Ad Widget

ಚಾಮರಾಜನಗರ: ದಾಹ ನೀಗಿಸಲು ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು

ಸಮಗ್ರ ನ್ಯೂಸ್ : ಜಿಲ್ಲೆಯ ಮಲೇ ಮಹದೇಶ್ವರ ಬೆಟ್ಟದ ಹಾಡಿಯೊಂದರ ಸಮೀಪ ಆನೆಗಳ ಹಿಂಡೊಂದು ಜಾನುವಾರುಗಳಿಗೆ ಕಟ್ಟಿಸಿರುವ ನೀರಿನ ತೊಟ್ಟಿಯಲ್ಲಿ ದಾಹ ತೀರಿಸಿಕೊಂಡು ಕಾಡಿಗೆ ಹಿಂದಿರುಗಿದ ಘಟನೆ ನಡೆದಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಸುಡು ಬಿಸಿಲ ಬೇಗೆಗೆ ಕಾಡಿನಲ್ಲಿ ನೀರಿಲ್ಲದೆ ವನ್ಯಪ್ರಾಣಿಗಳ ಐರಾಣಾಗಿ ಹೋಗಿದ್ದು ಇತಿಹಾಸ ಪ್ರಸಿದ್ಧ ಮಲೇ ಮಹದೇಶ್ವರ ಬೆಟ್ಟದ ಕಾಡಂಚಿನ ಸಮೀಪದ ಹಾಡಿಯೊಂದರ ಜಾನುವಾರುಗಳು ಕುಡಿಯುವ ನೀರಿನ ತೊಟ್ಟಿಯ ಸಮೀಪ ಬಂದ ಕಾಡಾನೆ ಹಿಂಡು ನೀರನ್ನ ಕುಡಿದು ದಾಹ ತೀರಿಸಿಕೊಂಡಿವೆ.

Ad Widget . Ad Widget .

ಕಾಡಾನೆಗಳ ಹಿಂಡು ನೀರು ಕುಡಿಯುತ್ತಿರುವ ದ್ರಶ್ಯವನ್ನ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜನನಿಬಿಡ ಪ್ರದೇಶಕ್ಕೆ ಆಗಮಿಸಿದ್ದರೂ ಸಹ ಆನೆಗಳ ಹಿಂಡು ಯಾರಿಗೂ ತೊಂದರೆ ನೀಡದೆ ಕಾಡಿಗೆ ವಾಪಾಸ್ಸಾಗಿವೆ.

Leave a Comment

Your email address will not be published. Required fields are marked *