ಸಮಗ್ರ ಸಮಾಚಾರ

ಒಂದೇ ಬಾರಿಗೆ ಹತ್ತು ಮಕ್ಕಳ ಹೆತ್ತಳು ಈ ಮಹಾತಾಯಿ

ದಕ್ಷಿಣ ಆಫ್ರಿಕಾ: ಮಹಿಳೆಯೋರ್ವರು ಒಂದೇ ಬಾರಿಗೆ ಬರೋಬ್ಬರಿ ಹತ್ತು ಮಕ್ಕಳಿಗೆ ಜನ್ಮ ನೀಡಿದ ಘಟನೆ ದಕ್ಷಿಣ ಆಫ್ರಿಕದಲ್ಲಿ ನಡೆದಿದೆ. 10 ಮಕ್ಕಳಲ್ಲಿ 7 ಗಂಡುಮಕ್ಕಳು ಮತ್ತು 3 ಹೆಣ್ಣುಮಕ್ಕಳು. ಟೆಬೋಗೊ ತ್ಸೊಟೆಟ್ಸಿ ಎಂಬವರ ಪತ್ನಿ 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಎಂಬ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಎಲ್ಲ ಮಕ್ಕಳನ್ನು ಸಿಸೇರಿಯನ್ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ಈ ತಾಯಿ ತನ್ನ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ […]

ಒಂದೇ ಬಾರಿಗೆ ಹತ್ತು ಮಕ್ಕಳ ಹೆತ್ತಳು ಈ ಮಹಾತಾಯಿ Read More »

ಮಂಗಳೂರು: ಪತ್ನಿಯೊಂದಿಗೆ ತಬಲ ಕಲಾವಿದ ಆತ್ಮಹತ್ಯೆ

ಮಂಗಳೂರು: ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿಯಲ್ಲಿ ನಡೆದಿದೆ. ಕದ್ರಿ ಪಿಂಟೋ ಲೇನ್ ನಿವಾಸಿ ಸುರೇಶ್ 55 ಮತ್ತು ಪತ್ನಿ ವಾಣಿಶ್ರೀ ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಿಗ್ಗೆ ಸುರೇಶ್ ಅವರ ಮೃತದೇಹ ಮನೆಯ ಪಕ್ಕದ ಬಾವಿಯಲ್ಲಿ ಹಾಗೂ ಪತ್ನಿಯ ಮೃತದೇಹ ಮನೆಯ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡೆತ್ ನೋಟ್ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಪತ್ನಿಯೊಂದಿಗೆ ತಬಲ ಕಲಾವಿದ ಆತ್ಮಹತ್ಯೆ Read More »

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ | ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ

ನವದೆಹಲಿ: ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ ಹಾಗೂ ನಿಗದಿತ ದರ ಇಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಗಳಿಗೆ ಗರಿಷ್ಠ ಮಾರಾಟ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಯನ್ನು 780 ರೂ.ಗೆ, ಕೋವ್ಯಾಕ್ಸಿನ್ ಲಸಿಕೆ 1410 ಮಾರಾಟ ಮಾಡಬೇಕಿದೆ. ಹಾಗೂ ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆಗೆ 1,145 ರೂ. ನಿಗದಿಪಡಿಸಿದೆ. ತೆರಿಗೆ ಮತ್ತು 150 ರೂ.

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ | ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ Read More »

ಲಾಕ್ಡೌನ್ : ವಶಕ್ಕೆ ಪಡೆದ ವಾಹನ ಹಿಂದಿರುಗಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ಸಂಚಾರ ನಡೆಸಿದ ಸಂದರ್ಭ ಪೊಲೀಸರು ವಶಕ್ಕೆ ಪಡೆದಿದ್ದ ವಾಹನಗಳನ್ನು ಹಿಂದಿರುಗಿಸಲು ಕರ್ನಾಟಕ ಹೈಕೋರ್ಟ್ ಪೊಲೀಸ್ ಇಲಾಖೆಗೆ ಸೂಚಿಸಿದೆ. ವಾಹನ ನಿಲುಗಡೆಗೆ ಸ್ಥಳಾವಕಾಶ ಕೊರತೆ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಕೊರೋನ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ಅಂತ್ಯದ ವೇಳೆಗೆ ಲಾಕ್ಡೌನ್ ಘೋಷಣೆಯಾದಾಗಿನಿಂದ ರಾಜ್ಯದ್ಯಂತ ನಿಯಮ ಉಲ್ಲಂಘಿಸಿದ ಲಕ್ಷಗಟ್ಟಲೆ ವಾಹನಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿತ್ತು. ಲಾಕ್ಡೌನ್ ಮುಗಿಯದೆ ವಾಹನಗಳನ್ನು ಮಾಲೀಕರು

ಲಾಕ್ಡೌನ್ : ವಶಕ್ಕೆ ಪಡೆದ ವಾಹನ ಹಿಂದಿರುಗಿಸಲು ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚನೆ Read More »

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ |ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ

ನವದೆಹಲಿ: ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ ಹಾಗೂ ನಿಗದಿತ ದರ ಇಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಗಳಿಗೆ ಗರಿಷ್ಠ ಮಾರಾಟ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಯನ್ನು 780 ರೂ.ಗೆ ಹಾಗೂ ಕೋವ್ಯಾಕ್ಸಿನ್ ಲಸಿಕೆ 1410 ಮಾರಾಟ ಮಾಡಬೇಕಿದೆ. ಇನ್ನು ಸೇವಾ ದರಗಳನ್ನು 150ರೂ. ನಿಗದಿಪಡಿಸಲಾಗಿದೆ. ಇನ್ನೂ ಖಾಸಗಿ ಆಸ್ಪತ್ರಗಳು ದರ ನಿಗದಿಮಾಡದಂತೆ ರಾಜ್ಯಸರಕಾರ

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ |ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ Read More »

ಶಿಲ್ಪಾನಾಗ್ ರನ್ನು ಡಿಸಿ ಮಾಡಲು ಪ್ರಯತ್ನಿಸಿದ್ರಂತೆ ಬಿಜೆಪಿ ಸಂಸದ!?

ಬೆಂಗಳೂರು: ಬಿಜೆಪಿ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಗ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು. ಬಿಗಿಯಾದ ಸರ್ಕಾರ

ಶಿಲ್ಪಾನಾಗ್ ರನ್ನು ಡಿಸಿ ಮಾಡಲು ಪ್ರಯತ್ನಿಸಿದ್ರಂತೆ ಬಿಜೆಪಿ ಸಂಸದ!? Read More »

ಕ್ಷುಲ್ಲಕ ಕಾರಣಕ್ಕೆ ದಲಿತ ಬಾಲಕನ ಮೇಲೆ ಮೂತ್ರ ವಿಸರ್ಜನೆ : ಇಬ್ಬರ ಬಂಧನ

ಮಹಾರಾಷ್ಟ್ರ : ದಲಿತ ಬಾಲಕನ ಮೇಲೆ ಮೂತ್ರವಿಸರ್ಜಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಜಮೀನಿನ ಮಾಲಕ ರವೀಂದ್ರ ಮತ್ತು ಪ್ರವೀಣನನ್ನು ಬಂಧಿತ ಆರೋಪಿಗಳು.ಬಾಲಕನ ಮೇಲಿನ ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಮಾವಿನ ಕಾಯಿ ಕೀಳಿದ್ದಕ್ಕೆ ಬಾಲಕನನ್ನು ಪ್ರಶ್ನಿಸಿ ಮರಕ್ಕೆ ಕಟ್ಟಿಹಾಕಿ, ಮೈಮೇಲೆ ಮೂತ್ರ ವಿಸರ್ಜನೆ ಮಾಡಿ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಘಟನೆ ಬಗ್ಗೆ ಸಂತ್ರಸ್ತ ಬಾಲಕ ಮನೆಯಲ್ಲಿ ಹೇಳಿದ್ದು, ಪೋಷಕರು ಕೇಸ್ ದಾಖಲಿಸಿದ್ದಾರೆ. ಮಾವು

ಕ್ಷುಲ್ಲಕ ಕಾರಣಕ್ಕೆ ದಲಿತ ಬಾಲಕನ ಮೇಲೆ ಮೂತ್ರ ವಿಸರ್ಜನೆ : ಇಬ್ಬರ ಬಂಧನ Read More »

ಕೂಲಿ ಕಸಿದುಕೊಂಡ ಪದ್ಮಶ್ರಿ ಪುರಸ್ಕಾರ: ಪ್ರಶಸ್ತಿ ಬಂದ ಬಳಿಕ ಬದುಕೋದೇ ಇವ್ರಿಗೆ ಕಷ್ಟವಾಗ್ತಿದೆ

ಒರಿಸ್ಸಾ: ಪದ್ಮಶ್ರಿ ಪ್ರಶಸ್ತಿ ಸಿಕ್ಕಿದ ಬಳಿಕ ಕೂಲಿ ಕೆಲಸಕ್ಕೆ ಕೂಡ ನನ್ನನ್ನು ಯಾರೂ ಕರೆಯಿತ್ತಿಲ್ಲ. ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲ, ಎಂದು ಪದ್ಮಶ್ರೀ ಪುರಸ್ಕೃತರೋರ್ವರು ಹೇಳಿದ್ದು, ಇದೀಗ ಎಲ್ಲೆಡೆ ಸುದ್ದಿಯಾಗ್ತಿದೆ. ಹೌದು. ಇವರು ಒರಿಸ್ಸಾದ ಬಡರೈತ ದೈತಾರಿ ನಾಯಕ್. ಕೇಂದ್ರ ಸರಕಾರ ಕೊಟ್ಟ ಪದ್ಮಶ್ರಿ ಪ್ರಶಸ್ತಿ ಬಳಿಕ ಇವರ ಬಾಳು ಬೀದಿಪಾಲಾಗಿದೆ. ದೈತಾರಿ ನಾಯಕ್ ಒರಿಸ್ಸಾದಲ್ಲಿ 3 ಕಿ,ಮೀ ಗುಡ್ಡವನ್ನು ಅಗೆದು ಸುರಂಗವನ್ನು ಕೊರೆದು ಜನರ ಜಮೀನಿಗೆ ನೀರು ತಂದಿದ್ದರು. ಊರಿನ ಜನರ ಬಾಳನ್ನು ಬೆಳಗಿಸಿದ ಇವರಿಗೆ ಕೇಂದ್ರ

ಕೂಲಿ ಕಸಿದುಕೊಂಡ ಪದ್ಮಶ್ರಿ ಪುರಸ್ಕಾರ: ಪ್ರಶಸ್ತಿ ಬಂದ ಬಳಿಕ ಬದುಕೋದೇ ಇವ್ರಿಗೆ ಕಷ್ಟವಾಗ್ತಿದೆ Read More »

ಯಡಿಯೂರಪ್ಪ ಕಾಲಿಗೆ ಬಿದ್ದ ಶಾಸಕ “ಶರಣು” ಸಲಗರ

ಬೆಂಗಳೂರು:ಶಾಸಕರೋರ್ವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಘಟನೆ ಇಂದು ನಡೆದಿದೆ. ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಿಗೆ ಇಂದು ಇಂದು ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಬಸವಕಲ್ಯಾಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಶಾಸಕ ಶರಣು ಸಲಗರ ಪ್ರಮಾಣವಚನ ಸ್ವೀಕರಿಸುವ ಮೊದಲು, ಹಿರಿಯ ನಾಯಕ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಇನ್ನೋರ್ವ ಶಾಸಕ ಕಾಂಗ್ರೆಸ್ನ ಬಸವನಗೌಡ ತುರವಿಹಾಳ ಕೂಡ ಇಂದು ಶಾಸಕರಾಗಿ

ಯಡಿಯೂರಪ್ಪ ಕಾಲಿಗೆ ಬಿದ್ದ ಶಾಸಕ “ಶರಣು” ಸಲಗರ Read More »

ಒಲಿಂಪಿಕ್ಸ್​ ಕೂಟದಲ್ಲಿ ಕ್ರೀಡಾಪಟುಗಳಿಗೆ 1.60 ಲಕ್ಷ ಕಾಂಡೋಮ್ ಹಂಚಿಕೆ, ಆದ್ರೂ ಬಳಕೆ ಮಾಡಂಗಿಲ್ಲ! ಮತ್ತೇನ್ ಮಾಡ್ತಾರೆ?

ಟೋಕಿಯೊ : ಪ್ರತಿ ವರ್ಷದಂತೆ ಈ ವರ್ಷ ಕೂಡ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬರುವ ಕ್ರೀಡಾಪಟುಗಳಿಗೆ ಕೋಂಡಮ್ ವಿತರಿಸಲು ಸಂಘಟಕರು ಸಿದ್ದತೆಯನ್ನು ನಡೆಸಿದ್ದಾರೆ. ಜುಲೈ 23ರಿಂದ ಟೋಕಿಯೊ ಜಾಗತಿಕ ಒಲಿಂಪಿಕ್ಸ್​ ಕ್ರೀಡಾಕೂಟವನ್ನು ಆಯೋಜಿಸಲು ಆತಿಥೇಯ ಜಪಾನ್​ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕ್ರೀಡಾಕೂಟದಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರೆಲ್ಲರಿಗೂ ತಲಾ 14ರಂತೆ ಒಟ್ಟಾರೆ 1.60 ಲಕ್ಷ ಕಾಂಡೋಮ್​ಗಳನ್ನು ಸಂಘಟಕರು ವಿತರಿಸಲು ಸಿದ್ದತೆ ಮಾಡಿದ್ದಾರೆ. ಪ್ರತಿ ವರ್ಷ ಕೂಡ ಕಾಂಡಮ್ ವಿತರಿಸಲಾಗುತ್ತದೆ. ಆದರೆ ಈ ಬಾರಿ ಕೋಂಡಮ್ ಬಳಸದೆ

ಒಲಿಂಪಿಕ್ಸ್​ ಕೂಟದಲ್ಲಿ ಕ್ರೀಡಾಪಟುಗಳಿಗೆ 1.60 ಲಕ್ಷ ಕಾಂಡೋಮ್ ಹಂಚಿಕೆ, ಆದ್ರೂ ಬಳಕೆ ಮಾಡಂಗಿಲ್ಲ! ಮತ್ತೇನ್ ಮಾಡ್ತಾರೆ? Read More »