Editor

ರೀಲ್ಸ್ ನೋಡುತ್ತಾ ಕಾರು ಚಾಲನೆ| ಕೆರೆಗೆ‌ ಬಿದ್ದು ಇಬ್ಬರು ದುರ್ಮರಣ

ಸಮಗ್ರ ನ್ಯೂಸ್: ಕಾರು ಚಾಲನೆ ಮಾಡುವಾಗ ರೀಲ್ಸ್ ನೋಡುತ್ತಾ ಕಾರು ಚಲಾಯಿಸಿದ ಪರಿಣಾಮ, ರಸ್ತೆ ಪಕ್ಕದಲ್ಲಿದ್ದ ನದಿಗೆ ಕಾರು ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ. ಕಾರು ಚಾಲನೆ ಮಾಡುವ ಕಾರು ಚಾಲಕ ಮೊಬೈಲ್ ನಲ್ಲಿ ರೂಲ್ಸ್ ನೋಡುತ್ತಾ ಕಾರು ಓಡಿಸುತ್ತಿದ್ದ. ಈ ವೇಳೆ ಕಾರು ಕೆರೆಗೆ ಬಿದ್ದು ಇಬ್ಬರು ಸಾವಿಗೀಡಾಗಿದ್ದು, ಮತ್ತೊಬ್ಬ ವ್ಯಕ್ತಿ ಬಹಳ ಕಷ್ಟಪಟ್ಟು ಜೀವವನ್ನು ಉಳಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಮೃತರನ್ನು ಪಲಾಶ್ ಗಾಯಕ್ವಾಡ್ ಮತ್ತು ಕಾರು […]

ರೀಲ್ಸ್ ನೋಡುತ್ತಾ ಕಾರು ಚಾಲನೆ| ಕೆರೆಗೆ‌ ಬಿದ್ದು ಇಬ್ಬರು ದುರ್ಮರಣ Read More »

ಎಟಿಎಂ ಸಿಬ್ಬಂದಿ ಕೊಲೆ ಪ್ರಕರಣ| ಇಬ್ಬರು ಆರೋಪಿಗಳು ಹೈದ್ರಾಬಾದ್ ನಲ್ಲಿ ಅರೆಸ್ಟ್

ಸಮಗ್ರ ನ್ಯೂಸ್: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಎಟಿಎಂ ಸಿಬ್ಬಂದಿ ಕೊಲೆ ಹಾಗೂ ದರೋಡೆ ಪ್ರಕರಣ ಸಂಬಂಧ ಇಬ್ಬರು ದರೋಡೆಕೋರರನ್ನು ಪೊಲೀಸರು ಹೈದರಾಬಾದ್​​ನಲ್ಲಿ ಅರೆಸ್ಟ್​​​​​​​ ಮಾಡಿದ್ದಾರೆ. ಘಟನೆ ಬೆನ್ನಲ್ಲೇ 9 ತಂಡಗಳಾಗಿ ಹಂತಕರ ಬೆನ್ನತ್ತಿದ್ದ ಖಾಕಿ ಪಡೆ, ಚೇಸಿಂಗ್ ಮಾಡಿ ಹೈದರಾಬಾದ್​ ವರೆಗೂ ಹೋಗಿ ಫೈರ್ ಮಾಡಿ ಬಂಧಿಸಿದ್ದಾರೆ. ಚೇಸಿಂಗ್ ವೇಳೆ ಅಫ್ಜಲ್​​​​ಗಂಜ್​​​​​​​​​ ಪ್ರದೇಶದ ಟ್ರಾವಲ್​​ ಏಜೆನ್ಸಿಗೆ ನುಗ್ಗಿದ್ದ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಮೇಲೆ ಶೂಟ್ ಮಾಡಲು ದರೋಡೆಕೋರರು ಯತ್ನಾಸಿದ್ದಾರೆ. ಈ ವೇಳೆ ಮಿಸ್​​ ಆಗಿ

ಎಟಿಎಂ ಸಿಬ್ಬಂದಿ ಕೊಲೆ ಪ್ರಕರಣ| ಇಬ್ಬರು ಆರೋಪಿಗಳು ಹೈದ್ರಾಬಾದ್ ನಲ್ಲಿ ಅರೆಸ್ಟ್ Read More »

ನಟ ಸೈಫ್ ಅಲಿಖಾನ್ ಗೆ ಚೂರಿ ಇರಿತ ಪ್ರಕರಣ| ಓರ್ವ ಆರೋಪಿ ಅರೆಸ್ಟ್

ಸಮಗ್ರ ನ್ಯೂಸ್: ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ್ದ ಓರ್ವನನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ಬಂಧಿಸಿ ಬಾಂದ್ರಾ ಠಾಣೆಗೆ ಕರೆದುಕೊಂಡು ಬರಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸೈಫ್ ಅಲಿ ಖಾನ್ ಅವರ ನಿವಾಸದಲ್ಲೇ ಗುರುವಾರ ರಾತ್ರಿ ಹಲ್ಲೆ ನಡೆಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸೈಫ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಚಾಕುವಿನಿಂದ 6 ಬಾರಿ ಇರಿದಿದ್ದು, ಅದರಲ್ಲಿ ಎರಡು ಕಡೆ ಗಂಭೀರ ಗಾಯಗಳಾಗಿವೆ

ನಟ ಸೈಫ್ ಅಲಿಖಾನ್ ಗೆ ಚೂರಿ ಇರಿತ ಪ್ರಕರಣ| ಓರ್ವ ಆರೋಪಿ ಅರೆಸ್ಟ್ Read More »

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು‌ ಕೊಲೆಗೈದ ಪತಿ| ಏಳು ವರ್ಷಗಳ ದಾಂಪತ್ಯದ ನಡುವೆ ಬಂದಿದ್ದು ಯಾರು?

ಸಮಗ್ರ ನ್ಯೂಸ್ : ಪತಿಗೆ ತನ್ನ ಪತ್ನಿಯ ಅನೈತಿಕ ಸಂಬಂಧದ ವಿಷಯ ತಿಳಿದು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ನಡೆದಿದೆ. ಏಳು ವರ್ಷಗಳ ಹಿಂದೆ ದೇವರಾಜ್ ತನ್ನ ಸಂಬಂಧಿಯಾಗಿದ್ದ ತೇಜು ಎನ್ನುವವಳನ್ನು ಮದುವೆಯಾಗಿದ್ದ. ಇವರಿಗೆ ಎರಡು ಮಕ್ಕಳು ಇದ್ದಾರೆ. ಹಾಗಿದ್ದರೂ ಸಹ ತೇಜ ಪರ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ಹಿಂದೆ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಮನೆ ಬಿಟ್ಟು ಓಡಿಹೋಗಿದ್ದಳು. ನಂತರ ರಾಜೀ ಸಂದಾನ ಮಾಡಿ

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು‌ ಕೊಲೆಗೈದ ಪತಿ| ಏಳು ವರ್ಷಗಳ ದಾಂಪತ್ಯದ ನಡುವೆ ಬಂದಿದ್ದು ಯಾರು? Read More »

ರಾಜ್ಯದ ಈ ಪ್ರಮುಖ ದೇವಾಲಯದಲ್ಲಿ ಬಾಳೆಹಣ್ಣು ಬಳಕೆ‌ ನಿಷೇಧಿಸಿ ಆದೇಶ| ಕಾರಣ ಕೇಳಿದ್ರೆ ನೀವೂ ಸರಿ ಎನ್ನುವಿರಿ…

ಸಮಗ್ರ ನ್ಯೂಸ್: ಎಲ್ಲಾ ಶುಭ ಕಾರ್ಯದಲ್ಲಿ ಬಾಳೆಹಣ್ಣು ಇದ್ದೇ ಇರುತ್ತೆ. ಅದರಲ್ಲೂ ದೇವಾಲಯಕ್ಕೆ ನಾವು ಹೋಗುವಾಗ ಹಣ್ಣು ಕಾಯಿಯ ಜೊತೆಗೆ ಬಾಳೆಹಣ್ಣು ತೆಗೆದುಕೊಂಡು ಹೋಗುವುದು ಸಾಮಾನ್ಯ. ಹಾಗೆ ಪೂಜೆ ಸಮಯದಲ್ಲಿ ಬಾಳೆಹಣ್ಣು ಇಟ್ಟು ಪೂಜೆ ಸಲ್ಲಿಸಿ ಬಳಿಕ ಅದನ್ನು ಪ್ರಸಾದವಾಗಿ ನೀಡುವುದು ಕೂಡ ನೋಡಬಹುದು. ಆದರೆ ಈಗ ರಾಜ್ಯದ ಒಂದು ದೇವಾಲಯ ಈ ಬಾಳೆಹಣ್ಣನ್ನೇ ನಿಷೇಧ ಮಾಡಿಬಿಟ್ಟಿದೆ. ನಿಮಗಿದು ಅಚ್ಚರಿ ತರಿಸಬಹುದು. ದೇವಾಲಯವೇ ಬಾಳೆಹಣ್ಣನ್ನು ನಿಷೇಧಿಸಲು ಕಾರಣವೇನು? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ಅಚ್ಚರಿ ಎನಿಸಿದರು ಇದು

ರಾಜ್ಯದ ಈ ಪ್ರಮುಖ ದೇವಾಲಯದಲ್ಲಿ ಬಾಳೆಹಣ್ಣು ಬಳಕೆ‌ ನಿಷೇಧಿಸಿ ಆದೇಶ| ಕಾರಣ ಕೇಳಿದ್ರೆ ನೀವೂ ಸರಿ ಎನ್ನುವಿರಿ… Read More »

ಸಿ.ಟಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದು ದೃಢ| ಡಿಐಪಿಆರ್ ನಲ್ಲಿ‌ ಬಯಲಾಯ್ತು ಅಸಲಿ ಸತ್ಯ

ಸಮಗ್ರ ನ್ಯೂಸ್: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವಾಚ್ಯ ಪದಗಳಿಂದ ನಿಂದಿಸಿರುವುದು ದೃಢಪಟ್ಟಿದೆ. ಸರ್ಕಾರದ ಟಿವಿಯಲ್ಲಿಯೇ ಇದು ದಾಖಲಾಗಿದ್ದು, ಡಿಐಪಿಆರ್ ನಿಂದ ಸಿಐಡಿಗೆ ಅಸಲಿ ವಿಡಿಯೋ ನೀಡಲಾಗಿದೆ. 7 ಬಾರಿ ಸಿಟಿ ರವಿ ನಿಂದಿಸಿರುವುದು ದಾಖಲಾಗಿದೆ ಎಂದು ಹೇಳಲಾಗಿದೆ. ಸಿ.ಟಿ. ರವಿ ಅವಾಚ್ಯ ಪದಗಳಿಂದ ನಿಂದಿಸಿರುವುದು ಖಾಸಗಿ ವಾಹಿನಿ ವಿಡಿಯೋದಲ್ಲಿ ದಾಖಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರಾದರೂ ಅದನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಭಾಪತಿ

ಸಿ.ಟಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದು ದೃಢ| ಡಿಐಪಿಆರ್ ನಲ್ಲಿ‌ ಬಯಲಾಯ್ತು ಅಸಲಿ ಸತ್ಯ Read More »

ಕಡಬ: ಮೋರಿಗೆ ಡಿಕ್ಕಿ ಹೊಡೆದ ಬೈಕ್| ಶಾಲಾ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಸವಾರನ ನಿಯಂತ್ರಣ ತಪ್ಪಿದ ಬೈಕೊಂದು ಮೋರಿಗೆ ಢಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ. ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎಂದು ಗುರುತಿಸಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ

ಕಡಬ: ಮೋರಿಗೆ ಡಿಕ್ಕಿ ಹೊಡೆದ ಬೈಕ್| ಶಾಲಾ ವಿದ್ಯಾರ್ಥಿ ಸ್ಥಳದಲ್ಲೇ ಸಾವು Read More »

ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ| ಓರ್ವ ಸಾವು

ಸಮಗ್ರ ನ್ಯೂಸ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ‌ ಮುಂದೆ ಗುರುವಾರ ನಡೆದಿದೆ. ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಕಣ್ಣಿಗೆ ಖಾರದ‌ ಪುಡಿ ಎರಚಿ, ಗುಂಡು ಹಾರಿಸಿ ಹಣದ ಸಮೇತ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ಗುಂಡಿನ ದಾಳಿ ಪರಿಣಾಮ ಗಾಯಗೊಂಡಿದ್ದ ಎಸ್‌ಬಿಐ ಬ್ಯಾಂಕ್ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಎಸ್​ಬಿಐ ಬ್ಯಾಂಕ್​ ಸಿಬ್ಬಂದಿ ಜಿಎಸ್’ಸಿ ವಾಹನದಲ್ಲಿ ಲಕ್ಷಾಂತರ ಹಣವನ್ನು

ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ| ಓರ್ವ ಸಾವು Read More »

ಮಾಜಿ ಸಂಸದ ಎಂ‌ ಶ್ರೀನಿವಾಸ್ ವಿಧಿವಶ

ಸಮಗ್ರ ನ್ಯೂಸ್: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮಾಜಿ ಸಂಸದರು ಹಾಗೂ 4 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಮುತ್ಸದ್ದಿ ಎಂ.ಶ್ರೀನಿವಾಸ್ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಲಾಗಿದ್ದ ಶ್ರೀನಿವಾಸ್ ಅವರು, ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತ ಶ್ರೀನಿವಾಸ್​​ ರ ಅಂತ್ಯಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ನಾಳೆ ಉತ್ತರಹಳ್ಳಿಯಲ್ಲಿ ನಡೆಯಲಿದೆ.

ಮಾಜಿ ಸಂಸದ ಎಂ‌ ಶ್ರೀನಿವಾಸ್ ವಿಧಿವಶ Read More »

ಮಂಗಳೂರಿನಲ್ಲಿ ಸತ್ತವ ಕೇರಳದಲ್ಲಿ ಉಸಿರಾಡಿದ!! ಹೀಗೊಂದು ಪುನರ್ಜನ್ಮದ ವಿಚಿತ್ರ ಘಟನೆ!!

ಸಮಗ್ರ ನ್ಯೂಸ್: ಮಂಗಳೂರಿನ ಆಸ್ಪತ್ರೆಯಲ್ಲಿ ಸತ್ತ ಎಂದು ಕೇರಳ ಶವಗಾರಕ್ಕೆ ಕರೆದುಕೊಂಡು ಹೋದ್ರೆ ಅಲ್ಲಿ ಜೀವಂತವಾಗಿರೋದು ತಿಳಿದು ಬಂದಿದೆ. ಎಸ್, ಚಿಕಿತ್ಸೆ ಫಲಿಸದೇ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ 67 ವರ್ಷದ ವ್ಯಕ್ತಿಗೆ ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಪುನರ್ಜನ್ಮ ಸಿಕ್ಕಿದೆ. ಪಾರ್ಶ್ವವಾಯು ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಣ್ಣೂರಿನ ಪಚಪೊಯ್ಕಾದ ವೆಲ್ಲುವಕ್ಕಂಡಿ ಪವಿತ್ರನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ

ಮಂಗಳೂರಿನಲ್ಲಿ ಸತ್ತವ ಕೇರಳದಲ್ಲಿ ಉಸಿರಾಡಿದ!! ಹೀಗೊಂದು ಪುನರ್ಜನ್ಮದ ವಿಚಿತ್ರ ಘಟನೆ!! Read More »