August 2023

ಚಂದ್ರನಂಗಳದ ಮೊದಲ ದೃಶ್ಯ ರಿಲೀಸ್ ಮಾಡಿದ ಇಸ್ರೋ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಚಂದ್ರಯಾನ- 3 ಲ್ಯಾಂಡರ್ ಮತ್ತು MOX-ISTRAC ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ ಹೇಳಿದೆ. ಇಸ್ರೋ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ಚಂದ್ರನ ಮೇಲ್ಮೈಯ ಚಿತ್ರಗಳನ್ನು ಅವರೋಹಣ ಸಮಯದಲ್ಲಿ ತೆಗೆದಿದೆ. ಒಂದು ಚಂದ್ರಯಾನ 2 ಆರ್ಬಿಟರ್‌ನೊಂದಿಗೆ, ಎರಡನೆಯದು ನೇರವಾಗಿ ಇಸ್ರೋ ಕಮಾಂಡ್ ಸೆಂಟರ್‌ನೊಂದಿಗೆ ಹೀಗೆ ಚಂದ್ರಯಾನ 3 ಮಿಷನ್‌ನಲ್ಲಿ ದ್ವಿಮುಖ ಸಂವಹನ ಸೌಲಭ್ಯವಿದೆ. ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಸ್ಪರ್ಶಿಸಿದ ನಂತರ ವಿಕ್ರಮ್ ಲ್ಯಾಂಡರ್ […]

ಚಂದ್ರನಂಗಳದ ಮೊದಲ ದೃಶ್ಯ ರಿಲೀಸ್ ಮಾಡಿದ ಇಸ್ರೋ Read More »

ಬೆಳ್ತಂಗಡಿ: ಕಡವೆ ಬೇಟೆಯಾಡಿದ ಮೂರು ಮಂದಿ ಬಂಧನ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದ ಒಳಭಾಗದ ಬಟ್ಟಾಡಿ ಬಳಿ ಕಪಿಲಾ ನದಿ ತೀರದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿದ ಮೂವರನ್ನು ಬಂದೂಕು ಸಹಿತ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಉಪ್ಪಿನಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯ ದಡಂತಮಲೆ ಬಟ್ಟಾಡಿ ಕಪಿಲ ನದಿ‌ ಪಕ್ಕದಲ್ಲಿ ನಾಲ್ಕು ವರ್ಷ ಪ್ರಾಯದ ಕಡವೆಯನ್ನು ಆರೋಪಿಗಳು ಮಂಗಳವಾರ ರಾತ್ರಿ ಬೇಟೆಯಾಡಿದ್ದರು. ಅರಣ್ಯ ಇಲಾಖೆಯ ಸಿಬಂದಿ ರಾತ್ರಿ ಗಸ್ತು ತಿರುಗುವಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ

ಬೆಳ್ತಂಗಡಿ: ಕಡವೆ ಬೇಟೆಯಾಡಿದ ಮೂರು ಮಂದಿ ಬಂಧನ Read More »

ಚಂದ್ರಯಾನ 3 ಟೀಂನಲ್ಲಿ ಸುಳ್ಯದ ಕುವರಿ

ಸಮಗ್ರ ನ್ಯೂಸ್: ಜಗತ್ತೇ ಹೆಮ್ಮೆ ಪಡುವ ಯಶಸ್ವಿಯ ಚಂದ್ರಯಾನ- 3ರಲ್ಲಿ ಸುಳ್ಯದ ವಿಜ್ಞಾನಿ ಮತ್ತು ವಿದ್ಯಾರ್ಥಿನಿಯೋರ್ವಳು ಭಾಗಿಯಾಗಿದ್ದಾರೆ. ಇಸ್ರೋ ವಿಜ್ಞಾನಿಯಾಗಿರುವ ಶಾಂಬಯ್ಯ ಅವರು ಮೂಲತಃ ಸುಳ್ಯದ ಕೊಡಪಾಲ ದವರು ಮತ್ತು ಮತ್ತೊಬ್ಬರು ಮಂಡೆಕೋಲು ಗ್ರಾಮದ ಮಾನಸ ಎಂಬವರು ಚಂದ್ರಯಾನ -3 ತಂಡದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಚಂದ್ರಯಾನ 3 ಟೀಂನಲ್ಲಿ ಸುಳ್ಯದ ಕುವರಿ Read More »

ಸುಳ್ಯದಲ್ಲಿ ನೂತನವಾಗಿ ಭಾರತ್ ಲಾಂಡ್ರಿ ಶುಭಾರಂಭ

ಸಮಗ್ರ ನ್ಯೂಸ್: ಭಾರತ್ ಲಾಂಡ್ರಿ ನೂತನವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಸೆಂಟರ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಆ. 20ರಂದು ನೂತನವಾಗಿ ಶುಭಾರಂಭಗೊಂಡಿದೆ. ಇಲ್ಲಿ ಐರನ್, ಸ್ಟೀಮ್ ಐರನ್, ಲಾಂಡ್ರಿ ಹಾಗೂ ಡ್ರೈ ವಾಶ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಪ್ರಮೋದ್ ಐವರ್ನಾಡು ತಿಳಿಸಿದ್ದಾರೆ.

ಸುಳ್ಯದಲ್ಲಿ ನೂತನವಾಗಿ ಭಾರತ್ ಲಾಂಡ್ರಿ ಶುಭಾರಂಭ Read More »

ಸುಳ್ಯ: ಪೆರುವಾಜೆ ಬಿಜೆಪಿ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆ

ಸಮಗ್ರ ನ್ಯೂಸ್: ಸುಳ್ಯದ ಪೆರುವಾಜೆ ಬಿಜೆಪಿ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆಯನ್ನು ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಾಚರಿಸಿದರು. ಯುವ ಮುಖಂಡ ಶಿವಪ್ರಸಾದ್ ಪೆರುವಾಜೆ ಯವರು ಇಸ್ರೋ ಸಂಸ್ಥೆಗೆ ಹಾಗೂ ಬೆಂಬಲಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಮಾತುಗಳನ್ನಾಡಿದರು. ಈ ಸಂಭ್ರಮಾಚರಣೆಯಲ್ಲಿ ಭಾರತೀಯ ಜನತಾ ಪಕ್ಷದ ವಿವಿಧ ಪಧಾಧಿಕಾರಿಗಳು ಮತ್ತು ಕಾರ್ಯಕರ್ತ ಮಿತ್ರರೂ ಉಪಸ್ಥಿತರಿದ್ದರು. ನವೀನ್ ಆಚಾರ್ಯ ಪೆರುವಾಜೆಯವರು ಎಲ್ಲರಿಗೂ ಸಿಹಿ ತಿಂಡಿಯನ್ನು ನೀಡಿದರು.

ಸುಳ್ಯ: ಪೆರುವಾಜೆ ಬಿಜೆಪಿ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆ Read More »

ಲ್ಯಾಂಡಿಂಗ್ ವೇಳೆ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ‘ವಿಕ್ರಂ ಲ್ಯಾಂಡರ್’ ; ಎಲ್ಲಾ ‘ಗೋವಿಂದನ ಕೃಪೆ’ಯೆಂದ ನೆಟ್ಟಿಗರು

ನವದೆಹಲಿ : ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ-3 ಮಿಷನ್ ಪೂರ್ಣಗೊಂಡಿದ್ದು, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. ಸಧ್ಯ ಯಶಸ್ವಿ ಚಂದ್ರಯಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಚರ್ಚೆ ಶುರುವಾಗಿದ್ದು, ಲ್ಯಾಂಡಿಂಗ್ ವೇಳೆ ವಿಕ್ರಂ ಲ್ಯಾಂಡರ್ ಅಕ್ಷರಶಃ ತಿರುಪತಿ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದೆ ಎನ್ನಲಾಗ್ತಿದೆ. ಈ ಮೂಲಕ ಇದೆಲ್ಲಾ ಗೋವಿಂದನ ಕೃಪೆಯೆಂದು ಭಕ್ತರು ಹೇಳುತ್ತಿದ್ದಾರೆ. ಅಂದ್ಹಾಗೆ, ಚಂದ್ರಯಾನ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ತಂಡ

ಲ್ಯಾಂಡಿಂಗ್ ವೇಳೆ ತಿಮ್ಮಪ್ಪನ ಕಿರೀಟದಂತೆ ಗೋಚರಿಸಿದ ‘ವಿಕ್ರಂ ಲ್ಯಾಂಡರ್’ ; ಎಲ್ಲಾ ‘ಗೋವಿಂದನ ಕೃಪೆ’ಯೆಂದ ನೆಟ್ಟಿಗರು Read More »

ಚಂದ್ರನ ಅಂಗಳದಲ್ಲಿ ಇಸ್ರೋ ಹೆಜ್ಜೆ ಇರಿಸಿದ ಲೈವ್ ವಿಡಿಯೋ ನೋಡಿದವರೆಷ್ಟು ಮಂದಿ ಗೊತ್ತಾ? ಅಚ್ಚರಿಯ ವರದಿ ಇಲ್ಲಿದೆ…

ಸಮಗ್ರ ನ್ಯೂಸ್: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 40 ದಿನಗಳ ಯಾನ ಆರಂಭಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಚಂದ್ರಯಾನ-3 ಮಿಷನ್ ಚಂದ್ರನ ಅಂಗಳ ಮುಟ್ಟಿದೆ. ಭಾರತ ಈ ಸಾಧನೆ ಮಾಡಿದಾಗ 80,59,688 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಏತನ್ಮಧ್ಯೆ, ಫೇಸ್‌ಬುಕ್‌ನಲ್ಲಿ, ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಮುಟ್ಟಿದಾಗ 355.6K ಕ್ಕೂ ಹೆಚ್ಚು ಜನರು ನೋಡಿದರು. ಇಸ್ರೋದ ಅಧಿಕೃತ ಪ್ರಸಾರ ಚಾನೆಲ್‌ಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಅನ್ನು ನೇರಪ್ರಸಾರವಾಗಿ ವೀಕ್ಷಿಸಿದವರಲ್ಲದೆ, ಭಾರತದಲ್ಲಿ ಮಾತ್ರವಲ್ಲದೆ ದೇಶಗಳಾದ್ಯಂತ

ಚಂದ್ರನ ಅಂಗಳದಲ್ಲಿ ಇಸ್ರೋ ಹೆಜ್ಜೆ ಇರಿಸಿದ ಲೈವ್ ವಿಡಿಯೋ ನೋಡಿದವರೆಷ್ಟು ಮಂದಿ ಗೊತ್ತಾ? ಅಚ್ಚರಿಯ ವರದಿ ಇಲ್ಲಿದೆ… Read More »

“ಭಾರತ ಈಗ ಚಂದ್ರನ ಮೇಲಿದೆ”| ಚಂದ್ರಯಾನ-3 ಸಕ್ಸಸ್ ಬಳಿಕ ಮೋದಿ ಅಭಿಮತ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, ಚೀನಾದ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ದಕ್ಷೀಣ ಆಫ್ರಿಕಾದಿಂದಲೇ ಮಾತನಾಡಿರುವ ಪ್ರಧಾನಿ ಮೋದಿ, ನಾವು ನಮ್ಮ ಕಣ್ಣ ಮುಂದೆ ಇಂತಹ ಇತಿಹಾಸ ನೋಡುವುದೇ ಹೆಮ್ಮೆ. ಈ ಕ್ಷಣ ರಾಷ್ಟ್ರದ ಜೀವತಾವಧಿಯಲ್ಲಿ ಚಿರಂಜೀವಿ ಚೇತನವಾಗಲಿದೆ. ಇದು ಅವಿಸ್ಮರಣಿಯಾವಾಗಿದೆ. ಅದ್ಭೂತಪೂರ್ವಕವಾಗಿದೆ. ಇದು ನವ ಭಾರತದ ಜಯಘೋಷ.

“ಭಾರತ ಈಗ ಚಂದ್ರನ ಮೇಲಿದೆ”| ಚಂದ್ರಯಾನ-3 ಸಕ್ಸಸ್ ಬಳಿಕ ಮೋದಿ ಅಭಿಮತ Read More »

ಚಂದ್ರನ ಅಂಗಳದಲ್ಲಿ ಭಾರತ ತಿರಂಗಾ|ಐತಿಹಾಸಿಕ ವಿಜಯದ ಪತಾಕೆ ಹಾರಿಸಿದ ಇಸ್ರೋ

ಸಮಗ್ರ ನ್ಯೂಸ್: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ‌’ ಲ್ಯಾಂಡರ್ ಹೆಜ್ಜೆ ಇರಿಸಿದ್ದು, ಅಭೂತಪೂರ್ವ ಕ್ಷಣಕ್ಕೆ ವಿಶ್ವವೇ ಸಾಕ್ಷಿಯಾಯಿತು. ನಿಗದಿತ ಸಮಯ ಸಂಜೆ 6.04 ನಿಮಿಷಕ್ಕೆ ಗುರಿ ತಲುಪಿದ್ದು, ಹೀಗಾಗಿ ಚಂದ್ರಯಾನ-3 ಯೋಜನೆ ಪರಿಪೂರ್ಣಗೊಂಡಿದೆ. ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು ತಲುಪಿದೆ ಮತ್ತು ಆಗಸ್ಟ್ 23 ರ ಇಂದು ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದಿದೆ. ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ -3 ರ ಲ್ಯಾಂಡರ್ ಮಾಡ್ಯೂಲ್ ಮಿಷನ್ ಪ್ರಾರಂಭವಾದ 42

ಚಂದ್ರನ ಅಂಗಳದಲ್ಲಿ ಭಾರತ ತಿರಂಗಾ|ಐತಿಹಾಸಿಕ ವಿಜಯದ ಪತಾಕೆ ಹಾರಿಸಿದ ಇಸ್ರೋ Read More »

ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ

ಸಮಗ್ರ ನ್ಯೂಸ್:ಸುಳ್ಯ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳ ಕಾರ್ಯಕ್ಷೇತ್ರದ ಪ್ರಗತಿ ಪರಿಶೀಲನೆ ಕಾರ್ಯಕ್ರಮವು ಆ. 23ರಂದು ಸುಳ್ಯ ಯೋಜನಾ ಕಚೇರಿ ಸಭಾ ಭವನ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ತಾಲೂಕಿನ ಪ್ರತಿ ಗ್ರಾಮಕ್ಕೆ ಯೋಜನೆಯಿಂದ ಸಿಗುವ ಸೌಲಭ್ಯಗಳ ವಿತರಣೆ ಮಾಡುವ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಯೋಜನಾಧಿಕಾರಿಯಾದ ನಾಗೇಶ್ ರವರು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ವಲಯದ ಮೇಲ್ವಿಚಾರಕರು ಹಾಗೂ ಕಾರ್ಯಕ್ಷೇತ್ರ ಸೇವಾಪ್ರತಿನಿಧಿಗಳು

ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ Read More »