ನಿರಂತರ ಮಳೆ: ಕುಕ್ಕೆಯಲ್ಲಿ ಭಕ್ತರು ವಿರಳ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರಿದಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ.

Ad Widget ... ..

ನಿರಂತರ ಮಳೆಯಿಂದ ಭಕ್ತರು ತಮ್ಮ ಯಾತ್ರೆಗಳನ್ನೂ ಮುಂದೂಡಿದ್ದು, ಭಕ್ತರಿಂದ ತುಂಬಿ ತುಳುಕುತ್ತಿದ್ದ ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯು ಎರಡು ದಿನಗಳಿಂದ ಖಾಲಿ ಖಾಲಿಯಾಗಿದೆ.

Ad Widget

ಪೇಟೆಯಲ್ಲಿ ಯಾತ್ರಿಕರ ವಾಹನ ಓಡಾಟದ ಸಂಖ್ಯೆಯೂ ಇಳಿಮುಖಗೊಂಡಿದೆ. ವ್ಯಾಪಾರ ವ್ಯವಹಾರಗಳು ಇಳಿಮುಖ ಗೊಂಡಿವೆ ಎನ್ನುತ್ತಾರೆ ವ್ಯಾಪಾರಸ್ಥರು.

ಇನ್ನು ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ನಾಲ್ಕು ದಿನಗಳಿಂದ ಸ್ನಾನಘಟ್ಟ ಮುಳುಗಡೆಯಾಗಿದೆ. ಭಕ್ತರು ನದಿತೀರದಲ್ಲೇ ಮಿಂದೇಳುತ್ತಾರೆ.

Leave a Comment

Your email address will not be published. Required fields are marked *