ಸುಳ್ಯ: ಗಣಿಗಾರಿಕೆ ಸ್ಫೋಟಕಗಳಿಂದ ಭೂಮಿ ಕಂಪನ| ಮರ್ಕಂಜ ಗ್ರಾಮಸ್ಥರ ದೂರಿಗೆ ಸುಳ್ಯ ತಹಶಿಲ್ದಾರರಿಂದ ಸ್ಪಂದನೆ
ಸಮಗ್ರ ನ್ಯೂಸ್: ಮರ್ಕಂಜ ಗ್ರಾಮದ ವ್ಯಾಪ್ತಿಯಲ್ಲಿ ಇದೀಗ ಕೆಲವು ದಿನಗಳಿಂದ ಭೂಮಿ ಕಂಪನಗೊಳ್ಳುತ್ತಿದ್ದು, ಜೂ.28ರಂದು ಮುಂಜಾನೆ ಸುಮಾರು 7-45 ಸಮಯದಲ್ಲಿ ಭಾರೀ ಶಬ್ಧದೊಂದಿಗೆ ಭೂಮಿ ಕಂಪನಗೊಂಡಿದೆ. ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಸುಮಾರು ಸಮಯದಿಂದ ಕರಿಗಲ್ಲು ಗಣಿಗಾರಿಕೆ ಕೂಡಾ ನಡೆದುಕೊಂಡು ಬರುತ್ತಿದೆ. ಈ ಗ್ರಾಮದಲ್ಲಿ ಬಂಡೆಕಲ್ಲುಗಳನ್ನು ಒಡೆಯುವ ಸಲುವಾಗಿ ಅಪಾಯಕಾರಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಈ ಸ್ಫೋಟಕವನ್ನು ಉಪಯೋಗಿಸಿ ಬಂಡೆಕಲ್ಲುಗಳನ್ನು ಒಡೆಯುವಾಗ ಕಟ್ಟಡದೊಂದಿಗೆ ಭೂಮಿಯು ಕಂಪನಗೊಳ್ಳುತ್ತಿದ್ದು, ಸುತ್ತಮುತ್ತಲಿನ ನಾಗರಿಕರು ಭಯಭೀತರಾಗಿರುತ್ತಾರೆ. ಇದರಿಂದಾಗಿ ಮನೆಯಲ್ಲಿ ವಾಸವಿರಲು ಜನತೆ ಭಯಪಡುತ್ತಿದ್ದು, ಇಂದು […]









