Editor

ಮುಂಬೈ ಉಗ್ರರ ದಾಳಿಗೆ ಹತ್ತುವರ್ಷ -ಲಾಠಿ ಹಿಡಿದು ಕಸಬ್ ನನ್ನು ಎದುರಿಸಿದ್ದ ಪೊಲೀಸ್‌!

ಸಮಗ್ರ ನ್ಯೂಸ್: ಪ್ರತಿಷ್ಠಿತ ತಾಜ್ ಹೋಟೆಲ್ ಮೇಲೆ ಉಗ್ರ ಅಲ್ಮಲ್ ಕಸಬ್ ನಡೆಸಿದ ದಾಳಿಯ ಕಹಿ ನೆನೆಪಿಗೆ ಇಂದು ಹತ್ತು ವರ್ಷ. ನವೆಂಬರ್ 26 ರಂದು ನಡೆದಿದ್ದ ಈ ದಾಳಿಯಲ್ಲಿ ಜನಸಾಮಾನ್ಯರಲ್ಲದೇ 18 ಮಂದಿ ಪೊಲೀಸ್ ಮಿಲಿಟರಿ ಸಿಬ್ಬಂದಿಗಳೂ ಸಹ ಹುತಾತ್ಮರಾಗಿದ್ದರು. ಉಗ್ರರ ದಮನ ಕಾರ್ಯಾಚರಣೆಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಇಂದು ದೇಶಾದ್ಯಮತ ಶೃಂದ್ಧಾಂಜಲಿ ಸಲ್ಲಿಸಲಾಗುತ್ತಿದೆ.ಕನ್ನಡಿಗರ ಮೇಜರ್ ಸಂದೀಪ್ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ ಮತ್ತು ಅಶೋಕ್ ಕಮತೆ ಸೇರಿದಂತೆ ಹಲವು ಅಂದು ಉಗ್ರರ […]

ಮುಂಬೈ ಉಗ್ರರ ದಾಳಿಗೆ ಹತ್ತುವರ್ಷ -ಲಾಠಿ ಹಿಡಿದು ಕಸಬ್ ನನ್ನು ಎದುರಿಸಿದ್ದ ಪೊಲೀಸ್‌! Read More »

ಸ್ನಾನಕ್ಕೆ ಹೋಗಿದ್ದ ಮಹಿಳೆ ನಿಗೂಢ ಸಾವು- ಮುಖದಲ್ಲಿ ಪರಚಿದ ಗಾಯ!

ಸಮಗ್ರ ನ್ಯೂಸ್: ಸಂಬಂಧಿಕರ ಮನೆಗೆ ಆಗಮಿಸಿದ್ದ ಮಹಿಳೆಯೊಬ್ಬರು ಸ್ನಾನಕ್ಕೆ ಹೋಗಿದ್ದಾಗ ಬಾತ್‌ರೂಮ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ. ಮಹಿಳೆಯ ಮುಖದಲ್ಲಿ ಪರಚಿದ ಗಾಯಗಳಾಗಿದ್ದು, ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.ಮೃತ ಮಹಿಳೆಯನ್ನು ಲಕ್ಷ್ಮಿ (25) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿ ಮೂಲದ ಮಹಿಳೆ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಬಳಿಕ ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ತೆರಳಿದ್ದರು.ಅಲ್ಲಿ ಸ್ನಾನಕ್ಕೆಂದು ಹೋಗಿದ್ದ ಲಕ್ಷ್ಮಿ ಬಾತ್‌ರೂಮ್‌ನಲ್ಲಿ

ಸ್ನಾನಕ್ಕೆ ಹೋಗಿದ್ದ ಮಹಿಳೆ ನಿಗೂಢ ಸಾವು- ಮುಖದಲ್ಲಿ ಪರಚಿದ ಗಾಯ! Read More »

ಕರ್ನಾಟಕ ಕಿಂಗ್ `ಬೆಳ್ಳೂಡಿ ಕಾಳಿ’ ಖ್ಯಾತಿಯ ಟಗರು ಇನ್ನಿಲ್ಲ

ಸಮಗ್ರ ನ್ಯೂಸ್:ಪ್ರಶಸ್ತಿಗಳ ರಾಜ, ಬೆಳ್ಳೂಡಿ ಕಾಳಿ ಎಂದೇ ಹೆಸರುವಾಸಿಯಾದ ಟಗರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯ ಈ ಟಗರು ಅನಾರೋಗ್ಯದಿಂದ ಸಾವನ್ನಪ್ಪಿದೆ. ಬೆಳ್ಳೂಡಿ ಕಾಳಿ ಕರ್ನಾಟಕದ ಪ್ರಸಿದ್ದ ಕೊಣ್ಣೂರು ಕಣ, ದಾವಣಗೆರೆ ದುಗ್ಗವ್ವ ಕಣ, ಹರಿಹರ ಕಣ, ಹೊನ್ನಾಳಿ ಕಣದಲ್ಲಿ ಸತತವಾಗಿ ಎರಡು ಸಲ ಗೆದ್ದು ಬೀಗಿತ್ತು.ಕೊಣ್ಣೂರು ಕಣದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿ ದಾಖಲೆ ಬರೆದಿತ್ತು.ಪ್ರಸಿದ್ದ ಕಾಳಿ ಟಗರು ಮೃತಪಟ್ಟ ಹಿನ್ನೆಲೆಯಲ್ಲಿ ಟಗರಿನ ಅಭಿಮಾನಿಗಳು ಟಗರು ಅಂತಿಮ ದರ್ಶನ ಪಡೆದಿದ್ದಾರೆ.

ಕರ್ನಾಟಕ ಕಿಂಗ್ `ಬೆಳ್ಳೂಡಿ ಕಾಳಿ’ ಖ್ಯಾತಿಯ ಟಗರು ಇನ್ನಿಲ್ಲ Read More »

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲೇ SDA ಆತ್ಮಹತ್ಯೆ: ಮುರ್ಮು, ಮೋದಿಗೆ ಪತ್ರ

ಸಮಗ್ರ ನ್ಯೂಸ್: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಅನಾಮಿಕರು ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಕರಣ ಮುಚ್ಚಿಹಾಕಲು ಏನೆಲ್ಲ ಪ್ರಯತ್ನ ನಡೆದಿದೆ ಎಂದೂ ಪತ್ರದಲ್ಲಿದೆ.ನ.18ರಂದು ಖಡೇಬಜಾರ್ ಪೊಲೀಸ್ ಠಾಣೆಗೆ ಮೊದಲ ಪತ್ರ ಬಂದಿತ್ತು. ರುದ್ರಣ್ಣನದು ಆತ್ಮಹತ್ಯೆಯಲ್ಲ ಕೊಲೆ ಎಂಬ ಮಾಹಿತಿ ಅದರಲ್ಲಿ ನೀಡಲಾಗಿತ್ತು. ನ.5ರಂದು ರುದ್ರಣ್ಣ ಆತ್ಮಹತ್ಯೆಗೆ ಶರಣಾದರು. ತಹಶೀಲ್ದಾರ್ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ ಮತ್ತು ಸೋಮು ದೊಡವಾಡಿ ಅವರ

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲೇ SDA ಆತ್ಮಹತ್ಯೆ: ಮುರ್ಮು, ಮೋದಿಗೆ ಪತ್ರ Read More »

ನಿಮಗೆ ಇದು ಬೇಕಿತ್ತಾ ?! ಸಚಿವ ಜಾರ್ಜ್ ಗೆ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಭಾರಿ ಮುಖಭಂಗ

ಸಮಗ್ರ ನ್ಯೂಸ್:ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಕೆ.ಜೆ.ಜಾರ್ಜ್ ಗೆ ತೀವ್ರ ಮುಖಭಂಗ ಎದುರಾಗಿದೆ. ಸಂಘದ ಕಾರ್ಯಕ್ರಮದ ವೇದಿಕೆಯಲ್ಲಿ ಗ್ಯಾರಂಟಿಗಳ ಬಗ್ಗೆ ಭಾಷಣ ಮಾಡಲು ಮುಂದಾದ ಸಚಿವ ಕೆ.ಜೆ.ಜಾರ್ಜ್ ಭಾಷಣವನ್ನು ಸಭಿಕರು ಅರ್ಧಕ್ಕೆ ತಡೆದಿದ್ದಾರೆ. ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ಉದ್ಘಾಟನೆಗೊಂಡ ಒಕ್ಕಲಿಗರ ಬೆಳ್ಳಿ ಭವನ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಶ್ರೀಗಳ ಎದುರು ಸಚಿವ ಜಾರ್ಜ್ ಈ ರೀತಿ ಮುಜುಗರಕ್ಕೀಡಾಗಿದ್ದಾರೆ. ಒಕ್ಕಲಿಗ ಸಮಾಜದ ಯುವಕರು ಭಾಷಣದ ಮಧ್ಯಪ್ರವೇಶಿಸಿ, ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡೋದಾದ್ರೆ ಕೆಳಗೆ ಇಳಿಯಿರಿ ಎಂದು ಕೂಗಾಡಿದ್ರು.

ನಿಮಗೆ ಇದು ಬೇಕಿತ್ತಾ ?! ಸಚಿವ ಜಾರ್ಜ್ ಗೆ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಭಾರಿ ಮುಖಭಂಗ Read More »

ಇಂದು ಸಂವಿಧಾನ ದಿನಾಚರಣೆ| ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ನವೆಂಬರ್- 26 ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕ‌ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಿರುವಂತೆ, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ।।ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ

ಇಂದು ಸಂವಿಧಾನ ದಿನಾಚರಣೆ| ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ Read More »

ಭರ್ಜರಿ ಮಳೆಯ ಮುನ್ನೆಚ್ಚರಿಕೆ, ಈ ಜಿಲ್ಲೆಗಳ ಜನರೇ ಎಚ್ಚರ!

ಸಮಗ್ರ ನ್ಯೂಸ್:ಮಳೆಗಾಲ ನಿಂತು ಚಳಿಗಾಲ ಆರಂಭ ಆಗಬೇಕಿದ್ದ ಸಮಯ ಇದು, ಆದರೂ ಮಳೆ ಅಬ್ಬರ ಇನ್ನೂ ಕಡಿಮೆ ಆಗಿಲ್ಲ. ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ಭಾರಿ ಮಳೆ ಬಿದ್ದಿದ್ದು, ಈ ಹೊತ್ತಿಗೂ ಮತ್ತೆ ಮಳೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಮತ್ತೆ ಮಳೆಯ ಅಬ್ಬರ ಕಾಟ ಕೊಡುವುದು ಗ್ಯಾರಂಟಿ ಆಗಿದೆ. ಮಳೆ ಗ್ಯಾಪ್ ಕೊಡದೆ ತನ್ನ ಅಬ್ಬರ ತೋರಿಸುತ್ತಿದ್ದು, ಜನರು ಕೂಡ ಹೀಗೆ ಭಾರಿ ಮಳೆಯ ಕಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಹವಾಮಾನ ವೈಪರಿತ್ಯದ

ಭರ್ಜರಿ ಮಳೆಯ ಮುನ್ನೆಚ್ಚರಿಕೆ, ಈ ಜಿಲ್ಲೆಗಳ ಜನರೇ ಎಚ್ಚರ! Read More »

ತುಳು ಹೆಸರಿನಲ್ಲಿ ಲಾಂಚ್ ಆಗಲಿದೆ ಪರಿಶುದ್ಧ ತೆಂಗಿನ ಎಣ್ಣೆ| ಯುವ ಉದ್ಯಮಿ ಗುರುಪ್ರಸಾದ್ ಪಂಜರವರ ‘ತಾರಾಯಿ’ ಕೊಬ್ಬರಿ ಎಣ್ಣೆ ಶೀಘ್ರದಲ್ಲೇ ಮಾರುಕಟ್ಟೆಗೆ

ಸಮಗ್ರ ನ್ಯೂಸ್: ತುಳು ನಾಡಿನ ಧ್ವಜ ಬಳಸಿಕೊಂಡು, ತುಳು ಹೆಸರಿನಲ್ಲೇ ಪ್ರಪ್ರಥಮ ಬಾರಿಗೆ ವಸ್ತುವೊಂದು ಮಾರುಕಟ್ಟೆಗೆ ಬರುತ್ತಿದೆ. ಅಂತರಾಷ್ಟ್ರೀಯ ಗುಣ ಮಟ್ಟದ, ಕ್ಯಾಂಪ್ಕೋ ತಯಾರಿಕೆಯ “ತಾರಾಯಿ” ಕೊಬ್ಬರಿ ಎಣ್ಣೆ ಅತೀ ಶೀಘ್ರ ಮಾರುಕಟ್ಟೆಗೆ ಬರಲಿದೆ. ಸಾಮಾಜಿಕ ಕಾರ್ಯಗಳಿಂದ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಸರುವಾಸಿಯಾಗಿರುವ ಯುವ ಉದ್ಯಮಿ ಗುರುಪ್ರಸಾದ್ ಪಂಜ ರಾಷ್ಟೀಯ ಮಟ್ಟದಲ್ಲಿ ಕೊಬ್ಬರಿ ಎಣ್ಣೆಯನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತುಳು ಹೆಸರು, ತುಳು ಲಿಪಿ ಮತ್ತು ತುಳು ನಾಡಿನ ಧ್ವಜವನ್ನು ಈ ಎಣ್ಣೆ

ತುಳು ಹೆಸರಿನಲ್ಲಿ ಲಾಂಚ್ ಆಗಲಿದೆ ಪರಿಶುದ್ಧ ತೆಂಗಿನ ಎಣ್ಣೆ| ಯುವ ಉದ್ಯಮಿ ಗುರುಪ್ರಸಾದ್ ಪಂಜರವರ ‘ತಾರಾಯಿ’ ಕೊಬ್ಬರಿ ಎಣ್ಣೆ ಶೀಘ್ರದಲ್ಲೇ ಮಾರುಕಟ್ಟೆಗೆ Read More »

ಬಿಪಿಎಲ್ ಕಾರ್ಡ್ ರದ್ದಾಗಿದೆಯಾ? ಮರಳಿ ಕಾರ್ಡ್ ಪಡೆಯಲು ಹೀಗೆ ಮಾಡಿ…

ಸಮಗ್ರ ನ್ಯೂಸ್: ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿವೆ ಎನ್ನಲಾಗುತ್ತಿದೆ. ಇದೇ ಈಗ ತೀವ್ರ ವಿವಾದಕ್ಕೂ ಕಾರಣವಾಗಿದೆ. ಒಂದು ವೇಳೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದ್ದರೇ ತಹಶೀಲ್ದಾರರ ಗಮನಕ್ಕೆ ತಂದರೇ ಒಂದು ವಾರದಲ್ಲೇ ಸಮಸ್ಯೆ ಬಗೆಹರಿಸಿ, ವಾಪಾಸ್ ಸಿಗಲಿದೆ. ಒಂದು ವೇಳೆ ಬಿಪಿಎಲ್‌ ಕಾರ್ಡ್‌ ವಿಚಾರದಲ್ಲಿ ಬಡವರಿಗೆ ತೊಂದರೆಯಾದಲ್ಲಿ ತಹಶೀಲ್ದಾರ್‌ ಗಮನಕ್ಕೆ ತಂದರೆ ಒಂದು ವಾರದೊಳಗಾಗಿ ಸಮಸ್ಯೆ ಬಗೆಹರಿಸಲಾಗುವುದು. ಅರ್ಹರಿಗೆ ಬಿಪಿಎಲ್‌ ತಪ್ಪಿ ಹೋಗಬಾರದು. ಆಕಸ್ಮಾತ್‌ ತಪ್ಪಿ ಹೋಗಿದ್ದರೆ ವಾಪಸ್‌ ಕೊಡಲಾಗುವುದು. ಹಾಗೆಯೇ ಪಡಿತರ ಚೀಟಿ

ಬಿಪಿಎಲ್ ಕಾರ್ಡ್ ರದ್ದಾಗಿದೆಯಾ? ಮರಳಿ ಕಾರ್ಡ್ ಪಡೆಯಲು ಹೀಗೆ ಮಾಡಿ… Read More »

ಮಸೀದಿ ಸಮೀಕ್ಷೆ ವೇಳೆ ಹಿಂಸಾಚಾರ: 4 ಜನರು ಸಾವು; ಶಾಲಾ-ಕಾಲೇಜುಗಳು ಬಂದ್; ಇಂಟರ್ನೆಟ್ ಸ್ಥಗಿತ

ಸಮಗ್ರ ನ್ಯೂಸ್:ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮಸೀದಿ ಸಮೀಕ್ಷೆಯ ವೇಳೆ ನಡೆದ ಹಿಂಸಾಚಾರ ಪ್ರಕರಣದಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಸಂಭಾಲ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯ ಸರ್ವೆಗೆ ನ್ಯಾಯಾಲಯ ಆದೇಶ ನೀಡಿತ್ತು.ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದ ವೇಳೆ ಉದ್ರಿಕ್ತರು ಕಲ್ಲುತೂರಾಟ ನಡೆಸಿದ್ದರು.ಸ್ಥಳೀಯರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿತ್ತು. ಇದರಿಂದಾಗಿ ಸಾಂಭಾಲ್ ನಲ್ಲಿ ಸಂಪೂರ್ಣ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನ.20ರಂದು ಮಸೀದಿ ಸಮೀಕ್ಷೆಗೆ ಬಂದಿದ್ದ

ಮಸೀದಿ ಸಮೀಕ್ಷೆ ವೇಳೆ ಹಿಂಸಾಚಾರ: 4 ಜನರು ಸಾವು; ಶಾಲಾ-ಕಾಲೇಜುಗಳು ಬಂದ್; ಇಂಟರ್ನೆಟ್ ಸ್ಥಗಿತ Read More »