ಸಮಗ್ರ ಸಮಾಚಾರ

ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್- ಒಂದು ಲಕ್ಷ ರೂ. ವಂಚನೆ

ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್ ಮಾಡಿ, ಕರೆ ಮಾಡಿ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ. ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಮಂಗಳೂರಿನಲ್ಲಿ ನಡೆದಿದೆ. ದೂರುದಾರರ ಸ್ನೇಹಿತರೊಬ್ಬರು ಯುಎಸ್‌ಎಯಲ್ಲಿ ವಾಸ್ತವ್ಯವಿದ್ದು, ಜೂನ್ 29ರಂದು ಅವರ ವಾಟ್ಸಪ್ ಮೂಲಕ ಕರೆ ಮಾಡಿ ಸಂಬಂಧಿಕರಿಗೆ ಕೊರೊನಾ ಬಂದಿದ್ದು ಚಿಕಿತ್ಸೆಗಾಗಿ ಹಣವನ್ನು ಕಳಿಸಿಕೊಡುವಂತೆ ಕೇಳಿದ್ದು ಇದನ್ನು ನಂಬಿ ಆತ ನೀಡಿದ ನಂಬರ್‌ಗೆ ಗೂಗಲ್ ಪೇ ಮೂಲಕ ಹಂತಹAತವಾಗಿ 1 ಲಕ್ಷ ವರ್ಗಾವಣೆ ಮಾಡಿದ್ದಾರೆ. ಬಳಿಕ ಸ್ನೇಹಿತನಿಗೆ ಕರೆ ಮಾಡಿ ಕೇಳಿದಾಗ ವಾಟ್ಸಪ್ […]

ಮಂಗಳೂರು: ವಾಟ್ಸಪ್ ಖಾತೆ ಹ್ಯಾಕ್- ಒಂದು ಲಕ್ಷ ರೂ. ವಂಚನೆ Read More »

ಬಂಟ್ವಾಳ: ಕಾಲೇಜ್ ಬಸ್, ಬೈಕ್ ಅಪಘಾತ- ತಪ್ಪಿದ ಅನಾಹುತ

ಬಂಟ್ವಾಳ: ಮೆಡಿಕಲ್ ಕಾಲೇಜಿನ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬಸ್‌ನಲ್ಲಿದ್ದ ಮಹಿಳಾ ಸಿಬ್ಬಂದಿ ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆ ಎಂಬಲ್ಲಿ ಜು.2ರಂದು ಬೆಳಗ್ಗೆ ನಡೆದಿದೆ. ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಗೆ ಸೇರಿದ ಬಸ್‌ನಲ್ಲಿ ವೆನ್ಲಾಕ್, ಕೆಎಂಸಿ, ಮತ್ತು ಲೇಡಿಗೋಶನ್ ಆಸ್ಪತ್ರೆಗೆ ಸೇರಿದ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದ ಬಸ್ ರಸ್ತೆ ಬದಿಯ ಪ್ರಪಾತದ ಬಳಿ ಸಿಕ್ಕಿಹಾಕಿಕೊಂಡಿದೆ.

ಬಂಟ್ವಾಳ: ಕಾಲೇಜ್ ಬಸ್, ಬೈಕ್ ಅಪಘಾತ- ತಪ್ಪಿದ ಅನಾಹುತ Read More »

ಮಂಗಳೂರು: ರಾತ್ರೋರಾತ್ರಿ ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ; ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಬಯಲು ; ಇಲ್ಲಿರೋದು ನಕಲಿ ವೈದ್ಯರಲ್ಲ, ನಕಲಿ ರೋಗಿಗಳು..!

ಮಂಗಳೂರು: ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ರಾತ್ರೋರಾತ್ರಿ ಮಹಿಳೆಯರನ್ನು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಖಾಲಿ ಇರುವ ಬೆಡ್‌ಗಳ ಭರ್ತಿಗಾಗಿ ನಕಲಿ ರೋಗಿಗಳನ್ನು ಕರೆತರುವ ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಇನ್ನೂ ಈ ಘಟನೆ ಮೂಡಬಿದ್ರೆ ತಾಲೂಕಿನ ಕುರ್ನಾಡು ಗ್ರಾಮದಲ್ಲಿ ನಡೆದಿದ್ದು, ಮಂಗಳೂರು ಹೊರವಲಯದ ಕಣಚೂರು ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಕೊಡಿಸುವುದಾಗಿ ಹೇಳಿ ಸುಮಾರು 85 ಮಹಿಳೆಯರನ್ನು ತಡರಾತ್ರಿ ಕಾಲೇಜು ಬಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಪೊಲೀಸರ ತನಿಖೆ ವೇಳೆ

ಮಂಗಳೂರು: ರಾತ್ರೋರಾತ್ರಿ ಮಹಿಳೆಯರ ಸಾಗಾಟ ಪ್ರಕರಣಕ್ಕೆ ತಿರುವು ; ಮೆಡಿಕಲ್ ಕಾಲೇಜ್‌ಗಳ ಕಳ್ಳಾಟದ ಸತ್ಯ ಬಯಲು ; ಇಲ್ಲಿರೋದು ನಕಲಿ ವೈದ್ಯರಲ್ಲ, ನಕಲಿ ರೋಗಿಗಳು..! Read More »

ಅತಿ ದೊಡ್ಡ ಎಣ್ಣೆ ಮಾಫಿಯಾ ಜಾಲ ಭೇಧಿಸಿದ ದ.ಕ ಪೊಲೀಸ್, ನಾಲ್ಕು ‌ಮಂದಿ ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಆಯಿಲ್ ದಂಧೆಯೊಂದನ್ನು ಪೊಲೀಸರು ಭೇದಿಸಿದ್ದಾರೆ. ಟ್ಯಾಂಕರ್ ಚಾಲಕರೊಂದಿಗೆ ಒಪ್ಪಂದ ಮಾಡಿಕೊಂಡು ಆಯಿಲ್ ದಂಧೆ ನಡೆಸುತ್ತಿದ್ದ ಘಟಕದ ಮೇಲೆ ಪೊಲೀಸ್ ದಾಳಿ ನಡೆಸಿದ್ದಾರೆ. ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿ ಸೋಮವಾರ ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಎಸ್.ದಾಸ್, ಸಿಂಗರಾಜ್, ಎಸ್.ಕಾರ್ತಿ ಮತ್ತು ಸೆಲ್ವ ರಾಜ್ ಎಂಬುವರನ್ನು ಬಂಧಿಸಲಾಗಿದೆ.ಪೊಲೀಸ್ ದಾಳಿಯ ವೇಳೆ ಮನೆಯ ಒಳಗೆ ಭಾರೀ ಗಾತ್ರದ

ಅತಿ ದೊಡ್ಡ ಎಣ್ಣೆ ಮಾಫಿಯಾ ಜಾಲ ಭೇಧಿಸಿದ ದ.ಕ ಪೊಲೀಸ್, ನಾಲ್ಕು ‌ಮಂದಿ ಅರೆಸ್ಟ್ Read More »

ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ

ಸಾಂದರ್ಭಿಕ ಚಿತ್ರ ಮೂಡಬಿದಿರೆ: ಹೊಟೇಲೊಂದರಲ್ಲಿ ಗ್ರಾಹಕನೋರ್ವ ಯೂಟ್ಯೂಬ್ ಮೂಲಕ ವಿಡಿಯೋ ನೋಡುತ್ತಿರುವಾಗ ಅದರಲ್ಲಿನ ಸೆಕ್ಸ್ ಧ್ವನನಿ ಹೊರಗಡೆ ಜೋರಾಗಿ ಕೇಳಿರುವ ಪರಿಣಾಮ ಕೆರಳಿದ ಹೊಟೇಲ್ ನೌಕರ ಗ್ರಾಹಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಜೂನ್ 28ರಂದು ಸಂಜೆ ಮುನೀರ್ ಎಂಬವರು ಶೊರ್ಮವಾಲಾ ಹೋಟೆಲ್‌ಗೆ ಆರ್ಡರ್ ಮಾಡಲು ಬಂದಿದ್ದರು. ಈ ಸಂದರ್ಭ ಅಲ್ಲಿನ ಟಿ.ಎಸ್.ಕೆಫೆಯ ವೈಫೈ ಮುನೀರ್ ಮೊಬೈಲ್‌ಗೆ ಕನೆಕ್ಟ್ ಆಗಿದೆ. ಇದರಿಂದ ಮುನೀರ್ ಅವರು ಮೊಬೈಲ್‌ನಲ್ಲಿರು ಯುಟ್ಯೂಬ್‌ನಲ್ಲಿ ವೀಡಿಯೋ ನೋಡುತ್ತಿದ್ದರು. ಈ ಸಂದರ್ಭ ಸೆಕ್ಸ್ ವಾಯ್ಸ್ ಕೇಳಿಸಿದೆ.

ಮೂಡಬಿದಿರೆ: ಗ್ರಾಹಕನ ಎಡವಟ್ಟಿನಿಂದ ಹೋಟೆಲ್ ಟಿ.ವಿಯಲ್ಲಿ ಸೆಕ್ಸ್ ಆಡಿಯೋ; ನೌಕರನಿಂದ ಗ್ರಾಹಕನಿಗೆ ಹಲ್ಲೆ Read More »

ಮೆಟ್ರೋ ರೈಲಿನಲ್ಲಿ ಶೀಘ್ರವೇ ಟೋಕನ್ ವ್ಯವಸ್ಥೆ ಆರಂಭ

ಬೆಂಗಳೂರು: ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಹಂತಹಂತವಾಗಿ ಸಡಿಲಿಯಾಗುತ್ತಿದೆ. ಸದ್ಯ ಸುಮಾರು ೨ ತಿಂಗಳ ನಂತರ ಮೆಟ್ರೋ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಟೋಕನ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಸದ್ಯ ಈಗ ಮತ್ತೆ ಮೆಟ್ರೋ ರೈಲಿನಲ್ಲಿ ಟೋಕನ್ ವ್ಯವಸ್ಥೆ ಆರಂಭಿಸಲು ಚಿಂತನೆ ನಡೆಯುತ್ತಿದೆ. ಸ್ಮಾರ್ಟ್ ಕಾರ್ಡ್ ಕಡ್ಡಾಯದಿಂದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಕೊವಿಡ್ ಆತಂಕದಿಂದ ಸ್ಥಗಿತಗೊಂಡಿದ್ದ ಟೋಕನ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲು BMRCL ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಕೊವಿಡ್ ಪೂರ್ವದಲ್ಲಿ ನಿತ್ಯ ೫

ಮೆಟ್ರೋ ರೈಲಿನಲ್ಲಿ ಶೀಘ್ರವೇ ಟೋಕನ್ ವ್ಯವಸ್ಥೆ ಆರಂಭ Read More »

ಸಂಚಾರ ವಿಜಯ್‌ಗೆ ಅಮೆರಿಕದಲ್ಲಿ ಗೌರವ – ಫ್ರಾಂಕ್ಲಿನ್ ಥಿಯೇಟರ್ ಮುಂದೆ ವಿಜಯ್‌ಯವರನ್ನು ಸ್ಮರಿಸುವ ಬರಹ

ಜೂ.12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ನಟ ಸಂಚಾರಿ ವಿಜಯ್ ಅವರಿಗೆ ಆಕ್ಸಿಡೆಂಟ್ ಆಗಿ ನಿಧನರಾಗಿದ್ದರು.ಇವರ ನಿಧನದಿಂದ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ನಷ್ಟವಾಗಿದ್ದಲ್ಲ. ಇಡೀ ಭಾರತೀಯ ಚಿತ್ರರಂಗವೇ ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಂತೆ ಆಗಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಅವರ ಅಗಲಿಕೆಗೆ ಎಲ್ಲರೂ ನಮನ ಸಲ್ಲಿಸಿದ್ದರು. ಈಗ ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್ ಕೂಡ ಅವರಿಗೆ ಗೌರವ ಸೂಚಿಸಿದೆ. ಫ್ರಾಂಕ್ಲಿನ್ ಥಿಯೇಟರ್ ಮುಂದೆ ವಿಜಯ್ ಅವರನ್ನು ಸ್ಮರಿಸುವ ಬರಹವನ್ನು ಬಿತ್ತರಿಸಲಾಗಿದೆ. ಈ ಸುದ್ದಿಯನ್ನು ‘ನಾನು

ಸಂಚಾರ ವಿಜಯ್‌ಗೆ ಅಮೆರಿಕದಲ್ಲಿ ಗೌರವ – ಫ್ರಾಂಕ್ಲಿನ್ ಥಿಯೇಟರ್ ಮುಂದೆ ವಿಜಯ್‌ಯವರನ್ನು ಸ್ಮರಿಸುವ ಬರಹ Read More »

ಬಹು ನಿರೀಕ್ಷಿತ ಸ್ಕೋಡಾ ಕುಶಾಕ್ ಕಾರು ಬಿಡುಗಡೆ- ಇಲ್ಲಿದೆ ಸಂಪೂರ್ಣ ಮಾಹಿತಿ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಬಹು ನಿರೀಕ್ಷಿತ ಕುಶಾಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಕೋಡಾ ಕುಶಾಕ್ MQB A0 INಪ್ಲಾಟ್‌ಫಾರ್ಮ್ನಿಂದ ಹೊರಹೊಮ್ಮಿದ ಮೊದಲ ಮಾದರಿಯಾಗಿದೆ. ಇದು ಫೋಕ್ಸ್ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ ಸ್ಕೇಲೆಬಲ್ ಆರ್ಕಿಟೆಕ್ಚರ್‌ನ ಸ್ಥಳೀಯ ಆವೃತ್ತಿಯಾಗಿದ್ದು, ಇದನ್ನು ಭಾರತೀಯ ಮಾರುಕಟ್ಟೆಗೆಂದೇ ಅಭಿವೃದ್ಧಿಪಡಿಸಲಾಗಿದೆ. ಕುಶಾಕ್ ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ ಎಂಬ ಮೂರು ಮಾದರಿಗಳಲ್ಲಿ ದೊರೆಯಲಿದೆ. ಕುಶಾಕ್ ಕಾರಿನ ಬೆಲೆ10.50 ಲಕ್ಷದಿಂದ 17.60 ಲಕ್ಷದವರೆಗೆ (ಎಕ್ಸ್ಶೋರೂಂ, ದೆಹಲಿ) ಇದೆ. ಸ್ಕೋಡಾ ಕುಶಾಕ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರ

ಬಹು ನಿರೀಕ್ಷಿತ ಸ್ಕೋಡಾ ಕುಶಾಕ್ ಕಾರು ಬಿಡುಗಡೆ- ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಮುಲ್ಕಿ: ಕಾರು ಲಾರಿ ಡಿಕ್ಕಿ ಗೃಹ ರಕ್ಷಕ ದಳ ಸಿಬ್ಬಂದಿ ಗಂಭೀರ

ಮಲ್ಕಿ: ಕಾರು ಮತ್ತು ಗ್ಯಾಸ್ ಟ್ಯಾಂಕರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಉದ್ಯಾವರದಲ್ಲಿ ನಡೆದಿದೆ. ಗಾಯಗೊಂಡವರನ್ನು ಮುಲ್ಕಿ ಠಾಣೆಯಲ್ಲಿ ಗೃಹರಕ್ಷಕ ದಳ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಕೇಶ್ (27) ಎಂದು ತಿಳಿದುಬಂದಿದೆ. ಇವರು ನಿನ್ನೆ ರಾತ್ರಿ ಕೆಲಸ ಮುಗಿಸಿ ಇಂದು ಬೆಳಗಿನ ಜಾವ ಉಡುಪಿ ಕಡೆ ತೆರಳುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಮಂಗಳೂರು ಕಡೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಗೆ ಇವರ ಕಾರ್ ಡಿಕ್ಕಿ ಹೊಡೆದಿದೆ. ತಲೆ ಹಾಗೂ ಕಾಲಿಗೆ

ಮುಲ್ಕಿ: ಕಾರು ಲಾರಿ ಡಿಕ್ಕಿ ಗೃಹ ರಕ್ಷಕ ದಳ ಸಿಬ್ಬಂದಿ ಗಂಭೀರ Read More »

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಗೂಡ್ಸ್‌ಗಾಡಿ, ಸವಾರ ಸ್ಥಳದಲ್ಲೇ ಸಾವು, ಪೊಲೀಸ್ ಶೆಡ್ ಧ್ವಂಸ. ಆತೂರು ಉದ್ವಿಗ್ನ

ಉಪ್ಪಿನಂಗಡಿ: ವಾಹನ ತಪಾಸಣೆಯ ವೇಳೆ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ ಮಂಗಳವಾರದಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮೃತ ಸವಾರನನ್ನು ಆತೂರು ಬೈಲು ನಿವಾಸಿ ಹಾರಿಸ್(33) ಎಂದು ಗುರುತಿಸಲಾಗಿದೆ. ಮೃತರು ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿದ್ದ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ.

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಗೂಡ್ಸ್‌ಗಾಡಿ, ಸವಾರ ಸ್ಥಳದಲ್ಲೇ ಸಾವು, ಪೊಲೀಸ್ ಶೆಡ್ ಧ್ವಂಸ. ಆತೂರು ಉದ್ವಿಗ್ನ Read More »