ಕೊಂಚ ತಗ್ಗಿದ ಮಳೆಯಬ್ಬರ| ಇಂದಿನಿಂದ ಶಾಲಾ ಕಾಲೇಜುಗಳು ಎಂದಿನಂತೆ ಶುರು

ಸಮಗ್ರ ನ್ಯೂಸ್: ಕರಾವಳಿ‌ ಮತ್ತು ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಅಬ್ವರಿಸಿದ್ದ ಮಳೆ ಸೋಮವಾರದಿಂದ ಕೊಂಚ ಕಡಿಮೆಯಾಗಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ದ.ಕ, ಉಡುಪಿ, ಉ.ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಂಭವವಿದೆ.

Ad Widget ... ..

ಮಳೆ‌ ಕೊಂಚ ತಗ್ಗಿದ ಹಿನ್ನೆಲೆಯಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಮತ್ತೆ ಎಂದಿನಂತೆ ಶುರುವಾಗಲಿವೆ. ಕಳೆದೊಂದು ವಾರದಿಂದ ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡಿನ ಬಹುತೇಕ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಮಳೆ ಕಡಿಮೆಯಾಗಿದ್ದು ತರಗತಿಗಳನ್ನು ಇಂದಿನಿಂದ ಪುನಃ ಆರಂಭಿಸಲಾಗಿದೆ. ಕಡಿತಗೊಂಡ ಪಠ್ಯ ಚಟುವಟಿಕೆಗಳನ್ನು ಹೊಂದಿಸಿಕೊಳ್ಳಲು ಸಾರ್ವತ್ರಿಕ ರಜೆಗಳಿಗೆ ಮುಂದಿನ ದಿನಗಳಲ್ಲಿ ಕೊಕ್ಕೆ ಬೀಳಲಿದೆ.

Ad Widget

Leave a Comment

Your email address will not be published. Required fields are marked *