ಸಮಗ್ರ ಸಮಾಚಾರ

ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು

ಹುಬ್ಬಳ್ಳಿ: ನಾನು ಹಿಜಬ್ ಬಗ್ಗೆ ಮಾತನಾಡುವವನೇ. ನಾನು ಯಾಕೆ ಕ್ಷಮೆ ಕೇಳಬೇಕು ಎಂದು ಹೇಳುವ ಮೂಲಕ ಮಾಜಿ ಸಚಿವ ಜಮೀರ್ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಜಮೀರ್ ಅಹ್ಮದ್ ಕೌಂಟರ್ ನೀಡಿ ಮಾತನಾಡಿದ್ದು, ನಾನ್ ಹಿಜಬ್ ಬಗ್ಗೆ ಮಾತನಾಡುವವನೇ, ಯಾಕೆ ನಾನು ಕ್ಷಮೆ ಕೇಳಬೇಕು. ಕ್ಷಮೆ ಕೇಳುವಂತಹ ಹೇಳಿಕೆ ನಾನೇನು ನೀಡಿದ್ದೀನಿ ಎಂದು ಕಿಡಿಕಾರಿದರು. ನಾನು ಹಿಜಬ್ ಹಾಕಬೇಕು ಅಂತ ಹೇಳಿದ್ದೆ, ಮಾಧ್ಯಮದವರು ಅದನ್ನು ತಿರುಚಿದ್ದಾರೆ. ಹೆಲ್ಮೇಟ್ ರೀತಿ ಹಿಜಬ್ ಹಾಕೋಬೇಕು, ಹೆಲ್ಮೇಟ್ ಹೇಗೆ […]

ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು Read More »

ಮತ್ತೆ 54 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತ

ನವದೆಹಲಿ : ದೇಶದ ಭದ್ರತೆಯ ಕಾರಣ ನೀಡಿ 54 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂದು ತಿಳಿಸಿದೆ. ಕಳೆದ ವರ್ಷ ಜೂನ್‌ನಲ್ಲಿ, ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆಯನ್ನು ಉಲ್ಲೇಖಿಸಿ ಭಾರತವು ಟಿಕ್‌ಟಾಕ್‌, ವಿಚಾಟ್ ಮತ್ತು ಹೆಲೋನಂತಹ ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಪಬ್ಜಿಯಂತಹ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್‌ಗಳು ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಪ್ರಸ್ತುತ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಅಪ್ಲಿಕೇಶನ್‌ಗಳನ್ನು

ಮತ್ತೆ 54 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಭಾರತ Read More »

ಸುಳ್ಯ : ಓಮ್ನಿ ಪಲ್ಟಿ ವೇಳೆ ತಲೆಗೆ ಸರಳು ಬಡಿದು ಮಗು ಸಾವು

ಸಮಗ್ರ ನ್ಯೂಸ್ ಡೆಸ್ಕ್: ಓಮ್ನಿ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ‌ಗುತ್ತಿಗಾರು ಸಮೀಪ ಸೋಮವಾರದಂದು ನಡೆದಿದೆ. ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಕೆದಂಬಾಡಿ ಯತೀಶ್ ಹಾಗೂ ಕುಟುಂಬ ಓಮ್ನಿ ಕಾರೊಂದರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಬರುತ್ತಿತ್ತು. ಈ ವೇಳೆ ಗುತ್ತಿಗಾರು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಓಮ್ನಿಯಲ್ಲಿದ್ದ ಒಂದು ವರ್ಷದ ಮಗು ಸರಿತ್ ನ ತಲೆಗೆ ಕಾರಿ‌ನಲ್ಲಿನ ರಾಡ್ ಒಂದು ಬಡಿದ ಪರಿಣಾಮ ತೀವ್ರವಾದ ಏಟಾಗಿತ್ತು. ತಕ್ಷಣ

ಸುಳ್ಯ : ಓಮ್ನಿ ಪಲ್ಟಿ ವೇಳೆ ತಲೆಗೆ ಸರಳು ಬಡಿದು ಮಗು ಸಾವು Read More »

ಹಿಜಾಬ್ ವಿವಾದ ವಿಚಾರಣೆ, ಮಂಗಳವಾರಕ್ಕೆ ಮುಂದೂಡಿಕೆ

ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳ ಹಿಜಾಬ್- ಕೇಸರಿ ಶಾಲು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನ ತ್ರಿಸದಸ್ಯ ವಿಸ್ತ್ರತ ಪೀಠ ಸೋಮವಾರ ವಿಚಾರಣೆ ಮುಂದುವರೆಸಿದೆ. ಮುಖ್ಯ ನ್ಯಾ.ರಿತುರಾಜ್ ಅವಸ್ಥಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಜೈಬುನ್ನಿಸಾ ಎಂ.ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ಮಧ್ಯಾಹ್ನ 2.30ಕ್ಕೆ ಆರಂಭಿಸಿದ್ದರು. ಬಳಿಕ ವಕೀಲರಾದ ದೇವದತ್ ಕಾಮತ್ ಅವರು ವಾದ ಮಂಡಿಸಿದ್ದರು. ಹೀಗೆ ಹಲವು ವಾದ ವಿವಾದ ನಡೆದಿದ್ದವು. ಆದರೆ ಇನ್ನಷ್ಟು ವಿಚಾರಣೆ ಬಾಕಿ ಇರುವ ಕಾರಣ ಕಾಮತ್ ಅವರು ನಾಳೆಗೆ ಅವಕಾಶ ನೀಡಲು

ಹಿಜಾಬ್ ವಿವಾದ ವಿಚಾರಣೆ, ಮಂಗಳವಾರಕ್ಕೆ ಮುಂದೂಡಿಕೆ Read More »

ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ- ವಕೀಲ ಕಾಮತ್, ನೀವು ಇಲ್ಲಿ ಮೊದಲು ವಕೀಲ ಮತ್ತೆ ನಿಮ್ಮ ಧರ್ಮ -ನ್ಯಾಯಾಧೀಶರು

ಬೆಂಗಳೂರು : ಹಿಜಾಬ್ ಬಗ್ಗೆ ಹೈ ಕೋರ್ಟ್ ನಲ್ಲಿ ನಡೆಯುತ್ತಿದ್ದ ವಾದ – ವಿವಾದದ ಮಧ್ಯೆ ವಕೀಲ ದೇವದಾತ್ ಕಾಮತ್ ಅವರು ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾದ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ ಎಂದು ಹೇಳಿದ್ದಾರೆ. ವಾದ ವಿವಾದ ನಡೆಯುತಿದ್ದ ಮಧ್ಯೆ ವಕೀಲ ದೇವದಾತ್ ಕಾಮತ್ ಅವರು ಕುರುನ್ ನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಯಾವ ರೀತಿ ಬಟ್ಟೆ ಹಾಕಬೇಕು ಎನ್ನುವ ಬಗ್ಗೆ ಇದೆ. ಹಾಗಾಗಿ ಇಲ್ಲಿಕೂಡ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು

ನಾನು ಕುರಾನ್ ಬಗ್ಗೆ ಉಲ್ಲೇಖ ಮಾಡಿದನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ತಡೆಯಿರಿ- ವಕೀಲ ಕಾಮತ್, ನೀವು ಇಲ್ಲಿ ಮೊದಲು ವಕೀಲ ಮತ್ತೆ ನಿಮ್ಮ ಧರ್ಮ -ನ್ಯಾಯಾಧೀಶರು Read More »

ತುಳುನಾಡಿನಲ್ಲಿ ದೈವಗಳ ಕೆಟ್ಟ ರೀತಿಯಲ್ಲಿ ಅವಮಾನ| ಮುಸ್ಲಿಂ ಯುವಕನ ಬೆನ್ನಲ್ಲೇ ಹಿಂದೂ ವ್ಯಕ್ತಿಯಿಂದ ದೈವನಂಬಿಕೆಗೆ ಅವಮಾನ|ಈತನ ಬಂಧನ ಯಾವಾಗ?

“ಪತ್ತ್ ಇಂಜಿ ಪೊನ್ನು… ನಾಲ್ ಇಂಜಿ ಪಜೆ, ನಾಲ್ ಇಂಚಿ….. “ಮುಸ್ಲಿಂ ಯುವಕನ ಬೆನ್ನಲ್ಲೇ ಹಿಂದೂ ಯುವಕನಿಂದ ದೈವನಂಬಿಕೆಗೆ ಅಪಮಾನ| ಜಾಲತಾಣಗಳಲ್ಲಿ ವಿಡಿಯೋ ವೈರಲ್. ಈತನ ಬಂಧನ ಯಾವಾಗ..? ಮಂಗಳೂರು: ಮುಸ್ಲಿಂ ಯುವಕನೋರ್ವ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಹಿಂದೂ ಯುವಕನೋರ್ವ ದೈವಗಳ ಕಟ್ಟು(ಪ್ರಾರ್ಥನೆ) ಹೇಳುವಂತೆ ಕೆಟ್ಟ ರೀತಿಯಲ್ಲಿ ಅವಮಾನ ಮಾಡಿದ ವಿಡಿಯೋಗಳು ಜಾಣತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ಕೆಲ ದಿನಗಳ ಹಿಂದೆ ವಿಟ್ಲದ ಮುಸ್ಲಿಂ ಯುವಕ ತನ್ನ

ತುಳುನಾಡಿನಲ್ಲಿ ದೈವಗಳ ಕೆಟ್ಟ ರೀತಿಯಲ್ಲಿ ಅವಮಾನ| ಮುಸ್ಲಿಂ ಯುವಕನ ಬೆನ್ನಲ್ಲೇ ಹಿಂದೂ ವ್ಯಕ್ತಿಯಿಂದ ದೈವನಂಬಿಕೆಗೆ ಅವಮಾನ|ಈತನ ಬಂಧನ ಯಾವಾಗ? Read More »

ಪಬ್ಜಿಯಲ್ಲಿ ಉಂಟಾಯ್ತು ಪ್ರೇಮ| ಆನ್ ಲೈನ್ ಗೇಮಿಂಗ್ ಪ್ರೇಮಿಗಳು ಮದುವೆಗೆ ರೆಡಿ|

ನ್ಯೂಸ್ ಡೆಸ್ಕ್: ನಿಷೇಧಿತ ಆನ್‌ಲೈನ್ ಗೇಮ್ ಪಬ್ಜಿ(PubG )ಯನ್ನು ಬಹಳಷ್ಟು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆಡುತ್ತಿದ್ದರು. PubG ಗೇಮ್‌ ಅತ್ಯಂತ ವ್ಯಸನಕಾರಿಯಾಗಿದ್ದು, ಇದರಿಂದ ಅಪಾಯಕಾರಿ ಘಟನೆಗಳು ಸಂಭವಿಸಿವೆ. ಆದರೆ ಅಪಾಯಕಾರಿ ಪಬ್ಜಿ ಆಟವು ಎರಡು ವಿಭಿನ್ನ ರಾಜ್ಯಗಳ ಪ್ರೇಮಿಗಳನ್ನು ಒಂದು ಮಾಡಿದೆ. ಹೇಗೆ ಅಂತೀರಾ? ಮುಂದೆ ಓದಿ… ಪಶ್ಚಿಮ ಬಂಗಾಳದ ಧುಪ್ಗುರಿ ನಿವಾಸಿ ಸೈನೂರ್ ಆಲಂ ನಿಯಮಿತವಾಗಿ ಪಬ್ಜಿ ಆಡುತ್ತಿದ್ದರು. ಆಟ ಆಡುವಾಗ ಕರ್ನಾಟಕದ ಫ್ರಿಜಾ ಎಂಬ ಮಹಿಳೆಯ ಪರಿಚಯವಾಗಿದೆ. ಆಟ ಆಡುವಾಗ ಇಬ್ಬರೂ ಮೊದಲು

ಪಬ್ಜಿಯಲ್ಲಿ ಉಂಟಾಯ್ತು ಪ್ರೇಮ| ಆನ್ ಲೈನ್ ಗೇಮಿಂಗ್ ಪ್ರೇಮಿಗಳು ಮದುವೆಗೆ ರೆಡಿ| Read More »

ಸುಳ್ಯ : ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಸುಳ್ಯ : ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಬಾವಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಜ. 2 ರಂದು ನಡೆದಿದೆ . ಮೃತ ದೇಹವು ಬಾಂಜಿಕೋಡಿ ನಿವಾಸಿ ದಿವಂಗತ ಮಾಧವ ರವರ ಪುತ್ರ ಅರುಣ್ ಕುಮಾರ್ ಬಾಂಜಿಕೋಡಿಯವರದ್ದೆಂದು ಗುರುತಿಸಲಾಗಿದೆ. ಇವರು ಡಿ .31 ರಿಂದ ಮನೆಯಿಂದ ಕಾಣೆಯಾಗಿದ್ದು ಸ್ಥಳೀಯರು ಮತ್ತು ಕುಟುಂಬಸ್ಥರು ಇವರನ್ನು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಆದರೆ ಇಂದು ಮುಂಜಾನೆ ರವಿಕುಮಾರ್ ರವರ ಮನೆಯ ಮುಂಭಾಗದಲ್ಲಿರುವ ಬಾವಿಯಲ್ಲಿ ಇವರ ಮೃತದೇಹ ಕುಟುಂಬಸ್ಥರಿಗೆ ಕಂಡು ಬಂದಿದೆ. ಅರುಣ್ ಕುಮಾರ್ ರವರು ಉಪ್ಪಿನಂಗಡಿಯಲ್ಲಿ

ಸುಳ್ಯ : ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ Read More »

ಮಾಣಿ : ಯುವಕನಿಗೆ ಮಾರಣಾಂತಿಕ ಹಲ್ಲೆ

ಮಾಣಿ: ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಟ್ಲದ ಮಾಣಿಯಲ್ಲಿ ನಡೆದಿದೆ. ಹುಸೇನ್ ಹಲ್ಲೆಗೊಳಗಾದ ಯುವಕ. ಅಂಗಡಿ ಕಟ್ಟಡವನ್ನು ಬಾಡಿಗೆಗೆ ಕೊಟ್ಟ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈತನ ಮೇಲೆ ಬುಡೋಳಿಯ ಅಶ್ರಫ್ ಅನ್ವರ್, ಖಾದರ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳು ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಾಣಿ : ಯುವಕನಿಗೆ ಮಾರಣಾಂತಿಕ ಹಲ್ಲೆ Read More »

ಸುಳ್ಯ: ಟ್ರಾವೆಲ್ಲರ್ ಮತ್ತು ಬೈಕ್ ನಡುವೆ ಅಪಘಾತ| ಸವಾರ ಸಾವು

ಸುಳ್ಯ: ಪುತ್ತೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಟೆಂಪೊ ಟ್ರಾವೆಲರ್ ಗೂಡ್ಸ್ ಗಾಡಿಗೆ ಸಂಪಾಜೆ ಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಯಾಗಿ ಸವಾರ ಮೃತ ಪಟ್ಟ ಘಟನೆ ಗೂನಡ್ಕ ಸಮೀಪ ಪೇಲ್ತಡ್ಕ ದಿಂದ ವರದಿಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಸುಳ್ಯ ಕಸಬಾ ದುಗ್ಗಲಡ್ಕ ಕಂದಡ್ಕ ವಿನೋದ್ ಕುಮಾರ್ (23) ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸುಳ್ಯ: ಟ್ರಾವೆಲ್ಲರ್ ಮತ್ತು ಬೈಕ್ ನಡುವೆ ಅಪಘಾತ| ಸವಾರ ಸಾವು Read More »