ಸಮಗ್ರ ನ್ಯೂಸ್: ಮೇ 1 ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಲ್ಲಾ ಕೇಸುಗಳಲ್ಲಿ ಹತ್ಯೆ ಪ್ರಕರಣದ ಭಾಗಿಯಾಗಿದ್ದ ಪ್ರಮುಖ ಆರೋಪಿ ಚೊಟ್ಟೆ ನೌಷದ್ (ನೌಷದ್ ) ವಾಮಂಜೂರು ಎಂಬಾತನು ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಫಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದನು,ಮತ್ತೋರ್ವ ಅಜರುದ್ದೀನ್ @ ಅಜರ್ ಆಶ್ರಯ ಕಾಲೊನಿ, ಕಳವಾರು ಗ್ರಾಮ ನಿವಾಸಿ.ಇನ್ನೋರ್ವ ಅಬ್ದುಲ್ ಖಾದರ್ @ ನೌಫಲ್(24) ಬೆಳಪು, ಕಾಪು, ಉಡುಪಿ ನಿವಾಸಿಯಾಗಿದ್ದಾನೆ.
ಆರೋಪಿಗಳ ಪೈಕಿ ಚೊಟ್ಟೆ ನೌಶಾದ್ ಹಲವು ಹಿಂದೂಗಳ ಹತ್ಯೆ ಕೃತ್ಯೆಗೆ ಹಣ ಹೊಂದಿಸುತ್ತಿದ್ದನೆಂದು ತಿಳಿದಿದೆ.ಅಜರುದ್ದೀನ್ ಕೂಡ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿರುತ್ತದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿದ್ದಾನೆ.ಹಾಗೂ ಮತ್ತೋರ್ವ ಆರೋಪಿ ಅಬ್ದುಲ್ ಖಾದರ್ ನೌಫಲ್ ಎಂಬಾತನು ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ಸಮಯದಲ್ಲಿ ಆರೋಪಿಗಳಿಗೆ ಸಹಕರಿಸಿದ್ದನು ಎಂದು ತಿಳಿದಿದೆ.
೩ ಆರೋಪಿಗಳನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಕುರಿತು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ .ಈ ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ನಿಯೋಗ ಪೊಲೀಸ್ ಆಯುಕ್ತರಿಗೆ ಮಾನಸಿ ಮಾಡಿದ್ದರು .ಈ ಪ್ರಕರಣದ ತನಿಖೆ ಏನ್.ಐ .ಎ ನೀಡಿದರೆ ಮತ್ತಷ್ಟು ಪ್ರಕರಣದ ಆರೋಪಿಗಳು ಹಾಗೂ ಬಜ್ಪೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿರುವುದು ಸ್ಪಷ್ಟ ಎಂದು ಬಿಜೆಪಿ ನಿಯೋಗ ಆರೋಪಿಸಿದೆ.