ಕೆಎಸ್ಆರ್ ಟಿಸಿ ನಿರ್ವಾಹಕನ ಜಾಣ್ಮೆಗೆ ಬಸ್ ದರೋಡೆಕೋರರು ಅಂದರ್| ಕಂಡಕ್ಟರ್ ಗೆ ಭಲೇ..ಭೇಷ್ ಎಂದ ಸಾರಿಗೆ ಅಧಿಕಾರಿಗಳು
ಸಮಗ್ರ ನ್ಯೂಸ್: ಬಸ್ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಪ್ರಯಾಣಿಕರೊಬ್ಬರ ಲಕ್ಷಾಂತರ ರೂ. ಮೌಲ್ಯದ ಒಡವೆ, ಹಣ ದೋಚಿ ಪರಾರಿಯಾಗಿದ್ದ ಕಳ್ಳರು ನಾಲ್ಕು ತಿಂಗಳ ಬಳಿಕ ಅದೇ ಬಸ್ನಲ್ಲಿ ಸಂಚರಿಸಿದ ವೇಳೆ ಬಸ್ ನಿರ್ವಾಹಕರು ಮುಖಚಹರೆ ಮೂಲಕವೇ ಗುರುತು ಹಿಡಿದು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿರ್ವಾಹಕನ ಕಾರ್ಯಕ್ಷಮತೆಗೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತವಾಗಿದೆ. ನಿರ್ವಾಹಕ ಅಶೋಕ್ ಜಾದವ್ ಅವರೇ ಕಳ್ಳರನ್ನು ಪೊಲೀಸರಿಗೊಪ್ಪಿಸಿ ವೃತ್ತಿಪರತೆ ಮೆರೆದವರು. ತಾನು ನಿರ್ವಾಹಕನಾಗಿದ್ದ ಬಸ್ನಲ್ಲಿ ಈ ಹಿಂದೆ ಕಳ್ಳತನ ಮಾಡಿ ಮಾರ್ಗ ಮಧ್ಯೆ ಇಳಿದು ಹೋದ […]










