ರಾಜಕೀಯ ಸಮಾಚಾರ : ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು| ಯಡಿಯೂರಪ್ಪ ಪದಚ್ಯುತಿಗೆ ತೀವ್ರಗೊಂಡ ಪ್ರಯತ್ನ..!
ಬೆಂಗಳೂರು. ಮೇ.26: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದ್ದು, ಸಿಎಂ ಬದಲಾವಣೆಗೆ ಕೆಲವು ನಾಯಕರು ಟೊಂಕಕಟ್ಟಿ ನಿಂತಿದ್ದಾರೆ. ದೆಹಲಿ ಮಟ್ಟದಲ್ಲೂ ಚಿತಾವಣೆ ನಡೆಸಿದ್ದು, ಹೈಕಮಾಂಡ್ ಈ ಬಾರಿ ನಾಯಕತ್ವ ಬದಲಾವಣೆ ಮಾಡುತ್ತಾ? ರಾಜ್ಯ ನಾಯಕರ ಒತ್ತಡಕ್ಕೆ ಮಣಿಯುತ್ತಾ? ಈ ಕುರಿತು ಮುಂದೆ ಓದಿ… ಕಳೆದ ಆರೇಳು ತಿಂಗಳಿಂದಲೂ ಯಡಿಯೂರಪ್ಪನವರನ್ನ ಕೆಳಗಿಳಿಸೋ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಲೇ ಇವೆ.ಆದ್ರೆ ಕೋವಿಡ್ ನ ಕಾರಣದಿಂದ ಯಾವ ಪ್ರಯತ್ನಗಳೂ ಕೈಗೂಡುತ್ತಿಲ್ಲ. ಈ ಹಿಂದೆ ರಾಷ್ಟ್ರೀಯ ನಾಯಕರು ಸಿಎಂ ಬದಲಾವಣೆಗೆ ಮನಸ್ಸು […]










