Ad Widget

ಉತ್ತರ ಪ್ರದೇಶ : ರಸ್ತೆ ಅಪಘಾತದಲ್ಲಿ ಪತ್ನಿ ಸಾವನ್ನಪ್ಪಿದ ನೋವಿನಿಂದ ಪತಿಯೂ ಆತ್ಮಹತ್ಯೆ

ಸಮಗ್ರ ನ್ಯೂಸ್ : ರಸ್ತೆ ಅಪಘಾತದಲ್ಲಿ ಪತ್ನಿ ಸಾವನ್ನಪ್ಪಿದ ನೋವಿನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿನಲ್ಲಿ ನಡೆದಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಯೋಗೇಶ್ ಕುಮಾರ್ (36) ಸಾವಿಗೆ ಶರಣಾದ ವ್ಯಕ್ತಿ.ಇವರ ಪತ್ನಿ ಮಣಿಕರ್ಣಿಕಾ ಕುಮಾರಿ (28) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈಕೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಶಿಕ್ಷಕರಾಗಿದ್ದ ಯೋಗೇಶ್, ಕಳೆದ 6 ತಿಂಗಳ ಹಿಂದಷ್ಟೇ ಮಣಿಕರ್ಣಿಕಾರನ್ನು ಮದುವೆಯಾಗಿದ್ದರು.

Ad Widget . Ad Widget . Ad Widget .

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಾವು ಒಟ್ಟಿಗೆ ಬದುಕುತ್ತೇವೆ, ಒಟ್ಟಿಗೆ ಸಾಯುತ್ತೇವೆ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಡಿದ್ದಾರೆ ಎಂದು ತಿಳಿಸಿದ್ದಾರೆ. ಸುರ್ಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಖನೌ-ಹರ್ದೋಯಿ ಹೈವೆಯಲ್ಲಿ ನಡೆದ ರಸ್ತೆ ಅಪಘಾತದ ಯೋಗೇಶ್ ಪತ್ನಿ ಸಾವನ್ನಪ್ಪಿದ್ದರು.

ವಿಷಯ ತಿಳಿದ ಯೋಗೇಶ್ ಪತ್ನಿಯನ್ನು ನೋಡಲು ಘಟನಾ ಸ್ಥಳಕ್ಕೆ ಹೋಗಿದ್ದನು, ನಂತರ ಮನೆಗೆ ಬಂದು ನೇಣು ಬಿಗಿದುಕೊಂಡು ಸಾವಿಗೆ ಶಣಾಗಿದ್ದಾನೆ. ಇವರ ಪತ್ನಿ ಮೃತಪಟ್ಟ ಸುದ್ದಿ ತಿಳಿದು ನೆರಹೊರೆಯವರು ವಿಚಾರಿಸಲು ಮನೆಗೆ ಬಂದಾಗ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಬಂದಿದೆ.

Leave a Comment

Your email address will not be published. Required fields are marked *