ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್| ಬೆಳೆವಿಮೆ ನೋಂದಣಿ ವಿಮಾಕಂತು ಪಾವತಿಗೆ ದಿನ ನಿಗದಿ| ಯಾವಾಗ ಕೊನೆ ದಿನ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ವಿಮಾ ಕಂಪನಿ ಜೊತೆ ಒಪ್ಪಂದ ರೂಪುಗೊಂಡಿದ್ದು, ವಿಮಾಕಂತು ಪಾವತಿಗೆ ಜು.31ನ್ನು ಕೊನೆ ದಿನ‌ ಎಂದು ನಿಗದಿಗೊಳಿಸಲಾಗಿದೆ.

Ad Widget ... ..

ಬೆಳೆವಿಮೆಯಿಂದ ಅಡಿಕೆ, ಕಾಳುಮೆಣಸು ‌ಬೆಳೆಗಳನ್ನು ಹೊರಗಿಡಲಾಗಿದ್ದು, ಇದರಿಂದ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಕೃಷಿಕರಿಗೆ ತೊಂದರೆಯಾಗಿತ್ತು. ಕಂಪನಿ ಜೊತೆ ಒಪ್ಪಂದ ಕೈಗೂಡದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿತ್ತು. ಇದೀಗ ಒಪ್ಪಂದಕ್ಕೆ ಟಾಟಾ ಎಐಜಿ ಸಂಸ್ಥೆ ಒಪ್ಪಿಕೊಂಡಿದೆ.

Ad Widget

ದ.ಕ‌ ಜಿಲ್ಲೆಗೆ ಅನ್ವಯವಾಗುವಂತೆ ಅಡಿಕೆ‌ ಮತ್ತು ಕಾಳುಮೆಣಸು ಬೆಳೆಗಳಿಗೆ ವಿಮಾ ಆಧಾರಿತ ಪ್ರೀಮಿಯಂ ಪಾವತಿಗೆ 2024ರ ಜು.31ನೇ ದಿನಾಂಕವನ್ನು ಕೊನೆದಿನವಾಗಿ ಘೋಷಿಸಿ, ಸಂಬಂಧಪಟ್ಟ ‌ಇಲಾಖೆಗಳು ರೈತರಿಂದ ಕಂತು ಪಾವತಿಸಲು ಪ್ರಕಟಣೆ ಹೊರಡಿಸಲಾಗಿದೆ.

Leave a Comment

Your email address will not be published. Required fields are marked *