Editor

ಕಡಬ: ಮಲಗಿದ್ದಲ್ಲೇ ಶವವಾದ ನಿವೃತ್ತ ಯೋದ

ಕಡಬ: ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕುದುಂಬೂರು ಸಮೀಪ ನಿವೃತ್ತ ಸೈನಿಕರೋರ್ವರು ಮನೆಯೊಳಗಡೆ ಮಲಗಿದಲ್ಲೆ ಮೃತಪಟ್ಟಿರುವ ಘಟನೆ ಡಿ.17ರಂದು ನಡೆದಿದೆ. ಮೃತರನ್ನು ಮೂಲತ: ನೂಜಿಬಾಳ್ತಿಲ ಕನ್ವರೆ ಸಮೀಪದ ವೇಳಿಕಲ್ ನಿವಾಸಿ ನಿವೃತ್ತ ಸೈನಿಕ ಯೋಹನ್ನಾನ್(50) ಎಂದು ಗುರುತಿಸಲಾಗಿದೆ. ಯೋಹನ್ನಾನ್ ಅವರು ಕಳೆದ ರಾತ್ರಿಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇವರು ಮನೆಯಲ್ಲಿ ಒಬ್ಬರೇ ಇದ್ದು ಮನೆಯ ಎದುರಿನ ಲೈಟ್ ಹಾಕಲಾಗಿದೆ. ಹಗಲು ವೇಳೆ ಲೈಟ್ ಉರಿಯುತ್ತಿದ್ದು ಚಿಲಕ ಹಾಕಿದ್ದರಿಂದ ಸ್ಥಳೀಯರಿಗೆ ಸಂಶಯ ಬಂದು ಬಾಗಿಲು ತೆಗೆದು ನೋಡಿದಾಗ ಮೃತಪಟ್ಟಿರುವುದು

ಕಡಬ: ಮಲಗಿದ್ದಲ್ಲೇ ಶವವಾದ ನಿವೃತ್ತ ಯೋದ Read More »

ಮೊಟ್ಟೆ ತಿನ್ನದ ಮಕ್ಕಳಿಗೆ ಹಾಲು, ಶೇಂಗಾ ಚಿಕ್ಕಿ| ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್|

ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ತಿನ್ನದ ಮಕ್ಕಳಿಗೆ ಶಾಲೆಯಲ್ಲಿ ಮೊಟ್ಟೆಯ ಬದಲಿಗೆ ಬಾಳೆಹಣ್ಣು ನೀಡುವುದರ ಜೊತೆಗೆ ಶೇಂಗಾಚಿಕ್ಕಿ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಮೊಟ್ಟೆ ನೀಡುವ ಯೋಜನೆಗೆ ವಿವಿಧ ಮಠಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಈ ಯೋಜನೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು. ಇದೀಗ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಪೋಷಕಾಂಶ ಒಳಗೊಂಡಿರುವ ಕಾರಣಕ್ಕೆ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ

ಮೊಟ್ಟೆ ತಿನ್ನದ ಮಕ್ಕಳಿಗೆ ಹಾಲು, ಶೇಂಗಾ ಚಿಕ್ಕಿ| ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್| Read More »

ಮೇಲುಕೋಟೆ ಸನ್ನಿಧಿಯಲ್ಲಿ ಬೆತ್ತಲಾದ ಎಎಪಿ ಕಾರ್ಯಕರ್ತ| ಚೆಲುವ ನಾರಾಯಣನ ಎದುರು ದೇಹಸಿರಿ ಪ್ರದರ್ಶನ ನಡೆಸಲು ಕಾರಣವೇನು ಗೊತ್ತಾ?

ಮಂಡ್ಯ : ಇತಿಹಾಸ ಪ್ರಸಿದ್ದ ಮೇಲುಕೋಟೆ ದೇಗುಲದ ಗರ್ಭಗುಡಿ ಮುಂದೆ ರಾಜಕೀಯ ನಾಯಕನೊಬ್ಬ ಬೆತ್ತಲೆಯಾಗಿ ನಿಂತುಕೊಂಡು ಸ್ಥಳದಲ್ಲಿ ಕೆಲ ಕಾಲ ಗೊಂದಲ ಮೂಡಿಸಿರುವ ಘಟನೆ ನಡೆದಿದೆ ಎನ್ನಲಾಗಿದೆ. ದೇವರದ ದರ್ಶನಕ್ಕೆ ಬಂದಿದ್ದ, ಎಎಪಿ ಪಾರ್ಟಿಯ ರಾಮ್‌ಕುಮಾರ್‌ ಬಂದಿದ್ದ ಎನ್ನಲಾಗಿದೆ, ಈ ವೇಳೇಯಲ್ಲಿ ದೇವರ ಮುಂದೆ ನಿಂತುಕೊಂಡು ನಾನೇ ಅಲ್ಲ, ನಾನೇ ಈಶ್ವರನೆಂದು ಕಿರುಚಿಕೊಂಡು, ಬೆತ್ತಲಾಗಿದ್ದಾನೆ ಎನ್ನಲಾಗಿದೆ. ಕೂಡಲೇ ಸ್ಥಳದಲ್ಲಿದ್ದ ಜನತೆ ಆತನಿಗೆ ಧರ್ಮದ ಏಟು ನೀಡಿ, ಹೊರಗೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ರಾಮ್‌ಕುಮಾರ್‌ ಗಾಂಜಮತ್ತಿನಲ್ಲಿ ಇದ್ದ ಎನ್ನುವ

ಮೇಲುಕೋಟೆ ಸನ್ನಿಧಿಯಲ್ಲಿ ಬೆತ್ತಲಾದ ಎಎಪಿ ಕಾರ್ಯಕರ್ತ| ಚೆಲುವ ನಾರಾಯಣನ ಎದುರು ದೇಹಸಿರಿ ಪ್ರದರ್ಶನ ನಡೆಸಲು ಕಾರಣವೇನು ಗೊತ್ತಾ? Read More »

ವಿಡಿಯೋ ಕಾಲ್ ನಲ್ಲಿ ಬೆತ್ತಲಾದ ಪಂಚಾಯತ್ ಸದಸ್ಯ.!? ಗಲಭೆಯ ನಡುವೆಯೂ ನಡೆಯಿತೊಂದು ಕಾಮಪುರಾಣ

ಉಪ್ಪಿನಂಗಡಿ: ಕಳೆದ ಕೆಲ ದಿನಗಳಿಂದ ಗಲಭೆ, ಪ್ರತಿಭಟನೆ ಮೂಲಕ ರಾಜ್ಯದ ಗಮನ ಸೆಳೆದ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಇಂದು ಮತ್ತೊಂದು ಹೊಸ ಸುದ್ದಿಯಿಂದ ವೈರಲ್ ಆಗಿದೆ. ಸ್ಥಳೀಯ ಪಂಚಾಯತ್ ಸದಸ್ಯ‌ ಎಂದು ಹೇಳಲಾಗುತ್ತಿರುವ ಉಪ್ಪಿನಂಗಡಿಯ ವ್ಯಕ್ತಿಯೊಬ್ಬನ ಬೆತ್ತಲೆ ವಿಡಿಯೋ ಒಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಕಾಲ್ ನಲ್ಲಿ ಬೆತ್ತಲಾಗಿ ಕಾಮಾತುರನಾದ ಈ ವಿಡಿಯೋದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶುಕ್ರವಾರ ಸಂಜೆಯಿಂದಲೇ ಅಶ್ಲೀಲ ದೃಶ್ಯವಿರುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಈ

ವಿಡಿಯೋ ಕಾಲ್ ನಲ್ಲಿ ಬೆತ್ತಲಾದ ಪಂಚಾಯತ್ ಸದಸ್ಯ.!? ಗಲಭೆಯ ನಡುವೆಯೂ ನಡೆಯಿತೊಂದು ಕಾಮಪುರಾಣ Read More »

ಕರಾವಳಿಗೆ ಕಾಲಿಡ್ತಾ ಒಮಿಕ್ರಾನ್? ಘಾನಾದಿಂದ ಮರಳಿದಾತನಿಗೆ ಕೊರೊನಾ ಪಾಸಿಟಿವ್

ಮಂಗಳೂರು: ಘಾನಾದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಒಮಿಕ್ರಾನ್ ಕರಾವಳಿ ಕರ್ನಾಟಕಕ್ಕೆ ತಲುಪುವ ಆತಂಕ ಎದುರಾಗಿದೆ. ಘಾನಾವನ್ನು ಒಮಿಕ್ರಾನ್‌ಗೆ ‘ಹೈ ರಿಸ್ಕ್’ ದೇಶವೆಂದು ಘೋಷಿಸಲಾಗಿದೆ. ಆಗಮನದ ನಂತರ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾದ ಕ್ಷಿಪ್ರ RTPCR ಮಾದರಿಯು ಪಾಸಿಟಿವ್ ಎಂದು ಕಂಡುಬಂದಿದೆ. ನಂತರ, ದಕ್ಷಿಣ ಕನ್ನಡ ಡೆಪ್ಯೂಟಿ ಕಮಿಷನರ್ ಡಾ. ರಾಜೇಂದ್ರ ಕೆ.ವಿ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ, ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ

ಕರಾವಳಿಗೆ ಕಾಲಿಡ್ತಾ ಒಮಿಕ್ರಾನ್? ಘಾನಾದಿಂದ ಮರಳಿದಾತನಿಗೆ ಕೊರೊನಾ ಪಾಸಿಟಿವ್ Read More »

ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ವಿಧಿವಶ

ಕೋಲಾರ: ಅನಾರೋಗ್ಯದ ಕಾರಣ ಇಲ್ಲಿನ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರು ಇಂದು ಅಸುನೀಗಿದ್ದಾರೆ. 97 ವರ್ಷ ವಯಸ್ಸಿನ ಜಾಲಪ್ಪ ಅವರು ಶ್ವಾಸಕೋಶ ಸಮಸ್ಯೆ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ಅವರಿಗೆ ಡಯಾಲಿಸಿಸ್‌ ಮಾಡಲಾಗಿತ್ತು. ಫೆಬ್ರವರಿ ತಿಂಗಳಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದ ಜಾಲಪ್ಪ ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ನಂತರ ಅವರು ಚೇತರಿಸಿಕೊಂಡಿದ್ದರು. ಕರ್ನಾಟಕದ ಪ್ರಮುಖ ರಾಜಕಾರಿಯಾಗಿದ್ದ ಜಾಲಪ್ಪ ಅವರು 4 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಕೇಂದ್ರ

ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ವಿಧಿವಶ Read More »

ರಾಜ್ಯದಲ್ಲಿ ಜೋರಾಗ್ತಿದೆ ಒಮೆಕ್ರಾನ್ ಹವಾ| ಕ್ರಿಸ್ಮಸ್‌, ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್ ಸಾಧ್ಯತೆ| ಮತ್ತೆ ಟೈಟ್ ರೂಲ್ಸ್ ಗೆ ಚಿಂತನೆ?

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಆರ್ಭಟ ಮುಂದುವರೆದಿದೆ. ನಿನ್ನೆ ಹೊಸದಾಗಿ ಐವರಿಗೆ ಓಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೊರೋನಾದಂತೆ ಒಮಿಕ್ರಾನ್ ವೈರಸ್ ಸೋಂಕು ಕಂಟಕವಾಗುವ ಆತಂಕ ಶುರುವಾಗಿದೆ. ನಿನ್ನೆ ಯುಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದಂತ ಐವರು ವಿದೇಶಿಗರಿಗೆ ಓಮಿಕ್ರಾನ್ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಒಮೆಕ್ರಾನ್ ನಿಂದಾಗಿ ಸಾರ್ವಜನಿಕ ಪ್ರದೇಶಗಳ ಪ್ರವೇಶಕ್ಕೆ ಸರ್ಕಾರ ಪಾಸ್ ವಿತರಣೆ ಮಾಡುವ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೋವಿಡ್ ಲಸಿಕೆ

ರಾಜ್ಯದಲ್ಲಿ ಜೋರಾಗ್ತಿದೆ ಒಮೆಕ್ರಾನ್ ಹವಾ| ಕ್ರಿಸ್ಮಸ್‌, ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್ ಸಾಧ್ಯತೆ| ಮತ್ತೆ ಟೈಟ್ ರೂಲ್ಸ್ ಗೆ ಚಿಂತನೆ? Read More »

ಇನ್ಮುಂದೆ‌ ಅಂಗನವಾಡಿಯಲ್ಲೂ ಎಲ್ ಕೆಜಿ, ಯುಕೆಜಿ ಶಿಕ್ಷಣ – ಸಚಿವ ಬಿ.ಸಿ ನಾಗೇಶ್

ಬೆಳಗಾವಿ: “ಅಂಗನವಾಡಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ, ಯುಕೆಜಿ ಪರಿಚಯಿಸಲು ಯೋಜನೆ ಮಾಡಿದ್ದೇವೆ” ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್‌‌ ತಿಳಿಸಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಅವರು, “ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ಪರಿಚಯಿಸಲು ಯೋಜನೆ ಮಾಡಿದ್ದೇವೆ. ಈಗಿರುವ ಸಿಬ್ಬಂದಿಗೆ ಈ ಸಂಬಂಧ ತರಬೇತಿ ನೀಡಿ ಬಳಸಿಕೊಳ್ಳಲಾಗುವುದು” ಎಂದಿದ್ದಾರೆ “ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹಂತ ಹಂತವಾಗಿ ಎನ್‌ಇಪಿ ಜಾರಿ ಮಾಡಲಾಗುತ್ತದೆ. 26 ಪೊಸಿಶನ್‌ ಪೇಪರ್‌ ಸಲ್ಲಿಕೆಯಾಗುತ್ತಿದೆ.

ಇನ್ಮುಂದೆ‌ ಅಂಗನವಾಡಿಯಲ್ಲೂ ಎಲ್ ಕೆಜಿ, ಯುಕೆಜಿ ಶಿಕ್ಷಣ – ಸಚಿವ ಬಿ.ಸಿ ನಾಗೇಶ್ Read More »

‘ಅತ್ಯಾಚಾರವನ್ನು ಎಂಜಾಯ್ ಮಾಡ್ಬೇಕು’ ಹೇಳಿಕೆಗೆ ಕ್ಷಮೆಯಾಚಿಸಿದ ರಮೇಶ್ ಕುಮಾರ್

ಬೆಂಗಳೂರು : ಗುರುವಾರ ವಿಧಾನಸಭೆಯಲ್ಲಿ ಆಡಿದ ಮಾತು ವಿವಾದ ಸೃಷ್ಟಿಸಿ, ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಾಜಿ ಸ್ಪೀಕರ್‌ ರಮೇಶ್‌ ಕಮಾರ್‌ ಶುಕ್ರವಾರ ಸದನದಲ್ಲಿ ಕ್ಷಮೆ ಯಾಚಿಸಿದ್ದಾರೆ. ”ಲಘುವಾಗಿ ವರ್ತಿಸಬೇಕೆಂಬ ಉದ್ದೇಶ ನನಗಿರಲಿಲ್ಲ. ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರೆ ಕ್ಷಮೆ ಕೇಳಲು ನನಗೆ ಯಾವುದೇ ತೊಂದರೆ ಇಲ್ಲ.ನನ್ನ ಹೃದಯಾಳದಿಂದ ನಾನು ಕ್ಷಮೆಯಾಚಿಸುತ್ತೇನೆ” ಎಂದು ಕಲಾಪ ಆರಂಭಕ್ಕೂ ಮುನ್ನ ರಮೇಶ್ ಕುಮಾರ್ ಕ್ಷಮೆ ಯಾಚಿಸಿದ್ದಾರೆ. ”ಇದನ್ನು ಬೆಳೆಸುವುದು ಬೇಡ ಇಲ್ಲಿಗೆ ಮುಗಿಸಿ” ಎಂದು ಸ್ಪೀಕರ್ ವಿಶೇಶ್ವರ ಹೆಗಡೆ

‘ಅತ್ಯಾಚಾರವನ್ನು ಎಂಜಾಯ್ ಮಾಡ್ಬೇಕು’ ಹೇಳಿಕೆಗೆ ಕ್ಷಮೆಯಾಚಿಸಿದ ರಮೇಶ್ ಕುಮಾರ್ Read More »

ಪ್ರಧಾನಿ ಮೋದಿಗೆ ಭೂತಾನ್ ನಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

ನವದೆಹಲಿ: ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಗ್ ಪೆಲ್ ಗಿ ಖೋರ್ಲೋ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರದಾನ ಮಾಡಲಾಗುವುದು ಅಂತ ತಿಳಿಸಿದೆ.

ಪ್ರಧಾನಿ ಮೋದಿಗೆ ಭೂತಾನ್ ನಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ Read More »