Editor

ಭಯ, ಆತಂಕಕ್ಕೆ ಬಲಿಯಾದ ದಂಪತಿ| ವಿಧಿಯೇ….ಈ ಸಾವು ನ್ಯಾಯವೇ…?

ಮಂಗಳೂರು: ಕೊರೊನಾ ಭಯದಲ್ಲಿ ಸಾವಿಗೆ ಶರಣಾಗಿರುವ ದಂಪತಿಯ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಉಸಿರಾಟದ ತೊಂದರೆ, ಬ್ಲಾಕ್ ಫಂಗಸ್ ಕಂಡುಬಂದಿದ್ದರೂ, ಮೂರೇ ತಿಂಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿತ್ತು. ಸೋಂಕು ಕಡಿಮೆಗೊಂಡು ಜನಜೀವನ ಸಹಜಸ್ಥಿತಿಗೆ ಬರುತ್ತಿರುವಾಗಲೇ ದಂಪತಿ ಅನ್ಯಾಯವಾಗಿ ಸಾವು ಕಂಡಿರುವುದು ಕರಾವಳಿ‌ ಮುಮ್ಮಲ ಮರುಗುವಂತೆ ಮಾಡಿದೆ. ಪಡುಬಿದ್ರಿ ಮೂಲದ ರಮೇಶ್ ಸುವರ್ಣ (45) ಉದ್ಯಮಿಯಾಗಿದ್ದರೂ ಕೊರೊನಾ ಕಾರಣದಿಂದ ಅವರಿಗೇನೂ ದೊಡ್ಡ ನಷ್ಟ ಆಗಿರಲಿಲ್ಲ. ಮದುವೆಯಾಗಿ 21 ವರ್ಷ ಆಗಿದ್ದರೂ ಮಕ್ಕಳಾಗಿಲ್ಲ […]

ಭಯ, ಆತಂಕಕ್ಕೆ ಬಲಿಯಾದ ದಂಪತಿ| ವಿಧಿಯೇ….ಈ ಸಾವು ನ್ಯಾಯವೇ…? Read More »

ದಕ್ಷಿಣ ಕನ್ನಡ ಗಡಿಯಲ್ಲಿ ಆಗಸ್ಟ್ 30ರ ವರೆಗೂ ಮದ್ಯದಂಗಡಿಗಳು ಬಂದ್-ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸದ್ಯ ಗಡಿಯಲ್ಲಿರುವ ಮದ್ಯದಂಗಡಿಗಳನ್ನು ಆಗಸ್ಟ್ 30ರ ತನಕ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ. ನೆರೆಯ ಕೇರಳ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯ ಸಾರ್ವಜನಿಕರು ಮದ್ಯ ಸೇವನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳ ಮದ್ಯದಂಗಡಿಗಳನ್ನೇ ಅವಲಂಭಿಸಿದ್ದು ಇದರಿಂದ ಕೋವಿಡ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ

ದಕ್ಷಿಣ ಕನ್ನಡ ಗಡಿಯಲ್ಲಿ ಆಗಸ್ಟ್ 30ರ ವರೆಗೂ ಮದ್ಯದಂಗಡಿಗಳು ಬಂದ್-ಜಿಲ್ಲಾಧಿಕಾರಿ ಆದೇಶ Read More »

ಒಂದೆಡೆ ಸಾವರ್ಕರ್ ರಥಯಾತ್ರೆ, ಮತ್ತೊಂದೆಡೆ ಆರೋಪಿಗಳಿಗೆ ಜಾಮೀನು- ಇದೆಂಥಾ ವಿಪರ್ಯಾಸ…!?

ಪುತ್ತೂರು: ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೊ ಇದ್ದ ವಾಹನವನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.ಕಬಕ ಗ್ರಾಮ ಪಂಚಾಯತ್ ವತಿಯಿಂದ ನಡೆಸಲಾಗಿದ್ದ ಸ್ವರಾಜ್ಯ ರಥ ಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರುವುದನ್ನು ಆಕ್ಷೇಪಿಸಿ ರಥ ಯಾತ್ರೆ ತಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಅಜೀಜ್ (43), ಶಮೀರ್ ಮುರ (40) ಹಾಗೂ ಕೊಡಿಪ್ಪಾಡಿ ಗ್ರಾಮದ ಅಬ್ದುಲ್ ರಹಿಮಾನ್‌ ಅವರನ್ನು ಪುತ್ತೂರು ನಗರ

ಒಂದೆಡೆ ಸಾವರ್ಕರ್ ರಥಯಾತ್ರೆ, ಮತ್ತೊಂದೆಡೆ ಆರೋಪಿಗಳಿಗೆ ಜಾಮೀನು- ಇದೆಂಥಾ ವಿಪರ್ಯಾಸ…!? Read More »

ಪುತ್ತೂರು: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ಆರೋಪ: ಆಸ್ಪತ್ರೆಗೆ ದಾಖಲು

ಪುತ್ತೂರು: ತಡ ರಾತ್ರಿ ಯುವಕರ ತಂಡವೊಂದು ಮನೆಗೆ ಅಕ್ರಮವಾಗಿ ನುಗ್ಗಿ ಮಹಿಳೆಯೋರ್ವರಿಗೆ ಹಲ್ಲೆ ಮಾಡಿದ ಆರೋಪದ ಹಿನ್ನಲೆ ಮಹಿಳೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಗಾಳಿಮುಖದ ದಿ. ರಾಜು ಮಾದಿಗ ಎಂಬವರ ಪತ್ನಿ ಆಶಾ (35) ಎಂಬವರು ಸಂತ್ರೆಸ್ತೆ. ಖಾದರ್, ಮಹಮ್ನದ್, ಶಾಬೀರ್, ಶಾಪಿ, ಅಶ್ರಪ್ ಕೊಟ್ಯಾಡಿ ಪ್ರಕರಣದ ಆರೋಪಿಗಳು. `ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು ಆ.16ರ ರಾತ್ರಿ ಊಟಕ್ಕೆ ಕೂತ್ತಿದ್ದೆ. ಈ ವೇಳೆ ಗಾಳಿಮುಖದ ಯುವಕರು ಸೇರಿದಂತೆ ಸುಮಾರು 20 ಮಂದಿಯ ತಂಡವೊಂದು

ಪುತ್ತೂರು: ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ಆರೋಪ: ಆಸ್ಪತ್ರೆಗೆ ದಾಖಲು Read More »

ಸುಳ್ಯ: ಅಪಘಾತಕ್ಕೀಡಾದ ಮಹಿಳೆ ಮೃತ್ಯು

ಸುಳ್ಯ: ಇಲ್ಲಿನ ಐವರ್ನಾಡು ಹೈಸ್ಕೂಲು ಸಮೀಪ ಬೈಕಿನಿಂದ ಬಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಆ.16ರಂದು ನಡೆದಿದೆ.ಮೃತರನ್ನು ಎಡಮಂಗಲದ ದೇವಸ್ಯ ವಿನೋದ ಶಶಿಧರ್(47) ಎಂದು ಗುರುತಿಸಲಾಗಿದೆ. ಇವರ ಮಗನಾದ ನಿಖಿಲ್ ಜೊತೆ ವಿನೋದರ ತಾಯಿಮನೆಗೆ ಹೋಗುತ್ತಿದ್ದರು. ಐವರ್ನಾಡು ಹೈಸ್ಕೂಲು ಸಮೀಪ ತಲುಪಿದಾಗ ಮಳೆ ಬಂದ ಕಾರಣ ವಿನೋದೆವರು ಕೊಡೆ ಬಿಡಿಸಲೆತ್ನಿಸಿದ್ದಾರೆ. ಈ ವೇಳೆ ಗಾಳಿಯ ರಭಸಕ್ಕೆ ಅವರು ನಿಯಂತ್ರಣ ಕಳೆದುಕೊಂಡು ರಸ್ತೆಗೆಸೆಯಲ್ಪಟ್ಟಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ತಲೆಗೆ ತೀವ್ರ ತರಹದ

ಸುಳ್ಯ: ಅಪಘಾತಕ್ಕೀಡಾದ ಮಹಿಳೆ ಮೃತ್ಯು Read More »

ಕುಂದಾಪುರ: ನಾಪತ್ತೆಯಾಗಿದ್ದ ಆಟೋ ಚಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಂದಾಪುರ: ನಾಪತ್ತೆಯಾಗಿದ್ದ ಆಟೋ ಚಾಲಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಮಂಗಳವಾರ ಕುಂದಾಪುರ ತಾಲೂಕಿನ ವಕ್ವಾಡಿ-ಕಾಳಾವರ ರಸ್ತೆ ಸಮೀಪದ ಸರಕಾರಿ ಹಾಡಿಯಲ್ಲಿ ಯುವಕನ ಶವ ಪತ್ತೆಯಾಗಿದೆ.ವಕ್ವಾಡಿ ನವನಗರ ನಿವಾಸಿ ರವಿಚಂದ್ರ ಕುಲಾಲ್ (33) ಆತ್ಮಹತ್ಯೆಗೈದ ಯುವಕ.ವಕ್ವಾಡಿಯಲ್ಲಿ ಆಟೋ ಚಾಲಕರಾಗಿದ್ದ ರವಿಚಂದ್ರ ಕುಲಾಲ್ ಸೋಮವಾರ ಮಧ್ಯಾಹ್ನದ ಸುಮಾರಿಗೆ ತನ್ನ ಆಟೋ ರಿಕ್ಷಾವನ್ನು ವಕ್ವಾಡಿ ನವನಗರ ತಿರುವಿನಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ತನ್ನ ವಾಟ್ಸಾಪ್ ಸ್ಟೇಟಸ್’ನಲ್ಲಿ ಗುಡಾರ್ಥದ ಬರಹಗಳನ್ನು ಬರೆದುಕೊಂಡಿದ್ದರಿಂದ ಅನುಮಾನಗೊಂಡ ಸ್ನೇಹಿತರು ಹಾಗೂ ಕುಟುಂಬದವರು ನಿರಂತರವಾಗಿ ಕರೆ ಮಾಡಿದ್ದಾರೆ.

ಕುಂದಾಪುರ: ನಾಪತ್ತೆಯಾಗಿದ್ದ ಆಟೋ ಚಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ತಮಿಳು ಚಿತ್ರರಂಗದತ್ತ ಪೃಥ್ವಿ ಅಂಬರ್| ಕಾಲಿವುಡ್ ನಲ್ಲಿ ಮಿಂಚಲಿರುವ ಕರಾವಳಿ ಪ್ರತಿಭೆ|

‘ದಿಯಾ’ ಚಿತ್ರದ ಮೂಲಕ ಗಡಿ ದಾಟಿ ಜನಪ್ರಿಯತೆ ಗಳಿಸಿರುವ ಕರಾವಳಿಯ ಪ್ರತಿಭೆ ಪೃಥ್ವಿ ಅಂಬರ್ ಇದೀಗ ತಮಿಳು ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಅವರ ನಟಿಸಲಿರುವ ತಮಿಳು ಚಿತ್ರದಲ್ಲಿ ಡಾಲಿ ಧನಂಜಯ್ ಸಹ ನಟಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ವಿಜಯ್ ಮಿಲ್ಟನ್ ನಿರ್ದೇಶನದ “ಮಲೈ ಪಿಡಿಕ್ಕಾದ ಮಣಿದನ್” ಚಿತ್ರದ ಮೂಲಕ ಪೃಥ್ವಿ ಅಂಬರ್ ತಮಿಳು ಚಲನಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿರುವ ವಿಜಯ್ ಮಿಲ್ಟನ್ ಪ್ರಸ್ತುತ ಶಿವರಾಜ್ ಕುಮಾರ್, ಪೃಥ್ವಿ ಅಂಬರ್ ಮತ್ತು ಧನಂಜಯ್ ಅಭಿನಯದ

ತಮಿಳು ಚಿತ್ರರಂಗದತ್ತ ಪೃಥ್ವಿ ಅಂಬರ್| ಕಾಲಿವುಡ್ ನಲ್ಲಿ ಮಿಂಚಲಿರುವ ಕರಾವಳಿ ಪ್ರತಿಭೆ| Read More »

ಟೇಸ್ಟಿಯಾದ ಅಣಬೆ ಕರಿ ಅಥವಾ ಮಶ್ರೂಮ್‌ ಕರಿ ಹೀಗೆ ಮಾಡಿ.

ಬೇಕಾಗುವ ಸಾಮಾಗ್ರಿಗಳು 2 ಕಪ್ ಅಣಬೆ,1 ಕಪ್ ಟೊಮೆಟೊ,¾ ಕಪ್ ಈರುಳ್ಳಿ,¾ ಕಪ್ ಕಾರ್ನ್,½ ಕಪ್ ಬಟಾಣಿ,2 ಹಸಿಮೆಣಸಿನ ಕಾಯಿ,ಸ್ವಲ್ಪ ಲವಂಗ, ಬೆಳ್ಳುಳ್ಳಿ,2 ಇಂಚು ಶುಂಠಿ,15 ಗೋಡಂಬಿ,1 ಚಮಚ ರಸಂ ಪೌಡರ್,3 ಚಮಚ ಎಣ್ಣೆ,½ ಚಮಚ ಅಜ್ವೈನ್ ,¼ ಚಮಚ ಅರಶಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು ಅಣಬೆ ಕರಿ ಅಥವಾ ಮಶ್ರೂಮ್‌ ಕರಿ ಮಾಡುವ ವಿಧಾನ ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಮೊದಲು ಗೋಡಂಬಿಯನ್ನು ನೀರಿನೊಂದಿಗೆ ರುಬ್ಬಿ ಪೇಸ್ಟ್ ತಯಾರಿಸಿ. ಬಳಿಕ ಈರುಳ್ಳಿ, ಬೆಳ್ಳುಳ್ಳಿ,

ಟೇಸ್ಟಿಯಾದ ಅಣಬೆ ಕರಿ ಅಥವಾ ಮಶ್ರೂಮ್‌ ಕರಿ ಹೀಗೆ ಮಾಡಿ. Read More »

ಕಾಂಡೋಮ್, ಕಾಪರ್ ಟಿ‌ ಗೆ ಗುಡ್ ಬೈ| ಇನ್ಮುಂದೆ ಬರಲಿದೆ ಹೊಸ ಮದ್ದು|

ಸದ್ಯ ಗರ್ಭನಿರೋಧಕವಾಗಿ ಕಾಂಡೋಮ್, ಕಾಪರ್ ಟಿ ಸೇರಿದಂತೆ ಅನೇಕ ವಿಧಾನಗಳನ್ನು ಗರ್ಭನಿರೋಧಕವಾಗಿ ಬಳಸಲಾಗುತ್ತಿದೆ. ಆದರೆ ಶೀಘ್ರದಲ್ಲಿಯೇ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ದೇಹದಲ್ಲಿ ಕಂಡುಬರುವ ವಿಶೇಷ ರೀತಿಯ ಪ್ರತಿಕಾಯದಿಂದ ಹೊಸ ಔಷಧಿ ಸಿದ್ಧವಾಗಲಿದೆ. ಇದು ಅನಗತ್ಯ ಗರ್ಭಧಾರಣೆಯನ್ನು ತಡೆಯಲು ನೆರವಾಗಲಿದೆ. ಈ ಪ್ರತಿಕಾಯವು ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಕಂಡುಬರುತ್ತದೆ. ವಿಜ್ಞಾನಿಗಳ ಪ್ರಕಾರ, ಈ ಪ್ರತಿಕಾಯಗಳು ಒಂದು ರೀತಿಯಲ್ಲಿ ವೀರ್ಯವನ್ನು ಬೇಟೆಯಾಡುತ್ತವೆ. ವೀರ್ಯವು ದೇಹದ ಅನಗತ್ಯ ಭಾಗವನ್ನು ಪ್ರವೇಶಿಸುವುದನ್ನು ತಡೆಯುವಲ್ಲಿ ಇದು ಪರಿಣಾಮಕಾರಿಯಾಗಿದೆ. ಗರ್ಭನಿರೋಧಕ ಔಷಧವನ್ನು ದೇಹದಲ್ಲಿರುವ ಪ್ರತಿಕಾಯಗಳಿಂದ

ಕಾಂಡೋಮ್, ಕಾಪರ್ ಟಿ‌ ಗೆ ಗುಡ್ ಬೈ| ಇನ್ಮುಂದೆ ಬರಲಿದೆ ಹೊಸ ಮದ್ದು| Read More »

ಅಯ್ಯಪ್ಪನ ದರ್ಶನಕ್ಕೆ ಅಪ್ರಾಪ್ತ ಬಾಲಕಿಯರಿಗೆ ಅವಕಾಶ| 9 ವರ್ಷದ ಬಾಲಕಿಯ ಮನವಿ ಸಮ್ಮತಿಸಿದ ಕೇರಳ ಹೈಕೋರ್ಟ್|

ಕೊಚ್ಚಿ: -ಶಬರಿಮಲೆ ಯಾತ್ರೆ ಕೈಗೊಳ್ಳುವ ಅಪ್ಪನೊಂದಿಗೆ ಅಪ್ರಾಪ್ತ ಬಾಲಕಿಯರು ದೇವರ ದರ್ಶನಕ್ಕೆ ತೆರಳಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಶಬರಿಮಲೆ ಯಾತ್ರೆ ಕೈಗೊಳ್ಳುವವರು ಕಡ್ಢಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಂಡಿರಬೇಕು ಹಾಗೂ ಲಸಿಕೆ ಪಡೆಯಲು ಸಾಧ್ಯವಿಲ್ಲದ ಅಪ್ರಾಪ್ತ ಮಕ್ಕಳನ್ನು ಜತೆಯಲ್ಲಿ ಕರೆದುಕೊಂಡು ಹೋಗಬಾರದು ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದ 9 ವರ್ಷದ ಬಾಲಕಿ ನಾನು ನಮ್ಮ ತಂದೆಯೊಂದಿಗೆ ಶಬರಿಮಲೆ ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಳು.

ಅಯ್ಯಪ್ಪನ ದರ್ಶನಕ್ಕೆ ಅಪ್ರಾಪ್ತ ಬಾಲಕಿಯರಿಗೆ ಅವಕಾಶ| 9 ವರ್ಷದ ಬಾಲಕಿಯ ಮನವಿ ಸಮ್ಮತಿಸಿದ ಕೇರಳ ಹೈಕೋರ್ಟ್| Read More »