September 2025

ಏಷ್ಯಾಕಪ್ ಹಾಕಿಯಲ್ಲಿ ಭಾರತದ ಭರ್ಜರಿ ವಿಜಯ| ದ.ಕೊರಿಯಾ ಮಣಿಸಿ ಕಪ್ ಗೆದ್ದ ಟೀಂ ಇಂಡಿಯಾ

ಸಮಗ್ರ ನ್ಯೂಸ್: ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025 ರ ಹಾಕಿ ಏಷ್ಯಾಕಪ್ ಫೈನಲ್​ನಲ್ಲಿ ಹರ್ಮನ್​​ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್​ ಪ್ರವೇಶಿಸಿದ್ದ ಭಾರತ ತಂಡ ನಾಲ್ಕನೇ ಬಾರಿಗೆ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ . ವಾಸ್ತವವಾಗಿ ಸೂಪರ್ 4 ಸುತ್ತಿನಲ್ಲಿ ಇದೇ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯವನ್ನು 2-2 ರಿಂದ ಡ್ರಾ ಮಾಡಿಕೊಂಡಿದ್ದ ಭಾರತ ಹಾಕಿ ತಂಡ […]

ಏಷ್ಯಾಕಪ್ ಹಾಕಿಯಲ್ಲಿ ಭಾರತದ ಭರ್ಜರಿ ವಿಜಯ| ದ.ಕೊರಿಯಾ ಮಣಿಸಿ ಕಪ್ ಗೆದ್ದ ಟೀಂ ಇಂಡಿಯಾ Read More »

ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

ಸಮಗ್ರ ನ್ಯೂಸ್: ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್‌ ಬಗ್ಗೆ ವಿರೋಧ ಕೇಳಿಬಂದಿದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇತ್ತೀಚೆಗೆ ಹಾಸನದ ಅಮೀರ್ ಮೊಹಲ್ಲಾದಲ್ಲಿನ ಅವರ ನಿವಾಸಕ್ಕೆ ತೆರಳಿ, ಸರ್ಕಾರದ ಪರ ಜಿಲ್ಲಾಡಳಿತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿತ್ತು. ಈ ವಿಚಾರವಾಗಿ ಮಾಜಿ ಸಂಸದ ಪ್ರತಾಪ್​ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಬಾನು

ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ Read More »

ನಟಿ ಭಾವನಾ ರಾಮಣ್ಣರ ಒಂದು ಮಗು ಸಾವು

ಸಮಗ್ರ ನ್ಯೂಸ್: ಐವಿಎಫ್ ಮೂಲಕ ನಟಿ ಭಾವನಾ ರಾಮಣ್ಣ ಗರ್ಭವತಿಯಾಗಿದ್ದರು. ಅವರಿಗೆ ಅವಳಿ ಮಕ್ಕಳು ಜನಿಸಿದ್ದವು. ಹೀಗೆ ಜನಿಸಿದ್ದರಲ್ಲಿ ಒಂದು ಮಗು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಐವಿಎಫ್ ಮೂಲಕ ನಟಿ ಭಾವನಾ ರಾಮಣ್ಣ ಅವರು ತಾಯಿಯಾಗಿದ್ದರು. 2 ವಾರಗಳ ಹಿಂದಷ್ಟೇ ನಟಿ ಭಾವನಾಗೆ ಹೆರಿಗೆ ಕೂಡ ಆಗಿತ್ತು. ಅವಳಿ ಹೆಣ್ಣು ಮಗುವಿಗೆ ನಟಿ ಭಾವನ ಜನ್ಮ ನೀಡಿದ್ದರು. ಅವಳಿ ಮಕ್ಕಳು ಹುಟ್ಟಿದಂತ ಸಂದರ್ಭದಲ್ಲಿ ಆರೋಗ್ಯವಾಗೇ ಇದ್ದವು. ಆದರೇ ಇದೀಗ ಅವಳಿ ಹೆಣ್ಣುಮಕ್ಕಳಲ್ಲಿ ಒಂದು ಮಗು ನಿಧನವಾಗಿದ್ದು, ಮತ್ತೊಂದು

ನಟಿ ಭಾವನಾ ರಾಮಣ್ಣರ ಒಂದು ಮಗು ಸಾವು Read More »

ಇಂದು (ಸೆ.7) ಖಗ್ರಾಸ ಚಂದ್ರಗ್ರಹಣ| ಬಾನಂಗಳದಲ್ಲಿ ಮೂಡಲಿದೆ ಕೌತುಕ

ಸಮಗ್ರ ನ್ಯೂಸ್: ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ರಾತ್ರಿ 09:57 ರಿಂದ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 01:26 ರವರೆಗೆ ಇರುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 03 ಗಂಟೆ 29 ನಿಮಿಷಗಳು ಎಂದು ಹೇಳಲಾಗಿದೆ. ಜನರು ವರ್ಷದ ಕೊನೆಯ ಸಂಪೂರ್ಣ ಚಂದ್ರ ಗ್ರಹಣವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಸಂಪೂರ್ಣವಾಗಿ ಜೋಡಿಸಿದಾಗ, ಹುಣ್ಣಿಮೆ ಕ್ರಮೇಣ ಆಳವಾದ ಕಡುಗೆಂಪು ಬಣ್ಣಕ್ಕೆ ತಿರುಗುತ್ತದೆ, ಇದರ ಪರಿಣಾಮವಾಗಿ ಉಸಿರುಕಟ್ಟುವ ರಕ್ತ ಚಂದ್ರನು ಸುಮಾರು 82 ನಿಮಿಷಗಳ

ಇಂದು (ಸೆ.7) ಖಗ್ರಾಸ ಚಂದ್ರಗ್ರಹಣ| ಬಾನಂಗಳದಲ್ಲಿ ಮೂಡಲಿದೆ ಕೌತುಕ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಕೃಷ್ಣಪಕ್ಷದ ದ್ವಾದಶಿಯಿಂದ ದಕ್ಷಿಣಾಯನ ಆಷಾಢಮಾಸದ ಶುಕ್ಲಪಕ್ಷದ ಪಂಚಮಿಯವರೆಗೆ ಅಂದರೆ 07 .09.25 ರಿಂದ 13.09.25 ರ ವರೆಗೆ ಈ ವಾರದ ಚಂದ್ರನ ಸಂಚಾರ ಭರಣಿ ನಕ್ಷತ್ರದಿಂದ ಮಖಾ ನಕ್ಷತ್ರದವರೆಗೆ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಸಂಪೂರ್ಣವಾಗಿ ತಿಳಿಯೋಣ. ಮೇಷರಾಶಿ:ಈ ವಾರ ನಿಮ್ಮ ಖರ್ಚುಗಳು ಹೆಚ್ಚಿರುತ್ತವೆ. ವಾರದ ಮಧ್ಯದಿಂದ, ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಿ. ಕೆಲಸಗಳನ್ನು ನಿರ್ವಹಿಸುವಲ್ಲಿನ ವಿಳಂಬವು ಚಿಂತೆಗೆ ಕಾರಣವಾಗಬಹುದು. ಸಕಾರಾತ್ಮಕ ಪರಿಣಾಮಗಳಿಗಿಂತ ನಕಾರಾತ್ಮಕ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್| ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದು ಸೌಜನ್ಯ ಮಾವ ವಿಠಲ ಗೌಡ| ಎಸ್ಐಟಿಯಿಂದ ಸ್ಥಳ ಮಹಜರು

ಸಮಗ್ರ ನ್ಯೂಸ್: ಬುರುಡೆ ಪ್ರಕರಣ ಸಂಬಂಧ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು ಕಾಡಿನಿಂದ ಗಿರೀಶ್ ಮಟ್ಟಣ್ಣವರ್ ಗೆ ನೀಡಿದ್ದು ಪಾಂಗಳದ ಸೌಜನ್ಯ ಮಾವ ವಿಠಲ್ ಗೌಡ ಎಂದು ಎಸ್.ಐ.ಟಿ ವಿಚಾರಣೆಯಲ್ಲಿ ಬಯಲಾಗಿದೆ. ವಿಠಲ್ ಗೌಡ ಮೊದಲ ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆಯನ್ನು ತಂದು ಗಿರೀಶ್ ಮಟ್ಟಣ್ಣವರ್ ಗೆ ನೀಡಿದ್ದು ಅದನ್ನು ಜಯಂತ್. ಟಿ ಮೂಲಕ ಆರೋಪಿ ಚಿನ್ನಯ್ಯನಿಗೆ ಒಪ್ಪಿಸಿರುವುದು ಎಸ್.ಐ.ಟಿ ತನಿಖೆಯಲ್ಲಿ ಬಯಲಾಗಿದೆ. ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಪ್ರದೇಶಕ್ಕೆ ಎಸ್.ಐ.ಟಿ

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್| ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದು ಸೌಜನ್ಯ ಮಾವ ವಿಠಲ ಗೌಡ| ಎಸ್ಐಟಿಯಿಂದ ಸ್ಥಳ ಮಹಜರು Read More »

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆ ರಚನೆ

ಸಮಗ್ರ ನ್ಯೂಸ್: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಸೆ.1 ರಂದು ಜಿಲ್ಲಾ ಮಾಜಿ ಸೈನಿಕ ಸಂಯೋಜಕರಾದ ಮ್ಯಾಥ್ಯೂ ಟಿ.ಜಿ ಅವರ ಮುಂದಾಳುತ್ವದಲ್ಲಿ ರಚನೆಗೊಂಡಿದ್ದು. ಜಿಲ್ಲಾ ಅಧ್ಯಕ್ಷರಾಗಿ ನೋಬಾರ್ಟ್ ರೊಡ್ರಿಗಸ್ ಅವರನ್ನು ಆಯ್ಕೆ ಮಾಡಲಾಯಿತು.ಜಿಲ್ಲಾ ಗೌರವಾಧ್ಯಕ್ಷರುಗಳಾಗಿ ಡಾ.ಗೋಪಾಲಕೃಷ್ಣ ಕಾಂಚೋಡ್ ಬೆಳ್ತಂಗಡಿ, ದಾಸಪ್ಪ ಪೂಜಾರಿ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಸೋಮಶೇಖರ.ಎನ್ ಕಡಬ, ಉಪಾಧ್ಯಕ್ಷರು ರೂಡಲ್ಫ್ ಡಿಸೋಜಾ ಮಂಗಳೂರು, ಖಜಾಂಜಿ ಚಂದಪ್ಪ ಡಿಎಸ್ ಮಂಗಳೂರು, ಉಪ ಖಜಾಂಚಿ ಅನಿಲ್ ಜಾನ್

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆ ರಚನೆ Read More »

ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆಗೆ ಸಿಗದ ಅನುಮೋದನೆ| ಮತ್ತೆ ಹುಸಿಯಾದ ನಿರೀಕ್ಷೆ

ಸಮಗ್ರ ನ್ಯೂಸ್: ಕೆಂಪು ಕಲ್ಲು ಗಣಿಗಾರಿಕೆಗೆ ಹೊಸದಾಗಿ ರೂಪಿಸಲಿರುವ ನಿಯಮಾವಳಿಗಳಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ. “ಹೊಸ ನಿಯಮಾವಳಿಗೆ ಸೆ. 4ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ’ ಎಂದು ಸರಕಾರದ ಪ್ರಮುಖರು ತಿಳಿಸಿದ್ದರು. ಆದರೆ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಕೆಂಪು ಕಲ್ಲಿಗೆ ರಾಯಲ್ಟಿ ಏರಿಕೆ ಮಾಡಿ ನಿಯಮಾವಳಿ ಬಿಗಿಗೊಳಿಸಿದ ಕಾರಣದಿಂದ ಜಿಲ್ಲೆಯಲ್ಲಿ ಸುಮಾರು 3 ತಿಂಗಳಿನಿಂದ ಎಲ್ಲ ರೀತಿಯ ವ್ಯವಹಾರ-ವಹಿವಾಟು ಸ್ತಬ್ಧವಾಗಿದೆ.

ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆಗೆ ಸಿಗದ ಅನುಮೋದನೆ| ಮತ್ತೆ ಹುಸಿಯಾದ ನಿರೀಕ್ಷೆ Read More »

ಮನೆಮನೆಗೆ UHID ಸ್ಟಿಕ್ಕರ್ ಅಳವಡಿಕೆ| ಕಿತ್ತೆಸೆಯಬೇಡಿ, ಈ ಸುದ್ದಿ ಓದಿ…

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮನೆ ಮನೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಅಂಗವಾಗಿ UHID ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಈ ಸಮೀಕ್ಷೆ ಕಾರ್ಯದಲ್ಲಿ ಮೊದಲನೇ ಅಂಗವಾಗಿ ಮನೆ ಪಟ್ಟಿ ಅಂದ್ರೆ ಹೌಸ್ ಲಿಸ್ಟಿಂಗ್ ಎಕ್ಸರ್ಸೈಜ್ ಮಾಡಲಾಗುತ್ತಿದ್ದು ಇದರ ಭಾಗವಾಗಿ ಮುಖ್ಯಮಂತ್ರಿಗಳ ಕಾವೇರಿ ನಿವಾಸಕ್ಕೆ ಆಯೋಗದ ಸಿಬ್ಬಂದಿ ಸ್ಟಿಕ್ಕರ್ ಅಂಟಿಸಿದರು ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಮನೆಮನೆಗೆ UHID ಸ್ಟಿಕ್ಕರ್ ಅಳವಡಿಕೆ| ಕಿತ್ತೆಸೆಯಬೇಡಿ, ಈ ಸುದ್ದಿ ಓದಿ… Read More »

ಈದ್ ಮಿಲಾದ್ ವೇಳೆ ವಿವಾದಾತ್ಮಕ ಧ್ವಜ ಹಾಕಿದ್ದನ್ನು ಕಿತ್ತೆಸೆದ‌ ಪೊಲೀಸರು

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಧ್ವಜ ಹಾರಾಟ ನಡೆದಿದ್ದು, ಅದರಿಂದ ವಿವಾದ ಉಂಟಾಗಿದೆ. ಮೈಸೂರು ರಸ್ತೆಯ ಅಂಜನಪ್ಪ ಗಾರ್ಡನ್ ಪ್ರದೇಶದಲ್ಲಿ ಹಾರಿಸಲಾದ ಧ್ವಜವು ಸಾಮಾನ್ಯ ತ್ರಿವರ್ಣ ಧ್ವಜವಾಗಿರದೆ, ಅದರ ಮಧ್ಯದಲ್ಲಿರುವ ಅಶೋಕ ಚಕ್ರದ ಬದಲು ಉರ್ದು ಭಾಷೆಯ ಬರಹ ಹೊಂದಿರುವುದು ಗಮನ ಸೆಳೆಯಿತು. ಸಾಮಾನ್ಯವಾಗಿ ತ್ರಿವರ್ಣ ಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಜೊತೆ ಮಧ್ಯಭಾಗದಲ್ಲಿ ಅಶೋಕ ಚಕ್ರ ಅಳವಡಿಸಲ್ಪಟ್ಟಿರುತ್ತದೆ. ಆದರೆ ಈ ಸಂದರ್ಭದಲ್ಲಿ ಹಾರಿಸಲಾದ ಧ್ವಜದಲ್ಲಿ ಅಶೋಕ

ಈದ್ ಮಿಲಾದ್ ವೇಳೆ ವಿವಾದಾತ್ಮಕ ಧ್ವಜ ಹಾಕಿದ್ದನ್ನು ಕಿತ್ತೆಸೆದ‌ ಪೊಲೀಸರು Read More »