ಹೊರಹಾಕುತ್ತಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಾಂಗ್ಲಾ ಯುವತಿಯ ಮೇಲೆ ಬೆಂಗಳೂರಿನಲ್ಲಿ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಬಾಟಲಿ ತುರುಕಿ ಅದರ ವಿಡಿಯೋ ಮಾಡಿ ಹರಿಬಿಟ್ಟ ಭಯಾನಕ ಘಟನೆ ಇದಾಗಿದೆ. ಇಡೀ ದೇಶಾದ್ಯಂತ ಈ ಘಟನೆ

ಸೆಕ್ಸ್‌ದಂಧೆಯಿಂದ ಲಕ್ಷ ಲಕ್ಷ ಆದಾಯ ಸಿಗ್ತಿತ್ತಂತೆ | ದಿನಕ್ಕೊಂದು ಭಯಾನಕ ಸತ್ಯ ಬಾಯ್ಬಿಡ್ತಿದಾರೆ ಬಾಂಗ್ಲಾ ಯುವತಿಯ ರೇಪಿಸ್ಟ್ ಗಳು Read More »

ಸೆಕ್ಸ್ ಸಿಡಿ‌ ಪ್ರಕರಣ: ಜಾರಕಿಹೋಳಿಗೆ ಮತ್ತೆ ನಿರಾಸೆ

ಬೆಂಗಳೂರು : ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ​ ಖುಷಿಯಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಿರಾಸೆಯಾಗಿದೆ . ಸದ್ಯ ನಡೆಯುತ್ತಿರುವ ಸಂಪುಟ ಪುನರ್ ​ ರಚನೆ ಪ್ರಕ್ರಿಯೆಯಲ್ಲಿ ಮತ್ತೆ ಮಂತ್ರಿಯಾಗುವ ಆಸೆ ರಮೇಶ್ ಜಾರಕಿಹೊಳಿ ಇಟ್ಟುಕೊಂಡಿದ್ದರು ಎನ್ನಲಾಗಿತ್ತು . ಆದ್ರೆ ಪ್ರಕರಣದಲ್ಲಿ ಬಿ ರಿಪೋರ್ಟ್ ಪ್ರಕ್ರಿಯೆಯನ್ನ ಎಸ್ ‌ ಐಟಿ ಮುಂದೂಡಿಕೆ ಮಾಡಿದೆ . ಪ್ರಕರಣದ ಪ್ರಗತಿ ವರದಿಯನ್ನ ಹೈಕೋರ್ಟ್ ​​ ಗೆ ನೀಡಲಾಗಿದ್ದು ಮುಂದಿನ 17 ನೇ ತಾರೀಕು ಮತ್ತೊಂದು ಸ್ಟೇಟಸ್ ರಿಪೋರ್ಟ್ ನೀಡಬೇಕಿದೆ

ಸೆಕ್ಸ್ ಸಿಡಿ‌ ಪ್ರಕರಣ: ಜಾರಕಿಹೋಳಿಗೆ ಮತ್ತೆ ನಿರಾಸೆ Read More »