ಅದ್ಧೂರಿಯಾಗಿ ಅರಿಶಿಣ ಶಾಸ್ತ್ರ ಮಾಡಿಕೊಂಡ ತರುಣ್-ಸೋನಲ್ 

ಸಮಗ್ರ ನ್ಯೂಸ್: ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೂ ಮೊದಲು ಅದ್ದೂರಿಯಾಗಿ ಅರಿಶಿಣ ಶಾಸ್ತ್ರಗಳನ್ನು ಮಾಡಿಕೊಳ್ಳಲಾಗಿದೆ.

Ad Widget ... ..

ಅರಿಶಿಣದ ನೀರನ್ನು ಹೊಯ್ದುಕೊಂಡು ಫೋಟೋಗೆ ತರುಣ್ ಹಾಗೂ ಸೋನಲ್ ಪೋಸ್ ಕೊಟ್ಟಿದ್ದಾರೆ.ಆಗಸ್ಟ್ 10ರಂದು ಬೆಂಗಳೂರಲ್ಲಿ ಆರತಕ್ಷತೆ ಜರುಗಲಿದೆ. ಆಗಸ್ಟ್ 11ರಂದು ಇವರ ವಿವಾಹ ನೆರವೇರುತ್ತಿದೆ. ಅರಿಶಿನ ಶಾಸ್ತ್ರಕ್ಕೆ ಚಿತ್ರರಂಗದ ಅನೇಕ ನಟರು ಭಾಗವಹಿಸಿದ್ದರು. ನೆನಪಿರಲಿ ಪ್ರೇಮ್, ಶರಣ್ ಸೇರಿದಂತೆ ಅನೇಕರು ಅರಿಶಿಣ ಶಾಸ್ತ್ರಕ್ಕೆ ಬಂದು ಪೋಸ್ ಕೊಟ್ಟಿದ್ದಾರೆ.

Ad Widget

ತರುಣ್ ಅವರು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕೆಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಸೋನಲ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Leave a Comment

Your email address will not be published. Required fields are marked *