Editor

ಹರಿಯಾಣದಲ್ಲಿ ಬಿಜೆಪಿಗೆ ಬಿಗ್ ಶಾಕ್| ಆರಂಭಿಕ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್| ಜಮ್ಮು-ಕಾಶ್ಮೀರದಲ್ಲೂ‌ ಹಸ್ತಕ್ಕೆ ಜೈ ಅಂದ ಜನ

ಸಮಗ್ರ‌ನ್ಯೂಸ್: ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ 2024 ರ ಫಲಿತಾಂಶಗಳು ಇನ್ನೇನು ಕೆಲವೇ ಗಂಟೆಗಳಲ್ಲಿ ಬರಲಿದ್ದು, ಇದೀಗ ಮತ ಎಣಿಕೆ ಆರಂಭವಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 55 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.ಐ.ಎನ್.ಎಲ್.ಡಿ. ಎರಡು ಸ್ಥಾನಗಳಲ್ಲಿ ಹಾಗೂ ಇತರರು ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದಾರೆ. ಹರಿಯಾಣದ ಎಲ್ಲಾ 90 ಅಸೆಂಬ್ಲಿ ಸ್ಥಾನಗಳಿಗೆ ಅಕ್ಟೋಬರ್ 5 ರಂದು […]

ಹರಿಯಾಣದಲ್ಲಿ ಬಿಜೆಪಿಗೆ ಬಿಗ್ ಶಾಕ್| ಆರಂಭಿಕ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್| ಜಮ್ಮು-ಕಾಶ್ಮೀರದಲ್ಲೂ‌ ಹಸ್ತಕ್ಕೆ ಜೈ ಅಂದ ಜನ Read More »

helth tips: ರಂಬೂಟ ಹಣ್ಣಿನ ಅದ್ಭುತ ಆರೋಗ್ಯಕರ ಗುಣಗಳು

ಇಲ್ಲಿದೆ ಸಂಪೂರ್ಣ ಮಾಹಿತಿ ಸಮಗ್ರ ನ್ಯೂಸ್: ರಂಬೂಟಾನ್ ಅಥವಾ ರಂಬೂಟ ಬ್ಯಾಕ್ಟಿರಿಯಾ ಅಥವಾ ನಂಜು ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು ಇದು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಈ ಹಣ್ಣನ್ನು ಸೇವಿಸಿದರೆ ದೇಹದಲ್ಲಿ ಯಾವುದೇ ಗಾಯಗಳಾದರು ಅದು ಗುಣವಾಗುತ್ತದೆ ಜೊತೆಗೆ ಗಾಯದಲ್ಲಿ ಕೀವು ಉಂಟಾಗದಂತೆ ಈ ಹಣ್ಣು ತಡೆಯುತ್ತದೆ. ರಂಬೂಟಾನ್‌ ಹಣ್ಣಿನಲ್ಲಿ ಫೈಬ‌ರ್ ಅಂಶವಿದೆ ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದಾಗ ಮಲಬದ್ಧತೆ ಕರುಳಿನ ಸಮಸ್ಯೆ ಅತಿ ಸಾರ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಆದರೆ ರಂಬೂಟಾನ್

helth tips: ರಂಬೂಟ ಹಣ್ಣಿನ ಅದ್ಭುತ ಆರೋಗ್ಯಕರ ಗುಣಗಳು Read More »

ಪುತ್ತೂರು: ರಕ್ಷಿತಾರಣ್ಯದಿಂದ ಹಾಲುಮಡ್ಡಿ ಸಾಗಿಸುತ್ತಿದ್ದವರ ಬಂಧನ

ಸಮಗ್ರ ನ್ಯೂಸ್: ಪುತ್ತೂರು ಅರಣ್ಯ ವಿಭಾಗ ವ್ಯಾಪ್ತಿಯ ಕಲೆಂಜಿಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ಹಾಲುಮಡ್ಡಿ(incense) ಶೇಖರಿಸಿ ಸಾಗಾಟ ಮಾಡುತ್ತಿದ್ದ 4 ಮಂದಿಯನ್ನು ಪುತ್ತೂರು ಅರಣ್ಯ ಇಲಾಖೆ ಬಂಧಿಸಿದೆ. ಹವಾಮಾನ ಆರೋಪಿಗಳು ಆಲುಮಡ್ಡಿ ಸಾಗಾಟಕ್ಕೆ ಬಳಕೆ ಮಾಡಿದ್ದ ಅಟೋ ರಿಕ್ಷಾ ಸಹಿತ ರೂ. 1.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕಿನ ಕೆದಿಲ ಪಾಟ್ರಕೋಡಿ ಬಾಯಬೆ ಮನೆಯ ನಿವಾಸಿ ಉಮ್ಮರ್ ಫಾರೂಕ್ (44), ಪಾಟ್ರಕೋಡಿ ಮನೆಯ ನಿವಾಸಿ ಮಹಮ್ಮದ್ ಹಸೈನಾರ್( 30), ತಾಳಿಪಡ್ಪು ಮನೆ ನಿವಾಸಿ ಉಮ್ಮರ್ ಪಾರೂಕ್(

ಪುತ್ತೂರು: ರಕ್ಷಿತಾರಣ್ಯದಿಂದ ಹಾಲುಮಡ್ಡಿ ಸಾಗಿಸುತ್ತಿದ್ದವರ ಬಂಧನ Read More »

ಐವರು ಯುವಕರಿಂದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ| ರಕ್ಷಣೆ ಮಾಡುವ ಭರವಸೆ ನೀಡಿ ಕೃತ್ಯ ಎಸಗಿದ ಕಿರಾತಕರು

ಸಮಗ್ರ ನ್ಯೂಸ್: ಪುನರ್ವಸತಿ ಕೇಂದ್ರದಿಂದ ಓಡಿ ಹೋಗಿದ್ದ ಇಬ್ಬರು ಬಾಲಕಿಯರ ಮೇಲೆ ಐವರು ಯುವಕರು ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ. ಸೈದಾಬಾದ್​​ ಪೊಲೀಸರ ಪ್ರಕಾರ, ಖಾಸಗಿ ಸಂಸ್ಥೆಯೊಂದು ಐಎಸ್ ​ಸದನ್​​ ವಿಭಾಗದ ಅಡಿ ಬಾಲಕಿಯರ ಪುನರ್ವಸತಿ ಕೇಂದ್ರವನ್ನು ನಡೆಸುತ್ತಿದೆ. ಈ ಕೇಂದ್ರದಲ್ಲಿ 14 ವರ್ಷದ ಬಾಲಕಿ ಮೂರು ತಿಂಗಳಿನಿಂದ ಹಾಗೂ 15 ವರ್ಷದ ಬಾಲಕಿ ಸೆ.18ರಿಂದ ಆಶ್ರಯ ಪಡೆಯುತ್ತಿದ್ದರು. ಈ ಇಬ್ಬರೂ ಅಪ್ರಾಪ್ತರಿಗೆ ಪೋಷಕರಿದ್ದಾರೆ. ಆದರೆ ಬೇರೆ ಬೇರೆ ಕಾರಣಗಳಿಂದ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದರು. ಈ

ಐವರು ಯುವಕರಿಂದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ| ರಕ್ಷಣೆ ಮಾಡುವ ಭರವಸೆ ನೀಡಿ ಕೃತ್ಯ ಎಸಗಿದ ಕಿರಾತಕರು Read More »

ಮೈಸೂರು ದಸರಾ/ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ

ಸಮಗ್ರ ನ್ಯೂಸ್‌: ದಸರಾ ಹಬ್ಬದ ಅಂಗವಾಗಿ ಹೊರರಾಜ್ಯಗಳಿಂದ ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ ಅ. 4ರಿಂದ 12ರವರೆಗೆ ಪ್ರವೇಶ ತೆರಿಗೆ ವಿನಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶಿಸಿದೆ. ಯಾವುದೇ ಹಳದಿ ಬೋರ್ಡ್ ವಾಹನಗಳು ರಾಜ್ಯ ಪ್ರವೇಶಿಸಲು ಪ್ರವೇಶ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ. ಆದರೆ, ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿಗೆ ಪ್ರವಾಸಕ್ಕೆಂದು ಬರುವ ಹೊರ ರಾಜ್ಯದ ಹಳದಿ ಬೋರ್ಡ್‌ ವಾಹನಗಳಿಗೆ ಪ್ರವೇಶ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ, ರಾಜ್ಯ ಪ್ರವೇಶಕ್ಕೂ ಮುನ್ನ ಗಡಿ ಭಾಗದಲ್ಲಿ ವಿಶೇಷ ರಹದಾರಿ

ಮೈಸೂರು ದಸರಾ/ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ Read More »

ನಿರುದ್ಯೋಗಿಗಳಿಗೆ ಸುವರ್ಣಾವಕಾಶ| ಅ. 11 ರಂದು ಮಂಗಳೂರಿನ ಶ್ರೀನಿವಾಸ್ ಸಫ್ರಾನ್ ಹೊಟೇಲಿನಲ್ಲಿ ನೇರಸಂದರ್ಶನ

ಸಮಗ್ರ ನ್ಯೂಸ್: ದುಬೈನಲ್ಲಿ ಪ್ರಸಿದ್ದಿ ಪಡೆದು ಹಲವು ವರ್ಷಗಳಿಂದ ಸೇವೆ ಸಲ್ಲಿಸುತಿರುವ ಲಹೇಜ್ ಅಂಡ್ ಸುಲ್ತಾನ್ ಕಂಪನಿಯು ಇದೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಉದ್ಯೋಗ ನೇರ ಸಂದರ್ಶನ ನಡೆಸಲಿದ್ದು, ಇದೇ ತಿಂಗಳ ಅ. 11ರ ಶುಕ್ರವಾರ ಮಂಗಳೂರಿನ ಶ್ರೀನಿವಾಸ್ ಸಫ್ರಾನ್ ಹೊಟೇಲಿನಲ್ಲಿ ಮಂಗಳೂರಿನ ಹೆಸರಾಂತ ಕಂಪನಿ ನೂರ್ ಇಂಟರ್ನ್ಯಾಷನಲ್ ನ ಸಹಯೋಗದೊಂಧಿಗೆ ನಡೆಸಲಿದೆ. ಎತ್ತರ 5.7ft, ವಯಸ್ಸು 38ರ ಒಳಗಿನ SSLC ಪಾಸ್ ಆಗಿರುವ ನಿರುದ್ಯೋಗಿ/ಅನುಭವಸ್ತ ಆಸಕ್ತ ಯುವಕರು ಇದರ ಪ್ರಯೋಜನವನ್ನು ಪಡೆಯಬಹುದು. ಹೆಚ್ಚಿನ ವಿವರಗಳಿಗೆ ನೂರ್

ನಿರುದ್ಯೋಗಿಗಳಿಗೆ ಸುವರ್ಣಾವಕಾಶ| ಅ. 11 ರಂದು ಮಂಗಳೂರಿನ ಶ್ರೀನಿವಾಸ್ ಸಫ್ರಾನ್ ಹೊಟೇಲಿನಲ್ಲಿ ನೇರಸಂದರ್ಶನ Read More »

ಜಾತಿ ಗಣತಿ ಜಾರಿ/ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಎಂದು ಮುಖ್ಯಮಂತ್ರಿ

ಸಮಗ್ರ ನ್ಯೂಸ್‌: ಅಕ್ಟೋಬರ್ 18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಜಾರಿಗೊಳಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿ ಗಣತಿ ವರದಿ ಕುರಿತು ಇಂದು ಹಿಂದುಳಿದ ವರ್ಗಗಳ ಸಚಿವರು ಮತ್ತು ಶಾಸಕರೊಂದಿಗೆ ಸಭೆ ನಡೆಸಿದ ನಂತರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಎಂಎಲ್ ಸಿ ಎನ್ ರವಿಕುಮಾರ್ ಸೇರಿದಂತೆ ಸುಮಾರು 30 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಅಂಗೀಕಾರ ಮಾಡಿ, ಜಾರಿಗೆ

ಜಾತಿ ಗಣತಿ ಜಾರಿ/ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಎಂದು ಮುಖ್ಯಮಂತ್ರಿ Read More »

ಕಡಬ: 5 ಜನರ ಮೇಲಿನ ರೌಡಿ ಶೀಟರ್ ಹೈಕೋರ್ಟ್ ನಲ್ಲಿ ರದ್ದು

ಸಮಗ್ರ ನ್ಯೂಸ್: ಕಡಬ ತಾಲೂಕಿನ 5 ಜನರ ಮೇಲೆ ಆಗಿನ ಕಡಬ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರವರು ಸೆಕ್ಷನ್ 143,147,323,326,307,395 ಹಾಗೂ 149 IPC ಅಡಿಯಲ್ಲಿ ಕ್ಷುಲ್ಲಕ ಕಾರಣಗಳಿಗೆ ದೊಂಬಿ, ಗಲಾಟೆಗಳನ್ನು ಮಾಡುತ್ತಾ ಸಾರ್ವಜನಿಕ ಅಶಾಂತಿಯನ್ನು ಉಂಟು ಮಾಡುವ ಸಲುವಾಗಿ 2017 ರಲ್ಲಿ ರೌಡಿ ಶೀಟರ್ ದಾಖಲಿಸಿರುವುದು ಹೈಕೋರ್ಟ್ ನಲ್ಲಿ ರದ್ದುಗೊಂಡಿದೆ. ತಮ್ಮ ಮೇಲಿನ ರೌಡಿ ಶೀಟರ್ ಅನ್ನು ರದ್ದುಗೊಳಿಸುವಂತೆ ಕೋರಿ ಮಾನ್ಯ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದ ಆರೋಪಿಗಳವಾದವನ್ನು ಆಲಿಸಿದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹೇಮಂತ್ ಚಂದನ್

ಕಡಬ: 5 ಜನರ ಮೇಲಿನ ರೌಡಿ ಶೀಟರ್ ಹೈಕೋರ್ಟ್ ನಲ್ಲಿ ರದ್ದು Read More »

ಪೋಕ್ಸೋ ಪ್ರಕರಣ: ಚಿತ್ರದುರ್ಗ ಜೈಲಿನಿಂದ ಮುರುಘಾಶ್ರೀ ಬಿಡುಗಡೆ

ಸಮಗ್ರ ನ್ಯೂಸ್: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾಶ್ರೀ ಅವರನ್ನು ಬಿಡುಗಡೆಗೊಳಿಸಲು ನ್ಯಾಯಾಲಯ ಆದೇಶ ಹೊರಡಿಸಿದೆ. ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಈ ಹಿಂದೆ ಹೈಕೋರ್ಟ್ ಮುರುಘಾಶ್ರೀಗೆ ಜಾಮೀನು ನೀಡಿತ್ತು. ಆದರೆ, ಸಾಕ್ಷ ವಿಚಾರಣೆ ನಡೆಸುವವರೆಗೆ ಬಂಧನದಲ್ಲಿಡಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದೀಗ, ಸಂತ್ರಸ್ತೆಯರಿಬ್ಬರು ಸೇರಿದಂತೆ 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನಿನ ಆದೇಶದ ಪ್ರಕಾರ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ.

ಪೋಕ್ಸೋ ಪ್ರಕರಣ: ಚಿತ್ರದುರ್ಗ ಜೈಲಿನಿಂದ ಮುರುಘಾಶ್ರೀ ಬಿಡುಗಡೆ Read More »

ಕರಾವಳಿಯ ಅತೀದೊಡ್ಡ ಡ್ರಗ್‌ ಜಾಲ ಬಯಲಿಗೆ| ಸೈಬೀರಿಯಾ ಪ್ರಜೆಯ ಬಂಧನ| 6 ಕೋಟಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಕ್ಕೆ

ಸಮಗ್ರ ನ್ಯೂಸ್: ಮಂಗಳೂರು ನಗರದಲ್ಲಿ ಬೃಹತ್‌ ಡ್ರಗ್‌ ಜಾಲವೊಂದು ಸೋಮವಾರ ಬಯಲಿಗೆ ಬಂದಿದೆ. ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್‌ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಸೈಬಿರಿಯನ್‌ ಪ್ರಜೆ ಪೀಟರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 6 ಕೆಜಿ ಡ್ರಗ್‌ ವಶಕ್ಕೆ ಪಡೆಯಲಾಗಿದ್ದು, ಮಂಗಳೂರಿನ ಇತಿಹಾಸದಲ್ಲೇ ಇದು ಅತಿದೊಡ್ಡ ಡ್ರಗ್‌ ವಶಕ್ಕೆ ಪಡೆದ ಪ್ರಕರಣ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಎಂಡಿಎಂಎ ಮಾರಾಟದ ವೇಳೆ ಹೈದರ್‌ ಅಲಿ ಎಂಬಾತನನ್ನು

ಕರಾವಳಿಯ ಅತೀದೊಡ್ಡ ಡ್ರಗ್‌ ಜಾಲ ಬಯಲಿಗೆ| ಸೈಬೀರಿಯಾ ಪ್ರಜೆಯ ಬಂಧನ| 6 ಕೋಟಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಕ್ಕೆ Read More »